ಪ್ರಜಾವಾಣಿ ವಾರ್ತೆ |
ಕೋಲಾರ: 2554ನೇ ಬುದ್ಧ ಜಯಂತಿ ಪ್ರಯುಕ್ತ ಭಗವಾನ್ ಬುದ್ಧ ಜಯಂತ್ಯುತ್ಸವ ಸಮಿತಿಯು ನಗರದಲ್ಲಿ ಗುರುವಾರ ಬುದ್ಧನ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಸಮಿತಿಯ ಪ್ರಮುಖರು, ಕಾರ್ಯಕರ್ತರು ಬುದ್ಧನ ಭಾವಚಿತ್ರವಿದ್ದ ಬ್ಯಾಡ್ಜ್ಗಳನ್ನು ಧರಿಸಿ ಭಾಗವಹಿಸಿದರು. ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಶುರುವಾದ ಮೆರವಣಿಗೆ ಬಾಲಕರ ಸರ್ಕಾರಿ ಕಾಲೇಜು ಮೂಲಕ, ದೊಡ್ಡಪೇಟೆ ವೃತ್ತ, ಎಂ.ಜಿ. ರಸ್ತೆ ಮೂಲಕ ಕೆಇಬಿ ಸಮುದಾಯ ಭವನದಲ್ಲಿ ಕೊನೆಗೊಂಡಿತು.ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಬುದ್ಧಂ ಶರಣ ಗಚ್ಛಾಮಿ ಪ್ರಾರ್ಥನೆಯನ್ನು ಹಾಡಿದರು. ಈ ಮೆರವಣಿಗೆ ಆಡಂಬರವಿಲ್ಲದೆ, ಸರಳರೂಪದಲ್ಲಿದ್ದು ವಿಶೇಷವಾಗಿ ನಗರದ ಜನರ ಗಮನ ಸೆಳೆಯಿತು. ಮೆರವಣಿಗೆಯ ದಾರಿಯುದ್ದಕ್ಕೂ ಜನ ಮೆಚ್ಚುಗೆಯಿಂದ ವೀಕ್ಷಿಸಿದರು. ಜನನಿಬಿಡ ಸ್ಥಳವಾದ ದೊಡ್ಡಪೇಟೆ ರಸ್ತೆಯಲ್ಲಿ ಮೆರವಣಿಗೆಯ ಪ್ರಯುಕ್ತ ಪ್ರಸ್ತುತಪಡಿಸಿದ ಹಾಡುಗಳು ಇಂಪಾಗಿ ಕೇಳಿಬಂದವು. ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಐಪಲ್ಲಿ ನಾರಾಯಣಸ್ವಾಮಿ, ಟಿ.ವಿಜಯಕುಮಾರ್, ಫಾಲ್ಗುಣ, ಮಂಜುನಾಥ, ಮುನಿವೆಂಕಟಪ್ಪ, ಜೆ.ಸತ್ಯರಾಜ್, ಬಾಂಸೆಫ್ ನಾರಾಯಣಪ್ಪ, ಬಂಗವಾದಿ ನಾರಾಯಣಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಕೆಇಬಿ |
Showing posts with label Kolar Buddhist. Show all posts
Showing posts with label Kolar Buddhist. Show all posts
Tuesday, 17 May 2011
ಬುದ್ಧ ಜಯಂತಿ: ಸಂಭ್ರಮದ ಮೆರವಣಿಗೆ
Labels:
Karnataka Buddhsits,
Kolar Buddhist,
ಧಮ್ಮ,
ಬುದ್ಧ,
ಬೌದ್ಧಧರ್ಮ
Subscribe to:
Posts (Atom)