Pages

Showing posts with label ಸುದ್ದಿ. Show all posts
Showing posts with label ಸುದ್ದಿ. Show all posts

Tuesday, 19 April 2011

ಛಲವಾದಿ ಮಹಾಸಭಾದಿಂದ ಅಂಬೇಡ್ಕರ್ ಜಯಂತಿ

ಮಂಗಳವಾರ - ಏಪ್ರಿಲ್ -19-2011
ಕನಕಪುರ, ಎ.18: ತಾಲೂಕಿನ ಛಲವಾದಿ ಮಹಾಸಭಾ ವತಿಯಿಂದ ತಮಿಳುನಾಡು ಗಡಿ ಪ್ರದೇಶ ಹುಣಸನಹಳ್ಳಿ ಗ್ರಾಮದಲ್ಲಿ ಗ್ರಾಮ ಶಾಖೆಯ ಸಹಯೋಗದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರ 120ನೆ ಜನ್ಮ ದಿನಾಚರಣೆ ಸಮಾರಂಭ ಅದ್ದೂರಿಯಾಗಿ ಜರಗಿತು.ಅಂಬೇಡ್ಕರ್‌ರ ವಿಚಾರಧಾರೆಗಳನ್ನು ಕುರಿತು ಶಿಕ್ಷಕ ಡಿ.ಶಿವರುದ್ರಪ್ಪ ಮಾತನಾಡಿದ, ಅಂಬೇಡ್ಕರ್ ವಿಚಾರಧಾರೆಗಳ ಮೂಲಕ ಸಮಾಜದ ಶೋಷಿತ ವರ್ಗಗಳ ದೀನದಲಿತರ, ಬಡವರ ಏಳಿಗೆಗಾಗಿ ಕೆಲಸ ಮಾಡಬೇಕು. ದೇಶದ ಏಕತೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.ರಾಂಪುರ ಪ್ರಕಾಶ, ಕಾಂಗ್ರೆಸ್ ಮುಖಂಡ ರಮೇಶ, ಗ್ರಾ.ಪಂ.ಅಧ್ಯಕ್ಷ ಬಸವಯ್ಯ, ಗ್ರಾಮ ಶಾಖೆ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಶಾಂತ, ಕರಿಯಯ್ಯ, ಚಂದ್ರಪ್ಪ, ಕರಗಯ್ಯ, ಟೈಲರ್ ರಮೇಶ್ ಉಪಸ್ಥಿತರಿದ್ದರು.

html