Pages

Showing posts with label Mysore University. Show all posts
Showing posts with label Mysore University. Show all posts

Monday, 30 May 2011

ಮರೆಯೋದುಂಟೆ ಮೈಸೂರು ದೊರೆಯ: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ


ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಇದು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ರವರ’ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿಮರ್ಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜಷರ್ಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ. ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿಜರ್ಾ ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು.
1894 ರಲ್ಲಿ ತಂದೆ ಚಾಮರಾಜ ಒಡೆಯರ್ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ್ ಆಗಿ ನೇಮಿಸಲ್ಪಟವರು ಸರ್. ಫ್ರೇಜರ್ರವರು. ಮುಂದೆ 1902 ಆಗಸ್ಟ್ 8ರಂದು ಬ್ರಿಟಿಷ್ ರಿಜೆನ್ಸಿಯಿಂದ ಅಧಿಕಾರ ಸ್ವೀಕರಿಸುತ್ತಾ, ಯುವರಾಜ ಕೃಷ್ಣರಾಜರು ತಮ್ಮ ಮುಂದಿನ ಆಳ್ವಿಕೆ ಹೇಗಿರುತ್ತದೆ ಂಬುದಕ್ಕೆ ಹೀಗೆ ನುಡಿಯುತ್ತಾರೆ, ನನ್ನ ಮೇಲೆ ಹೊರಿಸಲ್ಪಟ್ಟಿರುವ ಭಾರವು ಎಷ್ಟು ಮಹತ್ತರವಾದುದು ಎಂಬುದನ್ನು ನಾನು ಸಂಪೂರ್ಣವಾಗಿ ತಿಳಿದಿದ್ದೇನೆ. ಇದನ್ನು ಮಾತಿನಿಂದಲ್ಲ ಕೃತಿಯಿಂದ ಸಾಬೀತುಪಡಿಸಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ, ನನ್ನ ಪ್ರಜೆಗಳ ಸುಖ ಸಂತೋಷಗಳಿಗೆ ಎಂದೂ ಕುಂದುಂಟಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಸಂಸ್ಥಾನದ ಸ್ಥಿತಿಯು ಇನ್ನೂ ಉತ್ತಮವಾಗುವಂತೆ ಮಾಡುತ್ತೇನೆ. ಯಾರ ಭಯವಾಗಲಿ, ದಾಕ್ಷಿಣ್ಯವಾಗಲಿ ಇಲ್ಲದೇ ಯಾರ ತಂತ್ರಕ್ಕೂ ಹಿಂಜರಿಯದೇ, ಯಾವ ಮಂತ್ರಕ್ಕೂ ಒಳಗಾಗದೇ ನನ್ನ ಪ್ರಜೆಗಳ ನಿರಂತರ ಹಿತ ರಕ್ಷಣೆಗಾಗಿ ರಾಜ್ಯ ಭಾರ ನಿರ್ವಹಿಸುತ್ತೇನೆ ಎನ್ನುತ್ತಾರೆ. ಹಾಗಿದ್ದರೆ ಮಹಾರಾಜರು ನುಡಿದಂತೆ ನಡೆದರೆ? ತಮ್ಮ ಮಾತನ್ನು ಜೀವನದುದ್ದಕ್ಕೂ ಉಳಿಸಿಕೊಡರೆ? ಖಂಡಿತ 38 ವರ್ಷಗಳ ಅವರ ಭವ್ಯ ನಿದರ್ಾಕ್ಷಿಣ್ಯ ಆಡಳಿತ ಅದಕ್ಕೆ ಸಾಕ್ಷೀಭೂತವಾಗಿದೆ. ಆಡಳಿತ ಚುಕ್ಕಾಣಿ ಹಿಡಿದ ಮಹಾರಾಜರು ತಾನ್ನೊಬ್ಬ ರಾಜ ಇಡೀ ರಾಜ್ಯವೇ ನನ್ನ ಬಿಗಿ ಮುಷ್ಠಿಯಲ್ಲಿರಬೇಕು ಎಂದುಕೊಳ್ಳಲಿಲ್ಲ. ಬದಲಾಗಿ ತಾನ್ನೊಬ್ಬ ಜನ ಸೇವಕ ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಅಪ್ಪಟ ಪ್ರಜಾಪ್ರಭುತ್ವವಾದಿ ಅರಸು ಎನ್ನಿಸಿಕೊಂಡರು. ಅದಕ್ಕಾಗಿ ಪ್ರಜಾಪ್ರತಿನಿಧಿ ಸಭೆ ಯನ್ನು ಬಲಗೊಳಿಸಿ 1907ರಲ್ಲಿ ನ್ಯಾಯಾವಿಧಾಯಕ ಸಭೆಯನ್ನು ಸ್ಥಾಪಿಸಿ ಸರ್ವರಿಗೂ ಅದರಲ್ಲಿ ಪ್ರಾತಿನಿದ್ಯ ನೀಡಿ ಸಮಾನತೆ ಮೆರೆದರು. ಇಡೀ ರಾಜ್ಯವನ್ನೇ ತಮ್ಮ ಆಸ್ತಿಯೆಂದು ಪರಿಗಣಿಸದೆ ತಮ್ಮ ಸಂಸಾರಕ್ಕೆ ಎಷ್ಟು ಹಣ ಬೇಕೆಂಬುದನ್ನು ಕೂಡ ಅಯ-ವ್ಯಯದ ಮೂಲಕ ಪ್ರಜಾಪ್ರತಿನಿಧಿ ಸಭೆಯಲ್ಲಿ ಅನುಮೊದನೆ ಪಡೆದುಕೊಳ್ಳಲು ಪ್ರಾರಂಭಿಸಿದರು. ಪ್ರಾಯಶಃ ಮಹಾರಾಜರ ಈ ಕ್ರಮ ಇಡೀ ಭರತ ಖಂಡದಲ್ಲೆಯೇ ಅಪರೂಪದ್ದು.
 ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಮೀಸಲಾತಿ ಚಳುವಳಿಯ ಇತಿಹಾಸದಲ್ಲೆ ಸುವಣರ್ಾಕ್ಷರಗಳಲ್ಲಿ ಬರೆದಿಡುವಂತಹದ್ದು. 1902ರಲ್ಲಿ ಕೊಲ್ಲಪುರ ಸಂಸ್ಥಾನದಲ್ಲಿ ಅಲ್ಲಿಯ ಅರಸು ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಶೇ. 50 ಮೀಸಲಾತಿ ನೀಡಿದ ನಂತರ ಅದರಿಂದ ಸ್ಪೂತರ್ಿಗೊಂಡ ಅವರು 1927ರಲ್ಲಿ ಮಿಲ್ಲರ್ (Miller) ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ (Non-Brahmin Reservation in Mysore State) ಶೇ 75% ಮೀಸಲಾತಿ ನೀಡುತ್ತಾರೆ (Backward Catse Reservation in Mysore State). ತನ್ಮೂಲಕ ಸಾಮಾಜಿಕ ನ್ಯಾಯದಲ್ಲಿ ಹೊಸ ಶಕೆಗೆ ನಾಂದಿಹಾಡುತ್ತಾರೆ. ಮಹಾರಾಜರ ಈ ನಿಧರ್ಾರದ ವಿರುದ್ಧ ಅಂದಿನ ದಿವಾನರಾಗಿದ್ದ ಸರ್. ಎಂ ವೀಶ್ವೇಶ್ವರಯ್ಯನವರು (Mokshagundam Visvesvarayya) ಜಾತಿ ಆಧಾರಿತ ಮೀಸಲಾತಿ ನೀಡುವುದರಿಂದ ಪ್ರತಿಭೆಗೆ ದಕ್ಕೆ ಉಂಟಾಗುತ್ತದೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎನ್ನುತ್ತಾರೆ.
 
ಅಚ್ಚರಿ ಎಂದರೆ ಮಹಾರಾಜರು ಇದರಿಂದ ವಿಚಲಿತರಾಗುವುದಿಲ್ಲ. ಬದಲಿಗೆ ಬೇಸತ್ತ ವೀಶ್ವೇಶ್ವರಯ್ಯನವರು ನೀಡುವ ರಾಜೀನಾಮೆಯನ್ನು ಯಾವುದೇ ಗತ್ಯಂತರವಿಲ್ಲದೆ ಸ್ವೀಕರಿಸುತ್ತಾರೆ!. ಇರಲಿ, ತಮ್ಮ 38 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಮಹಾರಾಜರು ಸಾಧನೆಯ ಸುರಿಮಳೆಯನ್ನೆ ಸುರಿಸುತ್ತಾರೆ. ದೇವದಾಸಿ ಪದ್ದತಿಯನ್ನು ನಿಮರ್ೂಲನೆಗೊಳಿಸಿದ್ದು ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದು, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದು, ಮಹಿಳೆಯರಿಗೂ ಪಿತ್ರಾಜರ್ಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು ಮಹಾರಾಜರ ಸಾಮಾಜಿಕ ಕಳಕಳಿಯ ಬಿಂಬಗಳಾಗಿವೆ. ಜಾತಿ ಆಧಾರದ ಮೇಲೆ ಯಾರನ್ನು ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪ್ರವೃತ್ತಿಯನ್ನು ಸಕರ್ಾರವು ಎತ್ತಿಹಿಡಿಯಲಾರದು ಎಂಬ ಗೆಜೆಟ್ ಪ್ರಕಟಣೆಯ ಮೂಲಕ ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಅವರು ಶಿಕ್ಷಣವೇ ಎಲ್ಲ ಅಭಿವದ್ಧಿಗೂ ಮೂಲ ಎಂದು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಾರೆ.
1916 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಪ್ರಾರಂಬಿಸಿದ್ದು, ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದ್ದು, 1911 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಿಸಿದ್ದು, ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿಗೊಳಿಸಿದ್ದು ಮತ್ತು ವಯಸ್ಕರಿಗಾಗಿ 7000 ವಯಸ್ಕರ ಶಾಲೆಗಳನ್ನು ಪ್ರಾರಂಭಿಸಿದ್ದು ಶಿಕ್ಷಣದ ಬಗ್ಗೆ ಮಹಾರಾಜರ ಆದ್ಯತೆಯನ್ನು ತೋರಿಸುತ್ತದೆ. ಹಾಗಂತ ಅವರು ಕೃಷಿ ಕ್ಷೇತ್ರವನ್ನು ಕಡೆಗಣಿಸುವುದಿಲ್ಲ. ವಿಶ್ವ ವಿಖ್ಯಾತ ಕೃಷ್ಣ ರಾಜ ಸಾಗರ ನಿಮರ್ಾಣಗೊಂಡದ್ದು ಇವರ ಕಾಲದಲ್ಲೇ ಇದರ ಮೂಲಕ ಆ ಕಾಲದಲ್ಲೇ 1,20,000 ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಾಯಿತು. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆ ಪ್ರಾರಂಭವಾದದ್ದು ಕೂಡ ಇವರ ಕಾಲದಲ್ಲೇ. 1902ರಲ್ಲಿ ಕಾವೇರಿ ನದಿಗೆ ಶಿವನಸಮುದ್ರದಲ್ಲಿ ಅಡ್ಡಲಾಗಿ ಜಲ ವಿದ್ಯುತ್ ಉತ್ಪಾದನಾ ಕಾರ್ಯ ಪ್ರಾರಂಭವಾಗಿದ್ದು, 30,000 ವೋಲ್ಟ್ ವಿದ್ಯುತ್ತನ್ನು ಕೋಲಾರ ಚಿನ್ನದ ಗಣಿಗೆ ವಗರ್ಾಯಿಸಿದ್ದು ಅಚ್ಚರಿಯೆನಿಸಿದರೂ ಸತ್ಯ ಈ ಸಂದರ್ಭದಲ್ಲಿಯೇ ಜನರು ಮಹಾರಾಜರನ್ನು ಕೃಷ್ಣ ರಾಜ ಭೂಪ ಮನೆ ಮನೆ ದೀಪ ಎಂದದ್ದು. ಏಕೆಂದರೆ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ನಗರದಲ್ಲಿ ವಿದ್ಯುತ್ ದೀಪಗಳು ಬೆಳಗಿದ್ದು, ಮೈಸೂರು ಸೇರಿದಂತೆ ಇತರ ನಗರ, ಹಳ್ಳಿಗಳಲ್ಲಿ ವಿದ್ಯುತ್ ದೀಪ ಬೆಳಗಿದ್ದು ಇವರ ಕಾಲದಲ್ಲೇ ಅದಕ್ಕೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಾರಾಜ ನಾಲ್ವಡಿ ಕೃಷ್ಣ ಒಡೆಯರ್ ಸಾಧನೆ ಅನನ್ಯ. ಈ ಕಾರಣದಿಂದಲೇ ಒಂದೆಡೆ ಡಿ.ವಿ.ಜಿಯವರು ನನ್ನ ತಿಳುವಳಿಕೆಯಲ್ಲಿ 1881ರಿಂದ 1940ರ ಅವಧಿಯ ವರ್ಷಗಳು ಮೈಸೂರಿನ ಸುವರ್ಣ ಯುಗ ಎಂದಿರುವುದು.
 ಹಾಗೇಯೇ 1938ರ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಭರತ ಖಂಡದಲ್ಲಿಯೇ ಮೈಸೂರು ಮಾದರಿ ಸಂಸ್ಥಾನ ಎಂದು ದಾಖಲಿಸಿರುವುದು. ಹಾಗಿದ್ದರೆ ಇಷ್ಟೆಲ್ಲ ಸಾಧನೆಗೈದ ನಾಲ್ವಡಿಯವರಿಗೆ ಸಮಸ್ಯೆಗಳು ಕಾಡಲಿಲ್ಲವೇ? ಎನ್ನುವುದಾದರೆ ಉತ್ತರ ಹೌದು. ಬ್ರಾಹ್ಮಣೇತರರಿಗೆ ಶೇ. 75 ಮಿಸಲಾತಿ ಜಾರಿ ಮಾಡಿದ್ದರಿಂದ ಕುದ್ದು ಹೋದ ಪಟ್ಟಭದ್ರರು 1938 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಮಾಡಿ ಮಹಾರಾಜರ ವಿರುದ್ಧ ಪಿತೂರಿ ನಡೆಸುತ್ತವೆ ಮತ್ತು ಇಂತಹದೇ ಮತ್ತೊಂದು ಘಟನೆಯಲ್ಲಿ ವಿಧುರಾಶ್ವಥ್ಥ ಎಂಬಲ್ಲಿ ಧ್ವಜಾರೋಹಣ ನಡೆದು ಗೋಲಿಬಾರ್ ಮಾಡಲಾಗುತ್ತದೆ. ದುರಂತವೆಂದರೆ ಈ ಗೋಲಿಬಾರ್ಗೆ ಮಹಾರಾಜರು ಮತ್ತು ದಿವಾನರು ಕಾರಣ ಎಂದು ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ಮಹಾರಾಜರು ತೀವ್ರವಾಗಿ ಘಾಸಿಗೊಳಗಾಗುತ್ತಾರೆ. ಈ ಎಲ್ಲಾ ಗೊಂದಲಗಳ ನಡುವೆ ಅವರ ಬೆನ್ನೆಲುಬಂತಿದ್ದ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್ರವರು ಆಕಾಲಿಕ ಮರಣಕ್ಕೀಡಾಗುತ್ತಾರೆ. ಇದು ಮಹಾರಾಜರನ್ನು ಇನ್ನಷ್ಟು ಆಘಾತಕ್ಕೀಡುಮಾಡುತ್ತದೆ, ಇಂತಹ ಆಘಾತ ಒತ್ತಡಗಳು ಅಂತಿಮವಾಗಿ ಬಲಿತೆಗೆದುಕೊಳ್ಳುವುದು ಸ್ವತಃ ಮಹಾರಾಜರನ್ನೇ, ಜುಲೈ 31, 1940 ರಂದು ತೀವ್ರ ಹೃದಯಾಘಾತಕ್ಕೆ ಒಳಗಾದ ರಾಜಷರ್ಿ, ಪ್ರಜಾ ಚಿಂತಕ, ಸಾಮಾಜಿಕ ಪರಿವರ್ತನೆಯ ರೂವಾರಿ ನಾಲ್ವಡಿ ಕೃಷ್ಣ ರಾಜ ಒಡೆಯರ್ರ ಪವಿತ್ರ ಚೇತನವು ಆಗಸ್ಟ್ 03 1940 ರಂದು ಅವರ ದೇಹವನ್ನು ಬಿಟ್ಟು ಆಗಲುತ್ತದೆ, ತನ್ಮೂಲಕ ತನ್ನ ಲಕ್ಷಾಂತರ ದೇಶವಾಸಿಗಳನ್ನು ತಬ್ಬಲಿ ಮಾಡುತ್ತದೆ.
ಆಡಳಿತ ಪ್ರಭೃತಿಗಳಲ್ಲಿ ಭ್ರಷ್ಟಚಾರವೇ ಸದಾಚಾರವಾಗಿ, ಸಾಮಾಜಿಕ ಕಳಕಳಿ, ಜನ ಸೇವೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನಾಲ್ವಡಿಯವರಂತಹ ಮಾಹಾಚೇತನಗಳ ಅಗತ್ಯ ಈಗ ತುಂಬಾ ಇದೆ. ಇಂತಹ ಮಹಾಚೇತನ ಪ್ರತಿಯೊಬ್ಬರ ಎದೆಯಲ್ಲಿ ತುಂಬಲಿ. ಅವರ ಉಜ್ವಲ ಇತಿಹಾಸ ಪ್ರತಿಯೊಬ್ಬರ ಮನದಲ್ಲಿ ಅನುರಣಿಸಲಿ ಎಂಬುದಷ್ಟೇ ಸದ್ಯದ ಕಳಕಳಿ. ಕಡೆಯದಾಗಿ ಕವಿ ಹನಸೋಗೆ ಸೋಮಶೇಖರ್ರವರ ಕವನದ ಒಂದು ಸಾಲು ಮರೆಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ…..





Friday, 8 April 2011

Sexual harassment: Victim’s husband ‘warned’


Mysore, March 8, DHNS

Four persons in the guise of scribes have warned Dr Vijaykumar, husband of the research student who has made sexual harassment charges against her guide Prof Shivabasavaiah, of dire consequences, if he stuck to his charges made against the Vice-chancellor Prof V G Talawar that the latter ignored the complaint lodged by his wife.

Members of Federation of Dalit Students staging a protest in front of the Crawford Hall in Mysore on Tuesday. DH photo“I was at the hospital on Monday around 11.30 pm, when four people introduced themselves as journalists and took me out for a talk. They warned me of dire consequences if I continued pressing charges against the Vice Chancellor”, Vijaykumar told Deccan Herald.

Recalling their warnings, Vijaykumar said they wanted him to drop the charges against the VC, and they didn't really care what he did with Shivabasavaiah. However, Vijaykumar is yet to lodge a complaint in this regard at the jurisdictional Jayalakshmipuram Police Station.

“Since my wife still needs attention, I am unable to go to the station leaving her under someone’s care, or least of all, unsupervised”, Vijaykumar said.

Vijaykumar said that he has been orally summoned for probe on March 11 by Women Harassment Complaint Committee which investigates such charges, at the varsity. According to sources, Shivabasavaiah has also been summoned.

Protests
Close on the heels of various organisations staging protest demanding action against Prof Shivabasavaiah, HoD, Zoology Department, University of Mysore, on Monday, students under the banner of Federation of Dalit Students staged a protest in support of Vice-chancellor Prof V G Talawar and Shivabasavaiah here on Tuesday.

The protesters including boys and girls, who arrived in a rally at Crawford Hall, held placards in support of Talawar and Shivabasavaiah, and against Legislative Council’s Deputy Chairperson Vimalagowda and MLC Bharathi Shetty, and Prof Suresh Nayak a colleague of Shivabasavaiah for hatching the conspiracy.

Former mayor R Purushothama who had taken the lead said that Talawar and Shivabasavaiah were being targeted for no fault of theirs.

The state government could have waited for the report from the committee formed to probe such charges in the varsity, before taking action.

However, in contrast to this, a complaint has been lodged against them at Vijayanagar Police station here- with Shivabasavaiah being prime accused and VC the second, Purushothama said.

A few of the girl students among them spoke in favour of Shivabasavaiah.  They later proceeded towards the office of Deputy Commissioner and submitted a memorandum to Deputy Commissioner Harsh Gupta.

Much before the Lakshmipuram Police who had thrown a blanket of security around the Crawford Hall could heave a sigh of relief, BJP activists under the banner of BJP Yuva Morcha staged a protest against the federation. State BJP Yuva Morcha Vice-president Devanur Prathap, Bogadi Chandru were prominent among those  in the lead

html