Pages

Showing posts with label ಬೌದ್ಧ ಧರ್ಮ. Show all posts
Showing posts with label ಬೌದ್ಧ ಧರ್ಮ. Show all posts

Monday, 12 December 2011

Spotlight on Buddha's message at Dalit convention



Staff Correspondent




MAKING A RESOLVE: A Dalit convention on equality was organised at the Maharaja's College Grounds in Mysore on Sunday. — PHOTO: M A SRIRAM

MYSORE: A large number of Dalits participated in a convention on equality in Mysore on Sunday and resolved to spread the message of Buddha.
At the convention titled "Buddhanedege Marali Manege," leaders and youth of the Dalit community from across the State adopted a resolution to take up a door-to-door campaign on spreading the principles of Buddha.
Karnataka Pradesh Congress Committee President M. Mallikarjun Kharge; the former Union Minister V. Srinivas Prasad, the former Ministers G. Parameshwar and H.C. Mahadevappa, and writer Devanur Mahadev were among those present on the occasion.
Tableau
A tableau flagged off from Bangalore, carrying the portrait of Buddha in meditation, arrived at the venue before the convention began. It was kept on the stage.
The convention was organised by the Dr. B.R. Ambedkar Research and Extension Centre of Mysore University and the Dr. B.R. Ambedkar Dhamma Deekshe Golden Jubilee Committee. It provided a platform for holding deliberations on Buddha and B.R. Ambedkar. It was organised to mark the 50 years of Dr. Ambedkar embracing Buddhism as a mark of protest against casteism.
The gathering adopted a resolution to condemn the social boycott, caste atrocities and exploitation of Dalits. Although 60 years had passed since India attained freedom , social evils had not been eliminated, it was observed.

Sunday, 30 October 2011

ಬೌದ್ಧ

ಬೌದ್ಧ ಧರ್ಮ

ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ
ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ
ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ
ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ
ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ
ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು
ಬುದ್ಧನ ತಾಯಿಯ ಹೆಸರು - - ಮಾಯಾದೇವಿ
ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ
ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ
ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ
ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ
ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ
ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ
ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ
ಬುದ್ದನ ಪತ್ನಿಯ ಹೆಸರು - ಯಶೋಧರಾ
ಬುದ್ಧನ ಮುಗುವಿನ ಹೆಸರು - ರಾಹುಲ
ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ
ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ
ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ
ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ
ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ
ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

ಬುದ್ದನ ತತ್ವಗಳು
ನಾಲ್ಕು ಮೂಲ ತತ್ವಗಳು
ನಾಲ್ಕು ಮಹಾನ್ ಸತ್ಯಗಳು
ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು
ಅಹಿಂಸೆ
ಸತ್ಯ ನುಡಿಯುವಿಕೆ
ಕಳ್ಳತನ ಮಾಡದಿರುವುದು
ಪಾವಿತ್ರತೆ
ನಾಲ್ಕು ಮಹಾನ್ ಸತ್ಯಗಳು

ದುಃಖ
ದುಃಖಕ್ಕೆ ಕಾರಣ
ದುಃಖದ ನಿವಾರಣಿ
ದುಃಖದ ನಿವಾರಣಿಗೆ ಮಾರ್ಗ

ಅಷ್ಟಾಂಗ ಮಾರ್ಗ

ಒಳ್ಳೆಯ ನಂಬಿಕೆ
ಒಳ್ಳೆಯ ಆಲೋಚನೆ
ಒಳ್ಳೆಯ ಮಾತು
ಉತ್ತಮ ನಡತೆ
ಉತ್ತಮ ಜೀವನ
ಒಳ್ಳೆಯ ಪ್ರಯತ್ನ
ಉತ್ತಮ ವಿಚಾರಗಳ ನೆನಪು
ಯೋಗ್ಯ ರೀತಿಯ ಧ್ಯಾನ

ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ಧ
ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ
ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ
ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ
ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

ಬೌದ್ಧ ಧರ್ಮದ ಪ್ರಸಾರ


ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ
ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು
ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು
ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು
ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

ಬೌದ್ಧ ಧರ್ಮದ ಅವನತಿಗೆ ಕಾರಣ
ಹೀನಾಯಾನ ಮಹಾಯಾನ ಪಂಗಡಗಳ ಉಗಮ
ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು
ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು
ಭಿಕ್ಷುಗಳ ಅಶ್ಲೀಲ ನಡತೆ
ಗುಪ್ತ ಸಾಮ್ರಾಜ್ಯದ ಉಗಮ
ಶಂಕರಾಚಾರ್ಯರ ವಾಸ
ಮುಸಲ್ಮಾನರ ದಾಳಿ


ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ
ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ಧ
ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ
ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ
ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ
ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು
ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು
ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು
ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ
ತಥಾಗತ ಎಂದರೆ - ಸತ್ಯವನ್ನು ಕಂಡವನು
ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80
ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ
ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ
ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ
ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ
ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ
ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ
ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳು
ಜಾತಕ ಕಥೆ ಕೃತಿಯ ಕರ್ತೃ - ಆರ್ಯ ಮಿತ್ರ
ಬೌದ್ಧ ಧರ್ಮದ ಹಿರಿಮೆಯನ್ನು ಕುರಿತು ಇರುವ ಗ್ರಂಥ A History of Indian civilization
A History of Indian civilization ಕೃತಿಯ ಕರ್ತೃ - ರಾಧಕುಮುಧ್ ಮುಖರ್ಜಿ
Encint India - ಕೃತಿಯ ಕರ್ತೃ - ವಿ.ಸಿ.ಪಾಂಡೆ
ಬುದ್ಧನ ಮೂರು ಆದರ್ಶಗಳು - ಬುದ್ಧಂ ಶರಣಂ ಗಚ್ಚಾಮಿ ,ಧರ್ಮ ಶರಣಂ ಗಚ್ಚಾಮಿ , ಸಂಘಂ , ಗಚ್ಚಾಮಿ
ಬೌದ್ಧ ಧರ್ಮದ ಪ್ರಚಾರದಲ್ಲಿ ಅಗ್ರಗಣ್ಯನಾದ ಅರಸ - ಅಶೋಕ
ಅಶೋಕನ ಮಕ್ಕಳ ಹೆಸರು - ಮಹೇಂದ್ರ ಮತ್ತು ಸಂಘಮಿತ್ರೆ
ಮಹೇಂದ್ರ ಮತ್ತು ಸಂಘಮಿತ್ರೆ ಬೌದ್ಧ ಧರ್ಮ ಪ್ರಚಾರ ಮಾಡಿದ ಸ್ಥಳ - ಬರ್ಮಾ ಮತ್ತು ಶ್ರೀಲಂಕಾ
ಬೌದ್ಧ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಲಯ - ನಲಂದಾ ವಿಶ್ವವಿದ್ಯಾಲಯ
Light of Asia ಅಥವಾ ಏಷ್ಯಾದ ಬೆಳಕು ಎಂದು ಕರೆದವರು - ಸರ್ ಎಡ್ವಿನ್ ಅರ್ನಾಡ್
Edvine Arnald ರವರು - ಜೆಕೋ ಬುಕ್ತ ಕೃತಿಯಲ್ಲಿ ಬುದ್ಧನನ್ನ The Light of Asia ಎಂದು ಕರೆದಿದ್ದಾರೆ
ಹೀನಾಯಾನಿಗಳೆಂದರೆ - ಬುದ್ಧನ ಮೂಲ ತತ್ವದಲ್ಲಿ ನಂಬಿಕೆಯುಳ್ಳವರು
ಮಹಾಯಾನಿಗಳೆಂದರೇ - ಬುದ್ಧನನ್ನು ವಿಗ್ರಹ ರೂಪದಲ್ಲಿ ಆರಂಭಿಸಿದವರು
ಬುದ್ಧನ ಪಾದಗಳ ಗುರುತು ಅಥವಾ ಖಾಲಿ ಪೀಠಕ್ಕೆ ಪೂಜೆ ಸಲ್ಲಿಸುತ್ತಿದ್ದವರು - ಹೀನಾಯಾನ ಪಂಥದವರು
ಹೀನಾಯಾನಿಗಳು ಈ ರಾಜನ ಕಾಲದಲ್ಲಿ ಖ್ಯಾತಿ ಹೊಂದಿದ್ದರು - ಅಶೋಕ
ಬುದ್ಧನನ್ನು ದೇವರೆಂದು ಪರಿಗಣಿಸಿದವರು - ಮಹಾಯಾನಿಗಳು
ಮಹಾಯಾನ ಪಂಥ ಹೆಚ್ಚು ಪ್ರಚಲಿತದಲ್ಲಿದ್ದವು - ಕಾನಿಷ್ಕನ ಕಾಲದಲ್ಲಿ
ಬುದ್ದಗಯಾ ಹಾಗೂ ಬರಾಬರ್ ಗುಹಾಲಯ ಈ ರಾಜ್ಯದಲ್ಲಿದೆ - ಬಿಹಾರ
ಸಾಂಚಿಯ ಸ್ಥೂಪ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ
ಅಜಂತಾ ದೇವಾಲಯ ಈ ಪ್ರದೇಶದಲ್ಲಿದೆ - ಮಹಾರಾಷ್ಠ್ರ
ನಾಗರ್ಜುನಕೊಂಡ ಈ ಪ್ರದೇಶದಲ್ಲಿದೆ - ಆಂದ್ರಪ್ರದೇಶ
ವಿಶ್ವದಲ್ಲಿಯೆ ಅತಿ ದೊಡ್ಡದಾದ ಬೋರೋಬುದೂರ್ ಅಥವಾ ಬೃಹತ್ ಬುದ್ಧ ದೇವಾಲಯ ಇರುವ ಪ್ರದೇಶ ಇಂಡೋನೆಷ್ಯಾದ ಜಾವ ದ್ವೀಪದಲ್ಲಿ
1950 ಡಿಸೆಂಬರ್ ನಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆದ ಪ್ರದೇಶ - ಸಿಂಹಳ
ಡಾ//.ಬಿ.ಆರ್.ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ೀಕರಿಸಿದ ಪ್ರೇರಣಿಯಾದ ಸಮ್ಮೇಳನ - ಸಿಂಹಳದಲ್ಲಿ 1950 ರಲ್ಲಿ ನಡೆದ ಬೌದ್ಧ ಸಮ್ಮೇಳನ
ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು - 14/10/1956 ನಾಗಪುರದಲ್ಲಿ
ಅಂಬೇಡ್ಕರ್ ರವರು - ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಧರ್ಭದಲ್ಲಿದ್ದ ಬೌದ್ಧ ಭಿಕ್ಷು - ಕುಶೀನಗರದ ಚಂದ್ರಮಣಿ
ಕ್ರಿ..ಶ. 2000 ದಲ್ಲಿ ತಾಲಿಬಾನ್ ಉಗ್ರರಿಂದ ನಾಶಗೊಂಡ ಬುದ್ಧನ ಶಿಲಾಕೃತಿ - ಅಫ್ಘಾನಿಸ್ಥಾನದ ಬೊಹೆಮಿಯಾನ್ ಪ್ರಾಂತ್ಯದ ಶಿಲಾಕೃತಿ

ಬೌದ್ಧ ಧರ್ಮದ ಪ್ರಮುಖ ಗ್ರಂಥಗಳು
ಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567
ರಾಹುಲ ಪದದ ಅರ್ಥ - ತೊಡಕು
ಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು ಈ ಹೆಸರಿನಿಂದ ಕರೆಯುವರು - ಜ್ಞಾನೋದಯ
ಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ - ಮಹಾಯಾನ
ಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರು
ನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆ
ಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 48 ರಲ್ಲಿ
ಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾ
ದಲೈಲಾಮ ಈ ಪ್ರದೇಶದವರು - ಟಿಬೆಟ್
ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕು
ಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ - ಮೂರನೇಯದು
ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ
ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹ
ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ
ಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು ಈ ಹೆಸರಿನಿಂದ ಕರೆಯುವರು - ಸ್ಥವಿರರು
ಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದು
ಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸು
ಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕ
ಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕ
ಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕ
ಪಿಟಕ ಪದದ ಅರ್ಥ - ಪೆಟ್ಟಿಗೆ ಅಥವಾ ಬುಟ್ಟಿ ಎಂದರ್ಥ
ಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನು
ಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿ
ಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದ
ಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನ
ಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿ
ಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು ಈ ಹೆಸರಿನಿಂದ ಕರೆಯುವರು
ಬುದ್ಧನ ಮೊದಲ ಶಿಷ್ಯನ ಹೆಸರು - ಆನಂದ
ಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರು
ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಈ ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆ
ಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್
4 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿ
ಕುಂಡಲ ವನ ಈ ರಾಜ್ಯದಲ್ಲಿದೆ - ಕಾಶ್ಮೀರ
4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ವಸುಮಿತ್ರ
5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ
5 ನೇ ಬೌದ್ಧ ಸಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.ಶ. 643
5 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್
ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನ
ಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪ
ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್
ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿ
ಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮ
ನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದು
ಕಪಿಲ ವಸ್ತು ಈ ಪ್ರದೇಶದಲ್ಲಿದೆ - ನೇಪಾಳ
ಬುದ್ಧನು ಮೋಕ್ಷ ಹೊಂದಿದ ದಿನವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣ
ಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳು
ಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯ
ಬೌದ್ಧ ಗುರು ದಲೈಲಾಮ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ.ಶ . 1959 ರಲ್ಲಿ
ಬುದ್ದನ ಸ್ವಾಮಿ ನಿಷ್ಠ ಸೇವಕ - ಚನ್ನ
ಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರ
ಜೈನ ದೇವಾಲಯಗಳನ್ನು ಈ ಹೆಸರಿನಿಂದ ಕರೆಯುವರು - ಬಸದಿ
ಕೇವಲಿ ಎಂದರೆ - ಜ್ಞಾನಿ ಎಂದರ್ಥ
ಬುದ್ಧನ ಸ್ಮಾರಕಗಳಿರುವ ಪ್ರದೇಶ - ಸಾರಾನಾಥ
ಗೌತಮ ಬುದ್ಧ - 80 ವರ್ಷ ಧರ್ಮ ಪ್ರಚಾರ ಮಾಡಿದ
ಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್
ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷ
ಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲ
ಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್
ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶ
ಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆ
ಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿ
ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ.ಶ.1 ನೇ ದಶಕ
ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲ
ಬುದ್ದನು ಈ ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರು
ಪಾಟಲಿಪುತ್ರ ನಗರದ ನಿರ್ಮಾತೃ - ಅಜಾತಶತೃ
ಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧ
ಗೊತಮ ಬುದ್ಧನು ವೈಶಾಲಿಯಲ್ಲಿ ಈ ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮ
ಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿ
ಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿ

ಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತ
ಜನನ - ಕಮಲ ಮತ್ತು ವೃಷಭ
ಜ್ಞಾನ ಪ್ರಾಪ್ತಿ - ಕುದುರೆ
ನಿರ್ವಾಣ - ಬೋಧಿವಕ್ಷ
ಪ್ರಥಮ ಧರ್ಮೋಪದೇಶ - ಧರ್ಮಚಕ್ರ
ಪರಿನಿರ್ವಾಣ - ಸ್ಥೂಪ

Wednesday, 18 May 2011

ಬೌದ್ಧ ದೀಕ್ಷೆ

 ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ದ್ಧ ಪೂರ್ಣಿಮೆ ಮುಗಿದಿದೆ. ಬುದ್ಧನ ಮಾರ್ಗದ ಬಗ್ಗೆ ಯಾವುದೇ ಚರ್ಚೆ ಇಲ್ಲದೆ. ಒಂದೊಮ್ಮೆ ಭಾರತದಲ್ಲಿ ಉಚ್ಚ್ರಾಯ ಸ್ಥಿತಿಗೆ ತಲುಪುವತ್ತ ಸಾಗಿದ್ದ ಧರ್ಮ ಕಾಲಕ್ರಮೇಣ ಅಂಥ ಸಾಧ್ಯತೆಯಿಂದ ದೂರ ಉಳಿಯಿತು. ಹಾಗೆ ನೋಡಿದರೆ ಪ್ರತಿಯೊಬ್ಬರೂ ಬೌದ್ಧರಾಗಬೇಕು. 

ಈ ವಿಷಯದಲ್ಲಿರುವ ಒಂದು ಸೌಂದರ್ಯವೆಂದರೆ ವ್ಯಕ್ತಿಯೊಬ್ಬ ಯಾವ ಧರ್ಮದಲ್ಲಿದ್ದುಕೊಂಡು ಬೇಕಾದರೂ ಬೌದ್ಧನಾಗಬಹುದು. 'ನೀನೂ ಬದುಕು, ಬೇರೆಯವರನ್ನೂ ಬದುಕಲು ಬಿಡು' ಎಂಬ ಆಶಯದ ಬುದ್ಧನ ಅಹಿಂಸಾ ಮಾರ್ಗವನ್ನು ತುಳಿಯುವುದಕ್ಕೆ ಯಾತರ ದರ್ದು, ಯಾವುದರ ನಿಬಂಧನೆ? ಇದೇ ಪತ್ರಿಕೆಯಲ್ಲಿ ಇತ್ತೀಚೆಗೆ ಲಿಂಗಾಯತ ಸಮುದಾಯದ ಪ್ರಸ್ತುತ ಸ್ವರೂಪವನ್ನಿಟ್ಟುಕೊಂಡು ಸಂವಾದ ನಡೆಸಲಾಯಿತು. ಲಿಂಗಾಯತ ಎನ್ನುವುದು ಬಸವ ತತìಗಳ ಆಚೆ ಬಂದು ಕೇವಲ ರಾಜಕೀಯ ಶಕ್ತಿ ಪ್ರದರ್ಶನದ ಪ್ರತೀಕವಾಗುವುದಾದರೆ ಅದಕ್ಕೆ ಪ್ರತ್ಯೇಕ ಧರ್ಮದ ಮೊಹರೇನೂ ಬೇಕಾಗಿಲ್ಲ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಬಹುತೇಕರು ಅಭಿಪ್ರಾಯ ಪಟ್ಟಿದ್ದರು. ಇದೇ ವ್ಯಾಪ್ತಿಯಲ್ಲಿ ಇಂದು ಬೌದ್ಧ ಧರ್ಮದ ಬಗೆಗೂ ಚರ್ಚೆಯ ಅವಶ್ಯಕತೆ ಇದೆ. ಈಗ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳಲು ಬಯಸುತ್ತಿರುವವರ ಮನೋಭೂಮಿಕೆಯಲ್ಲಿ ಮಿಳಿತವಾಗಿರುವ ವಿಚಾರಗಳು ಯಾವುವು? ಆ ಯೋಚನೆಗಳಿಂದಾಗಿ ಅವರು ಬೌದ್ಧ ಧರ್ಮವನ್ನು ಒಪ್ಪಿಕೊಂಡ ಮೇಲೂ ಪ್ರತ್ಯೇಕವಾಗಿಯೇ ಉಳಿಯುವ ಚಹರೆಗಳು ಕಾಣುತ್ತಿವೆಯಲ್ಲ? ಇದರಿಂದ ಧರ್ಮಕ್ಕಾಗಲೀ, ಅದರೊಂದಿಗೆ ಗುರುತಿಸಿಕೊಂಡವರಿಗಾಗಲೀ ಆಗುತ್ತಿರುವ ಉದ್ದೇಶ ಸಾಧನೆಯಾದರೂ ಏನು? ಈ ಎಲ್ಲ ಪ್ರಶ್ನೆಗಳನ್ನು ಹರವಿಕೊಂಡು ಒಂದಿಷ್ಟು ಮಂಥನ ನಡೆಯಬೇಕಿದೆ. ಪರ್ಯಾಯವೊಂದನ್ನು ಹುಟ್ಟುಹಾಕಬೇಕಿದ್ದ 'ಬೌದ್ಧ ದೀಕ್ಷೆ' ಕೇವಲ ಸಂಕೇತಕ್ಕಷ್ಟೆ ಸೀಮಿತಗೊಂಡ ಆಚರಣೆಯಾಗಿಬಿಟ್ಟಿದೆಯೇ ಎಂಬುದು ಈ ಕ್ಷಣದ ಕೊರಗು. 

12ನೇ ಶತಮಾನದ ಹೊತ್ತಿಗೆಲ್ಲ ಮುಸುಕಾಗಿಬಿಟ್ಟಿದ್ದ ಬೌದ್ಧ ಧರ್ಮ ಮತ್ತೆ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿಕೊಳ್ಳಲು ದಲಿತ ಚಳವಳಿಯ ಪ್ರಭಾವ ಕಾರಣ. ಇವತ್ತಿಗೂ ಬುದ್ಧ ಪೂರ್ಣಿಮೆ ಹಾಗೂ ಅದರ ಆಚೀಚಿನ ದಿನಗಳಲ್ಲಿ ದಲಿತರು ಗುಂಪಾಗಿ ಬೌದ್ಧ ಧರ್ಮಕ್ಕೆ ಮತಾಂತರವಾಗಿ, ಬೌದ್ಧ ದೀಕ್ಷೆ ಪಡೆದುಕೊಳ್ಳುವುದನ್ನು ನೋಡುತ್ತೇವೆ, ಓದುತ್ತೇವೆ. ಆ ಕಾಲಘಟ್ಟದಲ್ಲಿ ಸಮಾಜದ ಆತ್ಮಸಾಕ್ಷಿಯನ್ನು ಕಲಕಲೇಬೇಕಾದ ತುರ್ತು ಅಗತ್ಯವೊಂದಿತ್ತು. ಕಂದಾಚಾರದ ಮನಸ್ಥಿತಿಯಿಂದ ಹೊರಬಾರದೇ ಉಳಿದವರಿಗೆ ಬಿಸಿ ತಾಗಬೇಕಾದರೆ, ದಮನಿತರಿಗೆ ತಮಗಾದ ಅನ್ಯಾಯದ ವಿರುದ್ಧ ಆಕ್ರೋಶ ತೋಡಿಕೊಳ್ಳಲು ಇದ್ದ ಮಾರ್ಗ ಅದೊಂದೆ. ಹಿಂದೂ ಧರ್ಮದ ಮೇಲ್ವರ್ಗ ಉಳಿದವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಂಡು ಅಸ್ಪ>ೃಶ್ಯತೆ ಜೀವಂತವಾಗಿಟ್ಟಾಗ ತಾನು ಆ ಧರ್ಮಕ್ಕೆ ಸೇರಿದವನು ಎಂದು ದಮನಿತನಾದವನು ಯಾಕಾದರೂ ಹೇಳಿಕೊಳ್ಳುತ್ತಾನೆ?ಹಾಗೆಂದೇ ದಲಿತರು ಬೌದ್ಧ ದೀಕ್ಷೆ ಪಡೆದು, ಹಿಂದೂ ಧರ್ಮದಿಂದ ಬೇರೆಯಾಗಿಯೇ ಗುರುತಿಸಿಕೊಳ್ಳುವ ಅಭಿಯಾನವೊಂದು ಪ್ರತಿಭಟನೆಯ ಸ್ವರೂಪದಲ್ಲಿ ಬೆಳೆದು ಬಂತು.

 1890ರ ವೇಳೆಗೇ ಪಂಡಿತ್‌ ಸಿ. ಅಯೋಧ್ಯ ದಾಸ್‌ ಎಂಬುವವರು ಸಖ್ಯ ಬುದ್ಧಿಷ್ಟ್‌ ಸೊಸೈಟಿ ಸ್ಥಾಪಿಸಿ ದಲಿತರು ಬೌದ್ಧ ಧರ್ಮಕ್ಕೆ ಪರಿವರ್ತಿತರಾಗಬೇಕಾದ ಅವಶ್ಯಕತೆಯನ್ನು ಪ್ರಚುರ ಪಡಿಸಿದರು. ತಮಿಳು ದಲಿತ ಚಳವಳಿಯ ಪ್ರವರ್ತಕರೆಂದೇ ಗುರುತಿಸಲ್ಪಡುವ ಇವರ ಪ್ರಭಾವ ತಮಿಳುನಾಡು ಹಾಗೂ ಕರ್ನಾಟಕಗಳಲ್ಲಿ ಕೆಲಸ ಮಾಡಿತು. ಆದಾಗ್ಯೂ ಈ ಅಭಿಯಾನಕ್ಕೆ ಗಟ್ಟಿ ದನಿ ಬಂದಿದ್ದು, ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ನಿರ್ಧಾರವನ್ನು ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಕೈಗೊಂಡಾಗ. ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ತಾರತಮ್ಯದಿಂದ ಬೇಸತ್ತಿದ್ದ ಅಂಬೇಡ್ಕರ್‌, 1935ರಲ್ಲಿ ಸಮಾವೇಶವೊಂದರಲ್ಲೇ ಘೋಷಿಸಿದರು- 'ನಾನು ಹಿಂದು ಆಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ'. ಚರಿತ್ರೆಯಲ್ಲಿ ಅದೊಂದು ಮಹತ್ವದ ಕ್ಷಣ. ಧರ್ಮದ ವಿಷಯದಲ್ಲಿ ಅಂದು ಅಂಬೇಡ್ಕರ್‌ ತೆಗೆದುಕೊಳ್ಳಲಿದ್ದ ನಿರ್ಧಾರದಲ್ಲಿ ಭಾರತದ ಭವಿಷ್ಯವೇ ಅಡಗಿತ್ತು ಎಂಬುದು ಖಂಡಿತ ಅತಿಶಯೋಕ್ತಿ ಅಲ್ಲ. ಅವತ್ತು ಅಂಬೇಡ್ಕರ್‌ ಅವರು ತೆಗೆದುಕೊಂಡ ನಿರ್ಧಾರದ ಹಾದಿಯನ್ನು ಅವಲೋಕಿಸಿದರೆ ತಿಳಿಯುತ್ತದೆ- ಅವರಿಗಿದ್ದಿದ್ದು ಕೇವಲ ಹಿಂದು ಧರ್ಮಕ್ಕೆ ಪ್ರತಿಭಟನೆ ವ್ಯಕ್ತಪಡಿಸುವ ಹಪಾಹಪಿ ಮಾತ್ರವೇ ಆಗಿರಲಿಲ್ಲ ಎಂದು. ಏಕೆಂದರೆ ಹಿಂದು ಧರ್ಮದಿಂದ ಸಿಡಿಯುವುದಷ್ಟೇ ಅವರ ಉದ್ದೇಶವಾಗಿದ್ದರೆ ಆ ಕ್ಷಣದಲ್ಲಿ ಯಾವ ಧರ್ಮವನ್ನಾದರೂ ಅವರು ಅಪ್ಪಿಕೊಂಡುಬಿಡಬಹುದಿತ್ತು. ಅಂಬೇಡ್ಕರ್‌ ಅವರ ಮನದಿಂಗಿತ ಹೊರಬೀಳುತ್ತಲೇ ಇಸ್ಲಾಂ ಹಾಗೂ ಕ್ರೈಸ್ತ ಧರ್ಮದ ಪ್ರತಿನಿಧಿಗಳೆಲ್ಲ ಅವರಿಗೆ ಒಂದು ಬಗೆಯ ಆಮಿಷವನ್ನೇ ಒಡ್ಡಿದ್ದರು. 

ಆಗ ಅಂಬೇಡ್ಕರ್‌ ಬರೀ ಆಕ್ರೋಶದ ಹೆಜ್ಜೆ ಇಡಲಿಲ್ಲ. ಧರ್ಮವೊಂದನ್ನು ಸ್ವೀಕರಿಸುವ ತಮ್ಮ ವೈಯಕ್ತಿಕ ನಡೆ ಸಮಾಜದ ಮೇಲೆ ಹಾಗೂ ತಮ್ಮನ್ನು ಅನುಸರಿಸುತ್ತಿರುವ ದಲಿತ ಸಮುದಾಯದ ಮೇಲೆ ಬೀರಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸಿದರು. ದೇಶಕಾಳಜಿಯ ಅಂಬೇಡ್ಕರ್‌ ಅವರ ಚಿಂತನಾ ಕ್ರಮವೇ ಅವರು ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳಿಗೆ ಬೆನ್ನು ತಿರುಗಿಸುವಂತೆ ಮಾಡಿದ್ದು. 

ಇಂದು ನಾಗಾಲ್ಯಾಂಡ್‌ನಂಥ ರಾಜ್ಯದಲ್ಲಿ ಕ್ರಿಸ್ತನ ಹೆಸರಿನಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಇಸ್ಲಾಂ ಬೆಳೆದಿದ್ದೇ ಆಕ್ರಮಣಶೀಲತೆಯಿಂದ. ಅಂಬೇಡ್ಕರ್‌ ಅವರಂಥ ಪ್ರಗತಿಪರ ಮನಸ್ಸು ಕಟ್ಟಳೆಗಳಿಂದಲೇ ಕೂಡಿದ ಆ ಧರ್ಮವನ್ನು ಒಪ್ಪಿಕೊಳ್ಳುವುದು ಹೇಗೆ? ಕೊನೆಗೂ ಅಂಬೇಡ್ಕರ್‌ ಆಯ್ಕೆ ಮಾಡಿಕೊಂಡಿದ್ದು, ಈ ನೆಲದ ಗಂಧದಲ್ಲೇ ಅರಳಿದ ಬೌದ್ಧ ಧರ್ಮವನ್ನು. ಹೀಗೆ ಅಳೆದು ತೂಗಿ 1956ರಲ್ಲಿ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ನಾಗ್ಪುರದಲ್ಲಿ ಬೌದ್ಧ ದೀಕ್ಷೆ ಸ್ವೀಕರಿಸಿದರು ಅಂಬೇಡ್ಕರ್‌. ನಾನು ಹಿಂದು ದೇವತೆಗಳನ್ನು ಪೂಜಿಸುವುದಿಲ್ಲ, ಬುದ್ಧವು ವಿಷ್ಣುವಿನ ಅವತಾರ ಎಂಬ ಕಲ್ಪನೆಯನ್ನು ಒಪ್ಪುವುದಿಲ್ಲ ಎಂಬ ಹಲ ಅಂಶಗಳ ಜೊತೆಗೆ ಮಾದಕ ವ್ಯಸನ, ಹೆಂಡದಂಥ ಚಟಗಳಿಗೆ ಬೀಳುವುದಿಲ್ಲ ಎಂಬುದೂ ಸೇರಿದಂತೆ 22 ಪ್ರತಿಜ್ಞೆಗಳೊಂದಿಗೆ ಬೌದ್ಧ ದೀಕ್ಷೆ ಸ್ವೀಕಾರವಾಯಿತು. ಅಂದಿನಿಂದ ಇಂದಿನವರೆಗೆ ಮಹಾರಾಷ್ಟ್ರ, ಹೈದರಾಬಾದ್‌, ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಬೌದ್ಧ ದೀಕ್ಷೆಯ ಕ್ರಮ ನಡೆದುಕೊಂಡು ಬಂದಿದೆ. ಆದರೆ... ಅವತ್ತಿನಿಂದ ಇವತ್ತಿಗೆ ಮಹಾನದಿಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. 

ದಲಿತ ಉದ್ಯಮಶೀಲತೆ ಎಂಬ ಪದ ಕಿವಿಗೆ ಬಡಿದಿದೆ, ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ನಂತರ ಬೌದ್ಧಧರ್ಮ ನೆನಪಾಗಲು ಮುಂದಿನ ವರ್ಷವೇ ಬರಬೇಕು. ಮತ್ತೊಂದು ಬುದ್ಧ ಪೂರ್ಣಿಮೆ ಬಂದಾಗಲೇ ಮಾಮೂಲಿನಂತೆ ಪುರೋಹಿತಶಾಹಿಯ ವಿರುದ್ಧ ಬುದ್ಧಿಜೀವಿ ಭಾಷಣ, ದೀಕ್ಷೆ ಪ್ರಚಾರ. ಹಾಗಾದರೆ, ಇವತ್ತಿನ ಆಧುನಿಕ ಬೌದ್ಧತ್ವ, ಬೌದ್ಧ ಧರ್ಮಕ್ಕಿಂತ ಬೇರೆಯೇ? ಅದು ಬೌದ್ಧರ ಸಮುದಾಯ ಪ್ರಜ್ಞೆಯ ಒಂದು ಭಾಗವಾಗಿದೆಯೇ? ಹಾಗಾಗಿದ್ದರೆ ಜಮ್ಮು- ಕಾಶ್ಮೀರದ ಲಡಾಕ್‌ನಲ್ಲಿ ಬೌದ್ಧರ ಮೇಲಾಗುತ್ತಿರುವ ದೌರ್ಜನ್ಯಗಳು ಇಲ್ಲಿನವರ ಸಂವೇದನೆಗೆ ತಾಗುವುದಿಲ್ಲವೇಕೆ? ಕೊನೆಪಕ್ಷ, ಲಡಾಕ್‌ನ ಬೌದ್ಧರು, ತಮ್ಮ ಹುಡುಗಿಯರನ್ನು ಮುಸ್ಲಿಮರು ಬಲವಂತದಿಂದ ಹಾರಿಸಿಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರಕ್ಕೆ ಅಳಲು ತೋಡಿಕೊಂಡಿರುವ ವಿಷಯವಾದರೂ ಗೊತ್ತೇ? ಕಾರ್ಗಿಲ್‌ನಲ್ಲಿ ಬೌದ್ಧ ಮತಸ್ಥರು ಸತ್ತರೆ ಅಲ್ಲಿ ಅವರನ್ನು ಹೂಳುವುದಕ್ಕೂ ಅವಕಾಶ ನೀಡದ ಹತಾಶ ಸ್ಥಿತಿ ಇರುವುದು ಲೆಕ್ಕಕ್ಕಿಲ್ಲವೇ? ಅಂಬೇಡ್ಕರ್‌ ಇದ್ದಿದ್ದರೆ ಇವನ್ನೆಲ್ಲ ಗ್ರಹಿಸುತ್ತಿದ್ದ ಪರಿ ಯಾವುದು ಎಂಬ ಕುತೂಹಲ ಕಾಡುತ್ತದೆ. ಹೋಗಲಿ, ಆಧುನಿಕ ಬೌದ್ಧ ಧರ್ಮ ದಲಿತರನ್ನು ಉತ್ತೇಜಿಸುವ ವ್ಯವಸ್ಥೆಯನ್ನಾದರೂ ಹುಟ್ಟುಹಾಕಿದೆಯೇ? ಅವರನ್ನು ಸಾಕ್ಷರರನ್ನಾಗಿಸುವ, ವ್ಯಸನ ಅಂಟಿಸಿಕೊಂಡವರನ್ನು ಮುಕ್ತಗೊಳಿಸುವ, ಉದ್ಯಮಶೀಲತೆ ಬೆಳೆಸುವ, ಯಾವ ಧರ್ಮದಿಂದ ಹೊರಬಂದರೋ ಅದಕ್ಕೆ ಪರ್ಯಾಯವಾಗಿ ಚಲನಶೀಲ ವ್ಯವಸ್ಥೆಯೊಂದನ್ನು ರೂಪಿಸುವ ಪ್ರಯತ್ನಗಳು ಕಾಣುತ್ತಲೇ ಇಲ್ಲ. ಒಂದು ಪಕ್ಷದಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಮತ್ತೊಂದು ಪಕ್ಷ ಸೇರಿದೆ ಎಂಬ ರಾಜಕಾರಣದ ಧಾಟಿಯಲ್ಲೇ ಧರ್ಮವೂ ಬೆಳೆಯಬೇಕೆ? ಇವತ್ತು ಮತಾಂತರ ಹೊಂದುವವರೆಲ್ಲ ಮುಂದೊಡ್ಡುವುದು ಸಮಾನತೆಯ ಕಾರಣವನ್ನು. ಹಿಂದು ಧರ್ಮದಲ್ಲಿ ಜಾತಿ ಪದ್ಧತಿ ಇದೆ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರವಾದವರಿಗೆ ದಲಿತಕ್ರೈಸ್ತರೆಂಬ ಹಣೆಪಟ್ಟಿ! ಅಂತೆಯೇ ದಲಿತ ಮುಸ್ಲಿಂ, ದಲಿತ ಸಿಖ್‌... ಹೀಗೆ ಉಳಿದೇ ಹೋಗಿವೆ ವಿಂಗಡನೆಗಳು. ಪ್ರತಿಭಟನೆಯೊಂದನ್ನು ವೈಚಾರಿಕತೆಯ ನಿರಂತರತೆ ತುಂಡರಿಸಿ ಕೊಂಡೊಯ್ದರೆ ಒದಗುವ ಸ್ಥಿತಿ ಇದೇ. ವಿಚಾರವಾದಿಗಳು ಚಿಂತಿಸಬೇಕಿದೆ. - ರಮೇಶ್‌ಚಂದ್ರ, ಮೈಸೂರು

Thursday, 28 April 2011

ತರೀಕೆರೆ ಏರಿಯಾ: ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ


By ರಹಮತ್ ತರೀಕೆರೆ
ನನಗೊಮ್ಮೆ ಕರ್ನಾಟಕದ ಬೌದ್ಧಧರ್ಮಕ್ಕೆ ಸಂಬಂಧಿಸಿದ ಜನರನ್ನೂ ಜಾಗಗಳನ್ನೂ ಕಣ್ಣಾರೆ ಕಾಣುವ ಆಸೆ ಮೊಳೆಯಿತು. ಆಸೆಯನ್ನು ಧಾರವಾಡದ ವೈದ್ಯಮಿತ್ರರಾದ ಡಾ. ಸಂಜೀವ ಕುಲಕರ್ಣಿಯವರಲ್ಲಿ ಹಂಚಿಕೊಂಡೆ. ಬೌದ್ಧಧರ್ಮದ ಬಗ್ಗೆ ಒಳಸೆಳೆತವುಳ್ಳ ಅವರು ಕೂಡಲೇ ಸೈಯೆಂದು ಒಪ್ಪಿಕೊಂಡರು. ಇಬ್ಬರೂ ಸೇರಿ, ತಿರುಗಾಟದ ಪಥವನ್ನೂ ನೋಡಬೇಕಾದ ಜಾಗವನ್ನೂ ಕಾಣಬೇಕಾದ ಜನರನ್ನೂ  ಗುರುತು ಮಾಡಿಕೊಳ್ಳುತ್ತ ತಯಾರಿ ನಡೆಸಲಾರಂಭಿಸಿದೆವು. ಇದರ ಪತ್ತೆಯನ್ನು ಹೇಗೊ ಮಾಡಿದ ಮೈಸೂರಿನ ಗೋವಿಂದಯ್ಯನವರು ನಾನೂ ಬರುತ್ತೇನೆಂದು ಗಂಟುಬಿದ್ದರು. ಕಡೆಗೆ ತಂಡಕ್ಕೆ ತರುಣ ಕವಿ ಅರುಣ್ ಜೋಳದಕೂಡ್ಲಿಗಿಯನ್ನೂ ಸೇರಿಸಿಕೊಂಡೆವು.
ನಾವು ನಾಲ್ವರು, ಆಕಸ್ಮಿಕವಾಗಿ ಸಮಾಜದ ನಾಲ್ಕು  ಸ್ತರಗಳಿಂದ ಬಂದವರಾಗಿದ್ದು, ಬುದ್ಧನ ನೆಪದಲ್ಲಿ ಒಂದಾಗಿದ್ದೆವು. ಆಯಾ ದಿನ ಸಿಕ್ಕ ಅನುಭವವನ್ನು ನಾಲ್ವರೂ ಸೇರಿ ಚರ್ಚಿಸುತ್ತಿದ್ದೆವು. ಭಿನ್ನಮತಗಳನ್ನು ಇಟ್ಟುಕೊಂಡು ಜಗಳ ಮಾಡುತ್ತಿದ್ದೆವು. ನಮ್ಮ ಜತೆ ಒಂದು ಹೆಂಜೀವವೂ ಇದ್ದಿದ್ದರೆ, ತಂಡಕ್ಕೆ ಬೇರೊಂದು ಕಣ್ಣು ಒದಗಿರುತ್ತಿತ್ತೇನೊ? ಆದರೆ ಹೊರಡುವಾಗ ಹಾಗೆ ಯಾರೂ ನಮಗೆ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ನಾವು ಈ ದಿಸೆಯಲ್ಲಿ ಚಿಂತಿಸಲಿಲ್ಲ. ಮನೆಮಡದಿ ಯಶೋಧರೆಯ ಹಂಗಿಲ್ಲದೆ ತಿಳಿವಳಿಕೆಯ ಹುಡುಕಾಟಕ್ಕೆ ಹೊರಟ ಬುದ್ಧನ ನಾಡಿನವರು ತಾನೇ ನಾವು?
ಧಾರವಾಡದಿಂದ ಪಯಣ ಆರಂಭಿಸಿ ಕರ್ನಾಟಕವನ್ನು ಅದರಂಚಿನಲ್ಲೇ ಚಲಿಸುತ್ತ ಒಂದು ಸುತ್ತು ಹಾಕಿದೆವು. ಸುಮಾರು 1500 ಕಿಮಿ ಉದ್ದದ 15 ದಿನಗಳ ಪಯಣ. ಇದರಲ್ಲಿ ನಾವು ಬೌದ್ಧ ವಿಹಾರಗಳನ್ನೂ  ಚೈತ್ಯಾಲಯಗಳನ್ನೂ ಬೌದ್ಧಮೂರ್ತಿಗಳನ್ನೂ ಕಂಡೆವು; ಧಮ್ಮಸ್ವೀಕಾರದ ಬಳಿಕ ಅಶೋಕನು ಕರ್ನಾಟಕದಲ್ಲಿ ಹಾಕಿಸಿದ ಶಾಸನಗಳನ್ನು ಕಂಡೆವು; ಬೌದ್ಧಧರ್ಮದ ಬೋಧನೆ ನಡೆಯುತ್ತಿದ್ದ ಗುರುಕುಲಗಳನ್ನೂ ಬುದ್ಧನ ಹೆಸರಲ್ಲಿ ಕಟ್ಟಲಾಗಿರುವ ಶಿಕ್ಷಣ ಸಂಸ್ಥೆಗಳನ್ನೂ ಭೇಟಿಮಾಡಿದೆವು; ಬೌದ್ಧ ಚಿಂತಕರನ್ನೂ ಭಂತೆಗಳನ್ನೂ ಸಾಧಕರನ್ನೂ ಕಂಡು ಮಾತಾಡಿದೆವು. ತಮ್ಮ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಧಮ್ಮಪ್ರಸಾರ ಕೈಗೊಂಡಿರುವ ಬಿಎಸ್ಪಿ ಕಾರ್ಯಕರ್ತರ ಜತೆ ಚರ್ಚಿಸಿದೆವು. ಬೌದ್ಧಸಂಪ್ರದಾಯದಲ್ಲಿ ಲಗ್ನವಾಗಿರುವ ದಂಪತಿಗಳನ್ನೂ ಧಮ್ಮದೀಕ್ಷೆ ಪಡೆದು ಹೊಸಬದುಕನ್ನು ನಡೆಸುತ್ತಿರುವ ಕುಟುಂಬಗಳನ್ನೂ ಕಂಡೆವು. ಒಟ್ಟಿನಲ್ಲಿ ಅದೊಂದು ಅಪೂರ್ವ ಬೌದ್ಧಯಾನ.
ಈ ಯಾನದಲ್ಲಿ ಮೂರು ಅಂಶಗಳು ಗೋಚರಿಸಿದವು. 1. ಕರ್ನಾಟಕದಲ್ಲಿ ಒಂದು ಕಾಲಕ್ಕೆ ವ್ಯಾಪಕ ಅಸ್ತಿತ್ವವನ್ನು ಹೊಂದಿದ್ದ ಬೌದ್ಧಧರ್ಮವು, ಸದ್ಯಕ್ಕೆ ತನ್ನ ಗತಕಾಲದ ಅವಶೇಷಗಳ ಮೂಲಕ ಉಸಿರೆಳೆಯುತ್ತಿದ್ದ ಪಳೆಯುಳಿಕೆಗಳು 2. ಧಮ್ಮದೀಕ್ಷೆ ಸ್ವೀಕರಿಸಿರುವ ಸಾವಿರಾರು ಜನರ ಬಾಳಿನಲ್ಲಿ ಹೊಸಹೊಸ ರೂಪದಲ್ಲಿ ನೆಲೆಯೂರುತ್ತ ಅದು ಚಿಗುರೊಡೆಯುತ್ತಿದ್ದುದು. 3. ಹಾಗೆ ಚಿಗುರೊಡೆಯುವ ಪ್ರಕ್ರಿಯೆಯಲ್ಲಿ ಮನೆಗಳನ್ನು ಮನಸ್ಸುಗಳನ್ನು ಸಂಬಂಧಗಳನ್ನು ಕೂಡ ಒಡೆದುಕೊಂಡಿರುವುದು. ಒಂದು, ಚರಿತ್ರೆಯ ಸ್ಥಗಿತ ದರ್ಶನವಾದರೆ, ಮತ್ತೆರಡು ವರ್ತಮಾನದ ಚಲನಶೀಲ ದರ್ಶನ; ಒಂದು, ಭಗ್ನತೆಯ ಮುಖವಾದರೆ, ಇನ್ನೆರಡು ಹೊಸಹುಟ್ಟಿನ ಮತ್ತು ಹೊಸಬಿಕ್ಕಟ್ಟಿನ ಮುಖಗಳು. ಒಂದು ಸ್ಮಾರಕಗಳ ಜಗತ್ತಾದರೆ ಇನ್ನೆರಡು ಭಾವನೆಗಳ ಮಾನುಷ ಜಗತ್ತು.

ನಮಗೆ ಕಾಡಿಸುತ್ತಿದ್ದುದು ಧಮ್ಮವು ನೆಲೆಯೂರುತ್ತಿರುವ ಕಡೆ ಹುಟ್ಟಿರುವ ಬಿರುಕು ಮತ್ತು ಬಿಕ್ಕಟ್ಟುಗಳು. ಇವು ಧಮ್ಮದೀಕ್ಷೆ ಪಡೆದ ಕುಟುಂಬದಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ; ಕೇರಿ ಮತ್ತು ಕುಟುಂಬಗಳ ನಡುವೆ ಬಿದ್ದಿರುವ ಕಂದರದಲ್ಲಿ ಕಾಣುತ್ತಿದ್ದವು; ದಲಿತರ ಎರಡು ಬಣಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ರೂಪದಲ್ಲಿದ್ದವು. ಯಾವುದೇ ಹಳೆಯ ರೂಪದ ಜಾಗವನ್ನು ಹೊಸತೊಂದು ಆಕ್ರಮಿಸುವಾಗ, ಇಂತಹ ಸಂಘರ್ಷ ಸಾಮಾನ್ಯ. ಹೊಸತು ಮತ್ತು ಹಳತುಗಳ ಈ ಸಂಘರ್ಷವು ಕೆಲವು ಕಾಲದ ಬಳಿಕ ಸಾಮರಸ್ಯಗೊಂಡು ಮೂರನೆಯ ಹೊಸರೂಪವಾಗಿ ಸಿದ್ಧವಾಗಬಹುದು. ಅಂತಹ ಹೊಸರೂಪವೊಂದು ಸಿದ್ಧವಾಗುವ ತನಕ ಈ ಜಗ್ಗಾಟಗಳು ಸಹಜ. ಆದರೆ ಸಾಮಾಜಿಕ ಧಾರ್ಮಿಕ ಮಾನಸಿಕ ಹಾಗೂ ಸಾಂಸ್ಕೃತಿಕವಾದ ಈ ಜಗ್ಗಾಟಗಳ ನಡುವೆ ಸಿಕ್ಕು ನಲುಗುತ್ತಿರುವವರ ತೊಳಲಾಟ ಮತ್ತು ಹತಾಶೆಗಳನ್ನು ಹೆಚ್ಚಿನವರು ಲೆಕ್ಕಿಸಿದಂತೆ ಕಾಣುತ್ತಿರಲಿಲ್ಲ. ಮಾನವೀಯವೂ ಸಂಕೀರ್ಣವೂ ಆಗಿರುವ ಈ ನೋವು ಸಂಕಟಗಳನ್ನು ಸರಿತಪ್ಪುಗಳೆಂದು ಸರಳವಾಗಿ ತೀರ್ಮಾನಿಸುವುದು ಕಷ್ಟ. ಹೀಗಾಗಿ ಇವು ಯಾಕೆ ಮತ್ತು ಹೇಗೆ  ಮೂಡಿದವು ಎಂದು ಅರ್ಥಮಾಡಿಕೊಳ್ಳಲು ಯತ್ನಿಸಬಹುದು.

ಎರಡು ವಾರಗಳ ನಮ್ಮ ಧಮ್ಮಯಾನದಲ್ಲಿ ಧಮ್ಮದೀಕ್ಷೆ ಪಡೆದ ಹತ್ತಾರು ಕುಟುಂಬಗಳನ್ನು ನಾವು ಭೇಟಿ ಮಾಡಿದೆವು. ಇವುಗಳಲ್ಲಿ ಏಳು ದಲಿತ ಕುಟುಂಬಗಳು. ಒಂದು ಬ್ರಾಹ್ಮಣ. ಎರಡು ಬಂಟರವು. ಕೊನೆಯ ಮೂರು ಕರಾವಳಿಯವು; ಮೊದಲ ಏಳು ದಲಿತ ಕುಟುಂಬಗಳು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಗುಲಬರ್ಗ ಜಿಲ್ಲೆಗೆ ಸೇರಿದವು. ಎಲ್ಲ ಕುಟುಂಬಗಳೂ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡವು; ಉಡಲುಣ್ಣಲು ಹೋರಾಟವಿಲ್ಲದ ಮಧ್ಯಮವರ್ಗಕ್ಕೆ ಸೇರಿದವು. ಈ ಕುಟುಂಬಗಳ ಜತೆ ನಾವು ಮಾತಾಡಿದೆವು. ಜತೆ ಕುಳಿತು ಊಂಡೆವು. ಅಲ್ಲಿ ನಮಗೆ ನಾಲ್ಕು ಪರಿಯ ದಾಂಪತ್ಯಗಳು ಕಂಡವು.
1. ಇಡಿಯಾಗಿ ಧಮ್ಮೀಕರಣಗೊಂಡಿರುವ ದಾಂಪತ್ಯಗಳು. ಇಲ್ಲಿ ದಂಪತಿಗಳಲ್ಲಿ ಸತಿಪತಿಗಳೊಂದಾದ ಭಕ್ತಿಯ ಸಾಮರಸ್ಯವಿತ್ತು. ಸಮಾನಮನಸ್ಕತೆ ಸಾಧ್ಯವಾಗಿತ್ತು. ಹಳೆಯ ಸಂಪ್ರದಾಯಗಳು ಕೈಬಿಟ್ಟುಹೋಗಿದ್ದವು. ಮಕ್ಕಳಿಗೆ ಬೌದ್ಧಹೆಸರುಗಳನ್ನು ಇಡುವುದೇ ಮುಂತಾಗಿ ಬೌದ್ಧ ಆಚರಣೆಗಳು ಆಚರಣೆಗೆ ಬಂದಿದ್ದವು. ಇವು ದೀಕ್ಷೆಗೊಂಡು ದಶಕಗಳನ್ನೆ ಕಳೆದಿರುವ ಕುಟುಂಬಗಳು. ಗುಲಬರ್ಗದ ಬುದ್ಧವಿಹಾರದಲ್ಲಿದ್ದ ಶ್ರೀಮತಿ ಖರ್ಗೆಯವರಲ್ಲಿ, ಮಲ್ಲಿಕಾರ್ಜುನ ಖರ್ಗೆಯವರಷ್ಟೇ ಧರ್ಮದ ಉಮೇದಿತ್ತು. ಆದರೂ ಇಲ್ಲಿ ಹೆಚ್ಚಿನ ಕಡೆ ಗಂಡನೇ ಸಾಧಕನಾಗಿದ್ದು, ಮಡದಿ ಅವನಿಗೆ ಸಹಚರಳಾಗಿ ಹಿಂಬಾಲಿಸಿದಂತೆ ಇತ್ತು.
2. ಇನ್ನೂ ಹೊಂದಾಣಿಕೆಯ ಪ್ರಕ್ರಿಯೆಯಲ್ಲಿರುವ ದಾಂಪತ್ಯಗಳು. ಇಲ್ಲಿ ಹೊಸಧರ್ಮದ ಬಗ್ಗೆ ಪೂರಾ ಒಪ್ಪಿಗೆ ಸಾಧ್ಯವಾಗಿರಲಿಲ್ಲ. ಆದರೂ, ಹಳತರ ಜತೆಗೆ ಒಂದು ಬಗೆಯ ಸಾಮರಸ್ಯ ಮಾಡಲು ಯತ್ನ ನಡೆದಿತ್ತು. ಉದಾ.ಗೆ, ಒಂದು ಮನೆಯಲ್ಲಿ ಹೊರಬಾಗಿಲ ಮೇಲೆ ಕೆತ್ತಲಾಗಿದ್ದ ಬುದ್ಧಮೂರ್ತಿಯ ಹಣೆಗೆ ವಿಭೂತಿಯನ್ನು ಬಳಿಯಲಾಗಿತ್ತು. ಅದು ಬುದ್ಧನನ್ನು ಪಳಗಿಸುತ್ತ ಸ್ಥಳೀಕರಿಸುತ್ತಿರುವ ಯತ್ನದಂತೆ ತೋರಿತು; ಇನ್ನೊಂದು ಮನೆಯ ದೇವರಕೋಣೆಯಲ್ಲಿ ಬುದ್ಧನ ಮೂರ್ತಿಯ ಜತೆಗೆ ಅಂಬೇಡ್ಕರ್ ಮತ್ತು ಮಲೆಮಾದೇಶ್ವರನ ಫೋಟೊಗಳನ್ನೂ ಭೇದವಿಲ್ಲದೆ ಇಡಲಾಗಿತ್ತು. ಇವೆಲ್ಲ ಧಮ್ಮದೀಕ್ಷೆ ಪಡೆದು  ಒಂದೆರಡು  ವರ್ಷಗಳಾಗಿದ್ದ ಕುಟುಂಬಗಳು.
3. ಸಾಮರಸ್ಯದ ಸಾಧ್ಯವಾಗಿರದೆ ತೊಳಲಾಟ ನಡೆಯುತ್ತಿರುವ ಕುಟುಂಬಗಳು. ಇಲ್ಲಿ ಧಮ್ಮಸ್ವೀಕಾರದ ವಿಷಯದಲ್ಲಿ ಸತಿಪತಿಗಳು ಸಮಾನ ಮನಸ್ಕರಾಗಿರಲಿಲ್ಲ. ಹೊಸಧಮ್ಮದ ವಿಷಯದಲ್ಲಿ ಗಂಡ ಉತ್ಸಾಹಿಯಾಗಿದ್ದರೆ, ಮಡದಿಯ ಮೊಗದಲ್ಲಿ ಮ್ಲಾನತೆಯಿತ್ತು. ಗಂಡನಿಗೆ ಬೇಸರವಾಗಬಾರದೆಂದೊ ಅಥವಾ  ಭಿನ್ನಮತವನ್ನು ಬಂದವರೆದುರು ತೋರಬಾರದೆಂದೊ ಆಕೆ  `ಅಳುವೇ ತುಟಿಗೆ ಬಂದಂತೆ' ಮೌನವಹಿಸಿದಂತೆ ಕಾಣುತ್ತಿತ್ತು. ಗಂಡನ ಮುಖದಲ್ಲಿ ಮನೆಯಲ್ಲಿ ನೆಲೆಸುತ್ತಿರುವ ಧಮ್ಮಸಂಸ್ಕೃತಿಯ ಬಗ್ಗೆ ಸಂತೋಷದ ಭಾವವಿದ್ದರೆ, ಆಕೆಯ ಮುಖದಲ್ಲಿ ಆತಂಕವಿತ್ತು. ಆಕೆ ಗಂಡನ ಒತ್ತಡಕ್ಕೆ ಬೌದ್ಧ ಆಚರಣೆಗಳನ್ನು ಅನಿವಾರ್ಯವಾಗಿ ಯಾಂತ್ರಿಕವಾಗಿ ಮಾಡುತ್ತಿರುವಂತೆ ತೋರಿತು.
4. ಸಾಮರಸ್ಯ ಸಾಧ್ಯವೇ ಆಗದೆ ಸಂಬಂಧ ಕುಸಿದುಬಿದ್ದಿರುವ ಕುಟುಂಬಗಳು. ಇಲ್ಲಿ ಮಹಿಳೆಯರಿಗೆ  ತಾವು ಹುಟ್ಟಿ ಬೆಳೆದು ಬಂದ ಪಾರಂಪರಿಕ ಧಾರ್ಮಿಕ ಸಂಸ್ಕೃತಿಯನ್ನು ಬಿಟ್ಟುಕೊಡುವುದು ಸಾಧ್ಯವಾಗಿರಿಲ್ಲ. ಅವರಿಗೆ ಬುದ್ಧನ ಬಗ್ಗೆ ಅಸಹನೆಯೇನಿರಲಿಲ್ಲ. ಆದರೆ ತನ್ನನ್ನು ಬಾಲ್ಯದ ದೈವಗಳಿಂದ ಬಿಡಿಸುತ್ತಿರುವ ಮತ್ತು ಬುದ್ಧನನ್ನು ಹೇರುತ್ತಿರುವ ಗಂಡನ ಬಗ್ಗೆ ಅಸಮಾಧಾನವಿತ್ತು. ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮನ್ನಣೆಯಿಲ್ಲವಲ್ಲ ಎಂಬ ಕೊರಗು ಒಳಗೊಳಗೇ ಆವಿಗೆಯ ಬೆಂಕಿಯಂತೆ ಸುಳಿಯುತ್ತಿತ್ತು. ಇದು ಒಂದು ಕಡೆ ಲಾವರಸದಂತೆ ಆಸ್ಫೊಟಗೊಂಡಿತು ಕೂಡ. ಕರ್ನಾಟಕದ ಲೀವಿಂಗ್ ಬುದ್ಧಿಸಂನ ಅಧ್ಯಯನಕ್ಕೆ ಹೊರಟ ನಮಗೆ ಇದು ಹೊಸದೊಂದು ತಿಳಿವಿನ ಕೋನವನ್ನು ನೀಡಿತು.

ಈ ಆಸ್ಫೋಟ ಸಂಭವಿಸಿದ್ದು ಒಂದು ದಲಿತ ಕುಟುಂಬದಲ್ಲಿ. ಇಲ್ಲಿ ಗಂಡ ಹೆಂಡತಿಯಿಬ್ಬರೂ ಉನ್ನತ ಶಿಕ್ಷಣ ಪಡೆದವರು. ಇವರಲ್ಲಿ ಗಂಡ ಧಮ್ಮದೀಕ್ಷೆ ಸ್ವೀಕರಿಸಿದ್ದರು. ಮಾತ್ರವಲ್ಲ. ಕಾವಿಧರಿಸಿ, ತಮ್ಮ ಹೆಸರನ್ನು ಬದಲಿಸಿಕೊಂಡು ಭಂತೆ ಕೂಡ ಆಗಿದ್ದರು. ಧಮ್ಮ ಪ್ರಸಾರದಲ್ಲಿ ಅತಿ ಉಮೇದಿನಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಕಾಣುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅವರು ಮನೆಯಲ್ಲಿ ಇಲ್ಲವೆಂದೂ ಬಿಹಾರದ ಬೌದ್ಧಗಯಾಕ್ಕೆ ಹೋಗಿದ್ದಾರೆಂದೂ ಅವರು ಶಿಷ್ಯರು ತಿಳಿಸಿದರು. ಆದರೂ ಮನೆಗೆ ತೆರಳಿ, ಅವರ ಮಡದಿಯ ಅಭಿಪ್ರಾಯವನ್ನು ಪಡೆಯೋಣವೆಂದು ಹೊರಟೆವು. ಸಂಜೆ ಏಳರ ಹೊತ್ತು. ಭಿಕ್ಕು ಅವರ ಮನೆಗೆ ಹೋಗಿ ಬಾಗಿಲನ್ನು ತಟ್ಟಿದೆವು. ಒಳಗಿಂದ ಒಬ್ಬರು ಮಹಿಳೆ ಬಾಗಿಲನ್ನು ಅರೆತೆಗೆದು ಏನು ಬೇಕಿತ್ತು ಎಂಬಂತೆ ಹುಬ್ಬುನಿರಿಗೆ ಮಾಡಿಕೊಂಡು ನಮ್ಮನ್ನು ನೋಡಿದರು. ಅವರ ಹಣೆಯಲ್ಲಿ ವಿಭೂತಿಯಿತ್ತು. ``ನಾವು ಬೌದ್ಧಧರ್ಮದ ಅಧ್ಯಯನ ಮಾಡುವುದಕ್ಕೆ ಬಂದವರು. ಭಂತೇಜಿಯಿದ್ದರೆ ಅವರ ಜತೆ ಮಾತಾಡಬೇಕಿತ್ತು'' ಎಂದೆವು. `ಬೌದ್ಧ' `ಭಂತೆ' ಎಂಬ ಶಬ್ದಗಳನ್ನು ಕೇಳುತ್ತಿದ್ದಂತೆ ಆಕೆಯ ಮುಖ ಬಿರುಸಾಯಿತು. ಕಣ್ಣು ಕನಲಿದವು. ಗಡುಸಾದ ದನಿಯಲ್ಲಿ ``ನಿಮ್ಮ ಭಂತೇಜಿ ಮನೆಬಿಟ್ಟು ಯಾವುದೋ ದೇಶಕ್ಕೆ ಬುದ್ಧನ್ನ ಹುಡಕ್ಕೊಂಡು ಹೋಗಿದಾರೆ. ಅವರು ಬಂದ್ಮೇಲೆ ಹೊರಗಡೆ ಎಲ್ಲಾದರೂ ಕುಂತು ಮಾತಾಡಿಕೊಳ್ಳಿ ಸಾ. ಈ ಮನೇಲಿ ಅವರ ಸುದ್ದಿ ಮಾತ್ರ ತಗೀಬೇಡಿ. ಬುದ್ಧನ ವಿಷಯ ಎತ್ತಬೇಡಿ. ದಯವಿಟ್ಟು ಹೊರಟುಹೋಗಿ' ಎಂದು ಹೇಳಿದರು. ನಮಗೆ ಎದೆಗೆ ಒದ್ದಂತಾಯಿತು. ಸೂಕ್ಷ್ಮಮನಸ್ಸಿನ ಡಾ.ಸಂಜೀವ್ ಗಾಬರಿಯಿಂದ ``ಗೋವಿಂದಯ್ಯ, ಕಮಾನ್, ಲೆಟಸ್ ಗೋಬ್ಯಾಕ್' ಎಂದರು. ಆದರೆ ಗೋವಿಂದಯ್ಯನವರು ಅದನ್ನು ಕಿವಿಗೆ ಹಾಕಿಕೊಳ್ಳದೆ ``ಮೇಡಂ, ಬೇಜಾರ್ ಮಾಡಕೋಬೇಡಿ. ನಿಮ್ಮ ಯಜಮಾನರು ಇಲ್ಲದೇ ಹೋದರೆ ಏನಂತೆ? ನೀವಿದ್ದೀರಲ್ಲ. ನಿಮ್ಮ ಜೊತೇಲೆ ಮಾತಾಡ್ತೀವಿ. ಈ ಬೌದ್ಧಧರ್ಮದಿಂದ ನಿಮಗೆ ಏನು ಕಷ್ಟವಾಗಿದೆ. ಅದನಾರೂ ಒಸಿ ಹೇಳಿ. ತಿಳಕೊಳ್ಳುವ'' ಎಂದು ನಮ್ರವಾಗಿ ಹೇಳಿದರು. ಆ ಮಹಿಳೆಯ ಕ್ಯಾಣ ಇಳಿದಿರಲಿಲ್ಲ. ``ಇಲ್ಲ ಸಾ, ನೀವು ಕೇಳೋದು ಬ್ಯಾಡ. ನಾನು ಹೇಳೋದೂ ಬ್ಯಾಡ. ಬುದ್ಧನ ಹೆಸರು ಹೇಳಿಕೊಂಡು ಬರೋ ಯಾರ ಹತ್ರಾನೂ ನಂಗೆ ಮಾತಾಡೋಕೆ ಇಷ್ಟವಿಲ್ಲ' ಎಂದರು. ಅದಕ್ಕೆ ಗೋವಿಂದಯ್ಯ ``ಅಮ್ಮಾ, ನನ್ನ ಜತೆ ದೂರದಿಂದ ಬಂದಿರೊ ವಿದ್ವಾಂಸರು ಲೇಖಕರು ಅವರೆ. ಒಂದೈದು ನಿಮಿಷ ನಿಮ್ಮ ಜೊತೆ ಮಾತಾಡ್ತೀವಿ'' ಎಂದು ವಿನಂತಿಸಿದರು. ಫಾಯದೆಯಾಗಲಿಲ್ಲ. ``ನಿಮ್ಮ ಲೇಖಕರನ್ನ ವಿದ್ವಾಂಸರನ್ನ ಕಟ್ಕೊಂಡು ನನಗೇನು ಆಗಬೇಕಿದೆಯಪ್ಪ? ಆ ಬುದ್ಧನಿಂದ ನನ್ನ ಸಂಸಾರವೇ ಹಾಳಾಗಿದೆ. ನಮ್ಮ ಪಾಡಿಗೆ ಬದುಕಲು ನಮಗೆ ಬಿಡಿ. ಈಗ ತಾವು ದಯಮಾಡಿ'' ಎಂದು ತಣ್ಣಗೆ ಆದರೆ ಆಕ್ರೋಶದಿಂದ ಹೇಳಿದರು. ಈಗ ಸಂಜೀವ್ ಗೆ ತಡೆಯಲು ಆಗಲಿಲ್ಲ. ``ತರಿಕೇರಿ, ಏನ್ರೀ ಇದು? ಆ ಹೆಣಮಗಳು ಇಂಡೈರಕ್ಟಾಗಿ ನಮಗ ಗೆಟ್ ಔಟ್ ಅಂತಿದಾರ. ಆದರೂ ನಾವು ಮಾತಾಡ್ತೀವಿ ಅನಲಿಕ್ಕೆ ಹತ್ತಿದೀವಿ. ಅವರಿಗ ತ್ರಾಸ ಕೊಡಬಾರದು. ಗೋವಿಂದಯ್ಯ. ಪ್ಲೀಸ್ ಕಂಬ್ಯಾಕ್'' ಎಂದು ಚಡಪಡಿಸಿದರು. ಆದರೆ ಗೋವಿಂದಯ್ಯ ಬರಲಿಲ್ಲ. ಛಲ ಬಿಡದ ತಿವಿಕ್ರಮನಂತೆ ಆಕೆಯನ್ನು ಒಲಿಸುತ್ತ  ``ಆಯ್ತು ಮೇಡಂ, ನೀವು ನಮ್ಮ ಜೊತ ಮಾತಾಡ್ದೆ ಇದ್ದರೂ ಪರವಾಯಿಲ್ಲ. ಒಂದು ಲೋಟ ನೀರಾದರೂ ಕೊಡಿ ಮತ್ತ'' ಎಂದರು. ನಾನು ಬೈಸಿಕೊಂಡಾದರೂ ಸರಿ, ಈ ಸೋದರಿಯ ಅಳಲಿನ ಮರ್ಮವೇನೆಂದು ಅರಿತೇ ಹೋಗಬೇಕೆಂದು ಭಂಡನಾಗಿ ನಿಂತಿದ್ದೆ. 


ನಮ್ಮ ಗದ್ದಲಕ್ಕೆ ಬೀದಿಯ ಕೆಲವು ಕಿಟಕಿ ಮತ್ತು ಬಾಗಿಲು ಮೆಲ್ಲಗೆ ತೆರೆದುಕೊಂಡು ಗೋಣುಗಳು ಹೊರಚಾಚಿಕೊಂಡವು. ಕೆಲವರು ಸೆಕೆಗೆಂಬಂತೆ ಹೊರಬಂದು ಗಾಳಿ ಹಾಕಿಕೊಳ್ಳುತ್ತ ಅಂಗಳದಲ್ಲಿ ನಿಂತು ಮಸುಗು ಕತ್ತಲೆಯಲ್ಲಿ ನಮ್ಮತ್ತ ನೋಡತೊಡಗಿದರು. ಅಷ್ಟುಹೊತ್ತು ಹೊರಗೇ ನಿಲ್ಲಿಸಿ ಮಾತಾಡಿದ ಆ ಮಹಿಳೆ, ಗೋವಿಂದಯ್ಯನವರ ನೀರಬೇಡಿಕೆ ಈಡೇರಿಸಲು, ಒಳಗೆ ಹೋದರು. ಅದೇ ಹೊತ್ತಲ್ಲಿ ನಾವು ಒಳಗೆ ನುಸುಳಿಕೊಂಡೆವು. ಆಕೆ ಚೊಂಬಿನಲ್ಲಿ ತಂದ ನೀರನ್ನು ಒಂದು ಲೋಟಕ್ಕೆ ಬಗ್ಗಿಸಿ ಕೊಟ್ಟರು. ಅವರ ವಿಶ್ವಾಸ ಗಳಿಸಲು ಬಾಯಾರಿಕೆ ಇಲ್ಲದಿದ್ದರೂ ಕುಡಿದೆವು. ನಂತರ ತಮ್ಮ ದನಿಗೆ ರೋದನದ ಎಳೆ ಬೆರೆಸಿ, ಆಕೆ ತಮ್ಮ ಕಷ್ಟದ ಚರಿತ್ರೆಯ ಒಂದು ಸಣ್ಣ ಅಧ್ಯಾಯವನ್ನು ತೆಗೆದರು. ``ಸಾ, ನನ್ನ ಕಷ್ಟಾವ ಏನೂಂತ ಹೇಳಲಿ? ನಮ್ಮ ಮನೇವರು ದೀಕ್ಷ ತಕ್ಕಂಡ ಮೇಲ ಮನೆ ಪರಿಸ್ಥಿತಿಯೆ ಬದಲಾಗದೆ. ಅವರು ನಮ್ಮನ್ನ ಬೀದಿಪಾಲು ಮಾಡಿ ತಿರಗಾಟಕ್ಕೆ ಹೋಗವರೆ. ಮನೇನ ನಾನೊಬ್ಬಳೇ ಸಂಭಾಳಿಸಬೇಕು. ನೀ ಸತ್ತ್ಯಾ ಬದುಕಿದೆಯಾ ಅಂತ ಕೇಳಲ್ಲ. ಇರೋದೊಂದು ಈ ಕೂಸಿಗೆ ಏನು ಓದ್ತೀದಿಯಾ ಅಂತ ಕೇಳಕೂ ಅವರಿಗ ಪುರುಸೊತ್ತಿಲ್ಲ. ಯಾವಾಗಲೂ ಬುದ್ಧ ಧಮ್ಮ ದೀಕ್ಷೆ ಅಂತ ಓಡಾಡ್ತವರೆ. ನನ್ನ ಮೇಲೂ ಬುದ್ಧನ್ನ ಹೇರತಾ ಅವರೆ. ನನಗೆ ಅವರ ಬುದ್ಧಬೇಡ. ನನಗೆ ನನ್ನ ಮಂಟೆಸ್ವಾಮೀನೇ ಸಾಕು. ನನಗ ನನ್ನ ಮಾದೇಶ್ವರ ಬೇಕು. ನನಗೂ ನನ್ನದೇ ಧರ್ಮ ಇಲ್ಲವಾ? ನನಗೆ ಮನಶ್ಶಾಂತಿ ಕೊಡೋ ದೇವರ ಪೂಜೆ ಮಾಡುವ ಹಕ್ಕಿಲ್ಲವಾ? ನನಗೂ ಎಲ್ಲರ ಹಾಗೆ ಸಂಸಾರ ಮಾಡಬೇಕು ಅನ್ನೋ ಆಸೆಯಿಲ್ಲವಾ?'' ಎಂದು ಆವೇಶದಿಂದ ಮಾತಾಡತೊಡಗಿದರು. ಅವರಿಗೆ ಅರಿಯದಂತೆ ಕಣ್ಣಲ್ಲಿ ನೀರು ದಳದಳ ಇಳಿಯತೊಡಗಿತು.

ಯಾಕೊ ನನಗೆ ಬುದ್ಧನು ಹೇಳದೆ ಬಿಟ್ಟುಹೋದ ಬಳಿಕ ಶೋಕಿಸಿರಬಹುದಾದ ಯಶೋಧರೆಯ ನೆನಪಾಯಿತು. ಈ ಯಶೋಧರೆಗೆ ಹೊಸ ಧಮ್ಮವು ತನ್ನಿಂದ ತನ್ನ ಗಂಡನನ್ನೂ ತನ್ನ ಮಗುವಿನಿಂದ ಅದರ ತಂದೆಯನ್ನೂ ಕಿತ್ತುಕೊಂಡಿದೆ, ಪರಂಪರೆಯಿಂದ ಬಂದ ದೈವಗಳ ಸಂಬಂಧವನ್ನೂ ಅದು ಕಿತ್ತುಕೊಳ್ಳುತ್ತಿದೆ ಎಂಬ ನೋವಿತ್ತು. ಬಹುಶಃ ಇಸ್ಲಾಮೊ ಕ್ರೈಸ್ತವೊ ಎಲ್ಲ ಹೊಸ ಧರ್ಮಗಳ ಸ್ವೀಕಾರದ ಮೊದಲ ಘಟ್ಟದಲ್ಲಿ ಇಂತಹದೊಂದು ಮಾನಸಿಕ ಭಗ್ನತೆ, ಕೌಟುಂಬಿಕ ಛಿದ್ರತೆ ಸಂಭವಿಸುತ್ತದೆ ಎಂದು ಕಾಣುತ್ತದೆ. ಶರಣ ಧರ್ಮವೂ ಈ ಭಗ್ನತೆಯನ್ನು ಅನುಭವಿಸಿತ್ತು. ಇದನ್ನು ಬಸವಣ್ಣನ ವಚನವೊಂದು ಸೂಚಿಸುತ್ತದೆ: ``ಗಂಡ ಶಿವಭಕ್ತ, ಹೆಂಡತಿ ಮಾರಿಮಸಣಿಯ ಭಕ್ತೆ; ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆಮಾಂಸ''; ಸಾಮಾಜಿಕ ಮುಂಚಲನೆಯನ್ನು ನೀಡುವ ಧರ್ಮಗಳನ್ನು ಸಾಮಾನ್ಯವಾಗಿ ಮೊದಲು ಸ್ವೀಕರಿಸುವವರು ಗಂಡಸರೇ ಯಾಕಾಗಿರುತ್ತಾರೆಯೊ? `ಮಲೆಗಳಲ್ಲಿಮದುಮಗಳ'ಲ್ಲೂ ದೇವಯ್ಯನೇ ಕ್ರಿಸ್ತನಾಗಲು ಹೊರಟು ಮನೆ ಪ್ರಕ್ಷುಬ್ಧವಾಗುತ್ತದೆ. ಗಂಡುಮುಖ್ಯವಾಗಿರುವ ನಮ್ಮ ಸಮಾಜದಲ್ಲಿ ನಿರ್ವಾಹವಿಲ್ಲದೆ ಅವರ ಹಿಂದೆ ಮಹಿಳೆಯರು ಹಿಂಬಾಲಿಸಬೇಕು ಇಲ್ಲವೇ ಪ್ರತಿರೋಧ ತೋರಬೇಕು. ಪುರುಷರ ಈ ಏಕಪಕ್ಷೀಯ ನಡತೆ ಧರ್ಮದ ವಿಷಯದಲ್ಲಿ ಮಾತ್ರವಲ್ಲ, ಎಲ್ಲ ಹೊಸ ಆಚರಣೆಗಳ ಸಂದರ್ಭದಲ್ಲೂ ಸಂಭವಿಸುತ್ತದೆ. ಸಸ್ಯಾಹಾರದ ಹಿನ್ನೆಲೆಯಿಂದ ಬಂದ ಮೇಲ್ಜಾತಿ ಗಂಡಸರು, ಮಾಂಸಾಹಾರದ ಅಭ್ಯಾಸ ಮಾಡಿಕೊಂಡ ಬಳಿಕ, ತಮ್ಮ ಹೊಸ ಆಹಾರಪದ್ಧತಿಗೆ ನೈತಿಕ ಸಮರ್ಥನೆ ಒದಗಿಸಿಕೊಳ್ಳಲೆಂದು ಅದನ್ನು ಮಡದಿಯರ ಮೇಲೂ ಹೇರುವುದುಂಟು; ಇದಕ್ಕೆ ಪ್ರತಿಯಾಗಿ, ಮೇಲ್ಜಾತಿಯ ಹುಡುಗಿಯನ್ನು ಕಟ್ಟಿಕೊಂಡ ದಲಿತರು ಮಡದಿಗಾಗಿ ಮಾಂಸಾಹಾರ ಬಿಟ್ಟಿರುವ ನಿದರ್ಶನಗಳೂ ಉಂಟು. ಆದರೆ ಇಂತಹ ನಿದರ್ಶನಗಳು ಕಡಿಮೆ.
ಆಹಾರ ಧರ್ಮ ಉಡುಗೆ ಇವುಗಳ ವಿಷಯದಲ್ಲಿ ಏಕಪಕ್ಷೀಯವಾದ ಒತ್ತಾಯವು ವಿಚಿತ್ರ ಪ್ರತಿರೋಧಗಳನ್ನು ಹುಟ್ಟಿಸುತ್ತದೆ. ಸದಾಶಯವಿದ್ದರೂ, ಅದನ್ನು  ಜಾರಿ ತರುವ  ವಿಧಾನವು ಅಸೂಕ್ಷ್ಮವಾಗಿದ್ದರೆ ವ್ಯತಿರಿಕ್ತ ಪರಿಣಾಮಗಳನ್ನೇ ತರುತ್ತದೆ. ಆದರೂ ಸಾಮಾನ್ಯವಾಗಿ  ಮಹಿಳೆಯರು ಗಂಡ ಸ್ವೀಕರಿಸಿದ ಧರ್ಮವನ್ನು ಕುರುಡಾಗಿ ಅನುಸರಿಸಲು ಒಪ್ಪದೆ, ತಮ್ಮ ಪಾರಂಪರಿಕ ದೈವ ಧರ್ಮಗಳನ್ನು ಉಳಿಸಿಕೊಂಡಿರುವ ನಿದರ್ಶನಗಳುಂಟು. ಅಕಬರನನ್ನು ವರಿಸಿದರೂ ಜೋಧಾಬಾಯಿ ತನ್ನ ಧಾರ್ಮಿಕತೆಯನ್ನು ಬದಲಿಸಿಕೊಳ್ಳಲಿಲ್ಲ. ರಾಮಾನುಜರ ಪ್ರೇರಣೆಯಿಂದ ಶ್ರೀವೈಷ್ಣವ ಧರ್ಮವನ್ನು ಹೊಯ್ಸಳದೊರೆ ಬಿಟ್ಟಿದೇವನು ಸ್ವೀಕರಿಸಿದರೂ, ಮಡದಿ ಶಾಂತಲೆ ಶೈವಧರ್ಮದಲ್ಲೇ ಮುಂದುವರೆದಳು. ಜೈನಧರ್ಮದಲ್ಲೂ ಹೀಗೆ ಆಯಿತು. ಜೈನನಾದ ಗಂಡ ಜೈನನಾಗದ ಮಡದಿ ಇರುವ ಕುಟುಂಬಗಳ ಬಗ್ಗೆ ಕವಿ ಧರ್ಮಶಿವ ತನ್ನ `ಸಮಯ ಪರೀಕ್ಷೆ'ಯಲ್ಲಿ ಅಸಹನೆಯಿಂದ ಪ್ರಸ್ತಾಪ ಮಾಡುತ್ತಾನೆ. ಲಂಕೇಶರ `ಸಂಕ್ರಾಂತಿ' ನಾಟಕದಲ್ಲಿ ಲಿಂಗದೀಕ್ಷೆ ಸ್ವೀಕರಿಸಿ ಬದಲಾಗಿರುವ ತನ್ನ ಪ್ರಿಯಕರನ್ನು ತಿರಸ್ಕರಿಸುವ ಹೆಣ್ಣಿನ ಪಾತ್ರವೂ; ಕುಲಧರ್ಮವನ್ನು ಬಿಟ್ಟು ಶಿಷ್ಟಧರ್ಮವನ್ನು ಸೇರಿದ ಮಗನನ್ನು ಒಪ್ಪದ ತಂದೆಯ ಪಾತ್ರವೂ ಇದೆ. ಈ ಪಾತ್ರಗಳ ಮೂಲಕ ಸಾಮಾಜಿಕವಾಗಿ ಕ್ರಾಂತಿಕಾರಕವಾದ ಧರ್ಮವು ತನ್ನ ಜಾರಿಯಾಗುವಿಕೆಯಲ್ಲಿ ಮಾಡುತ್ತಿರುವ ವ್ಯಕ್ತಿಗತ ಭಾವನೆಗಳ ಘಾಸಿಯನ್ನು ಚಿತ್ರಿಸುತ್ತದೆ. ನಾಟಕದ ಮಹತ್ವವಿರುವುದು ಅದರ ಕಲಾತ್ಮಕ ಯಶಸ್ಸಿನಲ್ಲಿ ಮಾತ್ರವಲ್ಲ; ಇಂತಹ ಸಾಂಸ್ಕೃತಿಕ ಸಂಕಟಗಳನ್ನು ಪರಿಭಾವಿಸಿರುವುದರಲ್ಲಿ ಕೂಡ.
ಹೊಸಧರ್ಮಗಳ ಸ್ವೀಕಾರವು ಅಸಮಾನತೆಯುಳ್ಳ ಸಮಾಜದಲ್ಲಿ ವ್ಯಕ್ತಿಯ ವೈಯಕ್ತಿಕ ಬೇಕುಬೇಡಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ದಮನಿತ ಸಮುದಾಯಗಳಿಗೆ ಸಾಮಾಜಿಕ ಚಲನಶೀಲತೆಯನ್ನು ಕೊಟ್ಟಿದೆ; ಆಧ್ಯಾತ್ಮಿಕ ಸಮಾನತೆಯ ಹಂಬಲವನ್ನು ಈಡೇರಿಸುವ ಮಾಧ್ಯಮವಾಗಿದೆ. ಆದರೂ ಹೊಸಧರ್ಮವನ್ನು ಒಳಗೆ ಬಿಟ್ಟುಕೊಳ್ಳುವಲ್ಲಿ ಮಹಿಳೆಯರು ಮತ್ತು ವಯಸ್ಸಾದ ಜನ ಯಾಕೆ ಹಿಂಜರಿಕೆ ತೋರುತ್ತಾರೆ? ಹಳೆಯ ಧರ್ಮವನ್ನು ಬಿಟ್ಟುಕೊಡಲಾಗದ ಜಿಗುಟುತನ ಪ್ರದರ್ಶಿಸುತ್ತಾರೆ? ಅಥವಾ `ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು' ಎಂಬಲ್ಲಿರುವ ಅಪೇಕ್ಷೆಯೇ ತಪ್ಪಾಗಿದೆಯೊ?
ಹೊಸಧರ್ಮವು ಜನರ ದೈವಪದ್ಧತಿಯನ್ನು ಮಾತ್ರವಲ್ಲ ಉಡುವ ಉಣ್ಣುವ ಪದ್ಧತಿಯನ್ನು ಬದಲಾಯಿಸುತ್ತದೆ; ಆಲೋಚನ ವಿಧಾನವನ್ನು ಬದಲಿಸುತ್ತದೆ. ಮೊದಲ ಹಂತದಲ್ಲಿ ಅದು ಸಮುದಾಯದ ಜತೆ ವ್ಯಕ್ತಿಗೆ ಇರುವ ಸಾವಯವ ಆಪ್ತ ಸಂಬಂಧವನ್ನು ಭಗ್ನಗೊಳಿಸುತ್ತದೆ; ವೈಚಾರಿಕ ಪ್ರಜ್ಞೆಯುಳ್ಳ ಗಂಡಸರು ಈ ಬಗೆಯ ಸಂಬಂಧ ನಷ್ಟವನ್ನು ಕೆಲಮಟ್ಟಿಗೆ ಸಹಿಸಬಲ್ಲರು. ಸಾರ್ವಜನಿಕ ಬದುಕಿನಲ್ಲಿರುವ ಅವರಿಗೆ ಪರ್ಯಾಯ ಸಂಬಂಧಗಳು ಸೃಷ್ಟಿಯಾಗುವ ಕಾರಣ, ಇದು ಅಷ್ಟು ದೊಡ್ಡ ಸಮಸ್ಯೆಯೆನಿಸುವುದಿಲ್ಲ. ಆದರೆ ಮನೆ ಮತ್ತು ಕೇರಿಗಳ ಪುಟ್ಟಜಗತ್ತಿನಲ್ಲೇ ಹೆಚ್ಚು ಸಮಯ ಕಳೆಯುವ ಅಷ್ಟೊಂದು ವೈಚಾರಿಕ ಸಿದ್ಧತೆಯಿಲ್ಲದ ಮಹಿಳೆಯರಿಗೆ, ಹೀಗೆ ಸಂಬಂಧ ಕಡಿದುಕೊಂಡು ಬದುಕುವುದು ಕಷ್ಟವಾಗುತ್ತದೆ. ಅದರಲ್ಲೂ ತಾವು ನಂಬಿದ ದೈವವನ್ನು ಕೈಬಿಡಲು ಏನು ಕೇಡಾಗುತ್ತದೆಯೊ ಎಂದು ಮನಸ್ಸು ಅಳುಕುತ್ತದೆ.
ಹಾಗೆಂದು ಮಹಿಳೆಯರು ಹೊಸಧರ್ಮ ಹೊಸದೈವಗಳ ವಿರೋಧಿಗಳಲ್ಲ. ಅವರ ಧಾರ್ಮಿಕ ಉದಾರತೆಗೆ ಮುಸ್ಲಿಮರಲ್ಲದ ಮಹಿಳೆಯರು ದರ್ಗಾ ಮತ್ತು ಮೊಹರಂ ಆಚರಣೆಗಳಲ್ಲಿ ತೊಡಗಿರುವುದು ಅಥವಾ ಗ್ರಾಮೀಣ ಮುಸ್ಲಿಂ ಮಹಿಳೆಯರು ಸ್ಥಳೀಯ ಸಂಪ್ರದಾಯಗಳನ್ನು ಅನುಸರಿಸುವುದು ಸಾಕ್ಷಿ. ಅವರು `ಅನ್ಯ' ದೈವಗಳನ್ನು ಹಳತರ ಜತೆಗೇ ಸ್ವೀಕರಿಸಿಯಾರು; ಆದರೆ ಹಳೆಯವನ್ನು ಪೂರಾ ಕೈಬಿಟ್ಟು ಸ್ವೀಕರಿಸಬೇಕೆಂದಾಗ, ಹೊಸಧರ್ಮವು ತಮ್ಮ ನಂಬಿಕೆಯ ಬೇರುಗಳನ್ನು ಅಲುಗಿಸಿದಾಗ, ಅವರಿಗೆ ಕಷ್ಟವಾಗುತ್ತದೆ.
ಧಮ್ಮದೀಕ್ಷೆಯಿಂದ ಬಂಧುಗಳ ಸಾಮಾಜಿಕ ಸಂಬಂಧ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಹುಟ್ಟುವ ಬಿರುಕುಗಳನ್ನು ನಿರ್ವಹಿಸುವ ಬೇಕಾದ ಸಾಮಾಜಿಕ ಮತ್ತು ಮಾನಸಿಕ ಮೆಕ್ಯಾನಿಸಂ ಕರ್ನಾಟಕದಲ್ಲಿನ್ನೂ ರೂಪುಗೊಂಡಂತೆ ಕಾಣುವುದಿಲ್ಲ. ಯಾಕೆಂದರೆ, ಮಹಿಳೆಯರು ಮೊದಲಿಗರಾಗಿ ಹೊಸಧಮ್ಮ ಸ್ವೀಕರಿಸಿ, ಅದನ್ನು ತಮ್ಮ ಪುರುಷರು ಅನುಸರಿಸುವಂತೆ ಮಾಡಿರುವ ನಿದರ್ಶನವೇ ನಮಗೆ ಸಿಗಲಿಲ್ಲ. ಆದರೆ ದೀಕ್ಷೆತೆಗೆದುಕೊಂಡ ಪುರುಷರು, ತಮ್ಮಂತೆ ಉಳಿದವರೂ ಧಮ್ಮವನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಮಾಡುತ್ತಿರುವುದು ಕಂಡಿತು. ಈ ಒತ್ತಾಯದ ಹಿಂದೆ ಅವರು ಪುರುಷರಾಗಿರುವ, ಯುವಕರಾಗಿರುವ, ನೌಕರಸ್ತರಾಗಿರುವ, ಅಕ್ಷರಸ್ತರಾಗಿರುವ, ಪ್ರಜ್ಞಾವಂತರಾಗಿರುವ ಇಗೊಗಳು ಕೆಲಸ ಮಾಡುತ್ತಿದ್ದವು. ಈ ಇಗೊಗಳು ಪರೋಕ್ಷವಾಗಿ ಉಳಿದವರಲ್ಲಿ ಬೌದ್ಧದ್ವೇಷವನ್ನು ಹುಟ್ಟಿಸಿದಂತಿದ್ದವು. ಅದರಲ್ಲೂ ಧಮ್ಮಕ್ಕೆ ಬಾರದ ಹಿರಿಯ ತಲೆಮಾರಿನವರು ಧಮ್ಮವಂತರಾಗಿರುವ ಮಕ್ಕಳಿಂದ ದೂರವಾಗಿ ಹೊಸ ಅಸ್ಪೃಶ್ಯತೆ ಮತ್ತು ಅನಾಥಪ್ರಜ್ಞೆ ಅನುಭವಿಸುತ್ತಿರುವರೆಂದೂ, ಧಮ್ಮ ಸ್ವೀಕರಿಸಿರುವ ತಲೆಮಾರು ಸ್ವೀಕರಿಸಿದವರ ಜತೆ ಸಹನೆಯಿಂದ ಒಡನಾಟ ಮಾಡುತ್ತಿಲ್ಲವೆಂದೂ ತೋರಿತು.
ಈ ಬಗೆಯ ಸಾಮಾಜಿಕ ಮಾನವೀಯ ಸಂಬಂಧಗಳ ಬಿರುಕು ಕೇವಲ ಕುಟುಂಬಗಳ ಒಳಗೆ ಮಾತ್ರವಲ್ಲ, ಹೊಸಧರ್ಮ ಸ್ವೀಕಾರ ಮಾಡಿದ ಕುಟುಂಬದ ಜತೆ, ಹಾಗೆ ಸ್ವೀಕಾರ ಮಾಡದೆ ಉಳಿದಿರುವ ಸಮುದಾಯದ ನಡುವೆ ಕೂಡ ಕಾಣಿಸಿತು. ಈಗಾಗಲೇ ಆಧುನಿಕ ತಲೆಮಾರಿನವರ ಶಿಕ್ಷಣ, ಸರ್ಕಾರಿ ಉದ್ಯೋಗ, ನಗರವಾಸ ಮತ್ತು ಮಧ್ಯಮವರ್ಗಕ್ಕೆ ಏರುವಿಕೆಗಳು, ಅನಕ್ಷರಸ್ತ ಗ್ರಾಮೀಣ ಕೆಳವರ್ಗದ ದಲಿತರ ಜತೆಗೆ ಒಂದು ಸಣ್ಣಬಿರುಕನ್ನು ಹುಟ್ಟಿಸಿವೆ; ಈ ಬಿರುಕು ಹೊಸಧರ್ಮ ಸ್ವೀಕಾರದ ಜತೆಗೆ ಮತ್ತಷ್ಟು ಅಗಲವಾಗುತ್ತಿದೆ. ಅನೇಕ ಕಡೆ ಧಮ್ಮಸ್ವೀಕಾರ ಮಾಡಿರುವ ಶಿಷ್ಟ ದಲಿತರು, ಪಾರಂಪರಿಕ ಮತಗಳಲ್ಲೇ ಉಳಿದ ತಮ್ಮ ಬಂಧುಗಳ ಬಗ್ಗೆ ಅವರು ಅಜ್ಞಾನಿಗಳು ಎಂಬ ದನಿಯಲ್ಲಿ ಅನಾದರದಿಂದ ಮಾತಾಡುತ್ತಿದ್ದರು. ತಮ್ಮ ಹಿರೀಕರು ಮಾರಮ್ಮ ಊರಮ್ಮಗಳಿಗೆ ನಡೆದುಕೊಳ್ಳುವುದು, ಕೋಳಿ ಕೋಣ ಬಲಿಕೊಡುವುದು, ಮಾಂಸಾಹಾರ ಮದ್ಯಪಾನ ಮಾಡುವುದು ಇತ್ಯಾದಿಯನ್ನು ಅವರು ಅಸಹನೆಯಿಂದ ಕಾಣುತ್ತಿದ್ದರು. ಇದಕ್ಕೆ ತಕ್ಕಂತೆ ಕೆಲವು ದಲಿತ ಭಂತೆಗಳು ಮಾಂಸಾಹಾರ ಸೇವನೆ ಮತ್ತು ಕುಡಿತಗಳನ್ನು ಹೀನ ಆಚರಣೆಗಳೆಂದೂ ಅವನ್ನು ದಲಿತರು ಬಿಟ್ಟುಬಿಡಬೇಕೆಂದೂ ಪ್ರತಿಪಾದಿಸುತ್ತಿದ್ದರು.
ಧಮ್ಮಸ್ವೀಕಾರದಿಂದ ಹುಟ್ಟಿದ ಈ ಬಿರುಕು, ಹೈದರಾಬಾದ್ ಕರ್ನಾಟಕದ ಊರುಗಳಲ್ಲಿ ಇನ್ನೊಂದು ತೆರನಾಗಿ ಕೆಲಸಮಾಡುತ್ತಿತ್ತು. ಅಲ್ಲಿ ಧಮ್ಮದೀಕ್ಷೆಯನ್ನು ಕೇವಲ ಚಲುವಾದಿಗಳು (ಬಲಗೈ ಹೊಲೆಯರು)  ಮಾಡಿದ್ದರು. ಧಮ್ಮದೀಕ್ಷೆ ಸ್ವೀಕರಿಸಿದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ಗುಲಬರ್ಗದಲ್ಲಿ ದೊಡ್ಡದೊಂದು ಬೌದ್ಧ ಚೈತ್ಯಾಲಯ ನಿರ್ಮಿಸಿದ್ದರು. ಬೀದರ್ ಗುಲಬರ್ಗ ಜಿಲ್ಲೆಗಳಲ್ಲಿ ಬಲಗೈಯವರು ಧಮ್ಮದೀಕ್ಷೆ ಪಡೆಯಲು, ಮಹಾರರೇ ಪ್ರಮುಖವಾಗಿರುವ ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿಯೂ ಒಂದು ಕಾರಣ. ಪಾರ್ಟಿಯು ಧಮ್ಮದೀಕ್ಷೆ ಪಡೆದ ಅಂಬೇಡ್ಕರ್ ಅವರನ್ನು ರಾಜಕೀಯ ಸಾಂಸ್ಕೃತಿಕ ನಾಯಕನೆಂದು ಭಾವಿಸಿತು. ಇದು ದಲಿತರ ಎಡಗೈ ಬಣವನ್ನು ಮತ್ತೊಂದು ಬಗೆಯಲ್ಲಿ ಸಂಘಟಿತವಾಗಲು ಪ್ರಚೋದಿಸಿತು. ಒಡೆದ ಬಣಗಳು ದಾಯಾದಿಗಳಂತೆ ಇದ್ದವು. ಬಲಗೈನವರು ಅಂಬೇಡ್ಕರ್ ಅವರನ್ನು ನಾಯಕರನ್ನಾಗಿಸಿಕೊಂಡು ಧಮ್ಮಸ್ವೀಕಾರ ಮಾಡಿದರೆ, ಎಡಗೈವರು ಜಗಜೀವನರಾಮರನ್ನು ನಾಯಕರಾಗಿಸಿಕೊಂಡು ಕ್ರೈಸ್ತಧರ್ಮದತ್ತ ಚಲಿಸಿದ್ದರು. ಹೀಗೆ ಕುಟುಂಬ, ಸಮುದಾಯ ಮತ್ತು ಕೇರಿಗಳ ನಡುವೆ ಧಮ್ಮವು ಬೇರೊಂದು ಬಗೆಯಲ್ಲಿ ಬಿರುಕಿಗೆ ಕಾರಣವಾದಂತೆ ತೋರಿತು.
ರಹಮತ್, ಅರುಣ್, ಕುಲಕರ್ಣಿ, ಗೋವಿಂದಯ್ಯಹೊಸಧರ್ಮಗಳು ಎಷ್ಟೇ ನಾಗರಿಕವಾಗಿರಲಿ, ದಮನಿತರಿಗೆ ಸಾಮಾಜಿಕ ಚಲನಶೀಲತೆ ಕೊಡುವಂತಹದ್ದಾಗಿರಲಿ, ಅವನ್ನು ಮಾನಸಿಕ ಸಿದ್ಧತೆಯಿಲ್ಲದ ಜನರ ಮೇಲೆ ಹೇರಿದಾಗ ಅವು ಹಿಂಸ್ರಕವಾಗಿ ರೂಪಾಂತರಗೊಳ್ಳುತ್ತವೆ. ಯಾವುದೇ ಕ್ರಾಂತಿಕಾರ ಸಿದ್ಧಾಂತವನ್ನು ಸಹ ಅತ್ಯವರಸರದಲ್ಲಿ ಉತ್ಸಾಹದಲ್ಲಿ ಹೇರಿಕೊಂಡಾಗ ಅನೇಕ ಮಾನವೀಯ ಸೂಕ್ಷ್ಮತೆಗಳು ಕಳೆದುಹೋಗಿಬಿಡುತ್ತವೆ. ಈಗಿನ ಮುಸ್ಲಿಮರಲ್ಲಿ ಬಹಳ ಪ್ರಭಾವಶಾಲಿಯಾಗಿರುವ ತಬ್ಲೀಕ್ ಎಂಬ ನವಇಸ್ಲಾಮಿಕ್ ಚಳುವಳಿಯಿಂದ ಸಾವಿರಾರು ಕುಟುಂಬಗಳಲ್ಲಿ ಸತಿಪತಿಗಳೊಂದಾಗದ ಭಕ್ತಿಯು ಏರ್ಪಟ್ಟು, ಮಾನವೀಯ ಸಂಬಂಧಗಳು ಕಂಗೆಟ್ಟಿವೆ. ಧರ್ಮಪ್ರಸಾರಕ್ಕೆ ತಮ್ಮನ್ನು ಬಿಟ್ಟು ತಿಂಗಳುಗಟ್ಟಲೆ ಹೋಗುವ, ಯಾವಾಗಲೂ ಮಸೀದಿಗಳಲ್ಲಿ ಬೀಡುಬಿಟ್ಟಿರುವ ಗಂಡಂದಿರ ವರ್ತನೆಯಿಂದ ಅನೇಕ ಮಹಿಳೆಯರು, ಖಿನ್ನತೆಯಿಂದ ನರಳುತ್ತಿದ್ದಾರೆ. ಕೆಲವರು, ದೇವರ ದಾರಿಯಲ್ಲಿ ಹೋದ ಗಂಡನನ್ನು ಬಿಟ್ಟು ಹೊಸಪುರುಷನನ್ನು ಹುಡುಕಿ ಹೋಗಿರುವುದೂ ಉಂಟು.
ಕರ್ನಾಟಕದಲ್ಲಿ ಸಾಮೂಹಿಕ ಧಮ್ಮದೀಕ್ಷೆ ನೀಡುವ ಕಾರ್ಯಕ್ರಮಗಳು ನಡೆಯುತ್ತಿವೆ. ಅದು ಕರ್ನಾಟಕ ಸಾಮಾಜಿಕ ಸಮೀಕರಣವನ್ನು ಬದಲಿಸುವಷ್ಟು ಶಕ್ತವೊ ಅಲ್ಲವೊ, ಅಸ್ಪೃಶ್ಯತೆಯ ಕಾಯಿಲೆಗೆ ಯಾವ ಬಗೆಯ ಮದ್ದೊ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕಾಗಿ ಬೆಲೆ ತೆರುತ್ತಿರುವವರು ಮಾತ್ರ ಮಹಿಳೆಯರಾಗಿದ್ದಾರೆ. ಧಮ್ಮದೀಕ್ಷೆ ನೀಡುತ್ತಿರುವವರು ಈ ಸಾಂಸ್ಕೃತಿಕ  ಬಿಕ್ಕಟ್ಟುಗಳನ್ನು ಪರಿಭಾವಿಸಿದಂತಿಲ್ಲ. ಹೀಗಾಗಿ ನಾವು ಕಂಡ ಬಹುತೇಕ ಯಶೋಧರೆಯರಲ್ಲಿ ಬುದ್ಧನ ಬಗ್ಗೆ ಕೋಪವಿತ್ತು. ಇದಕ್ಕೆ ಕಾರಣವಾಗಿದ್ದು ಧಮ್ಮವಲ್ಲ. ಧಮ್ಮವನ್ನು ನೆಲೆಗೊಳಿಸುತ್ತಿರುವ ವಿಧಾನ. 
ನಮ್ಮ ಬೌದ್ಧಯಾನದಲ್ಲಿ ಅನೇಕ ದಲಿತ ಕುಟುಂಬಗಳಲ್ಲಿ ಧಮ್ಮಸ್ವೀಕಾರವು ಹೊಸ ಆತ್ಮಾಭಿಮಾನವನ್ನು ಹೊಸ ಬದುಕಿನ ಕ್ರಮವನ್ನು ತಂದಿತ್ತಿರುವ ಹಲವಾರು ನಿದರ್ಶನಗಳನ್ನು ನಾವು ಕಂಡೆವು. ಆದರೆ ಎಲ್ಲ ಬಗೆಯ ಪರಿವರ್ತನೆಗಳ ಹೊತ್ತಲ್ಲಿ ಪ್ರತಿರೋಧ ಹತಾಶೆ ಅಸಹಾಯಕತೆ ಕಂಡೆವು. ನಮಗೆ ಬೌದ್ಧಧರ್ಮಕ್ಕೆ ಸೇರಿದ ಶಾಸನ, ವಿಗ್ರಹ ಚೈತ್ಯಾಲಯಗಳು ಭಗ್ನಾವಸ್ಥೆಯಲ್ಲಿ ಇದ್ದುದು ಕಂಗೆಡಿಸಲಿಲ್ಲ; ಧಮ್ಮಸ್ವೀಕಾರದ ವಿಷಯವು ಮನುಷ್ಯರ ಮತ್ತು ಕುಟುಂಬಗಳ ನಡುವೆ ಭಗ್ನತೆ ಹತಾಶೆ ತಂದಿರುವುದು ಕಂಗೆಡಿಸಿತು. ಯಶೋಧರೆಯರ ಕಷ್ಟಗಳಿಗೆ ಕೊನೆಯಿಲ್ಲವೆನಿಸಿತು.
(ಚಿತ್ರಗಳು: ಲೇಖಕರವು)
sources http://www.kendasampige.com/print_article.php?id=3423

Sunday, 24 April 2011

ಅಂಬೇಡ್ಕರ್: ಬುದ್ಧನನ್ನು ಮತ್ತೆ ತಂದ ಬೋಧಿಸತ್ವ



      ಬುದ್ಧ, ಬಹುಶಃ ಜಗತ್ತಿನಲ್ಲಿಯೇ ಶ್ರೇಷ್ಠ ಜ್ಞಾನಿ ಎಂದರೆ ಆತನೇ ಇರಬೇಕು. ಎಲ್ಲಾ ತತ್ವಜ್ಞಾನಿಗಳು ದೇವರ ಸುತ್ತ ಗಿರಕಿ ಹೊಡೆದರೆ  ಬುದ್ಧ ದೇವರ ಬಗ್ಗೆ ಚಕಾರವೆತ್ತದೆ  ಮಾನವನ ಸಮಸ್ಯೆಗಳಿಗೆಲ್ಲ ಆತನ ಮನಸ್ಸೇ ಮೂಲವೆಂದು, ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದೇ ನಿಜವಾದ ಧರ್ಮವೆಂದು ಪ್ರತಿಪಾದಿಸಿದ ಅಪ್ಪಟ ಜ್ಞಾನಿ. ಅದಕ್ಕೇ ಇರಬೇಕು ಖ್ಯಾತ ವಿಜ್ಞಾನಿ ಆಲ್ಬಟರ್್ ಐನ್ಸ್ಟೀನ್  ಒಂದೆಡೆ  ಈ ಜಗತ್ತಿನಲ್ಲಿ ಯಾವುದಾದರೊಂದು ಧರ್ಮ ವಿಜ್ಞಾನದ ಅಗತ್ಯತೆಗಳನ್ನು ಪೂರೈಸುತ್ತದೆ ಎನ್ನುವುದಾದರೆ ಅದು ಬುದ್ಧ ಧರ್ಮ ಎಂದಿರುವುದು. ಇಂತಹ ವೈಜ್ಞಾನಿಕ ತಳಹದಿಯ ಮನೋವೈಜ್ಞಾನಿಕ ಸಿದ್ಧಾಂತದ ಬುದ್ಧನ ತತ್ವ 2500ವರ್ಷಗಳ ಹಿಂದೆ ಧರ್ಮವಾಗಿ ಮೈದಳೆದದ್ದು ನಿಜಕ್ಕೂ ಆಶ್ಚರ್ಯ ಮತ್ತು wonder of the world  ಎನ್ನಬಹುದು.ಆದರೆ ಅಂತಹ ಆಶ್ಚರ್ಯ ಮತ್ತು ಅದ್ಭುತ ತಾನು ಹುಟ್ಟಿದ ನೆಲದಲ್ಲಿ  ಇದ್ದಕ್ಕಿದ್ದಂತೆ ಮರೆಯಾದದ್ದು? ಬಹುಶಃ ಭಾರತೀಯರ ಪಾಲಿಗೆ ಒದಗಿದ ದೊಡ್ಡ ದುರಂತ ಅದು. ಆದರೆ ಅದನ್ನು ದುರಂತವೆಂದು  ಮತ್ತು ಅಂತಹ ದುರಂತದಿಂದ ಯಾರಿಗೂ ಪ್ರಯೋಜನವಿಲ್ಲವೆಂದು ವ್ಯಕ್ತಿಯೊಬ್ಬರು, ಕ್ಷಮಿಸಿ ಶಕ್ತಿಯೊಂದು ಹಾಗೆ ಕುಳಿತ್ತಿದ್ದರೆ? ಅದರ ಪುನರುತ್ಥಾನಕ್ಕಾಗಿ ಶ್ರಮಿಸದೇ ಇದ್ದಿದ್ದರೆ? ಬಹುಶಃ ನಾವು ಅದರ ಬಗ್ಗೆ ಬರೆಯುವ, ಅದರ ಬಗ್ಗೆ ತಿಳಿದುಕೊಳ್ಳುವ ಸಣ್ಣ ಅವಕಾಶವೂ ನಮಗೆ ಸಿಗುತ್ತಿರಲಿಲ್ಲವೋ ಏನೋ? ಆದರೆ ಶ್ರೇಷ್ಠ ಬದುಕು ಸತ್ತುಹೋಗಬಾರದು  ಹಾಗೆಯೇ ಈಗ ಜಾರಿಯಲ್ಲಿರುವ ಕನಿಷ್ಠಕ್ಕೆ ಪ್ರತ್ಯುತ್ತರವಾದ ಶ್ರೇಷ್ಠವಾದ ಆ ಬುದ್ಧ ತತ್ವ ನಶಿಸಿಹೋಗಬಾರದು ಎಂದು  ಬುದ್ಧನನ್ನು ಮತ್ತೆ ಭಾರತಕ್ಕೆ ತಂದ ವ್ಯಕ್ತಿ ಅಥರ್ಾತ್ ಶಕ್ತಿ, ಸರಳವಾಗಿ ಹೇಳುವುದಾದರೆ ಬೋಧಿಸತ್ವ ಬೇರಾರೂ ಅಲ್ಲ. ಬಾಬಾಸಾಹೇಬ್ ಅಂಬೇಡ್ಕರ್ . ನಿನಗೆ ನೀನೆ ಬೆಳಕು ಎಂದವನ್ನು ಬೆಳಕಿಗೆ ತಂದ ಬುದ್ಧ ಸಾಹೇಬ!
    ಹಾಗಿದ್ದರೆ ಬಾಬಾಸಾಹೇಬರೇಕೆ? ಬುದ್ಧನನ್ನು ಬೆಳಕಿಗೆ ತಂದರು? ಸುಮ್ಮನೆ ಹಿಂದೂ ಧರ್ಮವನ್ನು ಬೈದು, ಅದರ ಕೊಳಕು ಜಾತಿ ವ್ಯವಸ್ಥೆಯನ್ನು ಟೀಕಿಸಿ  ಸುಮ್ಮನಿರಬಹುದಿತ್ತಲ್ಲ? ಉತ್ತರ ಸ್ಪಷ್ಟ, ಸಾಧಾರಣ ನಾಯಕರು ಮಾತ್ರ ಹಾಗೆ ಇರುತ್ತಾರೆ . ಅವರು  ಬರೀ ಸಮಸ್ಯೆಗಳನ್ನು ಕೆದಕಿ ಅದರ ಪರಿಸ್ಥಿತಿಯ ಲಾಭವನ್ನಷ್ಟೆ ಬಯಸಿ ತಾವು ಒಂದು ಪದವಿಯನ್ನೊ ಅಧಿಕಾರವನ್ನೊ ಪಡೆದು ಸುನಮ್ಮನಾಗುತ್ತಾರೆ. ಆದರೆ ಅಂಬೇಡ್ಕರ್? ಸಮಚಿತ್ತದ ದೂರದಶರ್ಿ ವ್ಯಕ್ತಿತ್ವದ ನಾಯಕ. ತಾನು ಏನು ಮಾಡುತ್ತಿದ್ದೇನೆ ಅದರ ಪರಿಣಾಮ  ಏನಾಗಬಹುದು ಎಂಬುದನ್ನು ಸುಮಾರು 10000 ವರ್ಷಗಳ ಮುಂದಕ್ಕೆ  ಯೋಚಿಸಿದ ಅಸಾಧಾರಣ  ನಾಯಕ. ಬಹುಶಃ ಅಂತಹವರು ಯುಗಕ್ಕೆ ಒಬ್ಬರು ಇಬ್ಬರು ಜನಿಸಬಹುದಷ್ಟೆ. ಯಾಕೆಂದರೆ  ಅಂಬೇಡ್ಕರ್ ಬರೀ ಸಮಸ್ಯೆಗಳನ್ನಷ್ಟೆ ಕೆದಕಲಿಲ್ಲ. ಬದಲಿಗೆ ಅವುಗಳಿಗೆ  ಸೂಕ್ತ ಪರಿಹಾರವನ್ನು ಸಹ ತೆರೆದಿಟ್ಟು ಹೋದರು. ಹಿಂದೂ ಧರ್ಮದ ಅಂತಹ ಸಮಸ್ಯೆಗೆ ಪರಿಹಾರವಾಗಿ ಅವರು ತೆರೆದದ್ದೆ ಬುದ್ಧ ಮತ್ತು ಆತನ ಧರ್ಮದ ಹೆಬ್ಬಾಗಿಲು.
   ಹಾಗಿದ್ದರೆ ಅವರೇನು ಅದನ್ನು ಧಿಡೀರನೇ ತೆರೆದರೇ ? ಅಥವಾ  ಯಾವುದಾದರೂ ಒತ್ತಡಕ್ಕೆ ಸಿಲುಕಿ ಅದಕ್ಕೆ ಪುನರ್ಜನ್ಮ ನೀಡಿದರೇ? ಬಹುಶಃ ಇದಕ್ಕೆ ಉತ್ತರ ಅಂಬೇಡ್ಕರರ ಬಾಲ್ಯದಲ್ಲಿಯೇ ಸಿಗುತ್ತದೆ. ಅಂಬೇಡ್ಕರರು ಮೆಟ್ರಿಕುಲೇಷನ್ ಪಾಸಾದಾಗ ಅಭಿನಂದನಾರ್ಹವಾಗಿ ಅವರಿಗೆ ಬಂದದ್ದು ಗೌತಮ ಬುದ್ಧನ ಜೀವನ ಚರಿತ್ರೆಯ ಪುಸ್ತಕ. ತಾವೇ ಬರೆದಿದ್ದ ಆ ಪುಸ್ತಕವನ್ನು ಅವರಿಗೆ ನೀಡಿದ್ದು ಖ್ಯಾತ ಮರಾಠಿ ಲೇಖಕ ಮತ್ತು ಚಿಂತಕ ಕೃಷ್ಣ ಅಜರ್ುನ ಕೆಲೂಸ್ಕರ್ರವರು . ಇದು ನಡೆದದ್ದು 1907 ರಲ್ಲಿ. ಅಂದರೆ ಅಂಬೇಡ್ಕರ್ರವರಿಗೆ ಆಗ ಕೇವಲ 16 ವರ್ಷ.
    ಹಿಂದೂ ಎಂಬ ಮರುಭುಮಿ
ಯಲ್ಲಿ ಸಮಾನತೆ ಎಂಬ ನೀರು ಸಿಗದೆ ತಹತಹಿಸುತ್ತಿದ್ದ ಸಮುದಾಯವೊಂದಕ್ಕೆ ಅಂಬೇಡ್ಕರ್ರವರಿಗೆ ಸಿಕ್ಕ ಆ ಬುದ್ಧನ ಜೀವನ ಚರಿತ್ರೆ ಕೃತಿ ಹೇಗೆ ಕಂಡಿರಬೇಕು? ಮರುಭೂಮಿಯಲ್ಲಿ ಸಿಕ್ಕ ಒಯಸಿಸ್ನ ಹಾಗೆ ತಾನೆ? ಅಂಬೇಡ್ಕರ್ ಬುದ್ಧ ಧರ್ಮ ಎಂಬ ಆ ಒಯಸಿಸ್ಅನ್ನು ಅಪ್ಪಿಕೊಂಡರು. ಫಲಭರಿತ ಈ ಭರತ ಭೂಮಿ ಮರುಭೂಮಿ ಆದದ್ದೇಕೆ? ಎಂಬ ನಿಟ್ಟಿನಲಿ ಚಿಂತಿಸುತ್ತಾ ಮುನ್ನುಗ್ಗಿದ್ದರು.ಅಂತಹ ಆ ಮುನ್ನುಗ್ಗುವಿಕೆಯಲ್ಲಿ ಅವರು ಸಿಂಹದಂತೆ ಗಜರ್ಿಸಿದ್ದು 1935 ರಲ್ಲಿ ನಾಸಿಕ್ನ ಈಯೋಲಾ ಎಂಬಲ್ಲಿ,ನಾನು ಹಿಂದೂವಾಗಿ ಹುಟ್ಟಿರಬಹುದು ಅದು ನನ್ನ ಕೈಲಿರಲಿಲ್ಲ., ಆದರೆ ಹಿಂದೂವಾಗಿ ಖಂಡಿತ ಸಾಯುವುದಿಲ್ಲ ಎಂದು ಗುಡುಗಿದರು. ಬಹುಶಃ ಅಂಬೇಡ್ಕರರ ಆ ಗುಡುಗು 'ಮರುಭೂಮಿಯ ಜನರಿಗೆ' ದೀಪಾವಳಿ ಪಟಾಕಿ ಸದ್ದಿನ ಹಾಗೆ ಕೇಳಿಸಿರಬೇಕು! ಆದರೆ ಅದು ಪಟಾಕಿಯಲ್ಲ ಹೈಡ್ರೋಜನ್ ಬಾಂಬ್ ಎಂದು ಗೊತ್ತಾದದ್ದು 1956 ಅಕ್ಟೋಬರ್ 14 ರಂದು. ಏಕೆಂದರೆ ಅಂದು ಅಂಬೇಡ್ಕರರು ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು . ತನ್ಮೂಲಕ  ಬುದ್ಧನ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿದರು.
    ಹಾಗಿದ್ದರೆ ಅಂಬೇಡ್ಕರರು ಬೌದ್ಧ ಧರ್ಮವನ್ನು ಸುಮ್ಮನೆ ಸ್ವೀಕರಿಸಿದರೇ? blind ಆಗಿ  follow ಮಾಡಿದರೆ? ಖಂಡಿತ ಇಲ್ಲ. ಹಾಗೆ ಹೇಳುವುದಾದರೆ ಬೇರೆಯವರು ಬೇಕಾದರೆ ಹಾಗೆ ಮಾಡಬಹುದಿತ್ತೋ ಏನೋ? ಆದರೆ ಅಪ್ಪಟ ಶ್ರೇಷ್ಠ ಜ್ಞಾನಿ, ಹೋರಾಟಗಾರ ಅಂಬೇಡ್ಕರ್ರವರು ಹಾಗೆ ಮಾಡಲಿಲ್ಲ. ಯಾಕೆಂದರೆ ಬೌದ್ಧ ಧರ್ಮವನ್ನು ಸ್ವೀಕರಿಸಬೇಕಾದ ಅವರ ಆ ನಿಧರ್ಾರದಲ್ಲಿ ಮುಖ್ಯವಾಗಿ ಅಡಗಿದ್ದು ದೇಶಪ್ರೇಮ, ತನ್ನಸಮುದಾಯದ ನೈಜ ಇತಿಹಾಸ ಮತ್ತು ಹಿತಚಿಂತನೆ, ಹಾಗೆ ಬುದ್ಧ ಎಂಬ ಮಹಾನ್ ಸಾಮಾಜಿಕ ವಿಜ್ಞಾನಿಯೆಡೆಗಿನ ಪ್ರೀತಿ.
    ಅಂದಹಾಗೆ ಅಂಬೇಡ್ಕರರ ಈ ನಿಧರ್ಾರದಲ್ಲಿ ದೇಶಪ್ರೇಮದ ಪಾತ್ರ ಎಂತಹದ್ದು? ಸರಳವಾಗಿ ಹೇಳುವುದಾದರೆ  ಅಂಬೇಡ್ಕರರು ಹಿಂದೂವಾಗಿ ಸಾಯಲಾರೆ ಎಂದಾಕ್ಷಣ ಮುಸ್ಲೀಮರು, ಕ್ರೈಸ್ತರು ಇತ್ಯಾದಿ ಧರ್ಮಗಳವರು ಅಂಬೇಡ್ಕರರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲು ಮುಂದೆ ಬಂದರು. ಆದರೆ ದೇಶ ಪ್ರೇಮಕ್ಕೆ ಕಟಿಬದ್ಧರಾದ  ಅಂಬೇಡ್ಕರ್ರವರು ಸೇರುವುದಾದರೆ ನಮ್ಮ ದೇಶದಲ್ಲೇ ಹುಟ್ಟಿ ಬೆಳೆದ  ಧರ್ಮವನ್ನಷ್ಟೆ ಸೇರುವುದು  ಎಂದು ನಿರ್ಧರಿಸಿ ಬೌದ್ಧ ಧರ್ಮದತ್ತ ಒಲವು ತೋರಿದರು. ತನ್ಮೂಲಕ ದೇಶಪ್ರೇಮ ಎಂದು ಬಡಬಡಿಸುವವರಿಗೆ ನಿಜವಾದ ದೇಶಪ್ರೇಮದ ಸಣ್ಣ ಪಾಠವನ್ನು ಸಹ ಹೇಳಿಕೊಟ್ಟರು.
    ಹಾಗೆಯೇ ತನ್ನ ಸಮುದಾಯದ ನೈಜ ಇತಿಹಾಸ? ಹಾಗೆಂದರೆ? ಏಕೆಂದರೆ ಅಂಬೇಡ್ಕರರು ಒಂದೆಡೆ ಭಾರತದ ಇತಿಹಾಸ ನಿಜವಾಗಿಯೂ ಬೌದ್ಧ ಧರ್ಮಕ್ಕೂ ಬ್ರಾಹ್ಮಣ ಧರ್ಮಕ್ಕೂ ನಡೆದ ನಿರಂತರ ಸಂಘರ್ಷವಲ್ಲದೇ ಬೇರೇನಲ್ಲ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ  ಅಂಬೇಡ್ಕರರ ಈ ಬೌದ್ಧ ಧರ್ಮದ ನಡೆಯ ಹಿಂದೆ ನಿಜಕ್ಕೂ ಇದ್ದದ್ದೂ ಅಂತಹ ಆ ಒರಿಜಿನಲ್ ಇತಿಹಾಸವೇ ಹೊರತು ಬೇರೇನಲ್ಲ. ಅಂತಹ ಭವ್ಯ ಇತಿಹಾಸವನ್ನು ಅಂಬೇಡ್ಕರರು ಹೀಗೆ ದಾಖಲಿಸುತ್ತಾರೆ ಭಾರತದ ಇತಿಹಾಸ ಗೊತ್ತಿರುವವರಿಗೆ ತಿಳಿದುಬರುವುದೇನೆಂದರೆ  ಈ ದೇಶದಲ್ಲಿ ಬೌದ್ಧ ಧರ್ಮವನ್ನು ಪ್ರಚುರ ಪಡಿಸಿದವರು ನಾಗ ಜನಾಂಗದವರು. ನಾಗಜನರು ಆರ್ಯರ ಪ್ರಭಲ ಶತೃಗಳಾಗಿದ್ದರು.  ಆರ್ಯರು ಮತ್ತು ನಾಗಜನರ ನಡುವೆ ಘೋರ ಯುದ್ಧಗಳು ನಡೆದಿವೆ.  ಆರ್ಯರು ನಾಗಜನರನ್ನು ಜೀವಂತ ಸುಟ್ಟಿರುವ ಅನೇಕ ಐತಿಹ್ಯಗಳು ಪುರಾಣದಲ್ಲಿವೆ. ಆದರೆ ಅಗಸ್ತ್ಯ ಮುನಿಯು  ಆರ್ಯರು ಮತ್ತು ನಾಗರ ಅಂತಹ ಘೋರ ಕದನದ ನಡುವೆ  ಒಬ್ಬ ನಾಗನನ್ನು ರಕ್ಷಿಸಿದರು. ಅವನ ವಾರಸುದಾರರೇ ನಾವು( ಅಂದರೆ ದಲಿತರು). ಆರ್ಯರ ಈ ದಬ್ಬಾಳಿಕೆಯಿಂದ  ನೊಂದಿದ್ದ ನಾಗ ಜನರು  ಮುಂದೊಂದು ದಿನ ತಮ್ಮನ್ನು ಈ ನೋವಿನಿಂದ ಮೇಲೆತ್ತುವ  ನಾಯಕನೊಬ್ಬ ಹುಟ್ಟುತ್ತಾನೆಂದು ನಂಬಿದ್ದರು. ಆ ನಾಯಕನೇ ಗೌತಮ ಬುದ್ಧ. ಬುದ್ಧನ ಕಾಲದಲ್ಲಿ  ನಾಗಜನರು ಅವನ ತತ್ವಗಳನ್ನು ಏಷ್ಯಾಖಂಡದಾಂದ್ಯಂತ ಪ್ರಚುರಪಡಿಸಿದರು. ಅಂತಹ ಶ್ರೇಷ್ಠ ನಾಗ ಜನಾಂಗಕ್ಕೆ ಸೇರಿದವರು ನಾವು ಎಂದು ಅಂಬೇಡ್ಕರರು  ತನ್ನ ಸಮುದಾಯದ ಭವ್ಯ ಇತಿಹಾಸವನ್ನು  ಬುದ್ಧನ ಜೊತೆ ಲಿಂಕ್ ಮಾಡುತ್ತಾರೆ.  ತನ್ಮೂಲಕ ತಾನೇಕೆ? ಜೊತೆಗೆ ತನ್ನ ಸಮುದಾಯವೇಕೆ ಬೌದ್ಧ ಧರ್ಮ ಸ್ವೀಕರಿಸಬೇಕು? ಎಂದು ಇಡೀ ಜಗತ್ತಿಗೆ  ಐತಿಹಾಸಿಕ ಸಾಕ್ಷಿಗಳೊಂದಿಗೆ ಸಾರಿಹೇಳುತ್ತರೆ. ಈಗ ಹೇಳಿ ಅಂಬೇಡ್ಕರ್ ಕಾಟಾಚಾರಕ್ಕೆ ಬೌದ್ಧ ಧನರ್ಮ ಸ್ವೀಕರಿಸಿದರೆ? ಕಾಟಾಚಾರ? ಅಂಬೇಡ್ಕರರ ಡಿಕ್ಷನರಿಯಲ್ಲಿ ಆ ಪದಕ್ಕೆ ಅರ್ಥವೇ ಇಲ್ಲವೇನೋ? ಯಾಕೆಂದರೆ ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು  ಅಂಬೇಡ್ಕರರು ಅಳೆದು ಸುರಿದು ಬದುಕಿದ್ದಾರೆ .ಹೆಜ್ಜೆಹೆಜ್ಜೆಗೂ  ತಮ್ಮ ಜೀವನವನ್ನು ತ್ಯಾಗ ಮಾಡಿ ತನ್ನ ಸಮುದಾಯದ ಏಳ್ಗೆಗಾಗಿ  ಒಟ್ಟಾರೆ ಮಾನವಪರ ಹಕ್ಕುಗಳಿಗಾಗಿ  ದುಡಿದಿದ್ದಾರೆ.ಅಂತಹ ಹುಟ್ಟು ಹೋರಾಟಗಾರ  ತನ್ನ ನಿರಂತರ ಹೋರಾಟದ ನಡುವೆಯೂ ಧರ್ಮವೊಂದನ್ನು ಪುನರುಜ್ಜೀವನಗೊಳಿಸಿದ್ದಿದೆಯಲ್ಲ? ಅದು ಟಠಿಟಥಿ ಣಠಿಜಡಿಛ! ಹಾಗಂದರೂ ಕೂಡ ತಪ್ಪಾಗುತ್ತದೆ. ಏಕೆಂದರೆ ಅಂಬೇಡ್ಕರರ ಸಾಧನೆಯನ್ನು ವಣರ್ಿಸಲು ಪದಗಳೇ ಸಾಲದು.
      ಕಡೆಯದಾಗಿ ಹೇಳುವುದಾದರೆ ಅಂಬೇಡ್ಕರರು ಬೌದ್ಧ ಧರ್ಮದತ್ತ  ಆಕಷರ್ಿತರಾದದ್ದು ಬುದ್ಧ ಮತ್ತು ಆತನ ಧರ್ಮದ  ಶ್ರೇಷ್ಠತನದಿಂದಾಗಿ .ಇಂತಹ ಶ್ರೇಷ್ಠತನವನ್ನು ಹೀಗಳೆದವರನ್ನು ಕೂಡ ಅವರು ಸುಮ್ಮನೆ ಬಿಟ್ಟಿಲ್ಲ.  ಏಕೆಂದರೆ ಮೇ 24, 1956 ರಂದು ಬುದ್ಧನ ಅಹಿಂಸಾ ತತ್ವದ ಬಗ್ಗೆ ಟೀಕೆ ಮಾಡಿದ್ದ ವೀರ್ ಸಾವರ್ಕರ್ ಬರಹಗಳಿಗೆ ಉಗ್ರವಾಗಿ ಉತ್ತರಿಸುತ್ತಾ ಅಂಬೇಡ್ಕರ್ರವರು ಹಿಂದೂ ಧರ್ಮ ದೇವರನ್ನು ನಂಬುತ್ತದೆ, ಆದರೆ ಬೌದ್ಧ ಧರ್ಮ ನಂಬುವುದಿಲ್ಲ.ಹಿಂದೂ ಧರ್ಮ ಅತ್ಮವನ್ನು ನಂಬುತ್ತದೆ ಆದರೆ ಬೌದ್ಧ ಧರ್ಮದ ಪ್ರಕಾರ ಆತ್ಮವೆಂಬುದೇ ಇಲ್ಲ! ಹಿಂದೂ ಧರ್ಮ ಚಾತುರ್ವಣ್ರ್ಯ ಮತ್ತು ಜಾತಿಪದ್ಧತಿಯನ್ನು ನಂಬುತ್ತದೆ ಆದರೆ ಬೌದ್ಧ ಧರ್ಮದಲ್ಲಿ ಚಾತುರ್ವಣ್ರ್ಯ ಮತ್ತು ಜಾತಿ ಪದ್ಧತಿಗೆ ಅವಕಾಶವೇ ಇಲ್ಲ ಆದ್ದರಿಂದ ತಾನು ಮತ್ತು ತನ್ನ ಸಮುದಾಯ ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿ ಅಂಬೇಡ್ಕರ್ರವರು ಸಾವರ್ಕರ್ರಂತಹ ಹಿಂದುತ್ವವಾದಿಗಳಿಗೆ ಚುಚ್ಚಿ ಹೇಳುತ್ತಾರೆ ಮತ್ತು ಹಾಗೆ ಹೇಳುವ ಭರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುವ ತಾನು  ಮತ್ತು ತನ್ನವರನ್ನು ಹಳ್ಳಕ್ಕೆ ಬೀಳುತ್ತಿದ್ದೀರಿ ಎಂದ ಹಿಂದುತ್ವವಾದಿಗಳಿಗೆ ಅಷ್ಟೆ ಸ್ಪೀಡಾಗಿ ಉತ್ತರಿಸಿದ ಅಂಬೇಡ್ಕರ್ರವರು ನನ್ನನ್ನು ಟೀಕಿಸುವವರು ನನ್ನನ್ನು ಒಂಟಿಯಾಗಿರಲು ಬಿಡಿ. ನಾನು ಮತ್ತು  ನನ್ನ ಜನ  ಹಳ್ಳಕ್ಕೆ ಬಿದ್ದರೂ ಪರವಾಗಿಲ್ಲ ಏಕೆಂದರೆ ಹಾಗೆ ಹಳ್ಳಕ್ಕೆ ಬೀಳುವ ಬಿದ್ದು ಏಳುವ ಸ್ವಾತಂತ್ರ್ಯ ನಮಗೆ ಇದ್ದೆ ಇದೆ! ಬೇರೆಯವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಂದುವರಿದು ಅವರು , ಹಾಗೆ ಹೇಳುವುದಾದರೆ ನನ್ನ ಜನರು ಕುರಿಗಳಿದ್ದ ಹಾಗೆ. ನಾನು ಅವರನ್ನು ಕಾಯುವ ಕುರುಬ. ಅವರಿಗೆ ನನಗಿಂತ ಶ್ರೇಷ್ಠ ಮಾರ್ಗದರ್ಶಕ ಸಿಗುತ್ತಾನೆಂದು ಖಂಡಿತವಾಗಿಯೂ ನನಗನಿಸುತ್ತಿಲ್ಲ. ಆ ಕಾರಣಕ್ಕಾಗಿ ನನ್ನನ್ನು ಅವರು ಚಾಚೂ ತಪ್ಪದೇ ಪಾಲಿಸುತ್ತಾರೆ. ಹಾಗೆ ಪಾಲಿಸುವುದರ ಮೂಲಕ ಅವರು ಶ್ರೇಷ್ಠ ಜ್ಞಾನವನ್ನು ಕೂಡ ಪಡೆಯುತ್ತಾರೆ ಎಂದು ಅಂಬೇಡ್ಕರ್ರವರು ಹಿಂದುತ್ವವಾದಿಗಳಿಗೆ ಚುರುಕು ಮುಟ್ಟಿಸುತ್ತಾರೆ.
      ಒಂದಂತೂ ನಿಜ ಕ್ರಿ.ಪೂ.543ರಿಂದ ಕ್ರಿ.ಶ. 1400 ರವರೆಗೆ  ಈ ಭಾರತದಲ್ಲಿ ರಂಗು ರಂಗಾಗಿ ಮಿನುಗಿದ ಬುದ್ಧ ಧರ್ಮದ ಅವನತಿ ಹೇಗಾಯಿತೋ ಖಂಡಿತ ಗೊತ್ತಿಲ್ಲ.ಅಕಸ್ಮಾತ್ ಗೊತ್ತಿದ್ದರೂ ಅದನ್ನು ಪ್ರಸ್ತುತ ಪಡಿಸುವ ಅಗತ್ಯ ಇಲ್ಲಿ ಖಂಡಿತ ಕಾಣುತ್ತಿಲ್ಲ. ಆದರೆ ಅದಕ್ಕೆ ಜೀವಕ್ಕೆ ಜೀವಕೊಟ್ಟು, ಉಸಿರಿಗೆ ಉಸಿರು ಬೆಸೆದು ಕಾಪಾಡಿದ್ದು? ಪುನರ್ಜನ್ಮ ನೀಡಿದ್ದು? ಅಕ್ಷರಶಃ ನಿಜ ಅದು ಡಾ. ಅಂಬೇಡ್ಕರ್ರಲ್ಲದೇ ಬೇರಾರೂ ಅಲ್ಲ.ಸರಳವಾಗಿ ಹೇಳುವುದಾದರೆ ಕನ್ನಡದಲ್ಲಿ ಚಲನ ಚಿತ್ರವೊಂದಿದೆ ಭೂಮಿಗೆ ಬಂದ ಭಗವಂತ ಅಂತ. ಆ ಚಿತ್ರದಲ್ಲಿ ಭಗವಂತ ಭೂಮಿಗೆ ಬಂದನೋ? ಏನೋ? ಗೊತ್ತಿಲ್ಲ! ಆದರೆ ಅಂಬೇಡ್ಕರರಂತೂ ಭರತ ಭೂಮಿಗೆ ಬುದ್ಧನನ್ನು ಖಂಡಿತ ವಾಪಸ್ ತಂದರು.ಅವನ ಬೆಳಕಿನ ಹಣತೆಯನ್ನು ಈ ದೇಶವಾಸಿಗಳ ಬೆಚ್ಚನೆಯ ಹೃದಯದಲ್ಲಿ ಮೌನವಾಗಿ ಹಚ್ಚಿದರು.ತನ್ಮೂಲಕ ಬೋಧಿಸತ್ವ ಎಂಬ ತಮ್ಮ ಅನ್ವರ್ಥಕ್ಕೆ ಸಾಕ್ಷಿಯಾಗಿ ನಿಂತರು.
  ಯಾರು ಏನೆ ಹೇಳಲಿ ಅಂಬೇಡ್ಕರರು ಅಂದು ಹಚ್ಚಿದ ಹಣತೆ  ಇಂದು ದೇಶದ ಕೋಟ್ಯಾಂತರ ದಲಿತರ ಹೃದಯಗಳಲ್ಲಿ ಹಾಗೇ ಉರಿಯುತ್ತಿದೆ. ಎಲ್ಲಿ ಅಂಬೇಡ್ಕರರಿರುತ್ತಾರೋ ಅಲ್ಲಿ ಬುದ್ಧ ಎಂಬಂತಾಗಿದೆ! ಔಪಚಾರಿಕವಾಗಿ ಸ್ವೀಕರಿಸುವುದಷ್ಟೆ ಧರ್ಮವಲ್ಲ ಅನೌಪಚಾರಿಕವಾಗಿ ಹಾಗೆ ಒಪ್ಪಿಕೊಳ್ಳುವದೂ ಕೂಡ ಧರ್ಮವೇ! ಈ ನಿಟ್ಟಿನಲಿ ಅಂಬೇಡ್ಕರರು ಅಂದು ಸ್ಥಾಪಿಸಿದ ಅನೌಪಚಾರಿಕ ಬೌದ್ಧ ಧರ್ಮ ಮತ್ತಷ್ಟು ಬೆಳೆಯಲಿ ಬುದ್ಧ ನಮ್ಮೆಲ್ಲರೆದೆಯಲ್ಲಿ ನೆಲೆಗೊಳ್ಳಲಿ ಎಂಬುದಷ್ಟೆ ಸಧ್ಯದ ಕಳಕಳಿ.
      ರಘೋತ್ತಮ ಹೊ.ಬ
      ಚಾಮರಾಜನಗರ
       
     

html