Pages

Showing posts with label DSS Protest. Show all posts
Showing posts with label DSS Protest. Show all posts

Sunday, 30 October 2011

ದಲಿತರ ಸಮಸ್ಯೆ ಬಗೆಹರಿಸಲು ಆಡಳಿತ ವಿಫಲ

ಮಲದ ಗುಂಡಿಯಲ್ಲಿ ಸಾವು ಪ್ರಕರಣ:ಸುರೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಸೋಮವಾರ - ಅಕ್ಟೋಬರ್ -31-2011

ಮಂಡ್ಯ,ಅ.30:ಕೋಲಾರದ ಕೆ.ಜಿ.ಎಫ್‌.ನಲ್ಲಿ ಮಲತೆಗೆಯುತ್ತಿದ್ದ ಮೂವರು ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್‌ಕುವಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟ ದಲಿತ ಸಂರ್ಷ ಸಮಿತಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರಕಾರದ ವಿರುದ್ಧ ೋಷಣೆ ಕೂಗಿ ಸುರೇಶ್‌ಕುವಾರ್ ಅವರ ಪ್ರತಿಕೃತಿ ದಹನ ವಾಡಿ ಆಕ್ರೋಶ ವ್ಯಕ್ತಪಡಿಸಿದರು.ಕೆ.ಜಿ.ಎಫ್‌.ನಲ್ಲಿ ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ಸುರೇಶ್‌ಕುವಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾವನ್ನಪ್ಪಿದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ವಿರುದ್ಧ ಇರುವ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು. ರಾಜ್ಯದಲ್ಲಿ ಮಲತೆಗೆಯುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿ.ಎಂ.ಸತ್ಯ,ಚಿಕ್ಕೀರಯ್ಯ, ನಾಗರಾಜು, ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದಲಿತರ ಸಮಸ್ಯೆ ಬಗೆಹರಿಸಲು ಆಡಳಿತ ವಿಫಲ: ಸೋಮಯ್ಯ

ಸೋಮವಾರ - ಅಕ್ಟೋಬರ್ -31-2011

ಹುಣಸೂರು,ಅ.30:ದಲಿತರ ಸಮಸ್ಯೆಗಳನ್ನು ಬಗೆ ಹರಿಸಲು ಹುಣಸೂರು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದಸಂಸದ ಸಂಚಾಲಕ ಹೊಸಕೋಟೆ ಸೋಮಯ್ಯ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ದಲಿತ ಕಟುಂಟುಗಳು ನಿವೇಶನ, ವಸತಿಯನ್ನು ಹೊಂದಿಲ್ಲ. ನೀರಿನ ಸಂಪರ್ಕ ಕೂಡ ಇಲ್ಲ. ಆದರೆ ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಸ್ಥಳೀಯಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ದಲಿತರು ವಾಸಿಸುವ ಪ್ರದೇಶ, ಕಾಲನಿಯ ರಸ್ತೆಗಳಿಗೆ ಬೀದಿ ದೀಪಗಳನ್ನು ಸ್ಥಳೀಯಾಡಳಿತ ಒದಗಿಸಿಲ್ಲ. ದಲಿತರ ಮೇಲೆ ಸವರ್ಣೀಯರ ದೌರ್ಜನ್ಯ ಪ್ರಕರಣಗಳು ನಿರಂತರ ವರದಿಯಾಗುತ್ತಿದೆ.
ಆದರೆ ಇದನ್ನು ತಡೆಯಲು ಉಪ ವಿಭಾಗಾಧಿಕಾರಿಯಾಗಲಿ ಅಥವಾ ತಹಶೀಲ್ದಾರ್‌ರಾಗಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದರು. ದಲಿತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸದಿದ್ದಲ್ಲಿ ದಸಂಸ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸೋಮಯ್ಯ ನೀಡಿದ್ದಾರೆ.

ಮಲದ ಗುಂಡಿಯಲ್ಲಿ ಸಾವು ಪ್ರಕರಣ:ಸುರೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಸೋಮವಾರ - ಅಕ್ಟೋಬರ್ -31-2011

ಮಂಡ್ಯ,ಅ.30:ಕೋಲಾರದ ಕೆ.ಜಿ.ಎಫ್‌.ನಲ್ಲಿ ಮಲತೆಗೆಯುತ್ತಿದ್ದ ಮೂವರು ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್‌ಕುವಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟ ದಲಿತ ಸಂರ್ಷ ಸಮಿತಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರಕಾರದ ವಿರುದ್ಧ ೋಷಣೆ ಕೂಗಿ ಸುರೇಶ್‌ಕುವಾರ್ ಅವರ ಪ್ರತಿಕೃತಿ ದಹನ ವಾಡಿ ಆಕ್ರೋಶ ವ್ಯಕ್ತಪಡಿಸಿದರು.ಕೆ.ಜಿ.ಎಫ್‌.ನಲ್ಲಿ ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ಸುರೇಶ್‌ಕುವಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾವನ್ನಪ್ಪಿದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ವಿರುದ್ಧ ಇರುವ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು. ರಾಜ್ಯದಲ್ಲಿ ಮಲತೆಗೆಯುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿ.ಎಂ.ಸತ್ಯ,ಚಿಕ್ಕೀರಯ್ಯ, ನಾಗರಾಜು, ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

html