Pages

Showing posts with label ಬುದ್ಧ. Show all posts
Showing posts with label ಬುದ್ಧ. Show all posts

Monday, 12 December 2011

Spotlight on Buddha's message at Dalit convention



Staff Correspondent




MAKING A RESOLVE: A Dalit convention on equality was organised at the Maharaja's College Grounds in Mysore on Sunday. — PHOTO: M A SRIRAM

MYSORE: A large number of Dalits participated in a convention on equality in Mysore on Sunday and resolved to spread the message of Buddha.
At the convention titled "Buddhanedege Marali Manege," leaders and youth of the Dalit community from across the State adopted a resolution to take up a door-to-door campaign on spreading the principles of Buddha.
Karnataka Pradesh Congress Committee President M. Mallikarjun Kharge; the former Union Minister V. Srinivas Prasad, the former Ministers G. Parameshwar and H.C. Mahadevappa, and writer Devanur Mahadev were among those present on the occasion.
Tableau
A tableau flagged off from Bangalore, carrying the portrait of Buddha in meditation, arrived at the venue before the convention began. It was kept on the stage.
The convention was organised by the Dr. B.R. Ambedkar Research and Extension Centre of Mysore University and the Dr. B.R. Ambedkar Dhamma Deekshe Golden Jubilee Committee. It provided a platform for holding deliberations on Buddha and B.R. Ambedkar. It was organised to mark the 50 years of Dr. Ambedkar embracing Buddhism as a mark of protest against casteism.
The gathering adopted a resolution to condemn the social boycott, caste atrocities and exploitation of Dalits. Although 60 years had passed since India attained freedom , social evils had not been eliminated, it was observed.

Sunday, 30 October 2011

ಬೌದ್ಧ

ಬೌದ್ಧ ಧರ್ಮ

ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ
ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ
ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ
ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ
ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ
ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು
ಬುದ್ಧನ ತಾಯಿಯ ಹೆಸರು - - ಮಾಯಾದೇವಿ
ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ
ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ
ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ
ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ
ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ
ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ
ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ
ಬುದ್ದನ ಪತ್ನಿಯ ಹೆಸರು - ಯಶೋಧರಾ
ಬುದ್ಧನ ಮುಗುವಿನ ಹೆಸರು - ರಾಹುಲ
ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ
ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ
ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ
ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ
ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ
ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

ಬುದ್ದನ ತತ್ವಗಳು
ನಾಲ್ಕು ಮೂಲ ತತ್ವಗಳು
ನಾಲ್ಕು ಮಹಾನ್ ಸತ್ಯಗಳು
ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು
ಅಹಿಂಸೆ
ಸತ್ಯ ನುಡಿಯುವಿಕೆ
ಕಳ್ಳತನ ಮಾಡದಿರುವುದು
ಪಾವಿತ್ರತೆ
ನಾಲ್ಕು ಮಹಾನ್ ಸತ್ಯಗಳು

ದುಃಖ
ದುಃಖಕ್ಕೆ ಕಾರಣ
ದುಃಖದ ನಿವಾರಣಿ
ದುಃಖದ ನಿವಾರಣಿಗೆ ಮಾರ್ಗ

ಅಷ್ಟಾಂಗ ಮಾರ್ಗ

ಒಳ್ಳೆಯ ನಂಬಿಕೆ
ಒಳ್ಳೆಯ ಆಲೋಚನೆ
ಒಳ್ಳೆಯ ಮಾತು
ಉತ್ತಮ ನಡತೆ
ಉತ್ತಮ ಜೀವನ
ಒಳ್ಳೆಯ ಪ್ರಯತ್ನ
ಉತ್ತಮ ವಿಚಾರಗಳ ನೆನಪು
ಯೋಗ್ಯ ರೀತಿಯ ಧ್ಯಾನ

ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ಧ
ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ
ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ
ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ
ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

ಬೌದ್ಧ ಧರ್ಮದ ಪ್ರಸಾರ


ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ
ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು
ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು
ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು
ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

ಬೌದ್ಧ ಧರ್ಮದ ಅವನತಿಗೆ ಕಾರಣ
ಹೀನಾಯಾನ ಮಹಾಯಾನ ಪಂಗಡಗಳ ಉಗಮ
ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು
ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು
ಭಿಕ್ಷುಗಳ ಅಶ್ಲೀಲ ನಡತೆ
ಗುಪ್ತ ಸಾಮ್ರಾಜ್ಯದ ಉಗಮ
ಶಂಕರಾಚಾರ್ಯರ ವಾಸ
ಮುಸಲ್ಮಾನರ ದಾಳಿ


ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ
ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ಧ
ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ
ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ
ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ
ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು
ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು
ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು
ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ
ತಥಾಗತ ಎಂದರೆ - ಸತ್ಯವನ್ನು ಕಂಡವನು
ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80
ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ
ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ
ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ
ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ
ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ
ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ
ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳು
ಜಾತಕ ಕಥೆ ಕೃತಿಯ ಕರ್ತೃ - ಆರ್ಯ ಮಿತ್ರ
ಬೌದ್ಧ ಧರ್ಮದ ಹಿರಿಮೆಯನ್ನು ಕುರಿತು ಇರುವ ಗ್ರಂಥ A History of Indian civilization
A History of Indian civilization ಕೃತಿಯ ಕರ್ತೃ - ರಾಧಕುಮುಧ್ ಮುಖರ್ಜಿ
Encint India - ಕೃತಿಯ ಕರ್ತೃ - ವಿ.ಸಿ.ಪಾಂಡೆ
ಬುದ್ಧನ ಮೂರು ಆದರ್ಶಗಳು - ಬುದ್ಧಂ ಶರಣಂ ಗಚ್ಚಾಮಿ ,ಧರ್ಮ ಶರಣಂ ಗಚ್ಚಾಮಿ , ಸಂಘಂ , ಗಚ್ಚಾಮಿ
ಬೌದ್ಧ ಧರ್ಮದ ಪ್ರಚಾರದಲ್ಲಿ ಅಗ್ರಗಣ್ಯನಾದ ಅರಸ - ಅಶೋಕ
ಅಶೋಕನ ಮಕ್ಕಳ ಹೆಸರು - ಮಹೇಂದ್ರ ಮತ್ತು ಸಂಘಮಿತ್ರೆ
ಮಹೇಂದ್ರ ಮತ್ತು ಸಂಘಮಿತ್ರೆ ಬೌದ್ಧ ಧರ್ಮ ಪ್ರಚಾರ ಮಾಡಿದ ಸ್ಥಳ - ಬರ್ಮಾ ಮತ್ತು ಶ್ರೀಲಂಕಾ
ಬೌದ್ಧ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಲಯ - ನಲಂದಾ ವಿಶ್ವವಿದ್ಯಾಲಯ
Light of Asia ಅಥವಾ ಏಷ್ಯಾದ ಬೆಳಕು ಎಂದು ಕರೆದವರು - ಸರ್ ಎಡ್ವಿನ್ ಅರ್ನಾಡ್
Edvine Arnald ರವರು - ಜೆಕೋ ಬುಕ್ತ ಕೃತಿಯಲ್ಲಿ ಬುದ್ಧನನ್ನ The Light of Asia ಎಂದು ಕರೆದಿದ್ದಾರೆ
ಹೀನಾಯಾನಿಗಳೆಂದರೆ - ಬುದ್ಧನ ಮೂಲ ತತ್ವದಲ್ಲಿ ನಂಬಿಕೆಯುಳ್ಳವರು
ಮಹಾಯಾನಿಗಳೆಂದರೇ - ಬುದ್ಧನನ್ನು ವಿಗ್ರಹ ರೂಪದಲ್ಲಿ ಆರಂಭಿಸಿದವರು
ಬುದ್ಧನ ಪಾದಗಳ ಗುರುತು ಅಥವಾ ಖಾಲಿ ಪೀಠಕ್ಕೆ ಪೂಜೆ ಸಲ್ಲಿಸುತ್ತಿದ್ದವರು - ಹೀನಾಯಾನ ಪಂಥದವರು
ಹೀನಾಯಾನಿಗಳು ಈ ರಾಜನ ಕಾಲದಲ್ಲಿ ಖ್ಯಾತಿ ಹೊಂದಿದ್ದರು - ಅಶೋಕ
ಬುದ್ಧನನ್ನು ದೇವರೆಂದು ಪರಿಗಣಿಸಿದವರು - ಮಹಾಯಾನಿಗಳು
ಮಹಾಯಾನ ಪಂಥ ಹೆಚ್ಚು ಪ್ರಚಲಿತದಲ್ಲಿದ್ದವು - ಕಾನಿಷ್ಕನ ಕಾಲದಲ್ಲಿ
ಬುದ್ದಗಯಾ ಹಾಗೂ ಬರಾಬರ್ ಗುಹಾಲಯ ಈ ರಾಜ್ಯದಲ್ಲಿದೆ - ಬಿಹಾರ
ಸಾಂಚಿಯ ಸ್ಥೂಪ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ
ಅಜಂತಾ ದೇವಾಲಯ ಈ ಪ್ರದೇಶದಲ್ಲಿದೆ - ಮಹಾರಾಷ್ಠ್ರ
ನಾಗರ್ಜುನಕೊಂಡ ಈ ಪ್ರದೇಶದಲ್ಲಿದೆ - ಆಂದ್ರಪ್ರದೇಶ
ವಿಶ್ವದಲ್ಲಿಯೆ ಅತಿ ದೊಡ್ಡದಾದ ಬೋರೋಬುದೂರ್ ಅಥವಾ ಬೃಹತ್ ಬುದ್ಧ ದೇವಾಲಯ ಇರುವ ಪ್ರದೇಶ ಇಂಡೋನೆಷ್ಯಾದ ಜಾವ ದ್ವೀಪದಲ್ಲಿ
1950 ಡಿಸೆಂಬರ್ ನಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆದ ಪ್ರದೇಶ - ಸಿಂಹಳ
ಡಾ//.ಬಿ.ಆರ್.ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ೀಕರಿಸಿದ ಪ್ರೇರಣಿಯಾದ ಸಮ್ಮೇಳನ - ಸಿಂಹಳದಲ್ಲಿ 1950 ರಲ್ಲಿ ನಡೆದ ಬೌದ್ಧ ಸಮ್ಮೇಳನ
ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು - 14/10/1956 ನಾಗಪುರದಲ್ಲಿ
ಅಂಬೇಡ್ಕರ್ ರವರು - ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಧರ್ಭದಲ್ಲಿದ್ದ ಬೌದ್ಧ ಭಿಕ್ಷು - ಕುಶೀನಗರದ ಚಂದ್ರಮಣಿ
ಕ್ರಿ..ಶ. 2000 ದಲ್ಲಿ ತಾಲಿಬಾನ್ ಉಗ್ರರಿಂದ ನಾಶಗೊಂಡ ಬುದ್ಧನ ಶಿಲಾಕೃತಿ - ಅಫ್ಘಾನಿಸ್ಥಾನದ ಬೊಹೆಮಿಯಾನ್ ಪ್ರಾಂತ್ಯದ ಶಿಲಾಕೃತಿ

ಬೌದ್ಧ ಧರ್ಮದ ಪ್ರಮುಖ ಗ್ರಂಥಗಳು
ಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567
ರಾಹುಲ ಪದದ ಅರ್ಥ - ತೊಡಕು
ಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು ಈ ಹೆಸರಿನಿಂದ ಕರೆಯುವರು - ಜ್ಞಾನೋದಯ
ಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ - ಮಹಾಯಾನ
ಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರು
ನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆ
ಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 48 ರಲ್ಲಿ
ಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾ
ದಲೈಲಾಮ ಈ ಪ್ರದೇಶದವರು - ಟಿಬೆಟ್
ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕು
ಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ - ಮೂರನೇಯದು
ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ
ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹ
ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ
ಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು ಈ ಹೆಸರಿನಿಂದ ಕರೆಯುವರು - ಸ್ಥವಿರರು
ಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದು
ಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸು
ಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕ
ಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕ
ಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕ
ಪಿಟಕ ಪದದ ಅರ್ಥ - ಪೆಟ್ಟಿಗೆ ಅಥವಾ ಬುಟ್ಟಿ ಎಂದರ್ಥ
ಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನು
ಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿ
ಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದ
ಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನ
ಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿ
ಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು ಈ ಹೆಸರಿನಿಂದ ಕರೆಯುವರು
ಬುದ್ಧನ ಮೊದಲ ಶಿಷ್ಯನ ಹೆಸರು - ಆನಂದ
ಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರು
ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಈ ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆ
ಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್
4 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿ
ಕುಂಡಲ ವನ ಈ ರಾಜ್ಯದಲ್ಲಿದೆ - ಕಾಶ್ಮೀರ
4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ವಸುಮಿತ್ರ
5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ
5 ನೇ ಬೌದ್ಧ ಸಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.ಶ. 643
5 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್
ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನ
ಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪ
ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್
ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿ
ಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮ
ನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದು
ಕಪಿಲ ವಸ್ತು ಈ ಪ್ರದೇಶದಲ್ಲಿದೆ - ನೇಪಾಳ
ಬುದ್ಧನು ಮೋಕ್ಷ ಹೊಂದಿದ ದಿನವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣ
ಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳು
ಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯ
ಬೌದ್ಧ ಗುರು ದಲೈಲಾಮ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ.ಶ . 1959 ರಲ್ಲಿ
ಬುದ್ದನ ಸ್ವಾಮಿ ನಿಷ್ಠ ಸೇವಕ - ಚನ್ನ
ಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರ
ಜೈನ ದೇವಾಲಯಗಳನ್ನು ಈ ಹೆಸರಿನಿಂದ ಕರೆಯುವರು - ಬಸದಿ
ಕೇವಲಿ ಎಂದರೆ - ಜ್ಞಾನಿ ಎಂದರ್ಥ
ಬುದ್ಧನ ಸ್ಮಾರಕಗಳಿರುವ ಪ್ರದೇಶ - ಸಾರಾನಾಥ
ಗೌತಮ ಬುದ್ಧ - 80 ವರ್ಷ ಧರ್ಮ ಪ್ರಚಾರ ಮಾಡಿದ
ಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್
ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷ
ಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲ
ಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್
ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶ
ಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆ
ಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿ
ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ.ಶ.1 ನೇ ದಶಕ
ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲ
ಬುದ್ದನು ಈ ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರು
ಪಾಟಲಿಪುತ್ರ ನಗರದ ನಿರ್ಮಾತೃ - ಅಜಾತಶತೃ
ಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧ
ಗೊತಮ ಬುದ್ಧನು ವೈಶಾಲಿಯಲ್ಲಿ ಈ ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮ
ಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿ
ಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿ

ಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತ
ಜನನ - ಕಮಲ ಮತ್ತು ವೃಷಭ
ಜ್ಞಾನ ಪ್ರಾಪ್ತಿ - ಕುದುರೆ
ನಿರ್ವಾಣ - ಬೋಧಿವಕ್ಷ
ಪ್ರಥಮ ಧರ್ಮೋಪದೇಶ - ಧರ್ಮಚಕ್ರ
ಪರಿನಿರ್ವಾಣ - ಸ್ಥೂಪ

Wednesday, 18 May 2011

‘ಹೊಲಸು’: ಆಹಾರ ಪ್ರಮಾಣ


‘ಹೊಲಸು’: ಆಹಾರ ಪ್ರಮಾಣ ;ಭಾಗ-1- ಡಾ. ರಹಮತ್ ತರೀಕೆರೆ

ಯಾವ ಸಾಮಾಜಿಕ ಆವರಣದೊಳಗೆ ನಾವು ಬದುಕುತ್ತಿದ್ದೇವೆಯೋ ಅದರ ತಳಬುಡವನ್ನು ಅರಿತುಕೊಳ್ಳುವುದು ಸಂಸ್ಕೃತಿ ಚರ್ಚೆಯಲ್ಲಿ ಅಗತ್ಯ ವಾಗಿದೆ. ಯಾವ ನೆಲದಲ್ಲಿ ಜಲವುಣಿಸುವ ಧಾರೆ ಗಳಿಗಾಗಿ ನೆರಳನೀವ ತರುಗಳಿಗಾಗಿ ಅಮರ್ದಿನ ಬಳ್ಳಿಗಾಗಿ ತಡಕಾಡುತ್ತಿದ್ದೇವೆಯೋ, ಆ ನೆಲದ ಮೇಲೆ ಬೆಳೆದ ಕಳೆಕಸಗಳ ಪರಿವೆ ಇರಬೇಕಷ್ಟೇ. ‘ಪ್ರಮಾಣ’ವೆಂದರೆ, ನಮ್ಮ ಸಮಾಜದ ವಿವಿಧ ಸ್ತರಗಳಲ್ಲಿ ಆಳುವ ಸಂಸ್ಕೃತಿಯ ಆಲೋಚನಾ ಕ್ರಮಕ್ಕೆ ತಕ್ಕನಾಗಿ ರೂಪುಗೊಂಡು ನೆಲೆಸಿರುವ ನಂಬಿಕೆ ಆಚರಣೆಗಳು; ಮನುಷ್ಯರಿಂದ ಹಿಡಿದು ಪಶುಪಕ್ಷಿ ಗಿಡಮರ ದಿಕ್ಕುಗಳು ಬಣ್ಣಗಳು ಉಣ್ಣು ವುದು ಉಡುವುದು ಆಡುವ ಮಾತು ಮಾಡುವ ಕಸುಬುಗಳಾದಿಯಾಗಿ, ಜೀವನವನ್ನೆಲ್ಲಾ ವ್ಯಾಪಿಸಿ ಕೊಂಡಿರುವ ಶ್ರೇಣೀಕರಣಗಳು; ಈ ಪ್ರಮಾಣೀ ಕರಣಗಳು ನಮ್ಮ ದೈನಿಕ ಬದುಕಿನಲ್ಲಿ ಸಹಜವಾಗಿ ಸೇರಿಹೋಗಿವೆ.

ಎಷ್ಟೆಂದರೆ, ಎದುರಲ್ಲಿ ಗೋಚರಿ ಸುತ್ತಿದ್ದರೂ, ನಮ್ಮ ಭಾಷೆ ಸಾಹಿತ್ಯಕೃತಿ ದೈನಿಕ ವರ್ತನೆಗಳು ಅವನ್ನು ಮತ್ತೆಮತ್ತೆ ಪ್ರಕಟಿಸುತ್ತಿ ದ್ದರೂ, ತಟ್ಟನೆ ಅವು ಅರಿವಿಗೆ ಬರುವುದೇ ಇಲ್ಲ. ಬಂದರೂ ತಲೆ ಕೆಡಿಸುವುದಿಲ್ಲ. ಈ ಪ್ರಮಾಣೀ ಕರಣದ ಜಗತ್ತನ್ನು ಅರಿಯುವುದೆಂದರೆ, ಇಂಡಿ ಯಾದ ಬೇರೆಬೇರೆ ಸಮುದಾಯ ಗಳು ಅದನ್ನು ಎಲ್ಲಿ ಉಲ್ಲಂಘಿಸಿವೆ, ದಾಟ ಲಾಗದೆ ಬಳಲಿವೆ ಅಥವಾ ಜಗಳಕ್ಕೆ ಹೋಗದೆ ಬದಲಿ ನಿರ್ಮಿಸಿಕೊಂಡಿವೆ ಎಂಬುದರ ಶೋಧ ಕೂಡಾ. ಪ್ರತಿಸಂಸ್ಕೃತಿ ನಿರ್ಮಾಣದ ಚರ್ಚೆಗೆ ಹಿನ್ನೆಲೆ ಒದಗಿಸಿ ಕೊಳ್ಳುವುದಕ್ಕಾಗಿ, ಪ್ರಮಾಣಗಳ ‘ಚರಿತ್ರೆ’ ಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಈ ಪ್ರಮಾಣಗಳಲ್ಲಿ ಆಹಾರ ಪ್ರಮಾಣವು ಮುಖ್ಯವಾದುದು.

ಬಹುಸಂಸ್ಕೃತಿಗಳ ಈ ದೇಶದೊಳಗೆ ನಡೆದ, ಈಗಲೂ ನಡೆಯುತ್ತಿರುವ ದೊಡ್ಡ ದೌರ್ಜನ್ಯವೆಂದರೆ, ಸಂಸ್ಕೃತಿನಿಷ್ಠವೂ ಖಾಸ ಗಿಯೂ ಆದ ಉಣ್ಣುವ ವಸ್ತುಗಳನ್ನು, ಕನಿಷ್ಠ ವೆಂದು ಶ್ರೇಷ್ಠವೆಂದು ವಿಂಗಡಿಸಿ ಪ್ರಮಾಣೀ ಕರಿಸಿರುವುದು. ಈ ಬಗೆಯ ಪ್ರಮಾಣೀಕರ ಣಗಳು ಹೆಚ್ಚಾಗಿ ರಾಜಕೀಯ ಅಧಿಕಾರ ಪಡೆದ ಸಂಸ್ಕೃತಿಯ ಕೇಂದ್ರದಿಂದ ಸೃಷ್ಟಿಯಾ ಗಿರುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಪಡೆಯ ಬಯಸುವ ಉಳಿದ ಸಮುದಾಯಗಳು ‘ಉಚ್ಚಸಂಸ್ಕೃತಿ’ಯ ಈ ಮಾದರಿಗಳನ್ನು ಆದರ್ಶ ವೆಂದು ಒಪ್ಪಿಕೊಳ್ಳುತ್ತವೆ. ಎಷ್ಟೋ ಸಮುದಾಯ ಗಳು ಚರಿತ್ರೆಯಲ್ಲಿ ಮಾಂಸಾಹಾರವನ್ನು ಬಿಟ್ಟು ಶ್ರೇಷ್ಠಗೊಳಿಸಲು ಯತ್ನಿಸಿದ್ದು ಹೀಗೆ. ಚಮ್ಮಾರರಾದ ಛತ್ತೀಸಗಢದ ಸತ್ನಾಮಿಗಳು, ಗುರುಘಾಸೀದಾಸನ ಪ್ರಭಾವದಿಂದ ಭಕ್ತರಾಗಿ ಜನಿವಾರ ಧರಿಸಿದರು. ಮಾಂಸಾಹಾರ ತ್ಯಜಿಸಿದರು.

ಮಾತ್ರವಲ್ಲ, ಕೆಂಪು ತರಕಾರಿ ಕೂಡ ತಿನ್ನುವುದನ್ನು ನಿಲ್ಲಿಸಿಬಿಟ್ಟರು. ಒಂದನ್ನು ಪಡೆಯಲು ಮತ್ತೊಂದರ ತ್ಯಾಗ. ಸಾಮಾಜಿಕ ಸ್ಥಾನಮಾನಕ್ಕಾಗಿ ಸಂಸ್ಕೃತೀಕರಣಗೊಳ್ಳಬೇಕೆಂಬ ಆಸೆ ಹಾಗೂ ತಮ್ಮ ಪ್ರೀತಿಯ ಆಹಾರಕ್ರಮಗಳನ್ನು ಕೈಬಿಡಲಾಗದ ಅಸಹಾಯಕತೆ. ಈ ತೊಳಲಾಟದಲ್ಲಿ ಅತ್ತಲೂ ಇತ್ತಲೂ ಇರಬಯಸುವ ಆದರೆ ವಾಸ್ತವದಲ್ಲಿ ಇರಲಾಗದ ದ್ವಂದ್ವಗಳಲ್ಲಿ ಉಳಿದುಬಿಡುವ ಸಮು ದಾಯಗಳೇ ಹೆಚ್ಚು. ಸದ್ಯಕ್ಕೆ ಇವು ಕೆಲವು ‘ಶುಭ’ ಕಾರ್ಯಗಳಲ್ಲಿ ಮಾತ್ರ ‘ಉಚ್ಚ’ ಸಂಸ್ಕೃತಿಯನ್ನು ಅನುಸರಿಸುವ ಮಟ್ಟಕ್ಕೆ ರಾಜಿಯಾಗಿವೆ. ಮುಖ್ಯವಾಗಿ ಇದು ಇಂಡಿಯಾದ ನಡುಹಂತದ ಶೂದ್ರ ಜಾತಿ ಸಮುದಾಯಗಳ ಪಾಡು.

ಆದರೆ ಸಂಸ್ಕೃತೀಕರಣದ ಯಾವ ಆಮಿಷಕ್ಕೂ ಮನಗೊಡದೆ ತಂತಮ್ಮ ಆಹಾರ ಕ್ರಮಗಳನ್ನು ಆತ್ಮವಿಶ್ವಾಸದಿಂದ ದಿಟ್ಟವಾಗಿ ಮುಂದುವರಿಸಿಕೊಂಡು ಬಂದವೆಂದರೆ, ತೀರ ಕೆಳಸ್ತರದ ಸಮುದಾಯಗಳು. ಅವಕ್ಕೆ ಮೇಲ್ಚ ಲನೆಯ ಸಾಧ್ಯತೆಗಳು ಕಡಿಮೆಯಿದ್ದುದರಿಂದಲೂ ಹೀಗಾಗಿರಬಹುದು. ಆದರೂ ತಮ್ಮ ಪಾರಂಪರಿಕ ಆಹಾರ ಪದ್ಧತಿಯನ್ನು ಬಿಟ್ಟುಕೊಡದ ಹಠವನ್ನು ಪ್ರತಿಸಂಸ್ಕೃತಿಯ ಜಿಗುಟುತನ ಎಂದು ಕರೆಯ ಬಹುದು.ಈ ಬಗೆಯ ಮೇಲ್ಚನೆಗಳಲ್ಲಿರುವ ವ್ಯಂಗ್ಯ ವೆಂದರೆ, ಯಾವ ಸಂಸ್ಕೃತಿಯು ಉಳಿದವಕ್ಕೆ ಮಾದ ರಿಯಾಗಿದೆಯೋ ಅದು, ಚರಿತ್ರೆಯ ಒಂದು ಘಟ್ಟದಲ್ಲಿ ಸ್ವತಃ ಇನ್ನೊಂದನ್ನು ಅನುಕರಿಸಿ ರುವುದು. ಅಂದರೆ ಪ್ರಮಾಣೀಕರಣಗಳನ್ನು ನಿರ್ಧ ರಿಸುವ ಅಧಿಕಾರ ಸ್ಥಾನದಲ್ಲಿರುವ ಬ್ರಾಹ್ಮಣರು, ಒಂದು ಕಾಲಕ್ಕೆ ಮಾಂಸಾಹಾರಿಗಳಾಗಿದ್ದವರು; ತಮ್ಮ ಯಜ್ಞ ಮತ್ತು ಶ್ರಾದ್ಧಗಳಲ್ಲಿ ಪ್ರಾಣಿಬಲಿ ಮಾಂಸದಡಿಗೆಗಳನ್ನು ಪವಿತ್ರ ಆಚರಣೆಗಳಾಗಿ ಹೊಂದಿದ್ದವರು.

ಈ ಸಂಗತಿಯನ್ನು ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಎಂತಲೆ ಚಾರ್ವಾಕರು ವಚನಕಾರರು ಬ್ರಹ್ಮಶಿವ ಮೊದಲಾದವರು ಬ್ರಾಹ್ಮಣರ ಟೀಕೆ ಮಾಡುವಾಗ, ಮೇಲಿನ ಚಾರಿತ್ರಿಕ ತಥ್ಯವನ್ನು ಒಂದು ಪ್ರಬಲ ಅಸ್ತ್ರ ಮಾಡಿಕೊಳ್ಳುತ್ತಾರೆ.ಮಾಂಸಾಹಾರದ ನಿರಾಕರಣೆ ಮತ್ತು ಒಪ್ಪು ವಿಕೆಯು ಭಾರತದ ಸಂಸ್ಕೃತಿಗಳಲ್ಲಿ ನಿರ್ಮಿಸಿರುವ ಆಕರ್ಷಣೆ ವಿಕರ್ಷಣೆಯ ದ್ವಂದ್ವಗಳು ವಿಚಿತ್ರ ವಾಗಿವೆ. ಸಮುದಾಯಗಳ ನಂಬಿಕೆ ಆಚರಣೆ ಮಿತ್‌ಗಳಲ್ಲಿ ಈ ದ್ವಂದ್ವವನ್ನು ಗುರುತಿಸಬಹುದು. ಇವನ್ನು ಮೂರು ನೆಲೆಗಳಲ್ಲಿ ವಿವರಿಸಬಹುದು.

ಅ. ‘ಗೋಮಾಂಸ’ ಸ್ವೀಕರಿಸುವ ಜನರ ಸಂಸ್ಕೃತಿಗಳು

ಆ. ದನವಲ್ಲದೆ ಇತರ ಪ್ರಾಣಿಗಳ ಮಾಂಸ ತಿನ್ನುವ ಜನರ ಸಂಸ್ಕೃತಿಗಳು ಇ. ಇಲಿ, ಉಡ, ಹಾವು, ಇರುವೆ ಇತ್ಯಾದಿಗಳನ್ನು ತಿನ್ನುವ ಜನರ ಸಂಸ್ಕೃತಿಗಳು.

ಇ. ‘ಗೋಮಾಂಸ’ದ ರಾಜಕಾರಣ: ವಲಸೆ ಗಾರರಾಗಿ ಬಂದ ಆರ್ಯರಿಗೆ ಹಸು ಸಂಪತ್ತೂ ಹೌದು, ಆಹಾರವೂ ಹೌದು. ಗೋವು ಪವಿತ್ರವಾಗಿತ್ತು ಎಂಬ ಕಾರಣಕ್ಕಾಗಿಯೇ ಅದರ ಮಾಂಸಸೇವನೆ ಪವಿತ್ರೀಕರಿಸುವ ಆಚರಣೆಗಳಲ್ಲಿ ಒಂದಾಗಿತ್ತು ಎಂದು ವೈದಿಕ ಧರ್ಮಶಾಸ್ತ್ರದ ದೊಡ್ಡವಿದ್ವಾಂಸ ಪಿ.ವಿ.ಕಾಣೆ ಹೇಳುತ್ತಾರೆ.

ವೇದಗಳಲ್ಲಿ ಬರುವ ‘ಗೋಘ್ನ’ (ಹಸು ತಿನ್ನುವವನು) ಎಂಬ ಶಬ್ದವು ಅತಿಥಿಗೆ ಪರ್ಯಾಯ ಹೆಸರು. ಯಾಕೆಂದರೆ ಆರ್ಯರು ಗೌರವಾನ್ವಿತ ಅತಿಥಿಗೆ ಕೊಡುತ್ತಿದ್ದ ‘ಮಧುಪರ್ಕ’ ದಲ್ಲಿ ದನದಮಾಂಸ ಇರಲೇಬೇಕಿತ್ತು. ಅಜಯಾಗ ದಲ್ಲಿ ಆಡಿನ, ಅಶ್ವಮೇಧಯಾಗದಲ್ಲಿ ಕುದುರೆಯ ವಿಭಿನ್ನ ಅಂಗಗಳನ್ನು ಹಂಚುವ ಮತ್ತು ಅಡುವ ವಿವರಣೆ ವೇದಗಳಲ್ಲಿದೆ. ಯಾವ ದೇವತೆಗಳಿಗೆ ಯಾವ ಬಣ್ಣದ ಹಸುವನ್ನು ಬಲಿಕೊಡಬೇಕೆಂಬ ವಿವರಣೆಗಳಿವೆ; ಮಹಾಭಾರತದಲ್ಲಿ (ಅರಣ್ಯ ಪರ್ವ: 207 - 209) ವದಂತಿರಾಜನ ಅಡುಗೆ ಮನೆಯಲ್ಲಿ ಪ್ರತಿದಿನ ಎರಡುಸಾವಿರ ದನಗಳ ಮಾಂಸವನ್ನು ಅಡುತ್ತಿದ್ದ ಬಗ್ಗೆ ಉಲ್ಲೇಖವಿದೆ. ಅಂಬೇಡ್ಕರ್ ತಮ್ಮ ‘ಅಸ್ಪಶ್ಯರು’ ಕೃತಿಯಲ್ಲಿ ಇಂತಹ ಅನೇಕ ಉಲ್ಲೇಖಗಳನ್ನು ವೈದಿಕ ವಾಙ್ಮಯದಿಂದ ಆಯ್ದು ಕೊಡುತ್ತಾರೆ.

ವೈದಿಕರು ತಮ್ಮ ಧಾರ್ಮಿಕ ಆಚರಣೆಗಳಲ್ಲಿ ನಡೆಸುತ್ತಿದ್ದ ಈ ಅವ್ಯಾಹತ ಪಶುವಧೆಗೆ ಪ್ರತಿ ರೋಧ ಒಡ್ಡಿದವನು ಬುದ್ಧ. ರೈತಾಪಿ ಸಮಾಜ ದಲ್ಲಿ ಈ ರೀತಿಯ ಪಶುವಧೆ ದುಷ್ಪರಿಣಾಮ ಬೀರುತ್ತದೆಂದು ಅವನು ಮಂಡಿಸಿದ ‘ಅಹಿಂಸೆ’ ಯ ತತ್ವವು, ಕೃಷಿಕ ಪಶುಪಾಲಕ ಜನಕ್ಕೆ ಪ್ರಿಯ ವಾಯಿತು. ಅವರು ಬೌದ್ಧಧರ್ಮ ಸೇರಿ ಅದನ್ನು ಜನಪ್ರಿಯಗೊಳಿಸಿದರು. ಎಂತಲೇ ಬೌದ್ಧ ಸಾಹಿ ತ್ಯಗಳಲ್ಲಿ ವೈದಿಕರ ‘ಹಿಂಸೆ’ಯ ಬಗ್ಗೆ ಬಲವಾದ ಟೀಕೆಗಳಿವೆ. ಯಾವಾಗ ಸಮುದಾಯಗಳನ್ನು ತನ್ನತ್ತ ಹೀಗೆ ಸೆಳೆದುಕೊಂಡು ಬೌದ್ಧಧರ್ಮವು ಒಂದು ಪ್ರತಿಶಕ್ತಿಯಾಗಿ ಬೆಳೆಯತೊಡಗಿತೋ, ಆಗ ವೈಗದಿಕರು ತಮ್ಮ ಜೀವನಕ್ರಮದ ಸ್ವವಿಮ ರ್ಶೆಗೂ ಸೂಕ್ತ ಮಾರ್ಪಾಟಿಗೂ ತೊಡಗಲೇ ಬೇಕಾಯಿತು.

ಅಂಬೇಡ್ಕರ್ ಪ್ರಕಾರ, ಬ್ರಾಹ್ಮಣರು ತಮ್ಮ ಜೀವನಕ್ರಮದಲ್ಲಿ ಎರಡು ಕ್ರಾಂತಿಕಾರಕ ಮಾರ್ಪಾಟನ್ನು ತಂದುಕೊಂಡರು. ಒಂದು: ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿದ್ದು. ಎರಡು: ಇನ್ನೂ ಕೊಂಚ ಮುಂದುವರಿದು ಎಲ್ಲ ಬಗೆಯ ಮಾಂಸಾಹಾರವನ್ನು ಕೈ ಬಿಟ್ಟಿದ್ದು. ‘ನನ್ನ ದೃಷ್ಟಿಯಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಗೋವನ್ನು ಪೂಜಿಸಲು ಆರಂಭಿಸಿದ್ದು ದೊಡ್ಡ ರಾಜ ತಂತ್ರ’ ಎನ್ನುವ ಅಂಬೇಡ್ಕರ್, ಬೌದ್ಧರ ಮತ್ತು ತಮ್ಮ ಧರ್ಮಗಳೊಳಗಣ ಸ್ಪರ್ಧೆ ಯಲ್ಲಿ ಬ್ರಾಹ್ಮಣರು, ತಾವು ಬೌದ್ಧರಿಗಿಂತ ಶ್ರೇಷ್ಠವೆಂದು ರುಜುವಾತು ಪಡಿಸುವ ಹಠದಲ್ಲಿ ಈ ಬದಲಾವಣೆಯನ್ನು ಪಡೆದರೆಂದು ವಿವರಿಸುತ್ತಾರೆ.

ವಿಸ್ಮಯವೆಂದರೆ, ಚರಿತ್ರೆಯಲ್ಲಾದ ಈ ಪಲ್ಲಟವನ್ನು ಈಗ ಗೋಪೂಜೆ ಹಾಗೂ ಸಸ್ಯಾಹಾರಗಳ ವಕ್ತಾರನಂತಿರುವ ಬ್ರಾಹ್ಮಣ ಸಂಸ್ಕೃತಿಯು ಮರೆತುಬಿಟ್ಟಿರುವುದು: ಬದ ಲಿಗೆ ಇಂಡಿಯಾದ ಅನೇಕ ಮಾಂಸಾ ಹಾರಿ ಸಂಸ್ಕೃತಿಗಳನ್ನು ಹೀನಾಯವಾಗಿ ನೋಡುವಂತಹ ದೃಷ್ಟಿಕೋನ ಬೆಳೆಯಲು ಕಾರಣವಾಗಿರುವುದು. ಗಳಗನಾಥರ ‘ಮಾಧವ ಕರುಣಾವಿಲಾಸ’ ಕಾದಂಬರಿ ಯಲ್ಲಿ ವಿದ್ಯಾರಣ್ಯನು ಅಸ್ಪಶ್ಯತೆಯನ್ನು ಕುರಿತು ಹೇಳುವುದನ್ನು ಗಮನಿಸಬೇಕು: ‘‘ಗೋಮಾಂಸಾದಿ ನಿಷಿದ್ಧ ಪದಾರ್ಥಗಳ ಭಕ್ಷಣ ಮಾಡುವವರೂ ಆದ ಪಂಚಮರು, ವೈದಿಕರಿಗೆ, ಪ್ರಾಚೀನ ಋಷಿ ಸಮ್ಮತವಾಗಿ ಧಾರ್ಮಿಕ ವ್ಯವಹಾರದಲ್ಲಿ ಸ್ಪರ್ಶರು ಹ್ಯಾಗಾದರು?’’
‘ಚಾರಿತ್ರಿಕ’ ಕಾದಂಬರಿಯೊಂದು ಒಪ್ಪಿಸು ತ್ತಿರುವ ಅಚಾರಿತ್ರಿಕ ನಂಬಿಕೆಯಿದು: ಅಂಬೇ ಡ್ಕರ್ ಪ್ರಕಾರ ಅಸ್ಪಶ್ಯರು ಸೃಷ್ಟಿಯಾಗಿದ್ದು, ಬ್ರಾಹ್ಮಣ ಸಂಸ್ಕೃತಿ ನಿಷೇಧಿಸಿದ ಆಹಾರವನ್ನು ಬಿಡದೆ ಮುಂದುವರಿಸಿದ್ದಕ್ಕೆ. ಅದರಲ್ಲೂ ಸತ್ತ ದನಗಳನ್ನು ಹೊರುವುದು, ಅದರ ಚರ್ಮ ಬಳಸಿ ವೃತ್ತಿ ಮಾಡುವುದು ಯಾರ ಸಾಮಾಜಿಕ ಕರ್ತವ್ಯ ವಾಗಿತ್ತೊ ಅಂತಹವರು ಸತ್ತ ದನದಮಾಂಸ ತಿನ್ನುವುದು ಸಹಜವಾಗಿತ್ತು. ಆ ಜನ ಅಸ್ಪಶ್ಯ ರೆನಿಸಿದರು.ಸ್ವಂತ ಅಭಿರುಚಿಗೆ ಸಂಬಂಧಿಸಿದ ವಿಷಯಕ್ಕೆ ಧಾರ್ಮಿಕ ಲೇಪ ಬಂದೊಡನೆ ‘ಗೋವು’ ಎಂಬ ಪ್ರಾಣಿಯು ಬ್ರಾಹ್ಮಣರೊಡನೆ (ಗೋಬ್ರಾಹ್ಮಣ) ಸಮೀಕರಣಗೊಂಡು ದೈವವಾಗಿ, ಕೋಟ್ಯಂತರ ದೇವತೆಗಳ ವಾಸಸ್ಥಾನವಾಗಿ, ಅದರ ಮಾಂಸ ಸೇವನೆಯು ಘೋರ ಪಾಪವಾಗಿಬಿಟ್ಟಿತು.

ಸನಾತನವಾದಿಗಳಾದ ಗುಪ್ತರ ಕಾಲದಲ್ಲಿ ಈ ನಂಬಿಕೆ ಧರ್ಮಶಾಶ್ತ್ರವಾಯಿತು. ಇಂತಹ ಸನಾತ ಸಂಸ್ಕೃತಿಯ ಅಲೆ ದಕ್ಷಿಣಕ್ಕೆ ಬಂದಾಗ, ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಮದ್ಯ ಮಾಂಸಗಳನ್ನು ಪವಿತ್ರವೆಂದು ಎಣಿಸಿದ್ದ ‘ದ್ರಾವಿಡ’ ಸಂಸ್ಕೃತಿಗಳೂ ಪ್ರಭಾವಗೊಂಡವು.


ಡಾ. ರಹಮತ್ ತರೀಕೆರೆ

http://beta.varthabharathi.net/print/52748/

Mysore: 'Sangeetha Namana’ to Buddha


Mysore, May 16, DHNS :

'Buddhanige Belagana Sangeeta Namana', a 12-hour music programme will be held at Vishwa Maitri Buddha Vihara in the city on May 17 at 6 pm, in connection with Buddha Purnima.

Addressing a news conference here on Monday, H R Mahesh of Sangeeta Jangamara Samsthe said Buddha is the propagator of Manava Dharma and in  his memory, a novel programme is organised.

Introducing history
The purpose of this was to introduce the real history of Buddha to the people. Kalyanasiri Bhantheji will be present.
Participants 
Noted music director of Kannada, Hamsalekha, vice-chancellor of Music University, Dr Hanumanna Nayak Dore, Registrar of Music University, Prof Nilagiri M Talwar, deputy director of Department of Kannada and Culture, A Annegowda, Accounts Officer Venkataraju, Bhanandur Kempaiah, Laxman Hugar, noted folk singer, Bannur Kempamma, Mr Justice H Mohakumar will attend.

After the inauguration, there will be 12-hour non-stop music programme from 7 pm to 7 am on Wednesday.

Six main singers and nine co-singers will present the programme. Of 12 hours, four hours is dedicated to the songs on Buddha and eight hours to Folk songs, theatre songs, bhavageete and vachanas. Plans are afoot to hold 24-hour programme in the next Buddha Purnima.
Girija Mahesh, Lakshmirao, B P Nagaraj, Govindaraswamy and Krishnamurthy Mandya were present.

Tuesday, 17 May 2011

Buddha Purnima Jayanti Hunsur

ಹುಣಸೂರು: ಇಂದು ಬುದ್ಧ ಜಯಂತಿಬುಧವಾರ - ಜೂನ್ -02-2010
ಹುಣಸೂರು, ಜೂ. 1: ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜೂ. 2ರಂದು ಬೆಳಗ್ಗೆ 11ಗಂಟೆಗೆ ಬುದ್ಧ ಜಯಂತಿ ಕಾರ್ಯಕ್ರಮ ನಡೆಯಲಿರುವುದು. ದಸಂಸದ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿಯ ಅಧ್ಯಕ್ಷತೆಯಲ್ಲಿ ಹುಣಸೂರು ಶಾಸಕರಾದ ಎಚ್.ಪಿ.ಮಂಜುನಾಥ್ ಕಾರ್ಯಕ್ರಮ ವನ್ನು ಉದ್ಘಾಟಿಸಲಿರುವರು. ಗಾವಡಗರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋದೂರು ಮಹೇಶಾರಾಧ್ಯ ಮುಖ್ಯ ಭಾಷಣಗೈಯಲಿದ್ದಾರೆ ಎಂದು ದಸಂಸ ತಾಲೂಕು ಸಮಿತಿ ಸಂಚಾಲಕ ದೇವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Buddha-Ambedkar: Art Painting


By Basavaraja Kalegara Yadagir
ಯಾದಗಿರಿ: ತಮ್ಮ ಭಕ್ತಿ, ಗೌರವ ಸಮರ್ಪಿಸಲು ಎಲ್ಲರಿಗೂ ಒಂದೊಂದು ದಾರಿ. ಕೆಲವರು ಕೈಮುಗಿದು ಶರಣು ಎಂದರೆ, ಇನ್ನು ಕೆಲವರು ಅವರ ಸಂದೇಶಗಳನ್ನು ಹಾಡಿ ಹೊಗಳುತ್ತಾರೆ. ಹಾಗೆಯೇ ಎಲ್ಲರಲ್ಲಿಯೂ ವಿಶಿಷ್ಟವಾದುದನ್ನು ಮಾಡುವ ಮೂಲಕ ಮಹನೀಯರಿಗೆ ಗೌರವ ಸಮರ್ಪಿಸುವ ಅಪರೂಪದ ಕೆಲಸ ಮಾಡಿದವರು ಚಿತ್ರ ಕಲಾವಿದ ಬಸವರಾಜ ಕಲೆಗಾರ.

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧ ಜಯಂತಿ ಅಂಗವಾಗಿ ಕಲಾವಿದ ಬಸವರಾಜ ಕಲೆಗಾರ ತಮ್ಮ ಕಲಾಕೃತಿಗಳ ಮೂಲಕ ವಿಶಿಷ್ಟವಾಗಿ ಬುದ್ಧ ಮತ್ತು ಡಾ. ಅಂಬೇಡ್ಕರ್ ಅವರನ್ನು ಚಿತ್ರಿಸುವ ಮೂಲಕ ಅಂಬೇಡ್ಕರ್‌ರಿಗೆ ನಮನ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿಯೇ ರಚಿಸಿರುವ ಈ ವಿಶಿಷ್ಟ ಕಲಾಕೃತಿಗಳು ಜನರ ಗಮನ ಸೆಳೆದಿವೆ. ಅಂಬೇಡ್ಕರ್‌ರ ಭಾವಚಿತ್ರ, ಬುದ್ಧನ ಲೀಲಾಮೃತ, ಸಾವನ್ನು ಗೆದ್ದ ಬುದ್ಧ, ಬುದ್ಧನ ಸೃಷ್ಟಿ, ಬುದ್ಧ ಮತ್ತು ಮಾಯಾದೇವಿ, ಬುದ್ಧನ ಹೃದಯ ದೊಳಗೆ ಅಂಬೇಡ್ಕರ್ ಹೀಗೆ ಹತ್ತಾರು ಚಿತ್ರಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

ಅಂಬೇಡ್ಕರ್‌ರ ಭಾವಚಿತ್ರವು ವಿಶೇಷವಾಗಿದೆ. ಹಿಂದೆ ಬುದ್ಧನ ಚಿತ್ರಗಳಿದ್ದು, ಎಲ್ಲರೂ ಒಂದೇ ಎನ್ನುವ ಸಂಕೇತವಾಗಿ ಡಾ. ಅಂಬೇಡ್ಕರ್‌ರ ಎದೆಯಲ್ಲಿ ಕೈ ಚಿತ್ರವನ್ನು ಬಿಡಿಸಿದ್ದಾರೆ. ಬುದ್ಧನು ತಪಸ್ಸುಗೈದ ಇನ್ನೊಂದು ಚಿತ್ರದಲ್ಲಿ ಮೇಲೆ ಚಂದ್ರನಿದ್ದರೆ, ಗುಲಾಬಿ ಹೂವುಗಳು ಕಾಣುತ್ತವೆ. ಮೂರನೇ ಚಿತ್ರದಲ್ಲಿ ಸಾವನ್ನು ಗೆದ್ದು ಬುದ್ಧನನ್ನು ಬಿಡಿಸಿದ್ದು, ಮಾನವನ ತಲೆಬುರುಡೆ, ಧ್ಯಾನ ಮಗ್ನನಾದ ಬುದ್ಧನನ್ನು ಚಿತ್ರಿಕರಿಸಿದ್ದಾರೆ.

ಬುದ್ಧನ ಸೃಷ್ಟಿಯನ್ನು ತೋರಿ ಸುವ     ಇನ್ನೊಂದು ಚಿತ್ರದಲ್ಲಿ ಎಲೆ ಯಾ ಕಾರದೊಳಗೆ ಬುದ್ಧ ನನ್ನು ಬಿಡಿಸಿದ್ದು, ಅರಳಿದ ಹೂವುಗಳು, ನವಿಲಿನ ಚಿತ್ರ ಗಳಿವೆ. ತಾಯಿ ಮಾಯಾದೇವಿಯು ತನ್ನ ಮಗ ಬುದ್ಧನ ಯಶಸ್ಸನ್ನು ಸಂತೋಷದಿಂದ ಆಲಿಸುವ ಕ್ಷಣ ವನ್ನು ಬಣ್ಣಗಳ ಮೂಲಕ ಬಿಡಿಸಿ ತೋರಿಸಿದ್ದಾರೆ.

ಅದ್ಭುತವಾದ ಹಲವಾರು ಕಲಾ ಕೃತಿಗಳ ಮೂಲಕ ಗಮನ ಸೆಳೆದಿರುವ ಬಸವರಾಜ ಕಲೆಗಾರ ಶಹಾಪುರ ತಾಲ್ಲೂಕಿನ ಕೊಂಕಲ್‌ನವರು. ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು, ವಿಶೇಷ ಸಂದರ್ಭಗಳಲ್ಲಿ ಅದಕ್ಕೆ ತಕ್ಕಂತೆ ಚಿತ್ರಗಳನ್ನು ಬಿಡಿಸುವುದರಲ್ಲಿ ಸಿದ್ಧಹಸ್ತರು. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ದಲ್ಲಿಯೂ ಯಾದಗಿರಿ ಜಿಲ್ಲೆಯ ವೈಶಿಷ್ಟ್ಯವನ್ನು ಸಾರುವ ಕಲಾಕೃತಿ ಗಳನ್ನು ತಯಾರಿಸುವಲ್ಲಿಯೂ ತಮ್ಮ ಕೊಡೆಗೆ ನೀಡಿದ್ದಾರೆ

ಬುದ್ಧ ಜಯಂತಿ: ಸಂಭ್ರಮದ ಮೆರವಣಿಗೆ


ಪ್ರಜಾವಾಣಿ ವಾರ್ತೆ
ಕೋಲಾರ: 2554ನೇ ಬುದ್ಧ ಜಯಂತಿ ಪ್ರಯುಕ್ತ ಭಗವಾನ್ ಬುದ್ಧ ಜಯಂತ್ಯುತ್ಸವ ಸಮಿತಿಯು ನಗರದಲ್ಲಿ ಗುರುವಾರ ಬುದ್ಧನ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಸಮಿತಿಯ ಪ್ರಮುಖರು, ಕಾರ್ಯಕರ್ತರು ಬುದ್ಧನ ಭಾವಚಿತ್ರವಿದ್ದ ಬ್ಯಾಡ್ಜ್‌ಗಳನ್ನು ಧರಿಸಿ ಭಾಗವಹಿಸಿದರು.
ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಶುರುವಾದ ಮೆರವಣಿಗೆ ಬಾಲಕರ ಸರ್ಕಾರಿ ಕಾಲೇಜು ಮೂಲಕ, ದೊಡ್ಡಪೇಟೆ ವೃತ್ತ, ಎಂ.ಜಿ. ರಸ್ತೆ ಮೂಲಕ ಕೆಇಬಿ ಸಮುದಾಯ ಭವನದಲ್ಲಿ ಕೊನೆಗೊಂಡಿತು.ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಬುದ್ಧಂ ಶರಣ ಗಚ್ಛಾಮಿ ಪ್ರಾರ್ಥನೆಯನ್ನು ಹಾಡಿದರು.
ಈ ಮೆರವಣಿಗೆ ಆಡಂಬರವಿಲ್ಲದೆ, ಸರಳರೂಪದಲ್ಲಿದ್ದು ವಿಶೇಷವಾಗಿ ನಗರದ ಜನರ ಗಮನ ಸೆಳೆಯಿತು. ಮೆರವಣಿಗೆಯ ದಾರಿಯುದ್ದಕ್ಕೂ ಜನ ಮೆಚ್ಚುಗೆಯಿಂದ ವೀಕ್ಷಿಸಿದರು. ಜನನಿಬಿಡ ಸ್ಥಳವಾದ ದೊಡ್ಡಪೇಟೆ ರಸ್ತೆಯಲ್ಲಿ ಮೆರವಣಿಗೆಯ ಪ್ರಯುಕ್ತ ಪ್ರಸ್ತುತಪಡಿಸಿದ ಹಾಡುಗಳು ಇಂಪಾಗಿ ಕೇಳಿಬಂದವು.
ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಐಪಲ್ಲಿ ನಾರಾಯಣಸ್ವಾಮಿ, ಟಿ.ವಿಜಯಕುಮಾರ್, ಫಾಲ್ಗುಣ, ಮಂಜುನಾಥ, ಮುನಿವೆಂಕಟಪ್ಪ, ಜೆ.ಸತ್ಯರಾಜ್, ಬಾಂಸೆಫ್ ನಾರಾಯಣಪ್ಪ, ಬಂಗವಾದಿ ನಾರಾಯಣಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಕೆಇಬಿ 

Buddha Purnima Jayanti Gulbarga

Buddha jayanti purnima mangalore Veeryasheela Bhantheji

BH_0

BH_1

BH_2
united buddhist organisation bangalore Veeryasheela Bhante



Mangalore, May 17: The teachings of Gautama Buddha, who upheld the social justice and equality, are relevant even today, said Prof T C Shivashankar Murthy, Vice Chancellor of Mangalore University.

He was speaking as the chief guest at the 2555th holy birth anniversary of Buddha organised by Dakshina Kannada district Buddha Maha Sabha, at NGO Hall here on Tuesday afternoon.

Murthy said even though a man called Buddha lived and died over two and a half thousand years ago, his messages and teaches are universal and eternal.

Opining that the increasing gap between rich and poor will only lead the whole humanity to chaos, he pointed out that Buddha had called upon the affluent to think about poor. 

“The concept of ‘Buddha conscious’ can reduce the human greed,” he added. 

Veeryasheela Bhantheji, President of United Buddhist Organisation, Bangalore, in his inaugural address stated that Buddhism is not a merely religion, but a complete way of life, which leads people towards eternal bliss.

He pointed out that Buddhism is in the forefront in 28 countries of the world and extending its strength in many other countries, as a large number of people, including Indians are inclining towards it. 

S R Laxman, district president of the Sabha, presided over the programme. Dr. Uday Rao, Director of TTC insurance company and Kanthappa Alangar, Secretary were present among others. 

‘ಬೌದ್ಧ ತಾತ್ವಿಕತೆಯನ್ನು ಅರಿಯಲು ಯಾರ ಸಹಾಯವೂ ಬೇಕಿಲ್ಲ’



ತುಮಕೂರು, ಮೇ 17: ಮನುಷ್ಯನ ಉನ್ನತಿಗೆ ಬೇಕಾದ ಸರಳ ಹಾಗೂ ನಿಸರ್ಗ ತರ್ಕವನ್ನು ಅನ್ವೇಷಿಸಿದ ಮೊದಲ ವ್ಯಕ್ತಿಯೆಂದರೆ ಭಗವಾನ್ ಬುದ್ಧ. ಬೌದ್ಧ ತಾತ್ವಿಕತೆಯನ್ನು ಅರಿಯಲು ಯಾರೊಬ್ಬರ ಸಹಾಯವೂ ಬೇಕಿಲ್ಲ ಎಂದು ಸಾಹಿತಿ ಹಾಗೂ ಉಪನ್ಯಾಸಕ ನಟರಾಜ್ ಬೂದಾಳ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಉಪ್ಪಾರಹಳ್ಳಿಯಲ್ಲಿರುವ ಸಾಹಿತಿ ಕೆ.ಬಿ.ಸಿದ್ದಯ್ಯರ ನಿವಾಸದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿ ಕಾರ್ಯ ಕ್ರಮದಲ್ಲಿ ಬುದ್ಧನ ಕುರಿತು ಮಾತನಾಡುತ್ತಿದ್ದ ಅವರು, ಸಾಮಾನ್ಯ ಬದುಕಿನ ಪ್ರಶ್ನೆಯೇ ಬೌದ್ಧ ತಾತ್ವಿಕತೆಯ ಹುಟ್ಟಿಗೆ ಕಾರಣ. ಭಂತೆ ಮಿಲಿಂದ ಮತ್ತು ನಾಗಸೇನನ ನಡುವಿನ ಪ್ರಶ್ನಾವಳಿಯೇ ಇಡೀ ಮನುಜರ ಬದುಕನ್ನು ಅವಲಂಬಿಸಿದೆ. ಇದನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಭ್ರಷ್ಟತೆಯನ್ನು ಅರಿತು ನಡೆದರೆ ಅದೇ ಭೌದ್ದ ತಾತ್ವಿಕತೆಯಾಗುತ್ತದೆ ಎಂದರು.

ಭೌದ್ಧ ಧರ್ಮ ಮತ್ತು ಅದರ ತತ್ವಗಳು ಹಾಗೂ ಇತರ ಪರಂಪರೆಗಳ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಹಲವಾರು ಮಂದಿ ಇಂದು ನಮ್ಮ ನಡುವೆ ಇದ್ದಾರೆ. ಅನಾದಿ ಕಾಲದಿಂದಲೂ ಈ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಲೇ ಬಂದಿದೆ. ಇದನ್ನು ಮೆಟ್ಟಿ ನಿಲ್ಲಬೇಕಾದರೆ ಮೊದಲು ನಾವು ಭೌದ್ಧ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ 12 ವ್ಯಾಲೂಮ್‌ಗಳ ಮೂಲಕ ಜನರಿಗೆ ತಿಳಿಯುವಂತೆ ವಿವರಿಸಿದ್ದಾರೆ. ಅವರ ಪ್ರಕಾರ ಸಾಮಾನ್ಯ ವಿವೇಕವೇ ಭೌದ್ಧ ತಾತ್ವಿಕತೆ. ಇದನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಟರಾಜ್ ಬೂದಾಳ್ ನುಡಿದರು.

ಕವಿಗೋಷ್ಠಿ ಉದ್ಘಾಟಿಸಿದ ಕವಯತ್ರಿ ಡಿ.ಬಿ.ರಜಿಯಾ ಮಾತನಾಡಿ, ಭಗವಾನ್ ಬುದ್ಧ ಸಮಾಜವನ್ನು ಅರಿಯಲು ನಮಗೆ ತೋರಿಸಿದ ವಿವೇಕ ಎಂಬ ಅಸ್ತ್ರಕ್ಕೆ ಇಂದು ಮಂಕು ಕವಿದಿದೆ.ಇದರಿಂದ ಹೊರಬರುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ಹಣ, ಅಧಿಕಾರವೆಂಬ ಪ್ರಬಲ ಶಕ್ತಿಗಳು ಇಂದು ನಮ್ಮನ್ನು ಆಳುತ್ತಿದ್ದು, ಚಿಂತಕರು, ಪ್ರಗತಿಶೀಲರೆನಿಸಿಕೊಂಡ ಬುದ್ಧಿಜೀವಿಗಳು ಇಂದು ಅಧಿಕಾರ ಇರುವವರ ಬೆಂಬಲಕ್ಕೆ ನಿಂತಿರುವುದನ್ನು ನೋಡಿದರೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ. ಅಧಿಕಾರದ ಆಸೆಗೆ ಭ್ರಷ್ಟತೆಯಲ್ಲಿ ತೊಡಗಿರುವವರನ್ನೇ ಇಂದ್ರ, ಚಂದ್ರರೆಂದು ಬಸವಣ್ಣನಂತಹ ಕಾಂತ್ರಿಕಾರಿ ವ್ಯಕ್ತಿಗಳಿಗೆ ಹೋಲಿಸಿ ಮಾತನಾಡುತ್ತಿರುವುದನ್ನು ನೋಡಿದರೆ ನಾವು ಯಾವ ಹಂತ ತಲುಪಿದ್ದೇವೆ ಎಂಬುದು ಅರ್ಥವಾಗುತ್ತದೆ. ಧಾರ್ಮಿಕ ಭಯೋತ್ಪಾಧನೆಯನ್ನು ತಡೆಯಲು ನಾವೆಲ್ಲರೂ ಮುಂದಾಗಬೇಕಿದೆ ಎಂದರು.

ಸಂತ ಶಿಶುನಾಳ ಷರೀಫರ ಹಾಡುಗಳ ಮೂಲಕವೇ ಜನಪ್ರಿಯರಾಗಿರುವ ನರಸಿಂಹಮೂರ್ತಿ ಷರೀಫರ ತತ್ವಪದಗಳನ್ನು ಹಾಡುವ ಮೂಲಕ ರಂಜಿಸಿದರು. ಪ್ರೊ. ಸಿ.ಎಚ್.ಮರಿದೇವರು, ಡಾ.ರವಿಕುಮಾರ್ ನೀ.ಹ., ಜಿ.ಇಂದ್ರಕುಮಾರ್, ಉಗಮ ಶ್ರೀನಿವಾಸ್, ಪದ್ಮಕೃಷ್ಣಮೂರ್ತಿ ಸೇರಿದಂತೆ ಹತ್ತಾರು ಮಂದಿ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.

ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್ಬುಧವಾರ

,
ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್

ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್ಬುಧವಾರ - ಮೇ -18-2011

ಬುದ್ಧ ಜಯಂತಿ ಕಾರ್ಯಕ್ರಮ
ಮಂಗಳೂರು, ಮೇ 17: ಜಗತ್ತಿಗೆ ಸಾರ್ವಕಾಲಿಕ ವಾದ ಸಂದೇಶ ನೀಡಿದ ಬುದ್ಧನ ಆದರ್ಶಗಳು ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ತಿಳಿಸಿದರು.

ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ ಮಂಗಳೂರು ಇದರ ವತಿಯಿಂದ ನಗರದ ಎನ್‌ಜಿಓ ಸಭಾಂಗಣದಲ್ಲಿ ಹಮ್ಮಿ ಕೊಂಡ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ನಿಸರ್ಗದ ಸಂಪತ್ತು ಎಲ್ಲರಿಗೂ ಸೇರಿದೆ. ಅದನ್ನು ಎಲ್ಲರೂ ಸಮಾನವಾಗಿ ಬಳಸಿಕೊಳ್ಳ ಬೇಕು ಎನ್ನುವುದನ್ನು ಬುದ್ಧ 2500 ವರ್ಷಗಳ ಹಿಂದೆಯೇ ತಿಳಿಸಿದ್ದರು. ಆ ಸಂದೇಶ ಇಂದಿಗೂ ಪ್ರಸ್ತುತ. ನಮ್ಮ ಸಮಾಜದಲ್ಲಿ ಹಲವಾರು ಮಂದಿ ಐಷಾರಾಮಿಯಾಗಿ ಬದುಕುತ್ತಿದ್ದಾರೆ. ಬಹಳಷ್ಟು ಮಂದಿ ಬಡತನದ ಬೇಗೆಯಲ್ಲಿದ್ದಾರೆ. ಇಂತಹ ಅಸಮಾನತೆಯನ್ನು ಹೋಗಲಾಡಿಸಬೇಕಾದರೆ ಬುದ್ಧನ ಆದರ್ಶವಾದ, ಸಮಾನತೆ ಸಮಾಜದ ಎಲ್ಲ ಹಂತಗಳಲ್ಲಿ ಕಂಡು ಬರಬೇಕು ಎಂದು ಶಿವಶಂಕರ ಮೂರ್ತಿ ತಿಳಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ವೀರ್ಯಶೀಲ ಭಂತೇಜಿ ಮಾತನಾಡಿ, ಬೌದ್ಧ ಧರ್ಮ ನಿಜವಾದ ಅರ್ಥದಲ್ಲಿ ಒಂದು ಧರ್ಮವಲ್ಲ. ಒಂದು ಜೀವನ ಮಾರ್ಗ. ಮಾನವನ ಜೀವಿತ ಕಾಲದಲ್ಲಿ ಒದಗಿ ಬರುವ ನಾನಾ ವಿಧವಾದ ದು:ಖಗಳನ್ನು ದೂರ ಮಾಡಲು ಪಂಚಶೀಲ, ಅಷ್ಟಾಂಗ ಮಾರ್ಗಗಳಲ್ಲಿ ಸಾಗಿ ಸುಖ, ಶಾಂತಿ, ನೆಮ್ಮದಿಯನ್ನು ಪಡೆಯುವ ವಿಧಾನವನ್ನು ಇದು ಬೋಧಿಸುತ್ತದೆ. ಸಕಲ ಜೀವಿಗಳ ಸುಖ, ಶಾಂತಿ, ನೆಮ್ಮದಿಯನ್ನು ಬೌದ್ಧ ಧರ್ಮ ಬಯಸುತ್ತದೆ ಎಂದರು.

ಸಮಾರಂಭದಲ್ಲಿ ಬುದ್ಧ ವಂದನೆ, ದಮ್ಮೋಪದೇಶ, 207 ಕುಟುಂಬದ 775 ಜನರಿಗೆ ಆರೋಗ್ಯ ಸ್ವಾಸ್ಥ ವಿಮಾ ಯೋಜನೆ ಪಾಲಿಸಿ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎಸ್.ಆರ್. ಲಕ್ಷ್ಮಣ, ಯುನೈಟೆಡ್ ಇನ್ಶೂರೆನ್ಸ್ ಸಂಸ್ಥೆಯ ಉದಯ, ಸಂಘಟನೆಯ ಪ್ರಧಾನ ಕಾರ್ಯ ದರ್ಶಿ ಕಾಂತಪ್ಪ ಅಲಂಗಾರ್ ಉಪಸ್ಥಿತರಿದ್ದರು. ದೇವಪ್ಪ ಬೋಧ್ ಕಾರ್ಯಕ್ರಮ ನಿರೂಪಿಸಿ, ಶಶಿಧರ ಜೋಕಟ್ಟೆ ವಂದಿಸಿದರು

Thursday, 28 April 2011

ತರೀಕೆರೆ ಏರಿಯಾ: ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ


By ರಹಮತ್ ತರೀಕೆರೆ
ನನಗೊಮ್ಮೆ ಕರ್ನಾಟಕದ ಬೌದ್ಧಧರ್ಮಕ್ಕೆ ಸಂಬಂಧಿಸಿದ ಜನರನ್ನೂ ಜಾಗಗಳನ್ನೂ ಕಣ್ಣಾರೆ ಕಾಣುವ ಆಸೆ ಮೊಳೆಯಿತು. ಆಸೆಯನ್ನು ಧಾರವಾಡದ ವೈದ್ಯಮಿತ್ರರಾದ ಡಾ. ಸಂಜೀವ ಕುಲಕರ್ಣಿಯವರಲ್ಲಿ ಹಂಚಿಕೊಂಡೆ. ಬೌದ್ಧಧರ್ಮದ ಬಗ್ಗೆ ಒಳಸೆಳೆತವುಳ್ಳ ಅವರು ಕೂಡಲೇ ಸೈಯೆಂದು ಒಪ್ಪಿಕೊಂಡರು. ಇಬ್ಬರೂ ಸೇರಿ, ತಿರುಗಾಟದ ಪಥವನ್ನೂ ನೋಡಬೇಕಾದ ಜಾಗವನ್ನೂ ಕಾಣಬೇಕಾದ ಜನರನ್ನೂ  ಗುರುತು ಮಾಡಿಕೊಳ್ಳುತ್ತ ತಯಾರಿ ನಡೆಸಲಾರಂಭಿಸಿದೆವು. ಇದರ ಪತ್ತೆಯನ್ನು ಹೇಗೊ ಮಾಡಿದ ಮೈಸೂರಿನ ಗೋವಿಂದಯ್ಯನವರು ನಾನೂ ಬರುತ್ತೇನೆಂದು ಗಂಟುಬಿದ್ದರು. ಕಡೆಗೆ ತಂಡಕ್ಕೆ ತರುಣ ಕವಿ ಅರುಣ್ ಜೋಳದಕೂಡ್ಲಿಗಿಯನ್ನೂ ಸೇರಿಸಿಕೊಂಡೆವು.
ನಾವು ನಾಲ್ವರು, ಆಕಸ್ಮಿಕವಾಗಿ ಸಮಾಜದ ನಾಲ್ಕು  ಸ್ತರಗಳಿಂದ ಬಂದವರಾಗಿದ್ದು, ಬುದ್ಧನ ನೆಪದಲ್ಲಿ ಒಂದಾಗಿದ್ದೆವು. ಆಯಾ ದಿನ ಸಿಕ್ಕ ಅನುಭವವನ್ನು ನಾಲ್ವರೂ ಸೇರಿ ಚರ್ಚಿಸುತ್ತಿದ್ದೆವು. ಭಿನ್ನಮತಗಳನ್ನು ಇಟ್ಟುಕೊಂಡು ಜಗಳ ಮಾಡುತ್ತಿದ್ದೆವು. ನಮ್ಮ ಜತೆ ಒಂದು ಹೆಂಜೀವವೂ ಇದ್ದಿದ್ದರೆ, ತಂಡಕ್ಕೆ ಬೇರೊಂದು ಕಣ್ಣು ಒದಗಿರುತ್ತಿತ್ತೇನೊ? ಆದರೆ ಹೊರಡುವಾಗ ಹಾಗೆ ಯಾರೂ ನಮಗೆ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ನಾವು ಈ ದಿಸೆಯಲ್ಲಿ ಚಿಂತಿಸಲಿಲ್ಲ. ಮನೆಮಡದಿ ಯಶೋಧರೆಯ ಹಂಗಿಲ್ಲದೆ ತಿಳಿವಳಿಕೆಯ ಹುಡುಕಾಟಕ್ಕೆ ಹೊರಟ ಬುದ್ಧನ ನಾಡಿನವರು ತಾನೇ ನಾವು?
ಧಾರವಾಡದಿಂದ ಪಯಣ ಆರಂಭಿಸಿ ಕರ್ನಾಟಕವನ್ನು ಅದರಂಚಿನಲ್ಲೇ ಚಲಿಸುತ್ತ ಒಂದು ಸುತ್ತು ಹಾಕಿದೆವು. ಸುಮಾರು 1500 ಕಿಮಿ ಉದ್ದದ 15 ದಿನಗಳ ಪಯಣ. ಇದರಲ್ಲಿ ನಾವು ಬೌದ್ಧ ವಿಹಾರಗಳನ್ನೂ  ಚೈತ್ಯಾಲಯಗಳನ್ನೂ ಬೌದ್ಧಮೂರ್ತಿಗಳನ್ನೂ ಕಂಡೆವು; ಧಮ್ಮಸ್ವೀಕಾರದ ಬಳಿಕ ಅಶೋಕನು ಕರ್ನಾಟಕದಲ್ಲಿ ಹಾಕಿಸಿದ ಶಾಸನಗಳನ್ನು ಕಂಡೆವು; ಬೌದ್ಧಧರ್ಮದ ಬೋಧನೆ ನಡೆಯುತ್ತಿದ್ದ ಗುರುಕುಲಗಳನ್ನೂ ಬುದ್ಧನ ಹೆಸರಲ್ಲಿ ಕಟ್ಟಲಾಗಿರುವ ಶಿಕ್ಷಣ ಸಂಸ್ಥೆಗಳನ್ನೂ ಭೇಟಿಮಾಡಿದೆವು; ಬೌದ್ಧ ಚಿಂತಕರನ್ನೂ ಭಂತೆಗಳನ್ನೂ ಸಾಧಕರನ್ನೂ ಕಂಡು ಮಾತಾಡಿದೆವು. ತಮ್ಮ ರಾಜಕೀಯ ಕಾರ್ಯಕ್ರಮದ ಭಾಗವಾಗಿ ಧಮ್ಮಪ್ರಸಾರ ಕೈಗೊಂಡಿರುವ ಬಿಎಸ್ಪಿ ಕಾರ್ಯಕರ್ತರ ಜತೆ ಚರ್ಚಿಸಿದೆವು. ಬೌದ್ಧಸಂಪ್ರದಾಯದಲ್ಲಿ ಲಗ್ನವಾಗಿರುವ ದಂಪತಿಗಳನ್ನೂ ಧಮ್ಮದೀಕ್ಷೆ ಪಡೆದು ಹೊಸಬದುಕನ್ನು ನಡೆಸುತ್ತಿರುವ ಕುಟುಂಬಗಳನ್ನೂ ಕಂಡೆವು. ಒಟ್ಟಿನಲ್ಲಿ ಅದೊಂದು ಅಪೂರ್ವ ಬೌದ್ಧಯಾನ.
ಈ ಯಾನದಲ್ಲಿ ಮೂರು ಅಂಶಗಳು ಗೋಚರಿಸಿದವು. 1. ಕರ್ನಾಟಕದಲ್ಲಿ ಒಂದು ಕಾಲಕ್ಕೆ ವ್ಯಾಪಕ ಅಸ್ತಿತ್ವವನ್ನು ಹೊಂದಿದ್ದ ಬೌದ್ಧಧರ್ಮವು, ಸದ್ಯಕ್ಕೆ ತನ್ನ ಗತಕಾಲದ ಅವಶೇಷಗಳ ಮೂಲಕ ಉಸಿರೆಳೆಯುತ್ತಿದ್ದ ಪಳೆಯುಳಿಕೆಗಳು 2. ಧಮ್ಮದೀಕ್ಷೆ ಸ್ವೀಕರಿಸಿರುವ ಸಾವಿರಾರು ಜನರ ಬಾಳಿನಲ್ಲಿ ಹೊಸಹೊಸ ರೂಪದಲ್ಲಿ ನೆಲೆಯೂರುತ್ತ ಅದು ಚಿಗುರೊಡೆಯುತ್ತಿದ್ದುದು. 3. ಹಾಗೆ ಚಿಗುರೊಡೆಯುವ ಪ್ರಕ್ರಿಯೆಯಲ್ಲಿ ಮನೆಗಳನ್ನು ಮನಸ್ಸುಗಳನ್ನು ಸಂಬಂಧಗಳನ್ನು ಕೂಡ ಒಡೆದುಕೊಂಡಿರುವುದು. ಒಂದು, ಚರಿತ್ರೆಯ ಸ್ಥಗಿತ ದರ್ಶನವಾದರೆ, ಮತ್ತೆರಡು ವರ್ತಮಾನದ ಚಲನಶೀಲ ದರ್ಶನ; ಒಂದು, ಭಗ್ನತೆಯ ಮುಖವಾದರೆ, ಇನ್ನೆರಡು ಹೊಸಹುಟ್ಟಿನ ಮತ್ತು ಹೊಸಬಿಕ್ಕಟ್ಟಿನ ಮುಖಗಳು. ಒಂದು ಸ್ಮಾರಕಗಳ ಜಗತ್ತಾದರೆ ಇನ್ನೆರಡು ಭಾವನೆಗಳ ಮಾನುಷ ಜಗತ್ತು.

ನಮಗೆ ಕಾಡಿಸುತ್ತಿದ್ದುದು ಧಮ್ಮವು ನೆಲೆಯೂರುತ್ತಿರುವ ಕಡೆ ಹುಟ್ಟಿರುವ ಬಿರುಕು ಮತ್ತು ಬಿಕ್ಕಟ್ಟುಗಳು. ಇವು ಧಮ್ಮದೀಕ್ಷೆ ಪಡೆದ ಕುಟುಂಬದಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ; ಕೇರಿ ಮತ್ತು ಕುಟುಂಬಗಳ ನಡುವೆ ಬಿದ್ದಿರುವ ಕಂದರದಲ್ಲಿ ಕಾಣುತ್ತಿದ್ದವು; ದಲಿತರ ಎರಡು ಬಣಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ರೂಪದಲ್ಲಿದ್ದವು. ಯಾವುದೇ ಹಳೆಯ ರೂಪದ ಜಾಗವನ್ನು ಹೊಸತೊಂದು ಆಕ್ರಮಿಸುವಾಗ, ಇಂತಹ ಸಂಘರ್ಷ ಸಾಮಾನ್ಯ. ಹೊಸತು ಮತ್ತು ಹಳತುಗಳ ಈ ಸಂಘರ್ಷವು ಕೆಲವು ಕಾಲದ ಬಳಿಕ ಸಾಮರಸ್ಯಗೊಂಡು ಮೂರನೆಯ ಹೊಸರೂಪವಾಗಿ ಸಿದ್ಧವಾಗಬಹುದು. ಅಂತಹ ಹೊಸರೂಪವೊಂದು ಸಿದ್ಧವಾಗುವ ತನಕ ಈ ಜಗ್ಗಾಟಗಳು ಸಹಜ. ಆದರೆ ಸಾಮಾಜಿಕ ಧಾರ್ಮಿಕ ಮಾನಸಿಕ ಹಾಗೂ ಸಾಂಸ್ಕೃತಿಕವಾದ ಈ ಜಗ್ಗಾಟಗಳ ನಡುವೆ ಸಿಕ್ಕು ನಲುಗುತ್ತಿರುವವರ ತೊಳಲಾಟ ಮತ್ತು ಹತಾಶೆಗಳನ್ನು ಹೆಚ್ಚಿನವರು ಲೆಕ್ಕಿಸಿದಂತೆ ಕಾಣುತ್ತಿರಲಿಲ್ಲ. ಮಾನವೀಯವೂ ಸಂಕೀರ್ಣವೂ ಆಗಿರುವ ಈ ನೋವು ಸಂಕಟಗಳನ್ನು ಸರಿತಪ್ಪುಗಳೆಂದು ಸರಳವಾಗಿ ತೀರ್ಮಾನಿಸುವುದು ಕಷ್ಟ. ಹೀಗಾಗಿ ಇವು ಯಾಕೆ ಮತ್ತು ಹೇಗೆ  ಮೂಡಿದವು ಎಂದು ಅರ್ಥಮಾಡಿಕೊಳ್ಳಲು ಯತ್ನಿಸಬಹುದು.

ಎರಡು ವಾರಗಳ ನಮ್ಮ ಧಮ್ಮಯಾನದಲ್ಲಿ ಧಮ್ಮದೀಕ್ಷೆ ಪಡೆದ ಹತ್ತಾರು ಕುಟುಂಬಗಳನ್ನು ನಾವು ಭೇಟಿ ಮಾಡಿದೆವು. ಇವುಗಳಲ್ಲಿ ಏಳು ದಲಿತ ಕುಟುಂಬಗಳು. ಒಂದು ಬ್ರಾಹ್ಮಣ. ಎರಡು ಬಂಟರವು. ಕೊನೆಯ ಮೂರು ಕರಾವಳಿಯವು; ಮೊದಲ ಏಳು ದಲಿತ ಕುಟುಂಬಗಳು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಗುಲಬರ್ಗ ಜಿಲ್ಲೆಗೆ ಸೇರಿದವು. ಎಲ್ಲ ಕುಟುಂಬಗಳೂ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡವು; ಉಡಲುಣ್ಣಲು ಹೋರಾಟವಿಲ್ಲದ ಮಧ್ಯಮವರ್ಗಕ್ಕೆ ಸೇರಿದವು. ಈ ಕುಟುಂಬಗಳ ಜತೆ ನಾವು ಮಾತಾಡಿದೆವು. ಜತೆ ಕುಳಿತು ಊಂಡೆವು. ಅಲ್ಲಿ ನಮಗೆ ನಾಲ್ಕು ಪರಿಯ ದಾಂಪತ್ಯಗಳು ಕಂಡವು.
1. ಇಡಿಯಾಗಿ ಧಮ್ಮೀಕರಣಗೊಂಡಿರುವ ದಾಂಪತ್ಯಗಳು. ಇಲ್ಲಿ ದಂಪತಿಗಳಲ್ಲಿ ಸತಿಪತಿಗಳೊಂದಾದ ಭಕ್ತಿಯ ಸಾಮರಸ್ಯವಿತ್ತು. ಸಮಾನಮನಸ್ಕತೆ ಸಾಧ್ಯವಾಗಿತ್ತು. ಹಳೆಯ ಸಂಪ್ರದಾಯಗಳು ಕೈಬಿಟ್ಟುಹೋಗಿದ್ದವು. ಮಕ್ಕಳಿಗೆ ಬೌದ್ಧಹೆಸರುಗಳನ್ನು ಇಡುವುದೇ ಮುಂತಾಗಿ ಬೌದ್ಧ ಆಚರಣೆಗಳು ಆಚರಣೆಗೆ ಬಂದಿದ್ದವು. ಇವು ದೀಕ್ಷೆಗೊಂಡು ದಶಕಗಳನ್ನೆ ಕಳೆದಿರುವ ಕುಟುಂಬಗಳು. ಗುಲಬರ್ಗದ ಬುದ್ಧವಿಹಾರದಲ್ಲಿದ್ದ ಶ್ರೀಮತಿ ಖರ್ಗೆಯವರಲ್ಲಿ, ಮಲ್ಲಿಕಾರ್ಜುನ ಖರ್ಗೆಯವರಷ್ಟೇ ಧರ್ಮದ ಉಮೇದಿತ್ತು. ಆದರೂ ಇಲ್ಲಿ ಹೆಚ್ಚಿನ ಕಡೆ ಗಂಡನೇ ಸಾಧಕನಾಗಿದ್ದು, ಮಡದಿ ಅವನಿಗೆ ಸಹಚರಳಾಗಿ ಹಿಂಬಾಲಿಸಿದಂತೆ ಇತ್ತು.
2. ಇನ್ನೂ ಹೊಂದಾಣಿಕೆಯ ಪ್ರಕ್ರಿಯೆಯಲ್ಲಿರುವ ದಾಂಪತ್ಯಗಳು. ಇಲ್ಲಿ ಹೊಸಧರ್ಮದ ಬಗ್ಗೆ ಪೂರಾ ಒಪ್ಪಿಗೆ ಸಾಧ್ಯವಾಗಿರಲಿಲ್ಲ. ಆದರೂ, ಹಳತರ ಜತೆಗೆ ಒಂದು ಬಗೆಯ ಸಾಮರಸ್ಯ ಮಾಡಲು ಯತ್ನ ನಡೆದಿತ್ತು. ಉದಾ.ಗೆ, ಒಂದು ಮನೆಯಲ್ಲಿ ಹೊರಬಾಗಿಲ ಮೇಲೆ ಕೆತ್ತಲಾಗಿದ್ದ ಬುದ್ಧಮೂರ್ತಿಯ ಹಣೆಗೆ ವಿಭೂತಿಯನ್ನು ಬಳಿಯಲಾಗಿತ್ತು. ಅದು ಬುದ್ಧನನ್ನು ಪಳಗಿಸುತ್ತ ಸ್ಥಳೀಕರಿಸುತ್ತಿರುವ ಯತ್ನದಂತೆ ತೋರಿತು; ಇನ್ನೊಂದು ಮನೆಯ ದೇವರಕೋಣೆಯಲ್ಲಿ ಬುದ್ಧನ ಮೂರ್ತಿಯ ಜತೆಗೆ ಅಂಬೇಡ್ಕರ್ ಮತ್ತು ಮಲೆಮಾದೇಶ್ವರನ ಫೋಟೊಗಳನ್ನೂ ಭೇದವಿಲ್ಲದೆ ಇಡಲಾಗಿತ್ತು. ಇವೆಲ್ಲ ಧಮ್ಮದೀಕ್ಷೆ ಪಡೆದು  ಒಂದೆರಡು  ವರ್ಷಗಳಾಗಿದ್ದ ಕುಟುಂಬಗಳು.
3. ಸಾಮರಸ್ಯದ ಸಾಧ್ಯವಾಗಿರದೆ ತೊಳಲಾಟ ನಡೆಯುತ್ತಿರುವ ಕುಟುಂಬಗಳು. ಇಲ್ಲಿ ಧಮ್ಮಸ್ವೀಕಾರದ ವಿಷಯದಲ್ಲಿ ಸತಿಪತಿಗಳು ಸಮಾನ ಮನಸ್ಕರಾಗಿರಲಿಲ್ಲ. ಹೊಸಧಮ್ಮದ ವಿಷಯದಲ್ಲಿ ಗಂಡ ಉತ್ಸಾಹಿಯಾಗಿದ್ದರೆ, ಮಡದಿಯ ಮೊಗದಲ್ಲಿ ಮ್ಲಾನತೆಯಿತ್ತು. ಗಂಡನಿಗೆ ಬೇಸರವಾಗಬಾರದೆಂದೊ ಅಥವಾ  ಭಿನ್ನಮತವನ್ನು ಬಂದವರೆದುರು ತೋರಬಾರದೆಂದೊ ಆಕೆ  `ಅಳುವೇ ತುಟಿಗೆ ಬಂದಂತೆ' ಮೌನವಹಿಸಿದಂತೆ ಕಾಣುತ್ತಿತ್ತು. ಗಂಡನ ಮುಖದಲ್ಲಿ ಮನೆಯಲ್ಲಿ ನೆಲೆಸುತ್ತಿರುವ ಧಮ್ಮಸಂಸ್ಕೃತಿಯ ಬಗ್ಗೆ ಸಂತೋಷದ ಭಾವವಿದ್ದರೆ, ಆಕೆಯ ಮುಖದಲ್ಲಿ ಆತಂಕವಿತ್ತು. ಆಕೆ ಗಂಡನ ಒತ್ತಡಕ್ಕೆ ಬೌದ್ಧ ಆಚರಣೆಗಳನ್ನು ಅನಿವಾರ್ಯವಾಗಿ ಯಾಂತ್ರಿಕವಾಗಿ ಮಾಡುತ್ತಿರುವಂತೆ ತೋರಿತು.
4. ಸಾಮರಸ್ಯ ಸಾಧ್ಯವೇ ಆಗದೆ ಸಂಬಂಧ ಕುಸಿದುಬಿದ್ದಿರುವ ಕುಟುಂಬಗಳು. ಇಲ್ಲಿ ಮಹಿಳೆಯರಿಗೆ  ತಾವು ಹುಟ್ಟಿ ಬೆಳೆದು ಬಂದ ಪಾರಂಪರಿಕ ಧಾರ್ಮಿಕ ಸಂಸ್ಕೃತಿಯನ್ನು ಬಿಟ್ಟುಕೊಡುವುದು ಸಾಧ್ಯವಾಗಿರಿಲ್ಲ. ಅವರಿಗೆ ಬುದ್ಧನ ಬಗ್ಗೆ ಅಸಹನೆಯೇನಿರಲಿಲ್ಲ. ಆದರೆ ತನ್ನನ್ನು ಬಾಲ್ಯದ ದೈವಗಳಿಂದ ಬಿಡಿಸುತ್ತಿರುವ ಮತ್ತು ಬುದ್ಧನನ್ನು ಹೇರುತ್ತಿರುವ ಗಂಡನ ಬಗ್ಗೆ ಅಸಮಾಧಾನವಿತ್ತು. ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮನ್ನಣೆಯಿಲ್ಲವಲ್ಲ ಎಂಬ ಕೊರಗು ಒಳಗೊಳಗೇ ಆವಿಗೆಯ ಬೆಂಕಿಯಂತೆ ಸುಳಿಯುತ್ತಿತ್ತು. ಇದು ಒಂದು ಕಡೆ ಲಾವರಸದಂತೆ ಆಸ್ಫೊಟಗೊಂಡಿತು ಕೂಡ. ಕರ್ನಾಟಕದ ಲೀವಿಂಗ್ ಬುದ್ಧಿಸಂನ ಅಧ್ಯಯನಕ್ಕೆ ಹೊರಟ ನಮಗೆ ಇದು ಹೊಸದೊಂದು ತಿಳಿವಿನ ಕೋನವನ್ನು ನೀಡಿತು.

ಈ ಆಸ್ಫೋಟ ಸಂಭವಿಸಿದ್ದು ಒಂದು ದಲಿತ ಕುಟುಂಬದಲ್ಲಿ. ಇಲ್ಲಿ ಗಂಡ ಹೆಂಡತಿಯಿಬ್ಬರೂ ಉನ್ನತ ಶಿಕ್ಷಣ ಪಡೆದವರು. ಇವರಲ್ಲಿ ಗಂಡ ಧಮ್ಮದೀಕ್ಷೆ ಸ್ವೀಕರಿಸಿದ್ದರು. ಮಾತ್ರವಲ್ಲ. ಕಾವಿಧರಿಸಿ, ತಮ್ಮ ಹೆಸರನ್ನು ಬದಲಿಸಿಕೊಂಡು ಭಂತೆ ಕೂಡ ಆಗಿದ್ದರು. ಧಮ್ಮ ಪ್ರಸಾರದಲ್ಲಿ ಅತಿ ಉಮೇದಿನಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಕಾಣುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅವರು ಮನೆಯಲ್ಲಿ ಇಲ್ಲವೆಂದೂ ಬಿಹಾರದ ಬೌದ್ಧಗಯಾಕ್ಕೆ ಹೋಗಿದ್ದಾರೆಂದೂ ಅವರು ಶಿಷ್ಯರು ತಿಳಿಸಿದರು. ಆದರೂ ಮನೆಗೆ ತೆರಳಿ, ಅವರ ಮಡದಿಯ ಅಭಿಪ್ರಾಯವನ್ನು ಪಡೆಯೋಣವೆಂದು ಹೊರಟೆವು. ಸಂಜೆ ಏಳರ ಹೊತ್ತು. ಭಿಕ್ಕು ಅವರ ಮನೆಗೆ ಹೋಗಿ ಬಾಗಿಲನ್ನು ತಟ್ಟಿದೆವು. ಒಳಗಿಂದ ಒಬ್ಬರು ಮಹಿಳೆ ಬಾಗಿಲನ್ನು ಅರೆತೆಗೆದು ಏನು ಬೇಕಿತ್ತು ಎಂಬಂತೆ ಹುಬ್ಬುನಿರಿಗೆ ಮಾಡಿಕೊಂಡು ನಮ್ಮನ್ನು ನೋಡಿದರು. ಅವರ ಹಣೆಯಲ್ಲಿ ವಿಭೂತಿಯಿತ್ತು. ``ನಾವು ಬೌದ್ಧಧರ್ಮದ ಅಧ್ಯಯನ ಮಾಡುವುದಕ್ಕೆ ಬಂದವರು. ಭಂತೇಜಿಯಿದ್ದರೆ ಅವರ ಜತೆ ಮಾತಾಡಬೇಕಿತ್ತು'' ಎಂದೆವು. `ಬೌದ್ಧ' `ಭಂತೆ' ಎಂಬ ಶಬ್ದಗಳನ್ನು ಕೇಳುತ್ತಿದ್ದಂತೆ ಆಕೆಯ ಮುಖ ಬಿರುಸಾಯಿತು. ಕಣ್ಣು ಕನಲಿದವು. ಗಡುಸಾದ ದನಿಯಲ್ಲಿ ``ನಿಮ್ಮ ಭಂತೇಜಿ ಮನೆಬಿಟ್ಟು ಯಾವುದೋ ದೇಶಕ್ಕೆ ಬುದ್ಧನ್ನ ಹುಡಕ್ಕೊಂಡು ಹೋಗಿದಾರೆ. ಅವರು ಬಂದ್ಮೇಲೆ ಹೊರಗಡೆ ಎಲ್ಲಾದರೂ ಕುಂತು ಮಾತಾಡಿಕೊಳ್ಳಿ ಸಾ. ಈ ಮನೇಲಿ ಅವರ ಸುದ್ದಿ ಮಾತ್ರ ತಗೀಬೇಡಿ. ಬುದ್ಧನ ವಿಷಯ ಎತ್ತಬೇಡಿ. ದಯವಿಟ್ಟು ಹೊರಟುಹೋಗಿ' ಎಂದು ಹೇಳಿದರು. ನಮಗೆ ಎದೆಗೆ ಒದ್ದಂತಾಯಿತು. ಸೂಕ್ಷ್ಮಮನಸ್ಸಿನ ಡಾ.ಸಂಜೀವ್ ಗಾಬರಿಯಿಂದ ``ಗೋವಿಂದಯ್ಯ, ಕಮಾನ್, ಲೆಟಸ್ ಗೋಬ್ಯಾಕ್' ಎಂದರು. ಆದರೆ ಗೋವಿಂದಯ್ಯನವರು ಅದನ್ನು ಕಿವಿಗೆ ಹಾಕಿಕೊಳ್ಳದೆ ``ಮೇಡಂ, ಬೇಜಾರ್ ಮಾಡಕೋಬೇಡಿ. ನಿಮ್ಮ ಯಜಮಾನರು ಇಲ್ಲದೇ ಹೋದರೆ ಏನಂತೆ? ನೀವಿದ್ದೀರಲ್ಲ. ನಿಮ್ಮ ಜೊತೇಲೆ ಮಾತಾಡ್ತೀವಿ. ಈ ಬೌದ್ಧಧರ್ಮದಿಂದ ನಿಮಗೆ ಏನು ಕಷ್ಟವಾಗಿದೆ. ಅದನಾರೂ ಒಸಿ ಹೇಳಿ. ತಿಳಕೊಳ್ಳುವ'' ಎಂದು ನಮ್ರವಾಗಿ ಹೇಳಿದರು. ಆ ಮಹಿಳೆಯ ಕ್ಯಾಣ ಇಳಿದಿರಲಿಲ್ಲ. ``ಇಲ್ಲ ಸಾ, ನೀವು ಕೇಳೋದು ಬ್ಯಾಡ. ನಾನು ಹೇಳೋದೂ ಬ್ಯಾಡ. ಬುದ್ಧನ ಹೆಸರು ಹೇಳಿಕೊಂಡು ಬರೋ ಯಾರ ಹತ್ರಾನೂ ನಂಗೆ ಮಾತಾಡೋಕೆ ಇಷ್ಟವಿಲ್ಲ' ಎಂದರು. ಅದಕ್ಕೆ ಗೋವಿಂದಯ್ಯ ``ಅಮ್ಮಾ, ನನ್ನ ಜತೆ ದೂರದಿಂದ ಬಂದಿರೊ ವಿದ್ವಾಂಸರು ಲೇಖಕರು ಅವರೆ. ಒಂದೈದು ನಿಮಿಷ ನಿಮ್ಮ ಜೊತೆ ಮಾತಾಡ್ತೀವಿ'' ಎಂದು ವಿನಂತಿಸಿದರು. ಫಾಯದೆಯಾಗಲಿಲ್ಲ. ``ನಿಮ್ಮ ಲೇಖಕರನ್ನ ವಿದ್ವಾಂಸರನ್ನ ಕಟ್ಕೊಂಡು ನನಗೇನು ಆಗಬೇಕಿದೆಯಪ್ಪ? ಆ ಬುದ್ಧನಿಂದ ನನ್ನ ಸಂಸಾರವೇ ಹಾಳಾಗಿದೆ. ನಮ್ಮ ಪಾಡಿಗೆ ಬದುಕಲು ನಮಗೆ ಬಿಡಿ. ಈಗ ತಾವು ದಯಮಾಡಿ'' ಎಂದು ತಣ್ಣಗೆ ಆದರೆ ಆಕ್ರೋಶದಿಂದ ಹೇಳಿದರು. ಈಗ ಸಂಜೀವ್ ಗೆ ತಡೆಯಲು ಆಗಲಿಲ್ಲ. ``ತರಿಕೇರಿ, ಏನ್ರೀ ಇದು? ಆ ಹೆಣಮಗಳು ಇಂಡೈರಕ್ಟಾಗಿ ನಮಗ ಗೆಟ್ ಔಟ್ ಅಂತಿದಾರ. ಆದರೂ ನಾವು ಮಾತಾಡ್ತೀವಿ ಅನಲಿಕ್ಕೆ ಹತ್ತಿದೀವಿ. ಅವರಿಗ ತ್ರಾಸ ಕೊಡಬಾರದು. ಗೋವಿಂದಯ್ಯ. ಪ್ಲೀಸ್ ಕಂಬ್ಯಾಕ್'' ಎಂದು ಚಡಪಡಿಸಿದರು. ಆದರೆ ಗೋವಿಂದಯ್ಯ ಬರಲಿಲ್ಲ. ಛಲ ಬಿಡದ ತಿವಿಕ್ರಮನಂತೆ ಆಕೆಯನ್ನು ಒಲಿಸುತ್ತ  ``ಆಯ್ತು ಮೇಡಂ, ನೀವು ನಮ್ಮ ಜೊತ ಮಾತಾಡ್ದೆ ಇದ್ದರೂ ಪರವಾಯಿಲ್ಲ. ಒಂದು ಲೋಟ ನೀರಾದರೂ ಕೊಡಿ ಮತ್ತ'' ಎಂದರು. ನಾನು ಬೈಸಿಕೊಂಡಾದರೂ ಸರಿ, ಈ ಸೋದರಿಯ ಅಳಲಿನ ಮರ್ಮವೇನೆಂದು ಅರಿತೇ ಹೋಗಬೇಕೆಂದು ಭಂಡನಾಗಿ ನಿಂತಿದ್ದೆ. 


ನಮ್ಮ ಗದ್ದಲಕ್ಕೆ ಬೀದಿಯ ಕೆಲವು ಕಿಟಕಿ ಮತ್ತು ಬಾಗಿಲು ಮೆಲ್ಲಗೆ ತೆರೆದುಕೊಂಡು ಗೋಣುಗಳು ಹೊರಚಾಚಿಕೊಂಡವು. ಕೆಲವರು ಸೆಕೆಗೆಂಬಂತೆ ಹೊರಬಂದು ಗಾಳಿ ಹಾಕಿಕೊಳ್ಳುತ್ತ ಅಂಗಳದಲ್ಲಿ ನಿಂತು ಮಸುಗು ಕತ್ತಲೆಯಲ್ಲಿ ನಮ್ಮತ್ತ ನೋಡತೊಡಗಿದರು. ಅಷ್ಟುಹೊತ್ತು ಹೊರಗೇ ನಿಲ್ಲಿಸಿ ಮಾತಾಡಿದ ಆ ಮಹಿಳೆ, ಗೋವಿಂದಯ್ಯನವರ ನೀರಬೇಡಿಕೆ ಈಡೇರಿಸಲು, ಒಳಗೆ ಹೋದರು. ಅದೇ ಹೊತ್ತಲ್ಲಿ ನಾವು ಒಳಗೆ ನುಸುಳಿಕೊಂಡೆವು. ಆಕೆ ಚೊಂಬಿನಲ್ಲಿ ತಂದ ನೀರನ್ನು ಒಂದು ಲೋಟಕ್ಕೆ ಬಗ್ಗಿಸಿ ಕೊಟ್ಟರು. ಅವರ ವಿಶ್ವಾಸ ಗಳಿಸಲು ಬಾಯಾರಿಕೆ ಇಲ್ಲದಿದ್ದರೂ ಕುಡಿದೆವು. ನಂತರ ತಮ್ಮ ದನಿಗೆ ರೋದನದ ಎಳೆ ಬೆರೆಸಿ, ಆಕೆ ತಮ್ಮ ಕಷ್ಟದ ಚರಿತ್ರೆಯ ಒಂದು ಸಣ್ಣ ಅಧ್ಯಾಯವನ್ನು ತೆಗೆದರು. ``ಸಾ, ನನ್ನ ಕಷ್ಟಾವ ಏನೂಂತ ಹೇಳಲಿ? ನಮ್ಮ ಮನೇವರು ದೀಕ್ಷ ತಕ್ಕಂಡ ಮೇಲ ಮನೆ ಪರಿಸ್ಥಿತಿಯೆ ಬದಲಾಗದೆ. ಅವರು ನಮ್ಮನ್ನ ಬೀದಿಪಾಲು ಮಾಡಿ ತಿರಗಾಟಕ್ಕೆ ಹೋಗವರೆ. ಮನೇನ ನಾನೊಬ್ಬಳೇ ಸಂಭಾಳಿಸಬೇಕು. ನೀ ಸತ್ತ್ಯಾ ಬದುಕಿದೆಯಾ ಅಂತ ಕೇಳಲ್ಲ. ಇರೋದೊಂದು ಈ ಕೂಸಿಗೆ ಏನು ಓದ್ತೀದಿಯಾ ಅಂತ ಕೇಳಕೂ ಅವರಿಗ ಪುರುಸೊತ್ತಿಲ್ಲ. ಯಾವಾಗಲೂ ಬುದ್ಧ ಧಮ್ಮ ದೀಕ್ಷೆ ಅಂತ ಓಡಾಡ್ತವರೆ. ನನ್ನ ಮೇಲೂ ಬುದ್ಧನ್ನ ಹೇರತಾ ಅವರೆ. ನನಗೆ ಅವರ ಬುದ್ಧಬೇಡ. ನನಗೆ ನನ್ನ ಮಂಟೆಸ್ವಾಮೀನೇ ಸಾಕು. ನನಗ ನನ್ನ ಮಾದೇಶ್ವರ ಬೇಕು. ನನಗೂ ನನ್ನದೇ ಧರ್ಮ ಇಲ್ಲವಾ? ನನಗೆ ಮನಶ್ಶಾಂತಿ ಕೊಡೋ ದೇವರ ಪೂಜೆ ಮಾಡುವ ಹಕ್ಕಿಲ್ಲವಾ? ನನಗೂ ಎಲ್ಲರ ಹಾಗೆ ಸಂಸಾರ ಮಾಡಬೇಕು ಅನ್ನೋ ಆಸೆಯಿಲ್ಲವಾ?'' ಎಂದು ಆವೇಶದಿಂದ ಮಾತಾಡತೊಡಗಿದರು. ಅವರಿಗೆ ಅರಿಯದಂತೆ ಕಣ್ಣಲ್ಲಿ ನೀರು ದಳದಳ ಇಳಿಯತೊಡಗಿತು.

ಯಾಕೊ ನನಗೆ ಬುದ್ಧನು ಹೇಳದೆ ಬಿಟ್ಟುಹೋದ ಬಳಿಕ ಶೋಕಿಸಿರಬಹುದಾದ ಯಶೋಧರೆಯ ನೆನಪಾಯಿತು. ಈ ಯಶೋಧರೆಗೆ ಹೊಸ ಧಮ್ಮವು ತನ್ನಿಂದ ತನ್ನ ಗಂಡನನ್ನೂ ತನ್ನ ಮಗುವಿನಿಂದ ಅದರ ತಂದೆಯನ್ನೂ ಕಿತ್ತುಕೊಂಡಿದೆ, ಪರಂಪರೆಯಿಂದ ಬಂದ ದೈವಗಳ ಸಂಬಂಧವನ್ನೂ ಅದು ಕಿತ್ತುಕೊಳ್ಳುತ್ತಿದೆ ಎಂಬ ನೋವಿತ್ತು. ಬಹುಶಃ ಇಸ್ಲಾಮೊ ಕ್ರೈಸ್ತವೊ ಎಲ್ಲ ಹೊಸ ಧರ್ಮಗಳ ಸ್ವೀಕಾರದ ಮೊದಲ ಘಟ್ಟದಲ್ಲಿ ಇಂತಹದೊಂದು ಮಾನಸಿಕ ಭಗ್ನತೆ, ಕೌಟುಂಬಿಕ ಛಿದ್ರತೆ ಸಂಭವಿಸುತ್ತದೆ ಎಂದು ಕಾಣುತ್ತದೆ. ಶರಣ ಧರ್ಮವೂ ಈ ಭಗ್ನತೆಯನ್ನು ಅನುಭವಿಸಿತ್ತು. ಇದನ್ನು ಬಸವಣ್ಣನ ವಚನವೊಂದು ಸೂಚಿಸುತ್ತದೆ: ``ಗಂಡ ಶಿವಭಕ್ತ, ಹೆಂಡತಿ ಮಾರಿಮಸಣಿಯ ಭಕ್ತೆ; ಗಂಡ ಕೊಂಬುದು ಪಾದೋದಕ ಪ್ರಸಾದ, ಹೆಂಡತಿ ಕೊಂಬುದು ಸುರೆಮಾಂಸ''; ಸಾಮಾಜಿಕ ಮುಂಚಲನೆಯನ್ನು ನೀಡುವ ಧರ್ಮಗಳನ್ನು ಸಾಮಾನ್ಯವಾಗಿ ಮೊದಲು ಸ್ವೀಕರಿಸುವವರು ಗಂಡಸರೇ ಯಾಕಾಗಿರುತ್ತಾರೆಯೊ? `ಮಲೆಗಳಲ್ಲಿಮದುಮಗಳ'ಲ್ಲೂ ದೇವಯ್ಯನೇ ಕ್ರಿಸ್ತನಾಗಲು ಹೊರಟು ಮನೆ ಪ್ರಕ್ಷುಬ್ಧವಾಗುತ್ತದೆ. ಗಂಡುಮುಖ್ಯವಾಗಿರುವ ನಮ್ಮ ಸಮಾಜದಲ್ಲಿ ನಿರ್ವಾಹವಿಲ್ಲದೆ ಅವರ ಹಿಂದೆ ಮಹಿಳೆಯರು ಹಿಂಬಾಲಿಸಬೇಕು ಇಲ್ಲವೇ ಪ್ರತಿರೋಧ ತೋರಬೇಕು. ಪುರುಷರ ಈ ಏಕಪಕ್ಷೀಯ ನಡತೆ ಧರ್ಮದ ವಿಷಯದಲ್ಲಿ ಮಾತ್ರವಲ್ಲ, ಎಲ್ಲ ಹೊಸ ಆಚರಣೆಗಳ ಸಂದರ್ಭದಲ್ಲೂ ಸಂಭವಿಸುತ್ತದೆ. ಸಸ್ಯಾಹಾರದ ಹಿನ್ನೆಲೆಯಿಂದ ಬಂದ ಮೇಲ್ಜಾತಿ ಗಂಡಸರು, ಮಾಂಸಾಹಾರದ ಅಭ್ಯಾಸ ಮಾಡಿಕೊಂಡ ಬಳಿಕ, ತಮ್ಮ ಹೊಸ ಆಹಾರಪದ್ಧತಿಗೆ ನೈತಿಕ ಸಮರ್ಥನೆ ಒದಗಿಸಿಕೊಳ್ಳಲೆಂದು ಅದನ್ನು ಮಡದಿಯರ ಮೇಲೂ ಹೇರುವುದುಂಟು; ಇದಕ್ಕೆ ಪ್ರತಿಯಾಗಿ, ಮೇಲ್ಜಾತಿಯ ಹುಡುಗಿಯನ್ನು ಕಟ್ಟಿಕೊಂಡ ದಲಿತರು ಮಡದಿಗಾಗಿ ಮಾಂಸಾಹಾರ ಬಿಟ್ಟಿರುವ ನಿದರ್ಶನಗಳೂ ಉಂಟು. ಆದರೆ ಇಂತಹ ನಿದರ್ಶನಗಳು ಕಡಿಮೆ.
ಆಹಾರ ಧರ್ಮ ಉಡುಗೆ ಇವುಗಳ ವಿಷಯದಲ್ಲಿ ಏಕಪಕ್ಷೀಯವಾದ ಒತ್ತಾಯವು ವಿಚಿತ್ರ ಪ್ರತಿರೋಧಗಳನ್ನು ಹುಟ್ಟಿಸುತ್ತದೆ. ಸದಾಶಯವಿದ್ದರೂ, ಅದನ್ನು  ಜಾರಿ ತರುವ  ವಿಧಾನವು ಅಸೂಕ್ಷ್ಮವಾಗಿದ್ದರೆ ವ್ಯತಿರಿಕ್ತ ಪರಿಣಾಮಗಳನ್ನೇ ತರುತ್ತದೆ. ಆದರೂ ಸಾಮಾನ್ಯವಾಗಿ  ಮಹಿಳೆಯರು ಗಂಡ ಸ್ವೀಕರಿಸಿದ ಧರ್ಮವನ್ನು ಕುರುಡಾಗಿ ಅನುಸರಿಸಲು ಒಪ್ಪದೆ, ತಮ್ಮ ಪಾರಂಪರಿಕ ದೈವ ಧರ್ಮಗಳನ್ನು ಉಳಿಸಿಕೊಂಡಿರುವ ನಿದರ್ಶನಗಳುಂಟು. ಅಕಬರನನ್ನು ವರಿಸಿದರೂ ಜೋಧಾಬಾಯಿ ತನ್ನ ಧಾರ್ಮಿಕತೆಯನ್ನು ಬದಲಿಸಿಕೊಳ್ಳಲಿಲ್ಲ. ರಾಮಾನುಜರ ಪ್ರೇರಣೆಯಿಂದ ಶ್ರೀವೈಷ್ಣವ ಧರ್ಮವನ್ನು ಹೊಯ್ಸಳದೊರೆ ಬಿಟ್ಟಿದೇವನು ಸ್ವೀಕರಿಸಿದರೂ, ಮಡದಿ ಶಾಂತಲೆ ಶೈವಧರ್ಮದಲ್ಲೇ ಮುಂದುವರೆದಳು. ಜೈನಧರ್ಮದಲ್ಲೂ ಹೀಗೆ ಆಯಿತು. ಜೈನನಾದ ಗಂಡ ಜೈನನಾಗದ ಮಡದಿ ಇರುವ ಕುಟುಂಬಗಳ ಬಗ್ಗೆ ಕವಿ ಧರ್ಮಶಿವ ತನ್ನ `ಸಮಯ ಪರೀಕ್ಷೆ'ಯಲ್ಲಿ ಅಸಹನೆಯಿಂದ ಪ್ರಸ್ತಾಪ ಮಾಡುತ್ತಾನೆ. ಲಂಕೇಶರ `ಸಂಕ್ರಾಂತಿ' ನಾಟಕದಲ್ಲಿ ಲಿಂಗದೀಕ್ಷೆ ಸ್ವೀಕರಿಸಿ ಬದಲಾಗಿರುವ ತನ್ನ ಪ್ರಿಯಕರನ್ನು ತಿರಸ್ಕರಿಸುವ ಹೆಣ್ಣಿನ ಪಾತ್ರವೂ; ಕುಲಧರ್ಮವನ್ನು ಬಿಟ್ಟು ಶಿಷ್ಟಧರ್ಮವನ್ನು ಸೇರಿದ ಮಗನನ್ನು ಒಪ್ಪದ ತಂದೆಯ ಪಾತ್ರವೂ ಇದೆ. ಈ ಪಾತ್ರಗಳ ಮೂಲಕ ಸಾಮಾಜಿಕವಾಗಿ ಕ್ರಾಂತಿಕಾರಕವಾದ ಧರ್ಮವು ತನ್ನ ಜಾರಿಯಾಗುವಿಕೆಯಲ್ಲಿ ಮಾಡುತ್ತಿರುವ ವ್ಯಕ್ತಿಗತ ಭಾವನೆಗಳ ಘಾಸಿಯನ್ನು ಚಿತ್ರಿಸುತ್ತದೆ. ನಾಟಕದ ಮಹತ್ವವಿರುವುದು ಅದರ ಕಲಾತ್ಮಕ ಯಶಸ್ಸಿನಲ್ಲಿ ಮಾತ್ರವಲ್ಲ; ಇಂತಹ ಸಾಂಸ್ಕೃತಿಕ ಸಂಕಟಗಳನ್ನು ಪರಿಭಾವಿಸಿರುವುದರಲ್ಲಿ ಕೂಡ.
ಹೊಸಧರ್ಮಗಳ ಸ್ವೀಕಾರವು ಅಸಮಾನತೆಯುಳ್ಳ ಸಮಾಜದಲ್ಲಿ ವ್ಯಕ್ತಿಯ ವೈಯಕ್ತಿಕ ಬೇಕುಬೇಡಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ದಮನಿತ ಸಮುದಾಯಗಳಿಗೆ ಸಾಮಾಜಿಕ ಚಲನಶೀಲತೆಯನ್ನು ಕೊಟ್ಟಿದೆ; ಆಧ್ಯಾತ್ಮಿಕ ಸಮಾನತೆಯ ಹಂಬಲವನ್ನು ಈಡೇರಿಸುವ ಮಾಧ್ಯಮವಾಗಿದೆ. ಆದರೂ ಹೊಸಧರ್ಮವನ್ನು ಒಳಗೆ ಬಿಟ್ಟುಕೊಳ್ಳುವಲ್ಲಿ ಮಹಿಳೆಯರು ಮತ್ತು ವಯಸ್ಸಾದ ಜನ ಯಾಕೆ ಹಿಂಜರಿಕೆ ತೋರುತ್ತಾರೆ? ಹಳೆಯ ಧರ್ಮವನ್ನು ಬಿಟ್ಟುಕೊಡಲಾಗದ ಜಿಗುಟುತನ ಪ್ರದರ್ಶಿಸುತ್ತಾರೆ? ಅಥವಾ `ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು' ಎಂಬಲ್ಲಿರುವ ಅಪೇಕ್ಷೆಯೇ ತಪ್ಪಾಗಿದೆಯೊ?
ಹೊಸಧರ್ಮವು ಜನರ ದೈವಪದ್ಧತಿಯನ್ನು ಮಾತ್ರವಲ್ಲ ಉಡುವ ಉಣ್ಣುವ ಪದ್ಧತಿಯನ್ನು ಬದಲಾಯಿಸುತ್ತದೆ; ಆಲೋಚನ ವಿಧಾನವನ್ನು ಬದಲಿಸುತ್ತದೆ. ಮೊದಲ ಹಂತದಲ್ಲಿ ಅದು ಸಮುದಾಯದ ಜತೆ ವ್ಯಕ್ತಿಗೆ ಇರುವ ಸಾವಯವ ಆಪ್ತ ಸಂಬಂಧವನ್ನು ಭಗ್ನಗೊಳಿಸುತ್ತದೆ; ವೈಚಾರಿಕ ಪ್ರಜ್ಞೆಯುಳ್ಳ ಗಂಡಸರು ಈ ಬಗೆಯ ಸಂಬಂಧ ನಷ್ಟವನ್ನು ಕೆಲಮಟ್ಟಿಗೆ ಸಹಿಸಬಲ್ಲರು. ಸಾರ್ವಜನಿಕ ಬದುಕಿನಲ್ಲಿರುವ ಅವರಿಗೆ ಪರ್ಯಾಯ ಸಂಬಂಧಗಳು ಸೃಷ್ಟಿಯಾಗುವ ಕಾರಣ, ಇದು ಅಷ್ಟು ದೊಡ್ಡ ಸಮಸ್ಯೆಯೆನಿಸುವುದಿಲ್ಲ. ಆದರೆ ಮನೆ ಮತ್ತು ಕೇರಿಗಳ ಪುಟ್ಟಜಗತ್ತಿನಲ್ಲೇ ಹೆಚ್ಚು ಸಮಯ ಕಳೆಯುವ ಅಷ್ಟೊಂದು ವೈಚಾರಿಕ ಸಿದ್ಧತೆಯಿಲ್ಲದ ಮಹಿಳೆಯರಿಗೆ, ಹೀಗೆ ಸಂಬಂಧ ಕಡಿದುಕೊಂಡು ಬದುಕುವುದು ಕಷ್ಟವಾಗುತ್ತದೆ. ಅದರಲ್ಲೂ ತಾವು ನಂಬಿದ ದೈವವನ್ನು ಕೈಬಿಡಲು ಏನು ಕೇಡಾಗುತ್ತದೆಯೊ ಎಂದು ಮನಸ್ಸು ಅಳುಕುತ್ತದೆ.
ಹಾಗೆಂದು ಮಹಿಳೆಯರು ಹೊಸಧರ್ಮ ಹೊಸದೈವಗಳ ವಿರೋಧಿಗಳಲ್ಲ. ಅವರ ಧಾರ್ಮಿಕ ಉದಾರತೆಗೆ ಮುಸ್ಲಿಮರಲ್ಲದ ಮಹಿಳೆಯರು ದರ್ಗಾ ಮತ್ತು ಮೊಹರಂ ಆಚರಣೆಗಳಲ್ಲಿ ತೊಡಗಿರುವುದು ಅಥವಾ ಗ್ರಾಮೀಣ ಮುಸ್ಲಿಂ ಮಹಿಳೆಯರು ಸ್ಥಳೀಯ ಸಂಪ್ರದಾಯಗಳನ್ನು ಅನುಸರಿಸುವುದು ಸಾಕ್ಷಿ. ಅವರು `ಅನ್ಯ' ದೈವಗಳನ್ನು ಹಳತರ ಜತೆಗೇ ಸ್ವೀಕರಿಸಿಯಾರು; ಆದರೆ ಹಳೆಯವನ್ನು ಪೂರಾ ಕೈಬಿಟ್ಟು ಸ್ವೀಕರಿಸಬೇಕೆಂದಾಗ, ಹೊಸಧರ್ಮವು ತಮ್ಮ ನಂಬಿಕೆಯ ಬೇರುಗಳನ್ನು ಅಲುಗಿಸಿದಾಗ, ಅವರಿಗೆ ಕಷ್ಟವಾಗುತ್ತದೆ.
ಧಮ್ಮದೀಕ್ಷೆಯಿಂದ ಬಂಧುಗಳ ಸಾಮಾಜಿಕ ಸಂಬಂಧ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಹುಟ್ಟುವ ಬಿರುಕುಗಳನ್ನು ನಿರ್ವಹಿಸುವ ಬೇಕಾದ ಸಾಮಾಜಿಕ ಮತ್ತು ಮಾನಸಿಕ ಮೆಕ್ಯಾನಿಸಂ ಕರ್ನಾಟಕದಲ್ಲಿನ್ನೂ ರೂಪುಗೊಂಡಂತೆ ಕಾಣುವುದಿಲ್ಲ. ಯಾಕೆಂದರೆ, ಮಹಿಳೆಯರು ಮೊದಲಿಗರಾಗಿ ಹೊಸಧಮ್ಮ ಸ್ವೀಕರಿಸಿ, ಅದನ್ನು ತಮ್ಮ ಪುರುಷರು ಅನುಸರಿಸುವಂತೆ ಮಾಡಿರುವ ನಿದರ್ಶನವೇ ನಮಗೆ ಸಿಗಲಿಲ್ಲ. ಆದರೆ ದೀಕ್ಷೆತೆಗೆದುಕೊಂಡ ಪುರುಷರು, ತಮ್ಮಂತೆ ಉಳಿದವರೂ ಧಮ್ಮವನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಾಯ ಮಾಡುತ್ತಿರುವುದು ಕಂಡಿತು. ಈ ಒತ್ತಾಯದ ಹಿಂದೆ ಅವರು ಪುರುಷರಾಗಿರುವ, ಯುವಕರಾಗಿರುವ, ನೌಕರಸ್ತರಾಗಿರುವ, ಅಕ್ಷರಸ್ತರಾಗಿರುವ, ಪ್ರಜ್ಞಾವಂತರಾಗಿರುವ ಇಗೊಗಳು ಕೆಲಸ ಮಾಡುತ್ತಿದ್ದವು. ಈ ಇಗೊಗಳು ಪರೋಕ್ಷವಾಗಿ ಉಳಿದವರಲ್ಲಿ ಬೌದ್ಧದ್ವೇಷವನ್ನು ಹುಟ್ಟಿಸಿದಂತಿದ್ದವು. ಅದರಲ್ಲೂ ಧಮ್ಮಕ್ಕೆ ಬಾರದ ಹಿರಿಯ ತಲೆಮಾರಿನವರು ಧಮ್ಮವಂತರಾಗಿರುವ ಮಕ್ಕಳಿಂದ ದೂರವಾಗಿ ಹೊಸ ಅಸ್ಪೃಶ್ಯತೆ ಮತ್ತು ಅನಾಥಪ್ರಜ್ಞೆ ಅನುಭವಿಸುತ್ತಿರುವರೆಂದೂ, ಧಮ್ಮ ಸ್ವೀಕರಿಸಿರುವ ತಲೆಮಾರು ಸ್ವೀಕರಿಸಿದವರ ಜತೆ ಸಹನೆಯಿಂದ ಒಡನಾಟ ಮಾಡುತ್ತಿಲ್ಲವೆಂದೂ ತೋರಿತು.
ಈ ಬಗೆಯ ಸಾಮಾಜಿಕ ಮಾನವೀಯ ಸಂಬಂಧಗಳ ಬಿರುಕು ಕೇವಲ ಕುಟುಂಬಗಳ ಒಳಗೆ ಮಾತ್ರವಲ್ಲ, ಹೊಸಧರ್ಮ ಸ್ವೀಕಾರ ಮಾಡಿದ ಕುಟುಂಬದ ಜತೆ, ಹಾಗೆ ಸ್ವೀಕಾರ ಮಾಡದೆ ಉಳಿದಿರುವ ಸಮುದಾಯದ ನಡುವೆ ಕೂಡ ಕಾಣಿಸಿತು. ಈಗಾಗಲೇ ಆಧುನಿಕ ತಲೆಮಾರಿನವರ ಶಿಕ್ಷಣ, ಸರ್ಕಾರಿ ಉದ್ಯೋಗ, ನಗರವಾಸ ಮತ್ತು ಮಧ್ಯಮವರ್ಗಕ್ಕೆ ಏರುವಿಕೆಗಳು, ಅನಕ್ಷರಸ್ತ ಗ್ರಾಮೀಣ ಕೆಳವರ್ಗದ ದಲಿತರ ಜತೆಗೆ ಒಂದು ಸಣ್ಣಬಿರುಕನ್ನು ಹುಟ್ಟಿಸಿವೆ; ಈ ಬಿರುಕು ಹೊಸಧರ್ಮ ಸ್ವೀಕಾರದ ಜತೆಗೆ ಮತ್ತಷ್ಟು ಅಗಲವಾಗುತ್ತಿದೆ. ಅನೇಕ ಕಡೆ ಧಮ್ಮಸ್ವೀಕಾರ ಮಾಡಿರುವ ಶಿಷ್ಟ ದಲಿತರು, ಪಾರಂಪರಿಕ ಮತಗಳಲ್ಲೇ ಉಳಿದ ತಮ್ಮ ಬಂಧುಗಳ ಬಗ್ಗೆ ಅವರು ಅಜ್ಞಾನಿಗಳು ಎಂಬ ದನಿಯಲ್ಲಿ ಅನಾದರದಿಂದ ಮಾತಾಡುತ್ತಿದ್ದರು. ತಮ್ಮ ಹಿರೀಕರು ಮಾರಮ್ಮ ಊರಮ್ಮಗಳಿಗೆ ನಡೆದುಕೊಳ್ಳುವುದು, ಕೋಳಿ ಕೋಣ ಬಲಿಕೊಡುವುದು, ಮಾಂಸಾಹಾರ ಮದ್ಯಪಾನ ಮಾಡುವುದು ಇತ್ಯಾದಿಯನ್ನು ಅವರು ಅಸಹನೆಯಿಂದ ಕಾಣುತ್ತಿದ್ದರು. ಇದಕ್ಕೆ ತಕ್ಕಂತೆ ಕೆಲವು ದಲಿತ ಭಂತೆಗಳು ಮಾಂಸಾಹಾರ ಸೇವನೆ ಮತ್ತು ಕುಡಿತಗಳನ್ನು ಹೀನ ಆಚರಣೆಗಳೆಂದೂ ಅವನ್ನು ದಲಿತರು ಬಿಟ್ಟುಬಿಡಬೇಕೆಂದೂ ಪ್ರತಿಪಾದಿಸುತ್ತಿದ್ದರು.
ಧಮ್ಮಸ್ವೀಕಾರದಿಂದ ಹುಟ್ಟಿದ ಈ ಬಿರುಕು, ಹೈದರಾಬಾದ್ ಕರ್ನಾಟಕದ ಊರುಗಳಲ್ಲಿ ಇನ್ನೊಂದು ತೆರನಾಗಿ ಕೆಲಸಮಾಡುತ್ತಿತ್ತು. ಅಲ್ಲಿ ಧಮ್ಮದೀಕ್ಷೆಯನ್ನು ಕೇವಲ ಚಲುವಾದಿಗಳು (ಬಲಗೈ ಹೊಲೆಯರು)  ಮಾಡಿದ್ದರು. ಧಮ್ಮದೀಕ್ಷೆ ಸ್ವೀಕರಿಸಿದ ಬಳಿಕ ಮಲ್ಲಿಕಾರ್ಜುನ ಖರ್ಗೆಯವರು ಗುಲಬರ್ಗದಲ್ಲಿ ದೊಡ್ಡದೊಂದು ಬೌದ್ಧ ಚೈತ್ಯಾಲಯ ನಿರ್ಮಿಸಿದ್ದರು. ಬೀದರ್ ಗುಲಬರ್ಗ ಜಿಲ್ಲೆಗಳಲ್ಲಿ ಬಲಗೈಯವರು ಧಮ್ಮದೀಕ್ಷೆ ಪಡೆಯಲು, ಮಹಾರರೇ ಪ್ರಮುಖವಾಗಿರುವ ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿಯೂ ಒಂದು ಕಾರಣ. ಪಾರ್ಟಿಯು ಧಮ್ಮದೀಕ್ಷೆ ಪಡೆದ ಅಂಬೇಡ್ಕರ್ ಅವರನ್ನು ರಾಜಕೀಯ ಸಾಂಸ್ಕೃತಿಕ ನಾಯಕನೆಂದು ಭಾವಿಸಿತು. ಇದು ದಲಿತರ ಎಡಗೈ ಬಣವನ್ನು ಮತ್ತೊಂದು ಬಗೆಯಲ್ಲಿ ಸಂಘಟಿತವಾಗಲು ಪ್ರಚೋದಿಸಿತು. ಒಡೆದ ಬಣಗಳು ದಾಯಾದಿಗಳಂತೆ ಇದ್ದವು. ಬಲಗೈನವರು ಅಂಬೇಡ್ಕರ್ ಅವರನ್ನು ನಾಯಕರನ್ನಾಗಿಸಿಕೊಂಡು ಧಮ್ಮಸ್ವೀಕಾರ ಮಾಡಿದರೆ, ಎಡಗೈವರು ಜಗಜೀವನರಾಮರನ್ನು ನಾಯಕರಾಗಿಸಿಕೊಂಡು ಕ್ರೈಸ್ತಧರ್ಮದತ್ತ ಚಲಿಸಿದ್ದರು. ಹೀಗೆ ಕುಟುಂಬ, ಸಮುದಾಯ ಮತ್ತು ಕೇರಿಗಳ ನಡುವೆ ಧಮ್ಮವು ಬೇರೊಂದು ಬಗೆಯಲ್ಲಿ ಬಿರುಕಿಗೆ ಕಾರಣವಾದಂತೆ ತೋರಿತು.
ರಹಮತ್, ಅರುಣ್, ಕುಲಕರ್ಣಿ, ಗೋವಿಂದಯ್ಯಹೊಸಧರ್ಮಗಳು ಎಷ್ಟೇ ನಾಗರಿಕವಾಗಿರಲಿ, ದಮನಿತರಿಗೆ ಸಾಮಾಜಿಕ ಚಲನಶೀಲತೆ ಕೊಡುವಂತಹದ್ದಾಗಿರಲಿ, ಅವನ್ನು ಮಾನಸಿಕ ಸಿದ್ಧತೆಯಿಲ್ಲದ ಜನರ ಮೇಲೆ ಹೇರಿದಾಗ ಅವು ಹಿಂಸ್ರಕವಾಗಿ ರೂಪಾಂತರಗೊಳ್ಳುತ್ತವೆ. ಯಾವುದೇ ಕ್ರಾಂತಿಕಾರ ಸಿದ್ಧಾಂತವನ್ನು ಸಹ ಅತ್ಯವರಸರದಲ್ಲಿ ಉತ್ಸಾಹದಲ್ಲಿ ಹೇರಿಕೊಂಡಾಗ ಅನೇಕ ಮಾನವೀಯ ಸೂಕ್ಷ್ಮತೆಗಳು ಕಳೆದುಹೋಗಿಬಿಡುತ್ತವೆ. ಈಗಿನ ಮುಸ್ಲಿಮರಲ್ಲಿ ಬಹಳ ಪ್ರಭಾವಶಾಲಿಯಾಗಿರುವ ತಬ್ಲೀಕ್ ಎಂಬ ನವಇಸ್ಲಾಮಿಕ್ ಚಳುವಳಿಯಿಂದ ಸಾವಿರಾರು ಕುಟುಂಬಗಳಲ್ಲಿ ಸತಿಪತಿಗಳೊಂದಾಗದ ಭಕ್ತಿಯು ಏರ್ಪಟ್ಟು, ಮಾನವೀಯ ಸಂಬಂಧಗಳು ಕಂಗೆಟ್ಟಿವೆ. ಧರ್ಮಪ್ರಸಾರಕ್ಕೆ ತಮ್ಮನ್ನು ಬಿಟ್ಟು ತಿಂಗಳುಗಟ್ಟಲೆ ಹೋಗುವ, ಯಾವಾಗಲೂ ಮಸೀದಿಗಳಲ್ಲಿ ಬೀಡುಬಿಟ್ಟಿರುವ ಗಂಡಂದಿರ ವರ್ತನೆಯಿಂದ ಅನೇಕ ಮಹಿಳೆಯರು, ಖಿನ್ನತೆಯಿಂದ ನರಳುತ್ತಿದ್ದಾರೆ. ಕೆಲವರು, ದೇವರ ದಾರಿಯಲ್ಲಿ ಹೋದ ಗಂಡನನ್ನು ಬಿಟ್ಟು ಹೊಸಪುರುಷನನ್ನು ಹುಡುಕಿ ಹೋಗಿರುವುದೂ ಉಂಟು.
ಕರ್ನಾಟಕದಲ್ಲಿ ಸಾಮೂಹಿಕ ಧಮ್ಮದೀಕ್ಷೆ ನೀಡುವ ಕಾರ್ಯಕ್ರಮಗಳು ನಡೆಯುತ್ತಿವೆ. ಅದು ಕರ್ನಾಟಕ ಸಾಮಾಜಿಕ ಸಮೀಕರಣವನ್ನು ಬದಲಿಸುವಷ್ಟು ಶಕ್ತವೊ ಅಲ್ಲವೊ, ಅಸ್ಪೃಶ್ಯತೆಯ ಕಾಯಿಲೆಗೆ ಯಾವ ಬಗೆಯ ಮದ್ದೊ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕಾಗಿ ಬೆಲೆ ತೆರುತ್ತಿರುವವರು ಮಾತ್ರ ಮಹಿಳೆಯರಾಗಿದ್ದಾರೆ. ಧಮ್ಮದೀಕ್ಷೆ ನೀಡುತ್ತಿರುವವರು ಈ ಸಾಂಸ್ಕೃತಿಕ  ಬಿಕ್ಕಟ್ಟುಗಳನ್ನು ಪರಿಭಾವಿಸಿದಂತಿಲ್ಲ. ಹೀಗಾಗಿ ನಾವು ಕಂಡ ಬಹುತೇಕ ಯಶೋಧರೆಯರಲ್ಲಿ ಬುದ್ಧನ ಬಗ್ಗೆ ಕೋಪವಿತ್ತು. ಇದಕ್ಕೆ ಕಾರಣವಾಗಿದ್ದು ಧಮ್ಮವಲ್ಲ. ಧಮ್ಮವನ್ನು ನೆಲೆಗೊಳಿಸುತ್ತಿರುವ ವಿಧಾನ. 
ನಮ್ಮ ಬೌದ್ಧಯಾನದಲ್ಲಿ ಅನೇಕ ದಲಿತ ಕುಟುಂಬಗಳಲ್ಲಿ ಧಮ್ಮಸ್ವೀಕಾರವು ಹೊಸ ಆತ್ಮಾಭಿಮಾನವನ್ನು ಹೊಸ ಬದುಕಿನ ಕ್ರಮವನ್ನು ತಂದಿತ್ತಿರುವ ಹಲವಾರು ನಿದರ್ಶನಗಳನ್ನು ನಾವು ಕಂಡೆವು. ಆದರೆ ಎಲ್ಲ ಬಗೆಯ ಪರಿವರ್ತನೆಗಳ ಹೊತ್ತಲ್ಲಿ ಪ್ರತಿರೋಧ ಹತಾಶೆ ಅಸಹಾಯಕತೆ ಕಂಡೆವು. ನಮಗೆ ಬೌದ್ಧಧರ್ಮಕ್ಕೆ ಸೇರಿದ ಶಾಸನ, ವಿಗ್ರಹ ಚೈತ್ಯಾಲಯಗಳು ಭಗ್ನಾವಸ್ಥೆಯಲ್ಲಿ ಇದ್ದುದು ಕಂಗೆಡಿಸಲಿಲ್ಲ; ಧಮ್ಮಸ್ವೀಕಾರದ ವಿಷಯವು ಮನುಷ್ಯರ ಮತ್ತು ಕುಟುಂಬಗಳ ನಡುವೆ ಭಗ್ನತೆ ಹತಾಶೆ ತಂದಿರುವುದು ಕಂಗೆಡಿಸಿತು. ಯಶೋಧರೆಯರ ಕಷ್ಟಗಳಿಗೆ ಕೊನೆಯಿಲ್ಲವೆನಿಸಿತು.
(ಚಿತ್ರಗಳು: ಲೇಖಕರವು)
sources http://www.kendasampige.com/print_article.php?id=3423

html