Pages

Saturday 21 May 2011

ಭಾರತದಲ್ಲಿ ಅಂಬೇಡ್ಕರ್ ಮಾದರಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ?


   ಪ್ರಜಾಪ್ರಭುತ್ವ ಹಾಗೆಂದರೆ  ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸಕರ್ಾರ. ಇದು ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ನರ ಡೈಲಾಗು. ಒಂದರ್ಥದಲಿ ಇದು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಇಡೀ ವಿಶ್ವದ ಡೈಲಾಗಾಗಿ ಹೋಗಿದೆ.ಪ್ರಜಾಪ್ರಭುತ್ವ ಎಂದರೆ ಏನು ಎಂದಾಕ್ಷಣ ಎಲ್ಲರು ಹೇಳುವುದು ಅದನ್ನೆ.  ಆದರೆ ಅದು ಎಷ್ಟು ಸರಿ? ಪ್ರಜಾಪ್ರಭುತ್ವವೆಂದರೆ ಕೆವಲ ಸಕರ್ಾರದ ಒಂದು ಮಾದರಿಯೇ? ಆಡಳಿತದ  ಒಂದು ಪದ್ಧತಿಯೇ? ಬೇರೇನು ಅಲ್ಲವೇ? ಇಂತಹದ್ದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳಲು ಹೋಗಿಲ್ಲ.  ಹಾಗೆ ಹೋಗುವುದೂ ಇಲ್ಲ. ಒಳ್ಳೆ ಗಿಳಿಪಾಠ ಹೇಳಿದ ಹಾಗೆ ಲಿಂಕನ್ನರ ಡೈಲಾಗನ್ನು ಪಟಪಟ ಎಂದು ಉದುರಿಸುತ್ತಾರೆ. ತನ್ಮೂಲಕ ಪ್ರಜಾಪ್ರಭುತ್ವ ಎಂದರೆ ಇದಿಷ್ಟೆ ಎಂದು ಅದಕ್ಕೆ ಒಂದು ಸೀಮಿತ ಚೌಕಟ್ಟನ್ನು ಒದಗಿಸುತ್ತಾರೆ.  ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿವರ್ೀರ್ಯಗೊಳಿಸುತ್ತಿದ್ದಾರೆನ್ನಬಹುದು.ವಿಶೇಷವಾಗಿ ಭಾರತದ ಮಟ್ಟಿಗೆ.
    ಹಾಗಿದ್ದರೆ ಪ್ರಜಾಪ್ರಭುತ್ವ ಹಾಗೆಂದರೇನು? ಅದರ ನೈಜ ಅರ್ಥ ಏನು? ವಿಶ್ವದಲ್ಲಿ ವಿಶೇಷವಾಗಿ ಭಾರತದಲ್ಲಿ ಅದರ ಸ್ಥಾನ ಏನು? ಅದರ ಸಾಮಾನ್ಯ ಅರ್ಥಕ್ಕೂ, ಅದಕ್ಕೆ ಇರುವ ನೈಜ ಅರ್ಥಕ್ಕೂ ಇರುವ ವ್ಯತ್ಯಾಸ ಎಂತಹದ್ದು? ತಪ್ಪುತಪ್ಪಾಗಿ , ಆತುರಾತುರವಾಗಿ ಹಿಂದೆ ಮುಂದೆ ಯೋಚಿಸದೆ  ಅದನ್ನು ವ್ಯಾಖ್ಯಾನಿಸುವ ಆಥರ್ೈಸಿಕೊಳ್ಳುವ ಹುನ್ನಾರವಾದರೂ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವುದು ಸಾಧ್ಯವಿಲ್ಲ.
       ಹಾಗಿದ್ದರೆ ಪ್ರಜಾಪ್ರಭುತ್ವ ಹಾಗೆಂದರೇನು? ಖ್ಯಾತ ಚಿಂತಕರೂ ವಿಶ್ವ ಶ್ರೇಷ್ಠ ಜ್ಞಾನಿಗಳೂ ಆದ ಬಾಬಾಸಾಹೇಬ್ ಡಾ.ಅಂಬೇಡ್ಕರರ ಪ್ರಕಾರ ಪ್ರಜಾಪ್ರಭುತ್ವ ಹಾಗೆಂದರೆ ಹಲವು ಜನರು ಒಂದೆಡೆ ಸಹಯೋಗದಿಂದ ಒಟ್ಟಾಗಿ ಜೀವಿಸುವ ಜೀವನ ವಿಧಾನ ವೆಂದರ್ಥ. ಅವರ ಪ್ರಕಾರ  ಅದು ಬರೀ  ಸಕರ್ಾರದ ಒಂದು ವಿಧವಲ್ಲ. ಒಂದರ್ಥದಲಿ  ಅದಕ್ಕಿಂತ ಹೆಚ್ಚಿನದು. ಅವರ ಪ್ರಕಾರ ಅದರ ಮೂಲ ಬೇರು ಸಮಾಜದ ವಿವಿಧ ಜನರ  ನಡುವೆ ಇರುವ ಸಾಮಾಜಿಕ ಸಂಬಂಧದಲ್ಲಿರುತ್ತದೆ. ಅಕಸ್ಮಾತ್ ಆ ಸಂಬಂಧ  ಗಟ್ಟಿಯಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ ಎಂದರ್ಥ. ಸಡಿಲವಾಗಿದ್ದರೆ ಸಡಿಲವಾಗಿದೆ ಎಂದರ್ಥ. ವಿಶಾಲಾರ್ಥದಲಿ ಹೇಳುವುದಾದರೆ ಯಾರೋ ಒಬ್ಬ ಪ್ರಧಾನಿ, ಮುಖ್ಯಮಂತ್ರಿಯಾಗಬೇಕು ಅದಕ್ಕೋಸ್ಕರ ಉಳಿದವರೆಲ್ಲಾ ಓಟು ಹಾಕಬೇಕು ಎನ್ನುವುದಷ್ಟಕ್ಕೆ   ಪ್ರಜಾಪ್ರಭುತ್ವ ವ್ಯವಸ್ಥೆ ಉಂಟಾಗುವುದಿಲ್ಲ. ಬದಲಿಗೆ ಆ ದೇಶದ, ಆ ದೇಶದೊಳಗಿನ ವಿವಿಧ ಸಮಾಜದ ಜನರ ನಡುವೆ ಪರಸ್ಪರ ಸಹಕಾರ , ಸಹಯೋಗದಿಂದ ಬದುಕುವ ಉದ್ದೇಶ ಮತ್ತು ಆಸೆ ಇರಬೇಕು. ಪರಸ್ಪರ ವಿಶ್ವಾಸ, ನಂಬಿಕೆ, ಸೌಹಾರ್ದತೆ ಇರಬೇಕು. ವಯಕ್ತಿಕ ಮಟ್ಟದಲ್ಲಲ್ಲದಿರಬಹುದು ಚಿಣ ಟಜಚಿಣ  ಸಾಮುದಾಯಿಕ ಮಟ್ಟದಲ್ಲಿ.
     ಅಂದಹಾಗೆ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ  ಅಂಬೇಡ್ಕರರರ ಈ ವ್ಯಾಖ್ಯೆ? ನಿಜಕ್ಕೂ ಆಶ್ಚರ್ಯಕರವಾದುದು.  ಹಾಗೆ ಕುತೂಹಲಕರವಾದುದೂ ಕೂಡ ಹೌದು. ಏಕೆಂದರೆ  ಜನಗಳು ಓಟು ಹಾಕಿ ಜನಪ್ರತಿನಿಧಿಗಳನ್ನು ಗೆಲ್ಲಿಸಿ ಆ ಜನರಲ್ಲೇ ಒಬ್ಬನನ್ನು ಕಒ ಆಗಿ ಕಡಿಜಜಜಟಿಣ ಆಗಿ ನೇಮಿಸುವುದನ್ನು ಬಹುತೇಕರು ಪ್ರಜಾಪ್ರಭುತ್ವ ಎಂದು ಕೊಂಡಿದ್ದಾರೆ! ಎಂದು ಕೊಳ್ಳುತ್ತಿದ್ದಾರೆ ಕೂಡ. ಅಂತಹದ್ದರಲ್ಲಿ ಸೌಹಾರ್ದತೆಯಿಂದ ಬದುಕುವುದನ್ನೇ ನಿಜವಾದ ಪ್ರಜಾಪ್ರಭುತ್ವವೆನ್ನುವುದು? ವಿಚಿತ್ರ! ಆದರೆ ಸತ್ಯ. ಅಂದಹಾಗೆ ಪ್ರಜಾಪ್ರಭುತ್ವದ ಬಗೆಗಿನ ಅಂಬೇಡ್ಕರರ ಆ ನಿಲುವು ಬಹುಶಃ ವಿಶ್ವದ ಯಾವುದೇ ರಾಜಕೀಯವಿಜ್ಞಾನಿಗೆ ಗೋಚರಿಸದಂತಹದ್ದು. ಯಾರ ಊಹೆಗೂ ನಿಲುಕದಂತಹದ್ದು. ಯಾಕೆಂದರೆ ಉದಾಹರಣೆಗೆ ಭಾರತದ  ಮಟ್ಟಿಗೆ ಹೇಳುವುದಾದರೆ ಒಂದು ಚುನಾವಣೆ ಬರುತ್ತದೆಂದಿಟ್ಟುಕೊಳ್ಳಿ.  ಜನ ಓಟು ಮಾಡುತ್ತಾರೆ. ಯಾರೋ ಒಬ್ಬ ಗೆಲ್ಲುತ್ತಾನೆ. ಒಐಂ,ಒಕ ಕೂಡ ಆಗುತ್ತಾನೆ. ಕಒ, ಕಡಿಜಜಜಟಿಣ ಕೂಡ ಆಗುತ್ತಾನೆ. ಹಾಗೆ ಆದ  ಮಾರನೆ ದಿನವೇ  ದೇಶದ ಯಾವುದೋ ಮೂಲೆಯಲ್ಲಿ ಯಾವುದೋ  ಒಂದು ಊರಿನ ಒಂದು ಜಾತಿಯ ಜನರು  ಇನ್ನೊಂದು ಜಾತಿಯ ಜನರಿಗೆ ಎಲ್ಲಾ ಹಕ್ಕುಗಳನ್ನು ನಿರಾಕರಿಸುತ್ತಾರೆ! ಬಹಿಷ್ಕಾರ ಹಾಕುತ್ತಾರೆ! ಆ ಒಂದು ಜಾತಿಯ ಜನರು ಇನ್ನೊಂದು ಜಾತಿಯ ಜನರಿಗೆ ಗುಲಾಮರಾಗಿರಬೇಕು. ಅವರು ಹೇಳಿದ ಹಾಗೆ ಕೆಳಬೇಕು. ಅವರು ನಿಂತುಕೊಳ್ಳೀ ಎಂದರೆ ನಿಂತುಕೋಳ್ಳಬೇಕು ಕುಳಿತು ಕೋಳ್ಳಿ ಎಂದರೆ ಕುಳಿತುಕೊಳ್ಳಬೇಕು! ಊರಹೊರಗಿರಿ ಎಂದರೆ ಇರಬೇಕು! ಅಂದಹಾಗೆ ಹಾಗೆ ಊರ ಹೊರಗೆ ತಳ್ಳಲ್ಪಟ್ಟ ಜನ ಅಂದರೆ ಪ್ರಜೆಗಳು "ಪ್ರಭುಗಳು ಹೇಗಾಗುತ್ತಾರೆ? ಹಾಗೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಾಗುತ್ತದೆ? ಒಟ್ಟಾರೆ ಅಲ್ಲಿ ಮೆರೆದಾಡುವುದು ಮೇಲ್ಜಾತಿ ಜನರ ಸವರ್ಾಧಿಕಾರವೇ ಅಲ್ಲವೇ? ಮುಂದುವರಿದು ಹೇಳುವುದಾದರೆ ಊರ ಹೊರಗೆ ತಳ್ಳಲ್ಪಟ್ಟ ಅಂತಹ ಪ್ರಜೆಗಳು ಹಾಗೆ ನಡೆದ ಚುನಾವಣೆಯಲ್ಲಿ ಮೇಲ್ಜಾತಿ ಜನರು  ಹೇಳಿದ ಪಕ್ಷಕ್ಕೆ ಮತ್ತವರು ನೀಡಿದ ಒಂದು ಪೊಟ್ಟಣ ಚಿತ್ರಾನ್ನ ಮತ್ತು ಒಂದು ಪಾಕೀಟು ಸಾರಾಯಿಗೆ  ಕಟ್ಟುಬಿದ್ದು ಓಟುಮಾಡಿರುತ್ತಾರೆ ಮತ್ತು ಅವರ ಓಟು ಪಡೆದವನೇ ಒಐಂ,ಒಕ,ಅಒ,ಕಒ ಕೂಡ ಆಗಿರುತ್ತಾನೆ. ಹಾಗೆಂದ ಮಾತ್ರಕ್ಕೆ ಇವರು ಪ್ರಭುಗಳಾದರೆಂದರ್ಥವೇ? ಇವರ ಕೈಗೆ ಆಡಳಿತ ಬಂತೆಂದರ್ಥವೇ? ಖಂಡಿತ ಇಲ್ಲ. ಹಾಗೇನಾದರೂ ಇವರು ಮತ್ತು ಇವರ ಸಮುದಾಯದವರು  ಪ್ರತಿಶತ ಓಟುಮಾಡಿದ್ದಾರೆ ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿದೆ ಎಂದುಕೊಂಡರೆ ಅದಕ್ಕಿಂತ ಕ್ರೂರ ಆತ್ಮಘಾತುಕ ಹೇಳಿಕೆ ಮತ್ತೊಂದಿಲ್ಲ. ಏಕೆಂದರೆ ಮೇಲ್ಜಾತಿಗಳ ಮಜರ್ಿಗೆ ಒಳಗಾಗಿ ಅವರ ದೌರ್ಜನ್ಯಕ್ಕೆ ಹೆದರಿ ಬದುಕುವ ಆ ತಳ ಸಮುದಾಯ ಗುಲಾಮಿ ಸಮುದಾಯ .ಹಾಗೆಯೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ಇಲ್ಲಿ ನಡೆಯುವುದು ಮೇಲ್ಜಾತಿ ಜನರ ಸವರ್ಾಧಿಕಾರ. ಹೀಗಿರುವಾಗ ಇಲ್ಲಿ  ಎಲ್ಲರೂ ಪ್ರಜೆಗಳೂ , ಎಲ್ಲರಿಗೂ ಅಧೀಕಾರ ಸಿಕ್ಕಿದೆ ಎಂಬ ಪ್ರಜಾಪ್ರಭುತ್ವದ ನೈಜ ಆಶಯ ನೆರವೇರಿದೆಯೇ?ಖಂಡಿತ ಇಲ್ಲ.ಹೀಗಿರುವಾಗ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂದು ಮಗ್ಗಿ ಒಪ್ಪಿಸುವುದು? ಒಂದರ್ಥದಲಿ ಅದು ವ್ಯವಸ್ಥೆಯನು ದಿಕ್ಕು ತಪ್ಪಿಸುವಂತಹದ್ದು. ಅಥವಾ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವಂತಹದ್ದು.
 ಹಾಗಿದ್ದರೆ ಈ ವಿಶ್ವದಲ್ಲಿ ವಿಶೇಷವಾಗಿ ಬಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೇ ಅಸ್ತಿತ್ವದಲ್ಲಿದೆಯೇ? ಖಂಡಿತ ಈ ಪ್ರಶ್ನೆಗೆ ಉತ್ತರ ಟಿಠ ಎಂದಷ್ಟೆ ಹೇಳಬೇಕು. ಯಾಕೆಂದರೆ  120 ಕೋಟಿ ಜನರೂ ಪರಸ್ಪರ ಸಹಯೊಗದಿಂದ ಬದುಕುವುದು ಬೇಡ ಕನಿಷ್ಠ ಇಲ್ಲಿರುವ 6000 ಕ್ಕೂ ಹೆಚ್ಚು ಜಾತಿಗಳವರು, 5 ಕ್ಕೂ ಹೆಚ್ಚು ಧರ್ಮಗಳವರು ಪರಸ್ಪರ ಒಬ್ಬರ ಹಕ್ಕುಗಳನ್ನು  ಮತ್ತೊಬ್ಬರು ಗೌರವಿಸಿ ಸಹಯೋಗದಿಂದ ಬದುಕುವುದು ಬೇಡವೇ? ಸೌಹಾರ್ದತೆಯಿಂದ ಬಾಳ್ವೆ ನಡೆಸುವುದು ಬೇಡವೆ? ಮತ್ತೊಬ್ಬರ ಮೆಲೆ ತಮ್ಮ ಡೌಲು ದರ್ಪಗಳನ್ನು ತೋರಿಸುವುದು ಅದೆಷ್ಟು ಸರಿ?  ಇಂತಹ ನಡತೆ ಹಿಟ್ಲರನ ನಡತೆಗಿಂತ ಅದ್ಯಾವ ರೀತಿ ಕಮ್ಮಿ?
   ಮುಂದುವರಿದು ಒಂದು ಸಮುದಾಯವನ್ನು  ಊರ ಹೊರಗಿರಿ , ನೀವು ಶಿಕ್ಷಣ ಪಡೆಯಬೇಡಿ, ನೀವು ಮುಟ್ಟಿಸಿಕೊಳ್ಳಬೇಡಿ,  ನೀವು ದೇವಸ್ಥಾನ ಪ್ರವೇಶಿಸ ಬೇಡಿ, ನೀವು ನಮ್ಮ ಮಕ್ಕಳ ಜೊತೆ ಕೂರಬೇಡಿ, ನೀವು ಅಡಿಗೆ ಮಾಡಿದರೆ ನಾವು ತಿನ್ನುವುದಿಲ್ಲ. ನಿಮಗೆ ಬೇರೆ ಪಂಕ್ತಿ ನಮಗೆ ಬೇರೆ ಪಂಕ್ತಿ , ನಿಮ್ಮನ್ನು ಮಟ್ಟ ಹಾಕುವುದೇ ನಮ್ಮ ಗುರಿ,ನಿಮ್ಮನ್ನು ತುಳಿಯುವುದು ನಮ್ಮ ರಕ್ತ ಗುಣ, ನಿಮಗೆ ತೊಂದರೆ ಕೊಡುವುದೇ, ಆ ತೊಂದರೆಯಲ್ಲಿ ನೀವು ನರಳುವಂತೆ ಮಾಡುವುದರಲ್ಲೇ ನಮ್ಮ ಶ್ರೇಯಸ್ಸಡಗಿದೆ ಎನ್ನುವುದರಲ್ಲಿ ಪ್ರಜಾಪ್ರಭುತ್ವವೆಲ್ಲಿದೆ? ಮೇಲ್ಜಾತಿಗಳ ಸವರ್ಾಧಿಕಾರಿ ನಿಲುವಿಗೆ ಕೆಳಜಾತಿಗಳು ನಲುಗುವುದು ಎಂದರೆ ಇದೇ ಅಲ್ಲವೇ? ಮತ್ತು ಹೀಗೆ ಬದುಕುವುದನ್ನು  ಪ್ರಜಜಾಪ್ರಭುತ್ವವೆಂದು ಕರೆಯಲು ಸಾಧ್ಯವೇ? ಹಾಗೆಯೇ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕೊಳ್ಳಬೇಕೆ? ಖಂಡಿತ ಹಾಗೇ ಹೇಳಿದ್ದೇ ಆದರೆ ಅದು ನಮ್ಮ ಕಣ್ಣಿಗೆ ನಾವೇ ಮಂಕು ಬೂದಿ ಎರಚಿಕೊಂಡ ಹಾಗೆ. ದೂರದ ಲಿಂಕನ್ನನನ್ನು ಹಿಂದು ಮುಂದು ನೋಡದೆ ಇಲ್ಲಿ ಮಾತನಾಡಿದರೆ ಅಥವಾ ಅವನ ಸಿದ್ಧಾಂತ ನಮ್ಮಲ್ಲಿ ಯಶಸ್ವಿಯಾಗಿದೆ ಎಂದರೆ ನಮಗೆ ನಾವೇ ನೇಣು ಹಾಕಿಕೊಂಡ ಹಾಗೆ.
 ಈ ನಿಟ್ಟಿನಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಬದಲಾಗಬೇಕಿದೆ. ಬೇರೆ ಕಡೆ ಹೇಗೇ ಏನೋ ಗೊತ್ತಿಲ್ಲ.  ವಿಶೇಷವಾಗಿ ಭಾರತದ ದೃಷ್ಟಿಯಲ್ಲಂತೂ ಖಂಡಿತ ಬದಲಾಗಲೇಬೇಕಿದೆ. ಒಂದು ದೇಶದ ವಿವಿಧ ಸಮುದಾಯಗಳು ಪರಸ್ಪರ ಸಹಯೊಗದಿಂದ ಬದುಕುವುದೇ ನಿಜವಾದ  ಪ್ರಜಾಪ್ರಭುತ್ವ  ಎಂಬ ಅಂಬೇಡ್ಕರರ ವ್ಯಾಖ್ಯೆ ಸಾಕಾರಗೊಳ್ಳಬೇಕಿದೆ. ಚಾಲ್ತಿಗೆ ಬರಬೇಕಿದೆ. ಆಗ ಮಾತ್ರ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದು ಸಾಧ್ಯ.ಇಲ್ಲದಿದ್ದರೆ ಯುದ್ಧದಲ್ಲಿ ಸೈನಿಕರು ಸತ್ತರೆ ಸತ್ತವನು ಯಾವ ಜಾತಿ? ಸಾಯಲಿ ಬಿಡಿ, ಅವನ ಜಾತಿಯವರು ನಮಗೆ ತೊಂದರೆ ಕೊಟ್ಟಿದ್ದಾರೆ, ಅವರ ಧರ್ಮದವರು ನಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಸುಮ್ಮನಾಗುತ್ತೇವೆ. ಸಹಯೋಗದಿಂದ ಬದುಕದ ನಮ್ಮ ಸಾಮಾಜಿಕ ದೌರ್ಬಲ್ಯದಿಂದಾಗಿ ನಮಗೆ ನಾವೇ ಬಲಿಯಾಗುತ್ತೇವೆ. ತನ್ಮೂಲಕ ಈ ದೇಶದ ಇಂಚಿಂಚನ್ನೂ ಶತೃಗಳಿಗೆ ಕಳೆದುಕೊಳ್ಳುತ್ತಾ ಬರುತ್ತೇವಷ್ಟೆ!
ಖಂಡಿತ, ಹಾಗಾಗಬಾರದು. ಅಂಬೇಡ್ಕರರ ಪ್ರಜಾಪ್ರಭುತ್ವದ ವ್ಯಾಖ್ಯೆಯ ಪ್ರಕಾರ ಈ ದೇಶದ ವಿವಿಧ ಸಮುದಾಯಗಳವರು , ಜಾತಿಗಳವರು, ಧರ್ಮಗಳವರು ಪರಸ್ಪರ ಸಹಯೋಗದಿಂದ ಸೌಹಾರ್ದದಿಂದ ಬದುಕುವಂತಾಗಬೇಕು. ಮನುಪ್ರಣೀತ ಸಂವಿಧಾನದಿಂದ ಹೊರಬಂದು ಸ್ವತಃ ಅಂಬೇಡ್ಕರ್ರವರೇ ರಚಿಸಿರುವ ಸಂವಿಧಾನದ ತತ್ವಗಳನ್ನು ಅನುಸರಿಸಿ ಪರಸ್ಪರ ಹಕ್ಕುಗಳನ್ನು ಗೌರವಿಸುವುದನ್ನು ಕಲಿಂಕಬೇಕು. ಮೇಲುಕೀಳು ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾನತೆಯ ಹಾದಿಯಲಿ ಮುನ್ನುಗ್ಗಬೇಕು. ತನ್ಮೂಲಕ ಭಾರತದಲ್ಲಿ ಅಂಬೇಡ್ಕರ್ ಮಾದರಿ ಪ್ರಜಾಪ್ರಭುತ್ವ ಸ್ಥಾಪಿತವಾಗಬೇಕು. ಹಾಗೆ ಆಗುತ್ತದೆಯೇ ಕಾದು ನೋಡಬೇಕಷ್ಟೆ.
                                  ರಘೋತ್ತಮ ಹೊ.ಬ
                                 ಚಾಮರಾಜನಗರ-571313

Puttur: Dalits Demand Release of Encroached Land – Officials Act Immediately

Puttur: Dalits Demand Release of Encroached Land – Officials Act Immediately
Daijiworld Media Network – Puttur (SP)
Puttur, May 21: Dalits from nearby villagers held a protest programme at Kadaba in the taluk on Friday May 20, in protest against the failure of the revenue department to drive away encroachers from 20 acres of government land located in Aittoor and Nekkiladi villages, which have been earmarked for distribution among the dalits. The revenue department, which swung into action in the evening, announced that it had wrested back government land from six of the encroachers.
The protest was led by Dalit Sangharsh Samiti (Ambedkar). The protestors said that six persons from Aittoor and three from Nekkiladi village had encroached upon 20 acres of government land, and the incessant demand for their eviction over the years had not been met by the department. They demanded steps against the taluk tahsildar for his failure to take back the encroached land and hand the same over to the dalits. The protestors also accused MLA Angara, who got elected from Sullia, a constituency reserved for scheduled communities, of becoming a puppet in the hands of upper classes of the society and rich people, and thereby ignoring the interests of the dalits.
When deputy tahsildar, Vishwanath Poojary, approached the protestors and assured them to convey their grievances to higher officials, the protestors refused to budge. They demanded for the presence of assistant commissioner. At around 3 pm, assistant commissioner, Harish Kumar, came to the spot, and promised them to recover the land in question within a week.
Dalit Sangharsh Samiti Dakshina Kannada district president, S P Anand, organizing convener, Sanjeev, Dalit Seva Samiti district president, B K Sheshappa, and a number of other dalit leaders had participated in the protest, along with local people.
The revenue department, in an operation undertaken on Friday evening, announced that it succeeded in taking back government land from six encroachers. They said that out of the balance three, one case is pending in the court, whereas in two other cases, they are unable to evict the encroachers, as residential houses are located in the sites encroached by these families. 

Man killed for having food with Dalits in Uttar Pradesh


Sanjay Pandey, Lucknow, May 20, DHNS:

In a shocking incident, an old man was strangled to death allegedly by the members of his community for having food at a feast organised by a Dalit family at a village in Uttar Pradesh’s Jaunpur district, about 225 km from here. Ironically the victim also belonged to ''kurmi'' (a backward community).

According to police sources here, 65-year-old Paras Nath Patel and his members of his family were invited by the dalit family to attend the wedding ceremony of a girl at Kuruthuwa village in the district on Wednesday last. The “kurmi” community to which Paras Nath belonged had decided not to attend the ceremony and have food with the dalits as they considered them “untouchables”.

Paras Nath, however, defied his community and his entire family had food with the dalits at the feast, which enraged the “kurmi” community of his village, sources said.

Irked over Paras Nath’s defiance, the “kurmi” community held a “panchayat” at the village on Thursday to deliberate on the matter and take action against Paras. The members of the panchayat wanted to expel Paras Nath from the community for defying the diktat.

The son of Paras, who was also present at the panchayat, alleged that the community members used expletives against Paras following which he had heated exchange of words with them.

Some members of the panchayat allegedly strangled Paras with a towel killing him on the spot. A case of murder has been registered against seven people, sources said. The culprits had been absconding.

Barely a few days ago, members of the “brahmin” community had refused to have food with dalits at a religious feast at a village in UP’s Maharajganj district.

MORE AT
http://www.deccanherald.com/content/163005/man-killed-having-food-dalits.html

For More







Wednesday 18 May 2011

ಮುಕ್ತಿ ಕಾಣದೇ ದಲಿತರಿಂದ ದಲಿತರ ಶೋಷಣೆ ?

ಸವರ್ಣಿಯರು ಎಂದು ಕರೆಸಿಕೊಳ್ಳುವ ಮೇಲ್ವರ್ಗದವರು ಸಮಾಜದ ಕೆಳವರ್ಗದ ದಲಿತರನ್ನು ಶೋಷಿಸುವುದು, ಕಿರುಕುಳ ನೀಡುವುದು ಅಲ್ಲದೇ ಅವರ ಮೇಲೆ ದೌರ್ಜನ್ಯ ನಡೆಸುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ನಾನಾ ದಲಿತ ಸಂಘಟನೆಗಳು ಪದೇ ಪದೇ ಬೀದಿಗಿಳಿದು ಹೋರಾಟ ಮಾಡುವುದು, ಧರಣಿ ಸತ್ಯಾಗ್ರಹ ನಡೆಸುವುದನ್ನು ನಾವು ಮಾಧ್ಯಮ ಮೂಲಕ ನೋಡುತ್ತಿದ್ದೇವೆ.

ಹೌದು, ಅಸಹಾಯಕರಿಗೆ, ಅಮಾಯಕರಿಗೆ ಇಂತಹ ಶೋಷಣೆಯಾದಾಗ, ಅನ್ಯಾಯ, ಆಕ್ರಮಣ, ಅತ್ಯಾಚಾರ, ದೌರ್ಜನ್ಯಂತಹ ಅಮಾನವೀಯ ಘಟನೆಗಳು ನಡೆದಾಗ ನ್ಯಾಯ ಮತ್ತು ರಕ್ಷಣೆ ಕೇಳುವುದು ಸರಿ. ನ್ಯಾಯ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಸಹ ಸಂವಿಧಾನ ಬದ್ಧವಾದ ಹಕ್ಕು ಕೂಡ. ಆರ್ಥಿಕವಾಗಿ ಹಿಂದುಳಿದ ದಲಿತ ವರ್ಗ ಅಥವಾ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ನಿರ್ಗತಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ಸಮಾಜವಾಗಲಿ ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಸ್ಪಂದಿಸಿ ಸಹಾಯಹಸ್ತ ನೀಡುವುದು ಸಹ ಮನುಷ್ಯತ್ವ ಧರ್ಮ.

ಆದರೆ, ಸಾವಿರಾರು ವರ್ಷದಿಂದ ಈ ಸಮಾಜದಿಂದ ಶೋಷಣೆಗೆ ಒಳಗಾಗಿದ್ದೇವೆ. ಇಂದಿಗೂ ನಮ್ಮನ್ನು ಈ ಸಮಾಜ ನಿರಂತರವಾಗಿ ಶೋಷಿಸುತ್ತಿದೆ. ನಮ್ಮ ಮೇಲೆ ಆಕ್ರಮಣ ಮಾಡುತ್ತಿದೆ. ದೌರ್ಜನ್ಯ ನಡೆಸುತ್ತಿದೆ. ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಬೊಬ್ಬೆಹೊಡೆಯುತ್ತಾ ಮೇಲ್ವರ್ಗದವರ ಮೇಲೆ, ಅಧಿಕಾರಿಶಾಯಿಗಳ ಮೇಲೆ ಹಾಗೂ ಜವಬ್ಧಾರಿ ಸ್ಥಾನದಲ್ಲಿರುವ ಸರಕಾರದ ಮೇಲೆ ಆರೋಪ ಹೊರಿಸಿ ಹೋರಾಟ ಮಾಡುವ ದಲಿತ ಸಂಘಟನೆಗಳು ವಾಸ್ತವ, ಪ್ರಮಾಣಿಕವಾದ ಸತ್ಯಾಸತ್ಯತೆ ಬಗ್ಗೆ ಏಕೆ ತಿಳಿದುಕೊಳ್ಳುವುದಿಲ್ಲ?
ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ಧತೆ ಮತ್ತು ಸಹಬಾಳ್ವೆ ನಡೆಸಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕುಗಳನ್ನು ನೀಡಿದೆ. ದೌರ್ಜನ್ಯ, ಶೋಷಣೆಯ ನೆಪದಲ್ಲಿ ಸತ್ಯವಲ್ಲದ, ವಾಸ್ತವವಲ್ಲದ ವಿಷಯಗಳನ್ನು ವೈಭವೀಕರಿಸಿ ಸಮಾಜದ ಮುಂದೆ ದೊಡ್ಡ ಹೋರಾಟದ ರೂಪದಲ್ಲಿ ನ್ಯಾಯ ಮತ್ತು ಪರಿಹಾರ ಕೇಳುವುದು ಎಷ್ಟು ಸರಿ?
ದಲಿತರು ಅಂದರೆ ಯಾರು ? ದಲಿತ ವರ್ಗಕ್ಕೆ ಯಾವ ಯಾವ ವರ್ಗ ಸೇರುತ್ತದೆ ? ಅವರೆಲ್ಲರಿಗೂ ಅನ್ಯಾಯವಾದಾಗ ಬೀದಿಗಿಳಿದಿದ್ದೀರಾ ? ಹಾಗಾದರೆ ಎಲ್ಲಾ ವರ್ಗದ ದಲಿತರು ಇಂದು ನೆಮ್ಮದಿ, ಸಂತೋಷವಾಗಿದ್ದಾರ ? ಎಷ್ಟು ಪ್ರಕರಣಗಳು ದೌರ್ಜನ್ಯದ ಹೆಸರಿನಲ್ಲಿ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿವೆ, ಅವುಗಳಲ್ಲಿ ಎಷ್ಟು ದಲಿತರ ಪರವಾಗಿ ತೀರ್ಪು ಬಂದಿದೆ, ಎಷ್ಟಕ್ಕೆ ನ್ಯಾಯ ಮತ್ತು ಪರಿಹಾರ ಸಿಕ್ಕಿವೆ ? ಈ ಬಗ್ಗೆ ಯಾವುದಾದರೂ ದಲಿತ ಸಂಘಟನೆಗಳು ಪರಶೀಲಿಸಿ ಅದಕ್ಕೆ ಕಾರಣ ಹುಡುಕಿವೆಯೇ ? ಇದೆಲ್ಲಾ ಸರಿ,
ಮೊದಲಿಗೆ ದಲಿತರಿಂದಲೇ ದಲಿತರ ಶೋಷಣೆ ನಡೆಯುತ್ತಿದೆ ನ್ಯಾಯ ಕೊಡಿಸುವವರು ಯಾರು. ಪ್ರಸ್ತುತವಾಗಿ ಪಡೆದ ಅಂಕಿ ಅಂಶದ ಪ್ರಕಾರ ಸುಮಾರು ೧೬೦ಕ್ಕೂ ಹೆಚ್ಚು ಪರಿಶಿಷ್ಟ ಮತ್ತು ವರ್ಗದ ಜಾತಿಗಳು ದಲಿತ ವರ್ಗಕ್ಕೆ ಬರುತ್ತವೆ ಆದರೆ, ಕೆಲವೇ ಬೆರಳೆಣಿಕೆಯಷ್ಟು ಪರಿಶಿಷ್ಟ ಜಾತಿಗಳು ಮತ್ತು ವರ್ಗಗಳು ಮಾತ್ರ ಮುಖ್ಯವಾಹಿನಿಯಲ್ಲಿವೆ. ಉಳಿದ ಜನಾಂಗವದರು ಇಂದು ಅಮಾನವೀಯವಾದ, ಶೋಚನೀಯವಾದ, ನಿಕೃಷ್ಟವಾದ, ಕಡುಬಡತನದ ಹಾಗೂ ಶೋಷಣೆಯ ಬದುಕನ್ನೇ ನಡೆಸುತ್ತಿವೆ. ಅವರ ಹಸಿವು, ಆಕ್ರಂದನ ಕೇಳುವ ಕಿವಿ ಮತ್ತು ಮನಸ್ಸುಗಳನ್ನು ಯಾವ ದಲಿತ ಸಂಘಟನೆಗಳೂ ಮಾಡಿಲ್ಲ.

ನಾವು ದಲಿತರ ರಕ್ಷಣೆಗಾಗಿ, ಅವರ ಸಮಸ್ಯೆಗಳಿಗೆ ದ್ವನಿಯಾಗಿ, ಎಲ್ಲಾ ವರ್ಗದ ದಲಿತರ ಶೋಷಣೆಯ ವಿರುದ್ಧವಾಗಿ ಹೋರಾಡಲು ಸದಾ ಕಟ್ಟಿ ಬದ್ಧರಾಗಿದ್ದೇವೆ ಎಂದು ಬ್ಯಾನರು, ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್ ಹಿಡಿದಿರುವ ನೂರಾರು ದಲಿತ ಸಂಘಟನೆಗಳು ರಾಜ್ಯಾದ್ಯಂತ ಇಂದು ಹುಟ್ಟಿಕೊಂಡಿವೆ. ಆದರೆ ಯಾವ ದಲಿತ ಸಂಘಟನೆಗಳೂ ನಿಜವಾದ ದಲಿತರ ಸಮಸ್ಯೆಗಳನ್ನು, ಅವರ ನೋವುಗಳನ್ನು, ಅವರ ಹಸಿವನ್ನು ನೂರಕ್ಕೆ ನೂರರಷ್ಟು ಬಗೆಹರಿಸಿಲ್ಲ.

ಆದರೆ ವಾಸ್ತವದಲ್ಲಿ ಇರುವ ಸತ್ಯವೇ ಬೇರೆ. ಬಲಿಷ್ಟರಾದ ದಲಿತರಲ್ಲೆ ಗುಂಪುಗಾರಿಕೆ ಮಾಡಿಕೊಂಡು ಹಣ, ಅಧಿಕಾರಕ್ಕಾಗಿ ಹಪಹಪಿಸುತ್ತಾ ಅಮಾಯಕ ದಲಿತರ ವಂಚನೆ ನಡೆಯುತ್ತಿದೆ. ಪ್ರತಿಷ್ಟೆ, ವೈಯಕ್ತಿಕ ದ್ವೇಷದಿಂದ ಜಾತಿಯೊಳಗೆ ಜಾತಿಯನ್ನು ಶೋಷಿಸುತ್ತಾ ಪಡಬಾರದ ಹಿಂಸೆಗಳನ್ನು ನೀಡಲಾಗುತ್ತಿದೆ. ಬಲಿಷ್ಟರು ಹಾಗೂ ಸಂಘಟಕರು ಸರಕಾರದ ಎಲ್ಲಾ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ನಿಜವಾದ ಅರ್ಹರಿಗೆ ನೇರವಾಗಿ ವಂಚಿಸುತ್ತಿದ್ದಾರೆ. ಅನ್ಯಾಯಕ್ಕೊಳಗಾದ ಅಸಹಾಯಕ ದಲಿತರು ನ್ಯಾಯ ಮತ್ತು ರಕ್ಷಣೆ ಕೋರಿ ಮುಖಂಡರ ಬಳಿ ಬಂದಾಗ ಅಲ್ಲಿ ನಡೆಯುವ ಶೋಷಣೆ, ಮೋಸ ಹೇಳ ಬಾರದು. ಇಂದು ಸಮಾಜದಲ್ಲಿ ದಲಿತರಿಂದಲೇ ದಲಿತರ ಶೋಷಣೆ ನಡೆಯುವ ಬಗ್ಗೆ ಒಂದು ಪ್ರಬಂಧ ಬರೆದರೆ ಖಂಡಿತ ಡಾಕ್ಟರೇಟ್ ಪಡೆಯಬಹುದು.
ಕ್ಷಮಿಸಿ, ದಲಿತರಿಂದ ದಲಿತರ ಶೋಷಣೆ ಎಂಬ ಒಂದು ಅಮಾನವೀಯವಾದ ಸತ್ಯಘಟನೆ ಬಗ್ಗೆ ಲೇಖನ ಬರೆಯುವಾಗ ಇಡೀ ದಲಿತ ಸಮೂದಾಯದ ಜೀವನ ಚಿತ್ರ ಕಣ್ಣ ಮುಂದೆ ಬಂದು ಒಂದಷ್ಟು ತೆರೆದಿಡಬೇಕಾಯಿತು. ಈಗ ವಿಷಯಕ್ಕೆ ಬರುತ್ತೇನೆ. ಮೇಲ್ವರ್ಗದವರು ದಲಿತರನ್ನು ಶೋಷಣೆ ಮಾಡುತ್ತಾರೆ, ಸಮಾಜದಿಂದ ಬಹಿಷ್ಕರಿಸಿ ಹೊರ ಹಾಕುತ್ತಾರೆ ಎಂದು ನೀವು ನಾವು ಕೇಳಿದ್ದೇವೆ. ಆದರೆ ದಲಿತರೇ ದಲಿತರನ್ನು ಶೋಷಿಸಿ ಸಮಾಜದಿಂದ ದೂರ ಇಟ್ಟರೆ, ಅವರಿಗೆ ಅನ್ನ ನೀರು ನೀಡದೇ ಬಹಿಷ್ಕರಿಸಿ

ಗ್ರಾಮದಿಂದ ಹೊರ ದಬ್ಬಿದರೆ ಇದು ಯಾವ ನ್ಯಾಯ?

ಅರಿವಿಲ್ಲದೇ ಕೆಳವರ್ಗದಲ್ಲಿ ಹುಟ್ಟಿದ ಕಾರಣಕ್ಕೆ ಸಮಾಜದಿಂದ ಶೂದ್ರ ಎನಿಸಿಕೊಂಡು ನಿಕೃಷ್ಟಕ್ಕೊಳಗಾಗಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸುತ್ತಾ ಬದುಕುವ ಅಮಾಯಕ ದಲಿತರಿಗೆ ಬಲಿಷ್ಟ ದಲಿತರೇ ಸಮೂದಾಯದ ಒಳಗೇ ಶೋಷಿಸಿ ಹಿಂಸೆ, ದೌರ್ಜನ್ಯ, ಕಿರುಕುಳ, ಬೆದರಿಕೆ ನೀಡಿದರೆ ಅವರು ಜೀವಂತವಾಗಿ ಬದುಕಿರಬೇಕಾ? ಅಸಹಾಯಕರಿಗೆ ನೊಂದವರಿಗೆ ರಕ್ಷಣೆ ನೀಡುವವರೇ ಕೊಲೆಗಡುಕರು ಆದರೆ ಬದುಕಿಸುವವರು ಯಾರು ? ಅನ್ಯಾಯವಾದಾಗ ಅಪ್ಪಿಕೊಂಡು ನಂಬಿಕೆ, ಆತ್ಮವಿಶ್ವಾಸ ಮೂಡಿಸ ಬೇಕಾದವರೇ ಕಾಲಿನಿಂದ ಒದ್ದು, ಬೈದು, ಬಡಿದು ಕಾಡಿಗೆ ತಳ್ಳಿದರೆ ಅವರ ನರಕಯಾತನೇ ಹೇಗಿರಬೇಡ.
ಇಂತಹ ಒಂದು ಘಟನೆ ಪ್ರಪ್ರಥಮ ಬಾರಿಗೆ ಬಯಲುಗೊಂಡಿದೆ. ಇದು ಒಂದು ಉದಾಹರಣೆ ಮಾತ್ರ. ಇಂತಹ ಸಾವಿರಾರು ಘಟನೆಗಳು ಸಮೂದಾಯದಲ್ಲಿ ನಾನಾ ರೂಪದಲ್ಲಿ ಇಂದಿಗೂ ಜೀವಂತಾಗಿವೆ. ಅಮಾಯಕ ದಲಿತರನ್ನು ನಿರಂತರವಾಗಿ ಶೋಷಿಸುತ್ತಲೇ ಇವೆ. ಅದಕ್ಕೆ ಯಾವ ಕಾನೂನು ಕಟ್ಟಳೆಗಳೂ ಇಲ್ಲ. ಇದ್ದರೂ ಸಂಘಟನೆಗಳ ಭಯದಲ್ಲಿ ತನ್ನ ಸತ್ವ ಮುರಿದುಕೊಂಡು ಮೂಲೆಗೆ ಬಿದ್ದಿವೆ. ಕಟ್ಟಿ ಹಾಕುವ ಧೈರ್ಯವನ್ನೂ ಯಾರೂ ಮಾಡಿಯೂ ಇಲ್ಲ.
ಅನ್ಯ ಜಾತಿಯವನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ದಲಿತ ಕಾಲೋನಿಯ ಮುಖಂಡರು ಮತ್ತು ಗ್ರಾಮಸ್ಥರು ಸೇರಿ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ದೂರ ಇಟ್ಟು ನೀರು ಕೊಡದಂತೆ ಬಹಿಷ್ಕರಿಸಿರುವ ಧಾರಣ ಸತ್ಯಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲೇನಹಳ್ಳಿಯ ಭೋವಿಕಾಲೋನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಬಹಿಷ್ಕರಿಸಿರುವವರು ಮತ್ತು ಬಹಿಷ್ಕಾರಕ್ಕೊಳಗಾದವರೂ ದಲಿತರೇ ಅಚ್ಚರಿ ಸಂಗತಿ.

ಕುಟುಂಬದ ಬಡತನ ಬೇಗೆಯಲ್ಲಿ ಬೆಂದು ಕಷ್ಟಕರ ಜೀವನ ಸಾಗಿಸುತ್ತಾ ಮದುವೆ ವಯಸ್ಸಿಗೆ ಬಂದರೂ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಹುಡುಗಿ ತನ್ನ ಬದುಕಿಗೆ ಒಂದು ಆಸರೆ ಕಂಡು ಕೊಳ್ಳಲು ಮನಸ್ಸು ಮಾಡಿ ತಾನೇ ವರನನ್ನು ಹುಡುಕಲು ಪ್ರಯತ್ನ ನಡೆಸಿದ್ದ ಕಾರಣಕ್ಕೆ ಅಪವಾದ ಹೊತ್ತುಕೊಂಡು ಕುಟುಂಬದಿಂದ ದೂರವಾಗಿ ಅಪ್ಪನನ್ನು ಕಳೆದುಕೊಂಡು ಸತತ ಐದು ವರ್ಷ ನರಕಯಾತನೆ ಅನುಭವಿಸಿ ಧಾರುಣ ಘಟನೆ ಇದಾಗಿದೆ.
ಹಾಲೇನಹಳ್ಳಿ ಗ್ರಾಮದ ಬೋವಿಕಾಲೋನಿಯ ಗಿರಿಯಭೋವಿ ಹಾಗೂ ತಿಮ್ಮಮ್ಮ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯವಳಾದ ಮಲ್ಲಮ್ಮನಿಗೆ ಮದುವೆಯಾಗಿ ಪತಿಯಿಂದ ಕಳೆದ ಹತ್ತು ವರ್ಷಗಳಿಂದ ದೂರವಾಗಿದ್ದು ಕೂಲಿ ಮಾಡಿಕೊಂಡು ಅಪ್ಪ ಅಮ್ಮನನ್ನು ಸಾಕುತ್ತಾ ತನ್ನ ಮಕ್ಕಳೊಂದಿಗೆ ತವರಿನಲ್ಲಿದ್ದಳು. ಕಿರಿಯ ಪುತ್ರಿ ಸುಶೀಲ ಬಡತನ ಕಾರಣದಿಂದ ಇನ್ನೂ ಮದುವೆಯಾಗದೇ ತಿಪಟೂರು ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಳು. ಇರುವ ಎರಡು ಎಕರೆ ಜಮೀನಿನಲ್ಲಿ ಅಷ್ಟೋ ಇಷ್ಟೋ ಬೇಸಾಯ ಮಾಡಿ ಒಂದೊತ್ತು ಊಟ ಮಾಡುತ್ತಾ ಕಷ್ಟವಾಗಿದ್ದರೂ ನೆಮ್ಮದಿಯಿಂದ ಇದ್ದರು.
ತಿಪಟೂರು ನಗರದಲ್ಲಿ ಗಾರೆ(ಕಟ್ಟಡ)ಕೆಲಸ ಮಾಡುವ ಸುಶೀಲ ಕಳೆದ ಆರು ವರ್ಷಗಳ ಹಿಂದೆ ತನ್ನ ಜೊತೆ ಕೆಲಸ ಮಾಡುವ ಶಾಂತಕುಮಾರ್‌ನನ್ನು ಇಷ್ಟ ಪಟ್ಟು ಮದುವೆಯಾಗಲು ನಿರ್ಧರಿಸಿದಳು. ಈ ವಿಷಯವನ್ನು ಮನೆಗೂ ತಿಳಿಸಿದಳು. ಸಮ್ಮತಿ ಮೇರೆಗೆ ಅವರದ್ದು ಮದುವೆಯೂ ಆಯಿತು. ತಿಪಟೂರಿನ ಗಾಂಧಿನಗರದಲ್ಲಿ ಮನೆ ಮಾಡಿಕೊಂಡು ಇನ್ನೇನು ಸುಖದ ಸಂಸಾರ ನಡೆಸುವ ಹೊಸ್ತಿಲಲ್ಲಿ ನಿಂತಿದ್ದ ಸುಶೀಲಳಿಗೆ ಹುಟ್ಟೂರಿನಲ್ಲಿ ತನ್ನ ಕುಟುಂಬ ಬಿರುಗಾಳಿಗೆ ಸಿಲುಕಿದೆ ಎಂಬುದು ಗೊತ್ತಾಗಲೇ ಇಲ್ಲ. ಅನ್ಯ ಜಾತಿಯವನನ್ನು ಮದುವೆಯಾದ ಕಾರಣ ಬೇರೆಯದೇ ರೂಪ ಪಡೆದಿತ್ತು. ಜಾತಿ ಎಂಬ ವಿಷ ಬೀಜ ಮೊಳಕೆ ಹೊಡೆದು ಹೆಮ್ಮರವಾಗಿ ಆ ಗ್ರಾಮದ ಗುಡಿಗೌಡನ ರೂಪದಲ್ಲಿ ಅಮಾಯಕರಾದ ಅವರ ಕುಟುಂಬದ ಮೇಲೆ ಎರಗಿತ್ತು. ಬೋವಿ ಜನಾಂಗದ ಸುಶೀಲ ತಮಿಳು ಗೌಂಡರ್ ಜಾತಿಗೆ ಸೇರಿದ ಶಾಂತಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಕಾರಣಕ್ಕೆ ತಂದೆಯನ್ನು ಬಲಿ ನೀಡಿದ್ದಲ್ಲದೇ ಇಡೀ ಕುಟುಂಬ ಇಂದು ಜೀವಂತ ಶವವಾಗಿರುವ ಆರೋಪಕ್ಕೆ ತುತ್ತಾದಳು.
ನಗರದಲ್ಲೆಲ್ಲೋ ಸುಶೀಲ ಮದುವೆ ಮಾಡಿಕೊಂಡಳು, ಆದರೆ ಇದನ್ನು ಸಹಿಸದ ಗ್ರಾಮದ ಒಂದು ಗುಂಪು ಗುಡಿಗೌಡ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗ್ರಾಮದ ಜನರನ್ನು ಸೇರಿಸಿ ಚಿಕ್ಕಮ್ಮನ ದೇವಾಲಯದ ಬಳಿ ಪಂಚಾಯಿತಿ ಮಾಡಿದರು. ಅನ್ಯ ಜಾತಿಯವನ್ನು ಮದುವೆ ಮಾಡಿಕೊಂಡು ಜಾತಿ ಕೆಟ್ಟ ಕುಟುಂಬವನ್ನು ಸಮಾಜದಿಂದ ಬಹಿಷ್ಕರಿಸಲು ನಿರ್ಧರಿಸಿದರು. ಇಡೀ ಕುಟುಂಬ ಊರು ಬಿಟ್ಟು ಹೋಗಬೇಕೆಂದು ಒತ್ತಾಯ ಹೇರಿದರು. ಇದಕ್ಕೆ ಸಮ್ಮತಿಸದೇ ಅಂಗಲಾಚಿದ ಕುಟುಂಬಕ್ಕೆ ಛೀಮಾರಿ ಹಾಕಿದರು. ಹೀನಾಮಾನವಾಗಿ ಬೈದು ತಳಿಸಿದರು. ಅವರ ಅಹಾಯಕ್ಕೆ ಬಂದ ಅವರ ಸಹೋದರ ಸಂಬಂಧಿಗಳನ್ನೂ ಸೇರಿಸಿ ನಾಯಿಗೆ ಬಡಿದಂತೆ ಬಡಿದರು. ಗ್ರಾಮದಲ್ಲಿ ರಕ್ತದೋಕುಳಿ ನಡೆದು ನಾಯಿಗಳು ನೆಕ್ಕಿದವು. ನೊಂದವರು ದೌರ್ಜನ್ಯದ ವಿರುದ್ಧ ಹೊನ್ನವಳ್ಳಿ ಪೋಲೀಸ್ ಠಾಣೆಗೆ ದೂರು ನೀಡುವ ಮುನ್ನವೇ ಬಡಿದವರೇ ಹೋಗಿ ದೂರು ದಾಖಲಿಸಿದರು. ಎರಡೂ ಕಡೆಯ ದೂರು ದಾಖಲಾಗಿ ಜಗಳ ನ್ಯಾಯಲಯದ ಮೆಟ್ಟಿಲು ಹತ್ತಿತು. ದೌರ್ಜನ್ಯ ಎಸಗಿದ ಗುಡಿಗೌಡನ ಕಡೆಯವರಿಗೆ ಅಪರಾಧ ಸಾಬೀತಾಗಿ ಶಿಕ್ಷೆ ಆಗುತ್ತದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಶೋಷಿತ ಕುಟುಂಬದವರ ಜೊತೆ ನಿಮ್ಮ ತಂಟೆಗೆ ಬರುವುದಿಲ್ಲ, ನೆಮ್ಮದಿಯಾಗಿರಿ ಎಂದು ಮನವೊಲಿಸಿ ರಾಜಿಮಾಡಿಕೊಂಡು ಪ್ರಕರಣ ಮುಕ್ತಾಯ ಗೊಳಿಸಿಕೊಂಡು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು. ಆದರೆ, ಠಾಣೆಗೆ ದೂರು ನೀಡಿ ನ್ಯಾಯಾಲಯಕ್ಕೆ ಎಳೆದರು ಎಂದು ಮತ್ತಷ್ಟು ಕೆರಳಿದ ಗುಡಿಗೌಡ ಮತ್ತು ಆತನ ಗುಂಪು ಅಮಾಯಕ ಕುಟುಂಬ ಬಲಿ ಹಾಕುವ ತಂತ್ರ ಎಣೆದರು. ಮೊದಲಿಗೆ ಆಮಿಷ ಮತ್ತು ಬೆದರಿಕೆಯ ಮೂಲಕ ಅವರ ಸಹೋದರ ಸಂಬಂಧಿಗಳನ್ನು ಹೊಲೈಸಿಕೊಂಡು ತಮ್ಮ ಕಡೆಗೆ ಸೆಳೆದು ಪುನಃ ಅಮಾಯಕ ಕುಟುಂಬದ ಮೇಲೆ ಬಹಿಷ್ಕಾರ ಮುಂದುವರೆಸಿ, ನರಕ ಹಿಂಸೆ ನೀಡಿದರು. ಬರಬರುತ್ತಾ ಅವರ ಬದುಕು ಜರ್ಜರಿತಗೊಂಡಿತು.

ಗುಡಿಗೌಡನ ಕಟ್ಟಾಜ್ಞೆ : ಗ್ರಾಮದ ನೀರು ಮುಟ್ಟುವಂತಿಲ್ಲ 
ಗುಡಿಗೌಡನ ಆಘೋಷಿತ ಬಹಿಷ್ಕಾರಕ್ಕೊಳಗಾದ ಗಿರಿಯಭೋವಿ ಕುಟುಂಬ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಗ್ರಾಮದ ಕೊಳವೆ ಬಾವಿಯಲ್ಲಿ ನೀರು ಹಿಡಿಯುವಂತಿಲ್ಲ. ಗ್ರಾಮ ದೇವತೆ ಚಿಕ್ಕಮ್ಮ ದೇವಾಲಯದ ಬಳಿ ಸುಳಿಯುವಂತಿಲ್ಲ. ಬೇರೆ ಯಾವುದೇ ಮನೆಗೆ ಹೋಗುವಂತಿಲ್ಲ. ಬೇರೆಯವರೂ ಸಹ ಇವರ ಮನೆಗೆ ಬರುವಂತಿಲ್ಲ. ಈ ಕುಟುಂಬದ ಯಾವುದೇ ಕಷ್ಟ ಸುಖಕ್ಕೆ ಯಾರೂ ಸಹಾಯ ಮಾಡುವಂತಿಲ್ಲ. ಗ್ರಾಮದಲ್ಲಿ ಕೂಲಿ ಇಲ್ಲ, ಊಟ ಇಲ್ಲ. ನಾವು ಎನ್ನುವವರೂ ಯಾರೂ ಇಲ್ಲದ ಅತ್ಯಂತ ಶೋಚನೀಯ ಸ್ಥಿತಿ. ಈ ಅನ್ಯಾಯದ ವಿರುದ್ಧ ಯಾರಿಗೂ ದೂರು ನೀಡುವಂತಿಲ್ಲ. ಗೌಡನ ಆಜ್ಞೆ ವಿರುಧ್ಧ ಮುಂದುವರೆದರೆ ಅವರು ಪ್ರಾಣ ಸಹಿತ ಉಳಿಯುವಂತಿಲ್ಲ. ಹಾಗಾಗಿ ತನ್ನದಲ್ಲದ ತಪ್ಪಿಗೆ ಒಂದೇ ಕುಟುಂಬ ಸತತ ಐದು ವರ್ಷಗಳ ಕಾಲ ಗ್ರಾಮದಲ್ಲಿ ಮಾನಸಿಕ ನರಕಯಾತನೆ ಅನುಭವಿಸಿದೆ.

ಚಾಪೆಯಲ್ಲಿ ತಂದೆ ಶವ:
ಮಗಳ ಇಚ್ಚೆಗೆ ಬೆಲೆ ಕೊಟ್ಟು ಸಂತೋಷವಾಗಿರು ಎಂದು ಹರಸಿದ್ದಕ್ಕೆ ಗ್ರಾಮಸ್ಥರು ನೀಡಿದ ದೌರ್ಜನ್ಯ ಮತ್ತು ಕಿರುಕುಳದಿಂದ ಚಿಂತೆಗೆ ಬಿದ್ದು ಹಾಸಿಗೆ ಹಿಡಿದ ಗಿರಿಯ ಭೋವಿ ಕಳೆದ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಶವ ಸಂಸ್ಕಾರಕ್ಕೆ ಯಾರೂ ಬರದೇ ಸಹಾಯ ಕೇಳುತ್ತಾರೆಂದು ಎಲ್ಲರೂ ತಮ್ಮ ಮನೆಯ ಬಾಗಿಲು ಮುಚ್ಚಿದ್ದರು. ಸ್ವಂತ ಬಂಧುಗಳೂ ಸಹ ಗೌಡನಿಗೆ ಹೆದರಿ, ಮುಂದೆ ಬರಲಿಲ್ಲ. ಗ್ರಾಮದಿಂದ ಬಹಿಷ್ಕರಿಸಲ್ಪಟ್ಟಿದ್ದ ಸುಶೀಲ ತಂದೆ ಸಾವನ್ನು ನೋಡಲು ಗ್ರಾಮಕ್ಕೆ ಬಂದಿದ್ದಳು. ರಾತ್ರಿಯಾದರೂ ಯಾವೊಬ್ಬ ಗಂಡಸೂ ಬರದಿದ್ದರಿಂದ ಗಿರಿಯಭೋವಿಯ ಇಬ್ಬರು ಪುತ್ರಿಯರಾದ ಮಲ್ಲಮ್ಮ ಮತ್ತು ಸುಶೀಲ ತಂದೆಯ ಶವವನ್ನು ಚಾಪೆಯಲ್ಲಿ ಸುತ್ತಿ, ಇಬ್ಬರೇ ಹೆಗಲ ಮೇಲೆ ಹೊತ್ತುಕೊಂಡು ಹೊಲಕ್ಕೆ ನಡೆದಿದ್ದಾರೆ. ಅಲ್ಲಿ ಮಧ್ಯರಾತ್ರಿಯವರೆಗೂ ಗುಂಡಿ ತೆಗೆದು ತಂದೆಯ ಶವವನ್ನು ಹೂಳಿದ ಅವರು ನಿನ್ನ ಸಮಾಜ ನಿನಗೆ ಕೊಟ್ಟ ಬಳುವಳಿ ಇದು ಎಂದು ಕಣ್ಣೀರಧಾರೆ ಹರಿಸಿದ್ದಾರೆ.


ಮಕ್ಕಳ ಮದುವೆ ಮಾಡುವಂತಿಲ್ಲ: 
ಸ್ವಂತ ಕುಲದವರೇ ಸಮಾಜದಿಂದ ಬಹಿಷ್ಕರಿಸಿ, ನೀಡ ಬಾರದ ಹಿಂಸೆ ನೀಡಿದರೆ ನಾವು ಯಾರ ಮೊರೆ ಹೋಗಬೇಕು? ನನ್ನ ಬದುಕನ್ನು ನಾನು ಹುಡುಕಿಕೊಂಡು ಯಾರಿಗೂ ಹೊರೆಯಾಗದಂತೆ, ಕುಟುಂಬಕ್ಕೂ ಸಹ ಸ್ವತಂತ್ರವಾಗಿ ಬದುಕುತ್ತಿದ್ದರೂ ಬಿಡದ ನಮ್ಮ ಜನ ಜಾತಿ, ಧರ್ಮ ಹಾಗೂ ಸಂಪ್ರದಾಯ ನೆಪದಲ್ಲಿ ಬೆನ್ನು ಬಿಡದ ಬೇತಾಳದಂತೆ ಏನೂ ತಪ್ಪು ಮಾಡದ ನಮ್ಮ ಕುಟುಂಬವನ್ನು ಜೀವಂತವಾಗಿ ಸುಡಲು ಹೊರಟಿರುವುದು ಯಾವ ನ್ಯಾಯ. ನಮಗೆ ಬದುಕಲು ಹಕ್ಕಿಲ್ಲವೇ? ಇಷ್ಟು ಮಾಡಿದ ಮೇಲೆ ಇನ್ನೂ ಬದುಕಿ ಉಳಿದು ಏನು ಸಾರ್ಥಕ ಎಂದು ಅಸಾಯಕ ಮಹಿಳೆ ಸುಶೀಲಳ ಆಕ್ರಂದನವಾದರೆ ಇತ್ತಾ ಗ್ರಾಮದಲ್ಲಿ ಈ ನಿರ್ಭಂದದ ನಡುವೆ ಬೆಳೆದು ನಿಂತಿರುವ ಇಬ್ಬರು ಮಕ್ಕಳ ಮದುವೆ ಮಾಡುವುದು ಹೇಗೆಂದು ಮಲ್ಲಮ್ಮ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ.
ಘಟನೆ ಕಾರಣದಿಂದ ಚಿಂತೆಗೀಡಾಗಿ ನರಳಿ ಸತ್ತ ನಂತರ ತಾಯಿ ತಿಮ್ಮಮ್ಮನೊಂದಿಗೆ ಜೀವಿಸುತ್ತಿರುವ ಮಲ್ಲಮ್ಮನಿಗೆ ಒಂದು ಹೆಣ್ಣು ಒಂದು ಗಂಡು. ಮಗ ಮಂಜುನಾಥ ೧೮ ವರ್ಷ ಹಾಗೂ ಮಗಳು ಶಂಕರಮ್ಮ ೨೦ ವರ್ಷ. ಮಗಳು ಬೆಳೆದು ನಿಂತಿದ್ದರೂ ಮದುವೆ ಮಾಡಲು ಸಾಧ್ಯವಾಗಿಲ್ಲ.. ಗ್ರಾಮದ ಮುಖಂಡ ಗುಡಿಗೌಡ ಎನಿಸಿಕೊಂಡವ ಪರೋಕ್ಷವಾಗಿ ಇಡೀ ಭೋವಿ ಜನಾಂಗಕ್ಕೆ ಮಾಹಿತಿ ನೀಡಿರುವುದರಿಂದ ಈತನ ಅನುಮತಿ ಪಡೆಯದ ಹೊರತು ಯಾವುದೇ ಊರಿನವರೂ ಈ ಕುಟುಂಬದ ಸಂಬಂಧ ಬೆಳೆಸುವುದೂ ಇರಲಿ, ಹತ್ತಿರ ಸೇರಿಸುವುದೂ ಇಲ್ಲ.
ನೀವು ಹೇಳಿದಂತೆ ನಾವು ಪಾಲಿಸಿದ್ದೇವೆ. ಇದರಿಂದ ಮನೆಗೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿದ್ದೇವೆ. ಅಮಾಯಕರಾದ ಅನಕ್ಷರಸ್ಥರಾದ ನಾವು ಸತತ ಆರು ವರ್ಷದಿಂದ ಸಾಕಷ್ಟು ಮಾನಸಿಕ ಹಿಂಸೆಯನ್ನು ದೈಹಿಕ ಹಿಂಸೆಯನ್ನು ಪಟ್ಟಿದ್ದೇವೆ. ಸಾಕು, ಕ್ಷಮಿಸಿ. ಇನ್ನಾದರೂ ನಮ್ಮ ಮೇಲೆ ಕರುಣೆ ತೋರಿ ಎಲ್ಲರಂತೆ ಬದುಕಲು ನೀಡಿ ಎಂದು ನೊಂದ ಕುಟುಂಬ ಪರಿಪರಿಯಾಗಿ ಕಲ್ಲುಕರಗುವಂತೆ ಗೋಳಿಟ್ಟರೂ ಕರಗುವ ಮನಷ್ಯತ್ವ ಮನಸ್ಸುಗಳು ಅಲ್ಲಿರಲಿಲ್ಲ. ಕಂಡ ಕಂಡವರ ಬಳಿ ಅಂಗಲಾಚಿ ಗ್ರಾಮಸ್ಥರನ್ನು ಸೇರಿಸಿ ನ್ಯಾಯ ಮಾಡಿಸಿ, ಮಕ್ಕಳ ಮದುವೆಗೆ ಸಹಕರಿಸಿ ಎಂದು ಕೇಳಲು ಹೋದರೆ ತಪ್ಪಿಗೆ ಐವತ್ತು ಸಾವಿರ ದಂಡ ನೀಡಬೇಕು ಎನ್ನುವ ಮಾನದಂಡ ಮುಂದಿಟ್ಟಿದ್ದಾರೆ. ಕೆಟ್ಟ ಹಸಿವನ್ನು ಹಿಂಗಿಸಿಕೊಂಡು ಬದುಕುವುದೇ ಕಷ್ಟ ಎನ್ನುವಾಗ ಮಕ್ಕಳನ್ನು ಓದಿಸದೇ ಚಿಕ್ಕ ವಯಸ್ಸಿಗೇ ಕೆಲಸಕ್ಕೆ ಅಟ್ಟಿದ್ದು, ಗೊತ್ತಾಗದಂತೆ ಬೆಳೆದು ನಿಂತ ಮಕ್ಕಳ ಮದುವೆ ಒಂದು ದೊಡ್ಡ ಸಮಸ್ಯೆಯಾಗಿದೆ ನಿಂತಿರುವಾಗ ದಿಕ್ಕಿಲ್ಲದ ನಾವು ದಂಡ ಕಟ್ಟಲು ಸಾಧ್ಯವೇ ಎಂದು ಗೋಳಿಡುವ ಕುಟುಂಬದ ಕಥೆ ನಮ್ಮ ಕಣ್ಣುಗಳಲ್ಲಿ ನೀರು ಭರಿಸುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ಕುಟಂಬವನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಮತ್ತೊಂದು ಕುಟುಂಬ ಬೀದಿಗೆ:
ಅನ್ಯ ಜಾತಿಯವನೊಂದಿಗೆ ಪ್ರೇಮ ವಿವಾಹಕ್ಕೆ ಸಹಕಾರ ನೀಡದ ಕಾರಣಕ್ಕೆ ಒಂದು ಕುಟುಂಬವನ್ನ ಸಮೂದಾಯದಿಂದ ಬಹಿಷ್ಕಾರ ಮಾಡಿರುವ ಸುದ್ದಿ ಪ್ರಕಟವಾದ ಬೆನ್ನಲ್ಲೆ ಅದೇ ಗ್ರಾಮದಲ್ಲಿ ಮತ್ತೊಂದು ಇದೇ ತೆರನಾದ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಹಾಲೇನಹಳ್ಳಿಯ ಭೋವಿಕಾಲೋನಿಯ ಭೋವಿ ಜನಾಂಗದ ಗಿರಿಯಭೋವಿ ಹಾಗೂ ತಿಮ್ಮಮ್ಮ ಕುಟುಂಬಕ್ಕೆ ಅಲ್ಲಿನ ಜನಾಂಗದ ಪ್ರಮುಖ ಮಾಡುತ್ತಿರುವ ಶೋಷಣೆಯಂತೆ ಮತ್ತೊಂದು ಕುಟುಂಬಕ್ಕೂ ಇದೇ ರೀತಿಯ ಅಘೋಷಿತ ಬಹಿಷ್ಕಾರ ಹಾಕಿ ಸಮಾಜದಿಂದ ದೂರ ಇಟ್ಟಿರುವ ಬಗ್ಗೆ ನೊಂದ ಗೌರಮ್ಮ ಮಾಧ್ಯಮದವರ ಮುಂದೆ ಅಳಲೊತ್ತುಕೊಂಡಿದ್ದಾಳೆ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಗೌರಮ್ಮ ತಿಪಟೂರು ನಗರಕ್ಕೆ ಬಂದು ಕಟ್ಟಡ ಕಾಮಗಾರಿ ಕೆಲಸದಲ್ಲಿ ಹಗಲಿಡಿ ದಿನಗೂಲಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದು ಬಿಟ್ಟರೆ ಅವರಿಗೆ ಬದುಕಲು ಬೇರೆ ಯಾವುದೇ ಮಾರ್ಗವಿಲ್ಲ. ಆಕೆ ಪರಿಶಿಷ್ಟ ಜಾತಿಯವರ ಬಳಿ ಕೆಲಸಕ್ಕೆ ಹೋಗುತ್ತಾಳೆಂದು, ಹಣ ವ್ಯವಹಾರ ಮಾಡುತ್ತಾ ಅವರನ್ನು ಮನೆಯ ಒಳಗೆ ಬಿಟ್ಟುಕೊಂಡು ಸಂಬಂಧ ಇಟ್ಟುಕೊಂಡಿದ್ದಾಳೆಂದು ಆರೋಪಿಸಿರುವ ಗ್ರಾಮದ ಪ್ರಮುಖ ಸಿದ್ದರಾಮಭೋವಿ(ಗುಡಿಗೌಡ) ಅವರನ್ನೂ ಸಹ ಸಮಾಜದಿಂದ ಬಹಿಷ್ಕರಿಸಿದ್ದಾರೆ.
ಅವರೂ ಸಹ ಎಲ್ಲರಂತೆ ಗ್ರಾಮದ ಸಮೂದಾಯದ ಜನರ ಜೊತೆ ಬೆರೆಯುವಂತಿಲ್ಲ. ಕೊಳವೆ ಬಾವಿಯಲ್ಲಿ ನೀರು ಹಿಡಿದು ಕುಡಿಯುವಂತಿಲ್ಲ, ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ, ಬೇರೆಯವರ ಮನೆಗೆ ಹೋಗಿ ಬರುವಂತಿಲ್ಲ, ಕೂಲಿ ಕೆಲಸ ನೀಡುವಂತಿಲ್ಲ ಅಲ್ಲದೇ ದೇವಾಲಯದ ಬಳಿ ಎಡತಾಕುವಂತಿಲ್ಲ. ಹಾಗೇನಾದರೂ ಮಾಡಿದರೆ ಎಡ ಮಟ್ಟೆ ಏಟು ಕೋಡುತ್ತಾರೆ ಎಂದು ಆಕೆ ತನ್ನ ಕುಟುಂಬಕ್ಕಾಗಿರುವ ಅನ್ಯಾಯದಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಾರೆ.
ತವರಿನಲ್ಲಿ ಮಗಳ ಮದುವೆ:
ಗುಡಿಗೌಡ ಮತ್ತು ಆತನ ಕೆಲವರು ಬೆಂಬಲಿಗರು ಇಡೀ ಗ್ರಾಮವನ್ನೇ ತಮ್ಮ ಹಿಡಿತಕ್ಕೆ ತಂದು ಕೊಂಡು ಸರ್ವಾಧಿಕಾರಿಯಾಗಿದ್ದಾನೆ. ಜನರ ಸಹಕಾರದಿಂದ ಗ್ರಾಮದಲ್ಲಿ ದೇವಾಲಯ ಒಂದನ್ನು ಕಟ್ಟಿಸಿರುವ ಆತ ಅದರ ನೆಪದಲ್ಲಿ ಕಟುಸಂಪ್ರದಾಯ ಆಚರಣೆ ಜಾರಿಗೆ ತಂದಿದ್ದಾನೆ. ಅಜ್ಞಾನ ಮತ್ತು ಮೂಡ ನಂಬಿಕೆಯ ಮೊಟ್ಟೆಯಾಗಿರುವ ಆತ ಆತನ ಎಲ್ಲಾ ಅಭಿಪ್ರಾಯಗಳನ್ನು ಆದೇಶಗಳ ಮೂಲಕ ಅಮಾಯಕ ಜನರ ಮೇಲೆ ಹೇರುತ್ತಾನೆ. ಗುಂಪು ಕಟ್ಟಿ ದ್ವನಿ ಎತ್ತುವರ ಮೇಲೆ ಬೀಳುವುದರಿಂದ ಅತಿಯಾಗಿ ಹೆದರಿರುವ ಜನರಿಗೆ ಈತನ ಮಾತೇ ವೇದವಾಕ್ಯ. 
ಇಂತಹ ವ್ಯಕ್ತಿ ಮತ್ತು ಜನರ ಮಧ್ಯೆ ತನ್ನ ಮಗಳ ಮದುವೆ ಮಾಡಲು ಸಾಧ್ಯವಾಗದ ಗೌರಮ್ಮ ತನ್ನ ತವರಿನಲ್ಲಿ ಮಗಳ ಮದುವೆ ಮಾಡಿ ಋಣ ತೀರಿಸಿಕೊಂಡಿದ್ದಾಳೆ. ಗಂಡನ ಸ್ಥಿತಿ ಸರಿಯಿಲ್ಲದೇ ಅಳಿಯ ಮತ್ತು ಮಗಳ ಜೊತೆ ಜೀವಿಸುತ್ತಿರುವ ಗೌರಮ್ಮ ಗ್ರಾಮದಲ್ಲಿ ಇದು ಸತ್ತಂತಿದ್ದಳು. ಗಿರಿಯಪ್ಪ ಭೋವಿ ಪ್ರಕರಣ ಮಾಧ್ಯಮದಲ್ಲಿ ಪ್ರಕಟವಾಗಿ, ಅಧಿಕಾರಿಗಳು, ಇತರೆ ಪತ್ರಕರ್ತ ಮಿತ್ರರು ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನದ ಜೊತೆಗೆ ನ್ಯಾಯ ಮತ್ತು ರಕ್ಷಣೆಯ ಭರವಸೆ ನೀಡಿದ್ದರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆಯಲ್ಲಿ ಅಷ್ಟು ದಿನ ಜರ್ಜರಿತಳಾಗಿದ್ದ ಗೌರಮ್ಮ ಒಮ್ಮೆಲೆ ಸಿಡಿದೆದ್ದು ಎಲ್ಲವನ್ನೂ ತೆರದಿಟ್ಟಳು. ತನ್ನ ಕುಟುಂಬದ ಮೇಲೆ ಆಗಿರುವ ಘೋರ ಅನ್ಯಾಯಕ್ಕೆ ನ್ಯಾಯ ಕೋರಿದಳು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬೇಟಿ:
ಮಾದ್ಯಮದಲ್ಲಿ ಸುದ್ದಿ ಬಂದ ವಿಚಾರ ತಿಳಿದ ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಜೆ.ಆದಿಲಕ್ಷ್ಮಿ ಗ್ರಾಮಕ್ಕೆ ಬೇಟಿ ಪರಿಸ್ಥಿತಿಯ ಬಗ್ಗೆ ವಿವರ ಪಡೆದರು. ಪತ್ರಕರ್ತರೊಂದಿಗೆ ಗ್ರಾಮದ ಮುಖಂಡ ಸಿದ್ದರಾಮಭೋವಿಯನ್ನು ಮತ್ತಿತರನ್ನು ಬೇಟಿ ಮಾಡಿ ಅಮಾಯಕರ ಶೋಷಣೆಯ ಆರೋಪದ ಬಗ್ಗೆ ಪ್ರಶ್ನಿಸಿದರು. ಗ್ರಾಮದಲ್ಲಿ ನಡೆದಿರುವ ಘಟನೆಗಳ ವಿವರ ಪಡೆದ ಅವರು ಸಂಪೂರ್ಣ ವರದಿಯನ್ನು ಸಿದ್ಧ ಪಡಿಸಿ, ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು.
ಎಲ್ಲರಿಗೂ ಬದುಕುವ ಹಕ್ಕಿದೆ. ಸಮಾಜದಿಂದ ಅಥವಾ ಗ್ರಾಮದಿಂದ ಬಹಿಷ್ಕರಿಸುವ ಯಾವ ಅಧಿಕಾರ ಮತ್ತು ಹಕ್ಕು ನಿಮಗೆ ಇಲ್ಲ. ಇದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಅಪರಾಧ ಸಾಬೀತಾದರೆ ಕಾನೂನಿನ ಪ್ರಕಾರ ಘೋರ ಶಿಕ್ಷೆಯಾಗುತ್ತದೆ ಎಂದು ಸಿದ್ದರಾಮಭೋವಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರತರ್ಕರು ಆತನಿಗೆ ಸಾಕಷ್ಟು ಬುದ್ದಿ ಹೇಳಿ, ಮಾನವಿಯತೆಯಿಂದ ವರ್ತಿಸಬೇಕು. ಮಹಿಳೆಯರ ಮೇಲೆ ದೌರ್ಜನ್ಯ ಮಾಡಬಾರದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ತಿಳಿ ಹೇಳಿದರು.


ಮಲೀನದಿಂದ ಗ್ರಾಮ ದೇವತೆಗೆ ಮುನಿಸು:
ಮಲ್ಲಮ್ಮ ಮತ್ತು ಗೌರಮ್ಮ ಇಬ್ಬರ ಕುಟುಂಬ ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ ಮತ್ತು ಜಾತಿಗೆ ಕುಂದು ತರುವ ಕೆಲಸ ಮಾಡಿದ್ದಾರೆ. ಅನ್ಯ ಜಾತಿಯವರ ಜೊತೆ ಸಂಪರ್ಕ ಮಾಡಿ ಮಲೀನ ಮಾಡಿದ್ದಾರೆ. ಗ್ರಾಮ ದೇವತೆ ಚಿಕ್ಕಮ್ಮ ಅಪವಿತ್ರಗೊಂಡು ಮುನಿಸಿಕೊಂಡಿದ್ದಾಳೆ. ಇದರಿಂದ ಗ್ರಾಮದಲ್ಲಿ ನಾನಾ ತೊಂದರೆಗಳು ನಡೆದಿವೆ. ಆದ್ದರಿಂದ ಗ್ರಾಮದ ಕುಲಭಾಂಧವರು ಅವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ನೆಪ ಮಾತ್ರ ಎಂದು ಹೇಳುವ ಗುಡಿಗೌಡ ಸಿದ್ದರಾಮಭೋವಿ ಕಾನೂನಿಗೆ ಹೆದರಿ ಇಲ್ಲಿ ಯಾವುದೇ ಬಹಿಷ್ಕಾರ ಹಾಕಿಲ್ಲ. ಅವರ ತಪ್ಪಿಗೆ ನಾವು ಏನು ಮಾಡುವುದು ಎಂದು ಮಾರ್ಮಿಕವಾಗಿ ಉತ್ತರಿಸುತ್ತಾನೆ.
ಮಾಡಿದ ತಪ್ಪಿಗೆ ತಪ್ಪುಕಾಣಿಕೆ ನೀಡಿ, ಪುಣ್ಯ ಮಾಡಿಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. 

ಗ್ರಾಮದ ಜನರೆಲ್ಲಾ ಒಂದಾಗಿ ಹಣ ಮತ್ತು ಶ್ರಮದ ಮೂಲಕ
ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದರೆ, ಈ ಎರಡು ಕುಟುಂಬ ಯಾವುದೇ ಬಿಡಿಗಾಸು ನೀಡದೇ ಹತ್ತಿರ ಬಂದಿಲ್ಲ(ಹೊರಗಿಟ್ಟರೆ ಹತ್ತಿರ ಬರುವುದು ಹೇಗೆ). ಆ ಕಾರಣದಿಂದ ಗ್ರಾಮದ ಜನರ ಇವರ ತಂಟೆಗೆ ಹೋಗುವುದಿಲ್ಲ. ಗ್ರಾಮದ ಜನರು ತಲೆ ಎತ್ತಿಕೊಂಡು ತಿರುಗುವಂತಿಲ್ಲ. ಬೇರೆ ಕಡೆ ಸಂಬಂಧ ಬೆಸೆಯುವಂತಿಲ್ಲ ಎಂದು ತನ್ನದೇ ಆದ ರೀತಿಯಲ್ಲಿ ಕಥೆ ಎಣೆಯುತ್ತಾರೆ.
ಮೇಲ್ಜಾತಿಯವರು ದಲಿತರನ್ನು ಶೋಷಿಸುತ್ತಾರೆ, ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ಒಂದು ಕಡೆ ದಲಿತ ಸಂಘಟನೆಗಳು ಬೊಬ್ಭೆ ಹೊಡೆಯುತ್ತಾ ಬೀದಿಗಿಳಿದು ಅರೆ ಬೆತ್ತಲೆ ಮೆರವಣಿಗೆ ಮಾಡಿ ನ್ಯಾಯ ಮತ್ತು ರಕ್ಷಣೆ ಕೋರುತ್ತಿದ್ದರೆ, ಮತ್ತೊಂದು ಕಡೆ ದಲಿತರೇ ದಲಿತರನ್ನು ಅಮಾನವೀಯವಾಗಿ ಶೋಷಿಸುತ್ತಾರೆ ಎಂಬ ಸತ್ಯ ಪ್ರಥಮ ಬಾರಿಗೆ ಬಹಿರಂಗಗೊಂಡಿದೆ. ದಲಿತ ಸಮೂದಾಯಗಳು ಸಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕಿಳಿಯುತ್ತಿರುವ ಸಂದರ್ಭದಲ್ಲೆ ಕನ್ನಡಿಯೊಳಗಿನ ಗಂಟು ಅವರಿಗೇ ಕಾಣದಾಗಿದೆ. ಅನ್ಯ ಜಾತಿಯವರ ದಬ್ಬಾಳಿಕೆಗಿಂಥ ಜಾತಿ ಜಾತಿಯೊಳಗಿನ ಸಂಘರ್ಷ ಬಾರೀ ಅಪಾಯವಾಗಿದ್ದು, ಸಂಘಟನೆಗಳು ಮೊದಲು ಅವುಗಳ ನಿಯಂತ್ರಣ ಮಾಡಬೇಕಿದೆ.

Courtesy : Tiptur Krishna

ದಲಿತ ಚಳವಳಿ ಚರಿತ್ರೆ



ಸ್ಪಷ್ಟತೆ ಕಾಣದ ರಾಶಿ ಬರಹ ಸಂಗ್ರಹ

ಎಸ್. ಗಣೇಶನ್
March 27, 2011

ಮನುಷ್ಯ ಮನುಷ್ಯರ ನಡುವೆ ಶೋಷಣೆ, ಮೇಲುಕೀಳೆಂಬ ಭೇದ, ಅಸ್ಪೃಶ್ಯತೆ ಆಚರಣೆ, ಜಾತೀಯತೆ ಮತ್ತು ಮೌಢ್ಯ ಮನೆಮಾಡಿರುವ ಹಿಂದೂ ಧರ್ಮದಲ್ಲಿ ದಲಿತರು ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಲು ಇನ್ನೂ ಸಾಧ್ಯವಾಗಿಲ್ಲ.

ಇಂತಹ ವ್ಯವಸ್ಥೆಯ ನಡುವೆ ಅಲ್ಲಲ್ಲಿ ಶೋಷಣೆಯ ವಿರುದ್ಧ ನಿರಂತರವಾಗಿ ದನಿ ಎದ್ದಿದೆ. ಅದು ಬುದ್ಧ, ಬಸವ, ಜ್ಯೋತಿ ಬಾಫುಲೆ, ನಾರಾಯಣಗುರು, ಪೆರಿಯಾರ್ ಮುಂತಾದವರ ಕಾಲದಲ್ಲಿ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಪ್ರಯತ್ನ ನಡೆದಿದೆ. ಇವರೆಲ್ಲರ ಆಶಯಕ್ಕೆ ಒಂದು ಹೋರಾಟದ ದಿಕ್ಕು ತೋರಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಅವರು ಅನುಭವಿಸಿದ ಅಸ್ಪೃಶ್ಯತೆಯ ಯಾತನೆ, ಹೋರಾಟ, ಅಗಾಧವಾದ ಪಾಂಡಿತ್ಯ, ದೂರದೃಷ್ಟಿ, ಸಾಮಾಜಿಕ ಮತ್ತು ರಾಜಕೀಯವಾಗಿ ನಡೆಸಿದ ಹೋರಾಟವೇ ಈಗಿನ ದಲಿತ ಚಳವಳಿಗೆ ದಿಕ್ಸೂಚಿ.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿನ ದಲಿತ ಚಳವಳಿ ಮತ್ತು ದಲಿತ ಸಾಹಿತ್ಯದ ಹುಟ್ಟು, ಚಾರಿತ್ರಿಕವಾಗಿ ಒಂದು ಮಹತ್ವದ  ಘಟ್ಟ. ಈ ನಾಲ್ಕು ದಶಕಗಳಲ್ಲಿ ಕಂಡುಬಂದ ದಲಿತ ಜಾಗೃತಿಯ ಪ್ರಜ್ಞೆಯನ್ನು ಲೇಖಕ ಡಾ. ವಿ. ಮುನಿವೆಂಕಟಪ್ಪ ಅವರು, ತಾವು ಸಂಪಾದಿಸಿರುವ ‘ದಲಿತ ಚಳವಳಿ ಚರಿತೆ’ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.

ಈ ಬೃಹತ್ ಕೃತಿಯ ಜೀವಾಳ ಎಂದರೆ ಹಲವಾರು ಲೇಖಕರು ಅಲ್ಲಲ್ಲಿ ಬರೆದಿರುವ ಲೇಖನಗಳ ಸಂಗ್ರಹ. ಇಂತಹದೊಂದು ಕೃತಿ ರಚನೆಗಾಗಿಯೇ ಸ್ವತಃ ಮುನಿವೆಂಕಟಪ್ಪನವರಾಗಲಿ ಅಥವಾ ಇಲ್ಲಿನ ಲೇಖನಗಳ ಬರಹಗಾರರಾಗಲಿ ಬರೆದವರಲ್ಲ.

ಕೃತಿಯಲ್ಲಿನ ಬರಹಗಳನ್ನು ಪ್ರಮುಖವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಬುದ್ಧ, ಬಸವ, ವಚನಕಾರರು, ದಾರ್ಶನಿಕರು ಮುಂತಾದವರ ಬಗೆಗೆ ಪ್ರಕಟಗೊಂಡ ಲೇಖನಗಳ ಭಾಗ. ಇಲ್ಲಿನ ಲೇಖನಗಳು ಓದುಗರಿಗೆ ಇತಿಹಾಸದಲ್ಲಿ ದಲಿತ ಜಾಗೃತಿಗಾಗಿ ನಡೆದಿರುವ ಚಿಂತನೆಯ ದರ್ಶನವಾಗುತ್ತದೆ.

ಕರ್ನಾಟಕದ ದಲಿತ ಚಳವಳಿಯ ಮಟ್ಟಿಗೆ ಎರಡನೆಯ ಭಾಗ ಪ್ರಮುಖವಾದದ್ದು. ಅದು ದಲಿತ ಹೋರಾಟದ ದರ್ಶನ. 1973ರಲ್ಲಿ ನಡೆದ ಬೂಸಾ ಚಳವಳಿಯ ಹಿನ್ನೆಲೆಯಲ್ಲಿ ಆರಂಭವಾದ ದಲಿತ ಚಳವಳಿಯ ವಿವಿಧ ಮಜಲುಗಳ ದರ್ಶನ ಇಲ್ಲಿ ಆಗುತ್ತದೆ. ದಲಿತ ಯುವಕರನ್ನು ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಬಡಿದೆಬ್ಬಿಸಿದ ಡಿ. ದೇವರಾಜ ಅರಸು ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರ ವೈಚಾರಿಕ ಭಾಷಣಗಳೇ ದಲಿತ ಚಳವಳಿಯು ಮೊಳಕೆ ಒಡೆಯಲು ಕಾರಣ ಎನ್ನುವುದು ಐತಿಹಾಸಿಕ ಸತ್ಯ.

ಎಪ್ಪತ್ತರ ದಶಕ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ರಾಜಕೀಯದ ಬಗೆಗೆ ಯುವಕರಲ್ಲಿ ವೈಚಾರಿಕತೆಯನ್ನು ಬೆಳೆಸಿದ ಕಾಲ. ಹಾಗಾಗಿ ಅದೊಂದು ಚಳವಳಿಯ ಯುಗ. ಅದು ದಲಿತ ವಿದ್ಯಾರ್ಥಿಗಳು ಶೋಷಿತರ ವಿಮೋಚನೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ದಿನಗಳು. ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣ, ಕಾರ್ಲ್ ಮಾರ್ಕ್ಸ್, ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಬ್ಲ್ಯಾಕ್ ಪ್ಯಾಂಥರ್ಸ್‌ ಮತ್ತು ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‌ ಹೋರಾಟಗಳನ್ನು ಅಧ್ಯಯನ ಮಾಡಿ ಇಡೀ ಒಟ್ಟಾರೆ ಸಮಾಜದಲ್ಲಿ ಸಮಾನತೆಯನ್ನು ತರುವ ಆಸೆಯಿಂದ ಕಟ್ಟಿದ ಚಳವಳಿ. ಆ ದಿನಗಳಲ್ಲಿ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ನಡೆಸಿದ ಹೋರಾಟದ ಹೆಜ್ಜೆಗಳು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದು.

ಹೋರಾಟದ ಮುಂಚೂಣಿಯಲ್ಲಿದ್ದ ಯುವಕರಲ್ಲಿ ಅಂಬೇಡ್ಕರ್‌ವಾದ, ಲೋಹಿಯಾ ವಿಚಾರ, ಮಾರ್ಕ್ಸ್‌ವಾದ ಮತ್ತು ನಕ್ಸಲೀಯವಾದದ ಬಗೆಗಿನ ಒಲವು, ಬದ್ಧತೆ ಆರಂಭದ ವರ್ಷಗಳಲ್ಲಿ ಕಾಣುತ್ತಿತ್ತು. ಅದಕ್ಕಾಗಿ ಅವರವರಲ್ಲಿಯೇ ನಡೆಯುತ್ತಿದ್ದ ಸೈದ್ಧಾಂತಿಕ ಚರ್ಚೆ ದಲಿತ ಯುವಕರಲ್ಲಿ ವೈಚಾರಿಕತೆಯನ್ನು ತಂದುಕೊಟ್ಟಿತು. ಇವರೆಲ್ಲರ ಒಟ್ಟು ಆಶಯ ದಲಿತರನ್ನು ಶೋಷಣೆಯಿಂದ ವಿಮೋಚನೆಗೊಳಿಸುವ ಹೋರಾಟವನ್ನು ಬಲಗೊಳಿಸುವುದು. ಈ ದಿಕ್ಕಿನಲ್ಲಿ ಮೊದಲು ಕೈಗೆತ್ತಿಕೊಂಡದ್ದು ಭೂ ಹೋರಾಟ.

ಎಂಬತ್ತರ ದಶಕಪೂರ್ತಿ ರಾಜ್ಯದ ಹಲವಾರು ಕಡೆ ಯಶಸ್ವಿಯಾಗಿ ಭೂ ಹೋರಾಟಗಳು ನಡೆದವು. ಈ ಹೋರಾಟದ ಫಲವಾಗಿ ಸಾವಿರಾರು ದಲಿತರಿಗೆ ಉಳಲು ಭೂಮಿಯ ಮೇಲಿನ ಹಕ್ಕನ್ನು ದೊರಕಿಸಿಕೊಟ್ಟದ್ದು ಸಾಮಾನ್ಯ ಸಂಗತಿಯೇನಲ್ಲ. ಈ ಹೋರಾಟಗಳಲ್ಲಿ ದಲಿತರಲ್ಲದೆ ಇತರ ಹಿಂದುಳಿದ ಮತ್ತು ಶೋಷಿತ ಜಾತಿಗಳನ್ನು ಒಳಗೊಂಡದ್ದು ದಲಿತ ಚಳವಳಿಯ ಒಂದು ಮಹತ್ವದ ಬೆಳವಣಿಗೆ.

ಇಂತಹ ಒಂದು ಚಾರಿತ್ರಿಕ ಹೋರಾಟ ದಿನಕಳೆದಂತೆ ಸಾಮೂಹಿಕ ಚಳವಳಿಯಾಗಿ ಬೆಳೆಯುತ್ತಾ, ಹೋಳಾಗುತ್ತಾ ಹೋಯಿತು. ಈ ಚಳವಳಿಯ ಗೊತ್ತು ಗುರಿ ಮತ್ತು ಸೋಲು ಗೆಲುವಿನ ಹೆಜ್ಜೆಗಳನ್ನು ಕರಾರುವಕ್ಕಾಗಿ ಗುರುತಿಸುವಲ್ಲಿ ಲೇಖಕ ಮುನಿವೆಂಕಟಪ್ಪ ತಮ್ಮ ಸಂಪಾದಿತ ಕೃತಿಯಲ್ಲಿ ಹಿಡಿದಿಡುವಲ್ಲಿ ವಿಫಲರಾಗಿದ್ದಾರೆ. ದಲಿತ ಚಳವಳಿ ಮತ್ತು ದಲಿತ ಸಾಹಿತ್ಯದಲ್ಲಿ ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಮತ್ತು ಸಿದ್ಧಲಿಂಗಯ್ಯ ಅತ್ಯಂತ ಪ್ರಮುಖರು.

ಇವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದಿತಾದರೂ, ಹೋರಾಟದಲ್ಲಿ ಎಂದೂ ಬೇರೆ ಬೇರೆ ದಿಕ್ಕುಗಳನ್ನು ಹಿಡಿದವರಲ್ಲ. ಇವರಲ್ಲಿ ದೇವನೂರು ಮತ್ತು ಸಿದ್ಧಲಿಂಗಯ್ಯನವರ ಬಗೆಗೆ ಕೆಲವು ಹತಾಶ ಮನೋಭಾವದ ಬರಹಗಾರರು ಪೂರ್ವಗ್ರಹಪೀಡಿತರಾಗಿ ಅಸಹನೆಯಿಂದ ವಿವಿಧ ಕಡೆಗಳಲ್ಲಿ ಬರದಿರುವ ಲೇಖನಗಳನ್ನು ಈ ಕೃತಿಯಲ್ಲಿ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಈ ವಿಕೃತಿಯ ಲೇಖನಗಳೇ ಹೆಚ್ಚಿರುವುದರಿಂದ ದಲಿತ ಚಳವಳಿಯ ನಿಜವಾದ ಸ್ವರೂಪ ಮತ್ತು ಇತಿಹಾಸವನ್ನು ಕಟ್ಟಿಕೊಡುವಲ್ಲಿ ಮುನಿವೆಂಕಟಪ್ಪ ಯಶಸ್ವಿಯಾದಂತೆ ಕಾಣುವುದಿಲ್ಲ.

ಇನ್ನು ಮೂರನೇ ಅಧ್ಯಯವಾದ ‘ದಲಿತ ಸಾಹಿತ್ಯ ದರ್ಶನ’ ವಿಭಾಗದಲ್ಲಿ ಕೆಲವು ಉತ್ತಮ ಮತ್ತು ಅಧ್ಯಯನಕ್ಕೆ ಯೋಗ್ಯವಾದ ಲೇಖನಗಳು ಇವೆ. ಆದರೂ ಅಲ್ಲಿಯೂ ದೇವನೂರ ಮಹಾದೇವ ಮತ್ತು ಸಿದ್ಧಲಿಂಗಯ್ಯನವರ ಯಾವ ಬರಹಗಳ ಬಗೆಗೂ ಪ್ರಸ್ತಾಪವಿಲ್ಲದಿರುವುದು ಈ ಕೃತಿಯಲ್ಲಿನ ಬಹುದೊಡ್ಡ ಲೋಪ. ಹಾಗಾಗಿ ಎಂಟು ಮಂದಿ ಕುರುಡರು ಆನೆ ಮುಟ್ಟಿದ ಕಥೆಯಂತೆ ಈ ಕೃತಿಯು ದಲಿತ ಚಳವಳಿಯ ಇತಿಹಾಸವನ್ನು ತೆರೆದಿಟ್ಟಿದೆ.

ಈ ಚಳವಳಿಯನ್ನು ಕಂಡಿರದ ಓದುಗರಿಗೆ ಚಳವಳಿಯ ಸ್ಪಷ್ಟ ಚಿತ್ರ ಸಿಗುವುದಿಲ್ಲ. ಆದರೂ ಇಷ್ಟೆಲ್ಲ ಲೇಖನಗಳನ್ನು ಕಲೆಹಾಕಿ ಒಂದು ಬೃಹತ್ ಕೃತಿಯನ್ನು ನೀಡಿರುವ ಮುನಿವೆಂಕಟಪ್ಪ ಅವರ ಶ್ರಮ ಮೆಚ್ಚುವಂಥದ್ದು.
ದಲಿತ ಚಳವಳಿ ಚರಿತ್ರೆ
ಸಂ: ಡಾ. ವಿ. ಮುನಿವೆಂಕಟಪ್ಪ
ಪು: 556; ಬೆ: ರೂ. 600
ಪ್ರ: ತನು ಮನು ಪ್ರಕಾಶನ, ಕಾವ್ಯಲೋಕ-   ಎಚ್‌ಐಜಿ 1267, 1ನೇ ಕ್ರಾಸ್, ಶ್ರೀರಾಂಪುರ ಬಡಾವಣೆ, 2ನೇ ಹಂತ, ಮೈಸೂರು- 570023



http://prajavani.net/web/include/story.php?news=1390&section=156&menuid=13

ನನ್ನೂರ ದಲಿತರು ಕ್ಷೌರ ಕಲಿತದ್ದು

ನಾವು ಯಾರಿಗಿಂಥ ಕಮ್ಮಿ ಇಲ್ಲ 

ಕರ್ನಾಟಕದ ರಾಜ್ಯದ ಕಲ್ಪತರು ನಾಡೆಂದೇ ಪ್ರಸಿದ್ಧವಾದ ಊರು ತಿಪಟೂರು.  ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಹಿತ್ಯಕವಾಗಿ ಬೆಳೆದಿರುವ ನಮ್ಮ ಈ ಊರು ವಾಣಿಜ್ಯವಾಗಿ ಹೆಸರು ಮಾಡಿದಂತೆಯೇ ಕಲೆ ಮತ್ತು ನಾಟಕರಂಗ ಕ್ಷೇತ್ರದಲ್ಲೂ ಖ್ಯಾತಿಗಳಿಸಿದೆ.


ನಮ್ಮ ತಾಲೂಕಿನಲ್ಲಿ ವೀರಶೈವ ಸಮೂದಾಯದವರೇ ಹೆಚ್ಚು ಸಂಖ್ಯೆಯಲ್ಲಿದ್ದು ಪಂಚ ಮಠಗಳ ಸಾಮಿಪ್ಯದಿಂದ ಒಂದು ರೀತಿಯ ಧಾರ್ಮಿಕ ಕ್ಷೇತ್ರ ಎನಿಸಿದೆ. ಹಲವು  ವೈಶಿಷ್ಟ್ಯವಿರುವ ತಮ್ಮ ಊರು ಶೈಕ್ಷಣಿಕವಾಗಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ.    ಇಂತಹ ನಮ್ಮ ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ದಲಿತರು ಒಂದು ಇತಿಹಾಸ ಸೃಷ್ಟಿಸಿ, ಗಮನ ಸೆಳೆದಿದ್ದಾರೆ. ತಮ್ಮ ನಡೆ ನುಡಿ ಸಾಧನೆಗಳಿಂದ ಅಚ್ಚರಿ ಮೂಡಿಸಿರುವ ಇವರು ಸಮಾಜದ ಜನ ನಿಬ್ಬೆರಗಾಗಿ ನೋಡುವಂತಹ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ.

 ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಕಾಯಾ, ವಾಚಾ, ಮನಸಾ ಚಾಚೂ ತಪ್ಪದೇ ಪಾಲಿಸುವ ಇವರು ಇಡೀ ದಲಿತ ಸಮೂದಾಯಕ್ಕೆ ಮಾದರಿಯಾಗಿದ್ದಾರೆ. ಸರಕಾರ ನೀಡುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಈ ದಲಿತ ಕಾಲೋನಿಯಲ್ಲಿ ಎಲ್ಲರೂ ವಿದ್ಯಾವಂತರೇ. ಕನಿಷ್ಟ ಹತ್ತನೇ ತರಗತಿಯಿಂದ ಪದವಿವರೆಗೂ ಓದಿಕೊಂಡಿದ್ದಾರೆ.  ಹಾಗಾಗಿ ಇದು ಸಂಪೂರ್ಣ ಸಾಕ್ಷರಗ್ರಾಮ ಎನಿಸಿದೆ.
 ಮತ್ತೊಂದು ಅಚ್ಚರಿ ಎಂದರೆ, ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಸರಕಾರಿ ಸೇವೆಯಲ್ಲಿದ್ದಾರೆ.    ಗುಮಾಸ್ತನಿಂದ ಹಿಡಿದು, ಶಿಕ್ಷಕ, ಬಸ್ ಚಾಲಕ, ಬಸ್ ಕಂಡಕ್ಟರ್, ಮೆಕ್ಯಾನಿಕ್, ಕಂದಾಯ ಇಲಾಖೆ, ಅರಣ್ಯ, ತೆರಿಗೆ ಇಲಾಖೆಯ ಅಧಿಕಾರಿ, ತಹಸೀಲ್ದಾರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೀಗೇ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 
ಈ ಊರಿನ ದಲಿತರ ಮತ್ತೊಂದು ವಿಶೇಷ ಏನೆಂದರೆ ಇಲ್ಲಿ ಇದೂವರೆಗೂ ಮೇಲ್ಜಾತಿಯವರ ಜೊತೆ ಕಲಹ ಮಾಡಿಕೊಳ್ಳದೇ ಶಾಂತಿ ಸೌಹಾರ್ಧತೆಯಿಂದ ಬಾಳುತ್ತಿರುವುದು. ವೀರಶೈವರು ಬಿಟ್ಟರೆ ಇಲ್ಲಿ ವಾಸಿಸುವುದು ದಲಿತರೇ, ಬೇರೆ ಯಾವುದೇ ಜನ ಇಲ್ಲಿ ಇಲ್ಲ. ಊರಿನ ವೀರಶೈವ ದೇವರಿಗೆ ಎಲ್ಲರೂ ಸೇರಿ ನಮಿಸಿ, ಪೂಜಿಸುತ್ತಾರೆ. ಒಂದೇ ಕುಟುಂಬದವರಂತೆ ಜಾತ್ರೆ ಉತ್ಸವಗಳಲ್ಲಿ ಒಟ್ಟಾಗಿ ಭಾಗವಹಿಸಿ, ಸಂಭ್ರಮಿಸುತ್ತಾರೆ. ಸಂಪ್ರದಾಯ ಮತ್ತು ಮಡಿವಂತಿಕೆಗೆ ಇಲ್ಲಿ ದಲಿತರು ಎಂದೂ ಭಿನ್ನ ಮಾಡಿಲ್ಲದಿರುವುದರಿಂದ ಮೇಲ್ಜಾತಿಯವರೂ ಸಹ ಇಲ್ಲಿನ ದಲಿತರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ.
ಇವರ ಮತ್ತೊಂದು ಗಮನ ಸೆಳೆಯುವ ವಿಶೇಷ ಎಂದರೆ, ಕ್ಷೌರಿಕರ ಸಹಾಯವಿಲ್ಲದೇ ಅವರ ತಲೆ ಕೂದಲುಗಳನ್ನು ಅವರೇ ಕತ್ತರಿಸಿಕೊಳ್ಳುವುದು. ತಮ್ಮ ತಮ್ಮ ತಲೆ ಕೂದಲುಗಳನ್ನು ತಾವೇ ಅಂದವಾಗಿ ಕತ್ತರಿಸಿಕೊಂಡು ಆಕರ್ಷಕವಾಗಿ ಕಾಣುವ ಮೂಲಕ ಸಮೂದಾಯದ ಸ್ವಾಭಿಮಾನ ಮೆರೆದಿರುವುದಲ್ಲದೇ, ಪ್ರಜ್ಞಾವಂತ ಸಮಾಜಕ್ಕೆ ಸ್ವಾವಲಂಬನೆಯ ಪಾಠ ಹೇಳುತ್ತಾರೆ.
ಹೌದು, ಗಾಂಧಿಜಿ ಕೂಡ ದಕ್ಷಿಣ ಆಫ್ರಿಕಾದಲ್ಲಿ ವ್ಯಾಸಂಗ ಮಾಡುವಾಗ ತಾವೇ ಹೇರ್ ಕಟ್ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ನಾವು ಓದಿದ್ದೇವೆ. ಆದರೆ ಇಲ್ಲಿನ ಯುವಕರೂ ಆಧುನಿಕ ಆಡಂಬರ, ದುಭಾರಿ ವೆಚ್ಚಕ್ಕೆ ಬಲಿಯಾಗದೇ ನಿಷ್ಠೆಯಿಂದ ಸಮಾಜದ ಬದ್ಧತೆಗೆ ಶರಣಾಗಿ ತಮ್ಮ ಕ್ಷೌರವನ್ನು ಮತ್ತು ಕೂದಲಿನ ಕಟಿಂಗ್‌ನ್ನು ತಾವೇ ಮಾಡಿಕೊಳ್ಳುವ ಮೂಲಕ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು  ಅಭಿವ್ಯಕ್ತಗೊಳಿಸಿದ್ದಾರೆ.

ಬಹಳ ಹಿಂದೆ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕನೊಬ್ಬ ತಿರಸ್ಕರಿಸಿದ್ದ ಎಂಬ ಕಾರಣಕ್ಕೆ ಬೇಸತ್ತಿದ್ದ ಗ್ರಾಮಸ್ಥರು  ಅಂದಿನಿಂದಲೇ ಸ್ವತಃ ತಾವೇ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು, ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದರಂತೆ. ಅದು ಹಾಗೆಯೇ ರೂಡಿಯಾಗಿ ಎಲ್ಲರೂ ಹೇರ್ ಕಟ್ಟಿಂಗ್ ಮಾಡಿ ಕೊಳ್ಳುತ್ತಾರೆ. ತಲೆ ಕೂದಲು ಕತ್ತರಿಸುವುದು, ವಿನ್ಯಾಸಗೊಳಿಸುವುದು ನಮ್ಮ ಕೆಲಸವಲ್ಲ ಎಂದು ಇವರು ಯಾವತ್ತೂ ಮೂಗು ಮುರಿದವರಲ್ಲ. ಹಲವು ದಶಕಗಳಿಂದ ಗ್ರಾಮದಲ್ಲಿ ಯಾವ ಕ್ಷೌರಿಕನೂ ಇಲ್ಲ, ಗ್ರಾಮದ ದಲಿತರ‍್ಯಾರೂ ಕೂದಲು ಕತ್ತರಿಸಿಕೊಳ್ಳಲು ಕ್ಷೌರಿಕರ ಬಳಿ ಹೋದ ಉದಾಹರಣೆಗಳೂ ಇಲ್ಲ. ಹಾಗಂಥ ಅವರು ಹೇಗೆ ಬೇಕೋ ಆಗೇ ಕೂದಲುಗಳನ್ನು ಕತ್ತರಿಸಿಕೊಳ್ಳುವುದಿಲ್ಲ. ಅವರು ಮಾಡುವ ಹೇರ್ ಕಟಿಂಗ್ ನೋಡಿ ಪರಿಣಿತ ಹಾಗೂ ಅನುಭವಿ ಕ್ಷೌರಿಕರೇ ತಲೆ ಬಾಗಿದ್ದಾರೆ. ಅಚ್ಚರಿ ಎಂದರೆ ಗ್ರಾಮದ ವೀರಶೈವ ಕೋಮಿನ ಪಟೇಲ  ಹಾಗೂ ದಲಿತ ಯುವಕರ ಗೆಳೆತನ ಬೆಳೆಸಿರುವ ಲಿಂಗಾಯಿತ ಕೋಮಿನ ಅನೇಕರು ಇವರ ಬಳಿಯೇ ಹೇರ್ ಕಟ್ ಮಾಡಿಸುತ್ತಾರೆ. ಯಾರಿಗೇ ಕ್ಷೌರ ಮತ್ತು ಕಟ್ಟಿಂಗ್ ಮಾಡಿದರೂ ಹಣ ಪಡೆಯುವುದಿಲ್ಲ. ಹಾಗಾಗಿ ಈ ಕಾಲೋನಿಯ ಜನ ಕ್ಷೌರ ಮತ್ತು ಕೂದಲು ಕತ್ತರಿಸಿಕೊಳ್ಳಲು ಹಣ ಖರ್ಚು ಮಾಡುವುದಿಲ್ಲ. ಎಲ್ಲಾ ತರಹದ ಕೇಶ ವಿನ್ಯಾಸದಲ್ಲಿ ಸಿದ್ಧ ಹಸ್ತರಾದ ಇವರ ಕೌಶಲ್ಯ ಮೆಚ್ಚುವಂತಾದ್ದು. 


ಆದರೆ ಈ ಪರಿವರ್ತನೆಯ ಹಿಂದೆ ನೋವಿನ ಕಥೆಯಿದೆ. ಸ್ವಾಭಿಮಾನದ ಪ್ರಶ್ನೆಯಿದೆ.
ಹೌದು, ಈ ಊರಿನ ಇತಿಹಾಸದಲ್ಲಿ ದಲಿತ ವರ್ಗದ ಜನ ಕ್ಷೌರಿಕರಿಂದ ಕ್ಷೌರ ಮಾಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಮೂಡನಂಬಿಕೆ, ಅಂಧಚಾರ, ಅಸ್ಪೃಶ್ಯತೆ ತೀಕ್ಷ್ಣವಾಗಿದ್ದ ಕಾಲ. ಸಾಕಷ್ಟು ಅವಮಾನಗಳು ನಡೆದಿವೆ, ಮನಸ್ಸು ನೊಂದಿವೆ. ನಮ್ಮ ತಾತ ಮತ್ತು ಅಪ್ಪಂದಿರು ಸಮಾಜದ ಕಟ್ಟು ಪಾಡಿಗೆ ಅಂಟಿಕೊಂಡು ಬದುಕುತ್ತಿದ್ದರು. ಅವರಿಗೆ ಜ್ಞಾನೋದಯವಾಗುವುದರೊಳಗೆ ನಮ್ಮ ಪೀಳಿಗೆಯ ಜನ ಹುಟ್ಟಿದ್ದರು ಎಂದು ತಮಗಾದ ಅನುಭವವನ್ನು ಬಿಚ್ಚಿಡುತ್ತಾರೆ ಗ್ರಾಮದ ಶೀಲ ಸಂಪನ್ನ ಎಂಬ ಯುವಕ









ದಲಿತ ಯುವಕ ಶಿವರಾಜು ಹೇಳುವ ಕಥೆ ಕೇಳಿ: ಹಿಂದೆ ಪಕ್ಕದ ಗ್ರಾಮದಲ್ಲಿದ್ದ ಒಬ್ಬ ಭಜಂತ್ರಿಯೇ ಮನಸ್ಸು ಮಾಡಿ ಎಲ್ಲರ ತಲೆ ಕೂದಲುಗಳನ್ನು ಕತ್ತರಿಸಿ, ಮುಖ ಕ್ಷೌರ ಮಾಡಬೇಕಿತ್ತು. ದಲಿತರ ಅಂತರ ಕಾಪಾಡಿಕೊಂಡು ಕ್ಷೌರಿಕ ತನ್ನ ಕೆಲಸ ಮುಗಿಸುತ್ತಿದ್ದ. ಅಲ್ಲದೇ ದಲಿತರಿಗಾಗಿಯೇ ಬೇರೆ ಪರಿಕರಗಳನ್ನು ಅಂಗಡಿಯ ಹೊರಗೆ ಮಡಗಿದ್ದನಂತೆ. ದಲಿತರ ಬಗ್ಗೆ ತೀರಾ ಅಸಡ್ಡೆ ತೋರುತ್ತಿದ್ದ ಆತ ಹೇರ್ ಕಟ್ಟಿಂಗ್ ಮತ್ತು ಕ್ಷೌರ ಮಾಡಿದ ನಂತರ ಸ್ನಾನ ಮಾಡಿ ಶುದ್ಧವಾಗುತ್ತಾ ಸ್ವತಃ ಅವನಾಗಿಯೇ ಮಡಿವಂತಿಕೆ ಆಚರಿಸಿಕೊಂಡಿದ್ದನಂತೆ.  ದಲಿತರ ಬಗ್ಗೆ ಅಷ್ಟೊಂದು ಪ್ರೀತಿ ತೋರದ ಕ್ಷೌರಿಕರೊಬ್ಬರಿಂದ ತಲೆ ಕೂದಲು ಕತ್ತರಿಸಿಕೊಂಡಿದ್ದ ನಮ್ಮ ಗ್ರಾಮದ ಯುವಕನೊಬ್ಬ ಮನಸ್ಸು ಬದಲಾಯಿಸಿ ತನ್ನ ಕೂದಲನ್ನು ತಾನೇ ಕಟ್ ಮಾಡಿಕೊಂಡಿದ್ದನಂತೆ. ಮನಸ್ಸು ಮತ್ತು ಛಲದಿಂದ ಆ ವಿದ್ಯೆ ಕರಗತ ಮಾಡಿಕೊಳ್ಳಲು ಸಾಹಸ ಮಾಡಿದ್ದನಂತೆ.
ಮೊದ ಮೊದಲು ಆತ ತನ್ನ ಮನೆಯಲ್ಲಿ ಒಂದು ಕನ್ನಡಿ ಹಿಡಿದುಕೊಂಡು ತನ್ನ ಕೂದಲನ್ನು ತಾನೇ ಕತ್ತರಿಸಿಕೊಂಡನಂತೆ. ಆದರೆ ಅವತ್ತು ಅದು ಸಮಾಜಕ್ಕೆ ಒಂದು ಹಾಸ್ಯದಂತೆ ಕಂಡರೂ ಮುಂದಿನ ಬದಲಾವಣೆಗೆ ನಾಂದಿಯಾಯಿತು. ದಿನೇ ದಿನೇ ಆತ ಶ್ರದ್ದೆಯಿಂದ ಪ್ರಯತ್ನಿಸುತ್ತಾ, ಕಲಿಯುತ್ತಾ ಉತ್ತಮವಾಗಿ ಕೂದಲು ಕತ್ತರಿಸುವುದನ್ನು ರೂಡಿ ಮಾಡಿಕೊಂಡನಂತೆ. ನಂತರ ತನ್ನ ಮನೆಯವರಿಗೆ, ಸಂಬಂಧಿಕರಿಗೆ ಬೇರೆಯವರಿಗೆ ಕೂದಲನ್ನು ನಾನಾ ವಿನ್ಯಾಸದಲ್ಲಿ ಕತ್ತರಿಸಲು ಆರಂಭಿಸಿದ. ಗ್ರಾಮದ ಇತರರು ಇವನಂತೆಯೇ ರೂಢಿಸಿಕೊಂಡರು. ಕೊನೆಗೆ ಅವರವರ ಮನೆಯವರ ಕೂದಲುಗಳನ್ನು ಅವರೇ ಕತ್ತರಿಸಿ, ವಿನ್ಯಾಸಗೊಳಿಸುತ್ತಿದ್ದರಂತೆ.
ಇಂದು ಗ್ರಾಮದ ಎಲ್ಲರೂ ಅಂದವಾಗಿ ಹೇರ್ ಕಟ್ ಮಾಡುತ್ತಾರೆ. ಹಿರಿಯ ಕಿರಿಯ ಎಂಬ ಬೇಧ ಭಾವವಿಲ್ಲದೇ ಎಲ್ಲರ ಕೈಗಳೂ ಚೆನ್ನಾಗಿ ಪಳಗಿವೆ. ಯಾರೂ ಬೇಕಾದರೂ ಯಾರನ್ನಾದರೂ ಕಟ್ಟಿಂಗ್ ಮಾಡುತ್ತಾರೆ. ದಾರಿಯಲ್ಲಿ ಹೋಗುವ ನಮ್ಮೂರಿನ ಹುಡುಗರನ್ನು ಬಾರೋ ಕಟಿಂಗ್ ಮಾಡು ಎಂದರೆ ತಕ್ಷಣ ಕತ್ತರಿ ಮತ್ತು ಬಾಚಣಿಗೆಯೊಂದಿಗೆ ಸಿದ್ಧವಾಗಿ ಪಟಾಪಟ್ ಎಂದು ಕತ್ತರಿಸಿ ಹೋಗುತ್ತಾರೆ. ಎಲ್ಲಾ ಸಿಂಪಲ್.  



 ಈಗ ಗ್ರಾಮದಲ್ಲಿ ಪ್ರತಿಯೊಬ್ಬ ಯುವಕನೂ ಅಂದವಾಗಿ, ಆಕರ್ಷಕವಾಗಿ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು ನೋಡುಗರು ಗಮನಿಸುವಂತೆ ಸಿನಿಮಾ ನಟರಂತೆ ಮಿಂಚುತ್ತಿದ್ದಾರೆ. ಒಬ್ಬರ ಕೂದಲು ಇರುವಂತೆ ಮತ್ತೊಬ್ಬರ ಕೂದಲು ಇರುವುದಿಲ್ಲ. ಎಲ್ಲರದ್ದೂ ವಿಶೇಷ ಮತ್ತು ವಿಭೀನ್ನ ರೀತಿಯ ಆಕರ್ಷಕ ಕೇಶ ವಿನ್ಯಾಸಗಳೇ. ಮಾರಕಟ್ಟೆಯ ಯಾವುದೇ ಕೇಶ ವಿನ್ಯಾಸನ್ನೂ ಕೇಳಿದರೂ ಕ್ಷಣಾರ್ಧದಲ್ಲಿ ಮಾಡಿ ತೋರಿಸುತ್ತಾರೆ. ಹಾಗಂತ ಯಾರೂ ಅದನ್ನೇ ವೃತ್ತಿ ಮಾಡಿಕೊಂಡಿಲ್ಲ. 
ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಹುದು ಎಂದು ಹೇಳುವ ಯುವಕರ ಒಂದೊಂದು ಮಾತುಗಳು ಆಳ ಮತ್ತು ಅರ್ಥ ಗರ್ಭಿತ. ಬೇರೆಯವರನ್ನ ಅವಲಂಬಿಸದೇ ತಮ್ಮ ಕೆಲಸಗಳನ್ನು ತಾವು ಶುದ್ಧವಾಗಿ ಮತ್ತು ಆತ್ಮತೃಪ್ತಿಗಾಗಿ ಮಾಡಿಕೊಳ್ಳುವುದರಲ್ಲಿ ಹಿತವಿದೆ ಎಂದು ಉಪದೇಶ ನೀಡುವ  ಅವರ ಅನುಭವ ಸಿದ್ಧ ಮಾತುಗಳಲ್ಲಿ ಚೈತನ್ಯವಿದೆ. ಸಮಯ, ಹಣ ಎರಡೂ ಉಳಿಯುತ್ತದೆ ಮತ್ತು ಮನಸ್ಸಿಗೆ ಸಂತೋಷವಾಗುತ್ತದೆ ಎಂದು ಎದೆ ಹುಬ್ಬಿಸಿ ಹೇಳುವಾಗ ಅವರ ಸಾಧನೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಚ್ಚರಿ ಮತ್ತು ಆಸಕ್ತಿಯಿಂದ ಯಾರಾದರೂ ಬಂದರೆ ಅವರ ಮುಖಕ್ಕೆ ಹೊಂದುವ ಕೇಶ ವಿನ್ಯಾಸ ಮಾಡಿ, ತಮ್ಮ ಕೈ ಚಳಕ ತೋರಿಸಿ ನಾವು ಯಾರಿಗಿಂಥ ಕಮ್ಮಿ ಇಲ್ಲ ಎನ್ನುತ್ತಾರೆ ಈ ಛಲದಂಕಮಲ್ಲ ಸಾಧಕ ಯುವಕರು. ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ಒಂದು ತಣ್ಣನೆಯ ಮೌನ ಸಂದೇಶ ರವಾನಿಸಿದ್ದಾರೆ.

Courtesy : Tiptur Krishna

ಅಸ್ಪೃಶ್ಯತೆ, ಜಾತೀಯತೆ ಆಚರಣೆ: ವಿಷಾದ

ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ‘ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ’ ಕುರಿತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಉದ್ಘಾಟಿಸಿದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ.ಸುಮಿತ್ರಾಬಾಯಿ, ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರಮೇಶ್, ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಇದ್ದಾರೆ.
March 28, 2011

ಮೈಸೂರು: ‘ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಒಂದು ವೇಳೆ ಅವರ ಆಶಯ ಈಡೇರಿದರೆ ದೇಶ ಸ್ವರ್ಗವಾಗುತ್ತದೆ’ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಇಲ್ಲಿ ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ‘ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಮತ್ತ ಒಳಗೊಳ್ಳುವಿಕೆ’ ಕುರಿತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘ದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಪ್ರತಿಯೊಬ್ಬ ಪ್ರಜೆಯು ಸ್ವತಂತ್ರವಾಗಿ ಬದುಕಲು ಸಂವಿಧಾನ ರಚನೆ ಮಾಡಲಾಗಿದೆ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.

‘ಅಸ್ಪೃಶ್ಯತೆಯನ್ನು ಅಂಬೇಡ್ಕರ್ ಅವರು ತೀವ್ರವಾಗಿ ವಿರೋಧಿಸುತ್ತಿದ್ದರು. ಅದನ್ನು ಸ್ವತಃ ಅವರೇ ಅನುಭವಿಸಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರು ಜೀವನದ ಉದ್ದಕ್ಕೂ ಹೋರಾಟ ನಡೆಸಿದರು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ನಾವು ಮುಂದುವರೆದಿದ್ದರೂ ಅಸ್ಪೃಶ್ಯತೆ, ಜಾತಿಯತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೀಳಾಗಿ, ನಿಕೃಷ್ಟವಾಗಿ ಕಾಣುವುದು ಸರಿಯಲ್ಲ. ಮಾನವೀಯತೆಯಿಂದ ಕಾಣಬೇಕು’ ಎಂದರು.

ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರಮೇಶ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ.ಸುಮಿತ್ರಾಬಾಯಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಉಪಸ್ಥಿತರಿದ್ದರು. ‘ಅಂಬೇಡ್ಕರ್ ಸ್ಮರಣಾರ್ಥ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲು ಸಿದ್ಧತೆ’

ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಂತರ ವಲಯ ಫುಟ್‌ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ಆದರೆ ಬೆಂಗಳೂರು ರಾಜಧಾನಿಯಾದ ಮೇಲೆ ಅವಕಾಶಕ್ಕಾಗಿ ಮೈಸೂರಿನ ಕ್ರೀಡಾಪಟುಗಳು ಬೆಂಗಳೂರಿಗೆ ಹೋಗುತ್ತಿದ್ದಾರೆ. ಆದ್ದರಿಂದ ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸಿ ಅರ್ಹ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ದಿನದ 24 ಗಂಟೆಯೂ ರಾಜಕೀಯದಲ್ಲಿ ಮುಳುಗಿರುವ ರಾಜಕಾರಣಿಗಳಿಗೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿ, ಸಂತೋಷ ಸಿಗುತ್ತದೆ. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಫುಟ್ ಬಾಲ್ ಸಂಸ್ಥೆಯ ಕೆ.ಜಿ.ಸುಬ್ರಮಣ್ಯಸ್ವಾಮಿ, ಕೆಎಸ್ ಎಫ್‌ಎ ಕಾರ್ಯದರ್ಶಿ ಇ.ಕೃಷ್ಣನಾರಾಯಣ್, ಖಜಾಂಚಿ ಎ.ಡಿ.ನಾಗೇಂದ್ರ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಸಂಘಟನಾ ಕಾರ್ಯದರ್ಶಿ ಎಲ್.ಮಂಜುನಾಥ್, ಪಂದ್ಯಾವಳಿಯ ಕಾರ್ಯದರ್ಶಿಗಳಾದ ಎಸ್.ಎ.ಬಷೀರ್, ಎಸ್.ಕೃಷ್ಣೋಜಿ ರಾವ್, ಪಿ.ನರಸಿಂಹಯ್ಯ ಇತರರು ಉಪಸ್ಥಿತರಿದ್ದರು.



Ambedkar in Karnataka


ಚಿತ್ರಕಥೆ
ಕರ್ನಾಟಕದಲ್ಲಿ ಅಂಬೇಡ್ಕರ್

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಭಾರತದ ಚರಿತ್ರೆಯಲ್ಲಿ ಹಿಂದುಳಿದ ವರ್ಗಗಳ ಪಾಲಿಗೆ ಸೂರ್ಯನಂತೆ ಉದಿಸಿಬಂದ ನಾಯಕ. ಅವರು ಕೇಂದ್ರ ಸಚಿವ ಹಾಗೂ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರೂ ಆಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 1954ರ ಜುಲೈನಲ್ಲಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದರು. ಆಗ, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಪೌರಾಡಳಿತ ಸಚಿವ ಕೋಲಾರ ಟಿ. ಚೆನ್ನಯ್ಯ ಮತ್ತಿತರರು ಅಂಬೇಡ್ಕರ್ ದಂಪತಿಯನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು.
ಚಿತ್ರ-ಮಾಹಿತಿ: ಜಗನ್ನಾಥ ಪ್ರಕಾಶ್






http://46.5c.344a.static.theplanet.com/Content/Dec192010/weekly20101218218347.asp



ಬುದ್ದನ ಶಾಂತಿ ಸಂದೇಶ

ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯ ಮತ್ತು ಕೋಸಲ




‘ಹೊಲಸು’: ಆಹಾರ ಪ್ರಮಾಣ


‘ಹೊಲಸು’: ಆಹಾರ ಪ್ರಮಾಣ ;ಭಾಗ-1- ಡಾ. ರಹಮತ್ ತರೀಕೆರೆ

ಯಾವ ಸಾಮಾಜಿಕ ಆವರಣದೊಳಗೆ ನಾವು ಬದುಕುತ್ತಿದ್ದೇವೆಯೋ ಅದರ ತಳಬುಡವನ್ನು ಅರಿತುಕೊಳ್ಳುವುದು ಸಂಸ್ಕೃತಿ ಚರ್ಚೆಯಲ್ಲಿ ಅಗತ್ಯ ವಾಗಿದೆ. ಯಾವ ನೆಲದಲ್ಲಿ ಜಲವುಣಿಸುವ ಧಾರೆ ಗಳಿಗಾಗಿ ನೆರಳನೀವ ತರುಗಳಿಗಾಗಿ ಅಮರ್ದಿನ ಬಳ್ಳಿಗಾಗಿ ತಡಕಾಡುತ್ತಿದ್ದೇವೆಯೋ, ಆ ನೆಲದ ಮೇಲೆ ಬೆಳೆದ ಕಳೆಕಸಗಳ ಪರಿವೆ ಇರಬೇಕಷ್ಟೇ. ‘ಪ್ರಮಾಣ’ವೆಂದರೆ, ನಮ್ಮ ಸಮಾಜದ ವಿವಿಧ ಸ್ತರಗಳಲ್ಲಿ ಆಳುವ ಸಂಸ್ಕೃತಿಯ ಆಲೋಚನಾ ಕ್ರಮಕ್ಕೆ ತಕ್ಕನಾಗಿ ರೂಪುಗೊಂಡು ನೆಲೆಸಿರುವ ನಂಬಿಕೆ ಆಚರಣೆಗಳು; ಮನುಷ್ಯರಿಂದ ಹಿಡಿದು ಪಶುಪಕ್ಷಿ ಗಿಡಮರ ದಿಕ್ಕುಗಳು ಬಣ್ಣಗಳು ಉಣ್ಣು ವುದು ಉಡುವುದು ಆಡುವ ಮಾತು ಮಾಡುವ ಕಸುಬುಗಳಾದಿಯಾಗಿ, ಜೀವನವನ್ನೆಲ್ಲಾ ವ್ಯಾಪಿಸಿ ಕೊಂಡಿರುವ ಶ್ರೇಣೀಕರಣಗಳು; ಈ ಪ್ರಮಾಣೀ ಕರಣಗಳು ನಮ್ಮ ದೈನಿಕ ಬದುಕಿನಲ್ಲಿ ಸಹಜವಾಗಿ ಸೇರಿಹೋಗಿವೆ.

ಎಷ್ಟೆಂದರೆ, ಎದುರಲ್ಲಿ ಗೋಚರಿ ಸುತ್ತಿದ್ದರೂ, ನಮ್ಮ ಭಾಷೆ ಸಾಹಿತ್ಯಕೃತಿ ದೈನಿಕ ವರ್ತನೆಗಳು ಅವನ್ನು ಮತ್ತೆಮತ್ತೆ ಪ್ರಕಟಿಸುತ್ತಿ ದ್ದರೂ, ತಟ್ಟನೆ ಅವು ಅರಿವಿಗೆ ಬರುವುದೇ ಇಲ್ಲ. ಬಂದರೂ ತಲೆ ಕೆಡಿಸುವುದಿಲ್ಲ. ಈ ಪ್ರಮಾಣೀ ಕರಣದ ಜಗತ್ತನ್ನು ಅರಿಯುವುದೆಂದರೆ, ಇಂಡಿ ಯಾದ ಬೇರೆಬೇರೆ ಸಮುದಾಯ ಗಳು ಅದನ್ನು ಎಲ್ಲಿ ಉಲ್ಲಂಘಿಸಿವೆ, ದಾಟ ಲಾಗದೆ ಬಳಲಿವೆ ಅಥವಾ ಜಗಳಕ್ಕೆ ಹೋಗದೆ ಬದಲಿ ನಿರ್ಮಿಸಿಕೊಂಡಿವೆ ಎಂಬುದರ ಶೋಧ ಕೂಡಾ. ಪ್ರತಿಸಂಸ್ಕೃತಿ ನಿರ್ಮಾಣದ ಚರ್ಚೆಗೆ ಹಿನ್ನೆಲೆ ಒದಗಿಸಿ ಕೊಳ್ಳುವುದಕ್ಕಾಗಿ, ಪ್ರಮಾಣಗಳ ‘ಚರಿತ್ರೆ’ ಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಈ ಪ್ರಮಾಣಗಳಲ್ಲಿ ಆಹಾರ ಪ್ರಮಾಣವು ಮುಖ್ಯವಾದುದು.

ಬಹುಸಂಸ್ಕೃತಿಗಳ ಈ ದೇಶದೊಳಗೆ ನಡೆದ, ಈಗಲೂ ನಡೆಯುತ್ತಿರುವ ದೊಡ್ಡ ದೌರ್ಜನ್ಯವೆಂದರೆ, ಸಂಸ್ಕೃತಿನಿಷ್ಠವೂ ಖಾಸ ಗಿಯೂ ಆದ ಉಣ್ಣುವ ವಸ್ತುಗಳನ್ನು, ಕನಿಷ್ಠ ವೆಂದು ಶ್ರೇಷ್ಠವೆಂದು ವಿಂಗಡಿಸಿ ಪ್ರಮಾಣೀ ಕರಿಸಿರುವುದು. ಈ ಬಗೆಯ ಪ್ರಮಾಣೀಕರ ಣಗಳು ಹೆಚ್ಚಾಗಿ ರಾಜಕೀಯ ಅಧಿಕಾರ ಪಡೆದ ಸಂಸ್ಕೃತಿಯ ಕೇಂದ್ರದಿಂದ ಸೃಷ್ಟಿಯಾ ಗಿರುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಪಡೆಯ ಬಯಸುವ ಉಳಿದ ಸಮುದಾಯಗಳು ‘ಉಚ್ಚಸಂಸ್ಕೃತಿ’ಯ ಈ ಮಾದರಿಗಳನ್ನು ಆದರ್ಶ ವೆಂದು ಒಪ್ಪಿಕೊಳ್ಳುತ್ತವೆ. ಎಷ್ಟೋ ಸಮುದಾಯ ಗಳು ಚರಿತ್ರೆಯಲ್ಲಿ ಮಾಂಸಾಹಾರವನ್ನು ಬಿಟ್ಟು ಶ್ರೇಷ್ಠಗೊಳಿಸಲು ಯತ್ನಿಸಿದ್ದು ಹೀಗೆ. ಚಮ್ಮಾರರಾದ ಛತ್ತೀಸಗಢದ ಸತ್ನಾಮಿಗಳು, ಗುರುಘಾಸೀದಾಸನ ಪ್ರಭಾವದಿಂದ ಭಕ್ತರಾಗಿ ಜನಿವಾರ ಧರಿಸಿದರು. ಮಾಂಸಾಹಾರ ತ್ಯಜಿಸಿದರು.

ಮಾತ್ರವಲ್ಲ, ಕೆಂಪು ತರಕಾರಿ ಕೂಡ ತಿನ್ನುವುದನ್ನು ನಿಲ್ಲಿಸಿಬಿಟ್ಟರು. ಒಂದನ್ನು ಪಡೆಯಲು ಮತ್ತೊಂದರ ತ್ಯಾಗ. ಸಾಮಾಜಿಕ ಸ್ಥಾನಮಾನಕ್ಕಾಗಿ ಸಂಸ್ಕೃತೀಕರಣಗೊಳ್ಳಬೇಕೆಂಬ ಆಸೆ ಹಾಗೂ ತಮ್ಮ ಪ್ರೀತಿಯ ಆಹಾರಕ್ರಮಗಳನ್ನು ಕೈಬಿಡಲಾಗದ ಅಸಹಾಯಕತೆ. ಈ ತೊಳಲಾಟದಲ್ಲಿ ಅತ್ತಲೂ ಇತ್ತಲೂ ಇರಬಯಸುವ ಆದರೆ ವಾಸ್ತವದಲ್ಲಿ ಇರಲಾಗದ ದ್ವಂದ್ವಗಳಲ್ಲಿ ಉಳಿದುಬಿಡುವ ಸಮು ದಾಯಗಳೇ ಹೆಚ್ಚು. ಸದ್ಯಕ್ಕೆ ಇವು ಕೆಲವು ‘ಶುಭ’ ಕಾರ್ಯಗಳಲ್ಲಿ ಮಾತ್ರ ‘ಉಚ್ಚ’ ಸಂಸ್ಕೃತಿಯನ್ನು ಅನುಸರಿಸುವ ಮಟ್ಟಕ್ಕೆ ರಾಜಿಯಾಗಿವೆ. ಮುಖ್ಯವಾಗಿ ಇದು ಇಂಡಿಯಾದ ನಡುಹಂತದ ಶೂದ್ರ ಜಾತಿ ಸಮುದಾಯಗಳ ಪಾಡು.

ಆದರೆ ಸಂಸ್ಕೃತೀಕರಣದ ಯಾವ ಆಮಿಷಕ್ಕೂ ಮನಗೊಡದೆ ತಂತಮ್ಮ ಆಹಾರ ಕ್ರಮಗಳನ್ನು ಆತ್ಮವಿಶ್ವಾಸದಿಂದ ದಿಟ್ಟವಾಗಿ ಮುಂದುವರಿಸಿಕೊಂಡು ಬಂದವೆಂದರೆ, ತೀರ ಕೆಳಸ್ತರದ ಸಮುದಾಯಗಳು. ಅವಕ್ಕೆ ಮೇಲ್ಚ ಲನೆಯ ಸಾಧ್ಯತೆಗಳು ಕಡಿಮೆಯಿದ್ದುದರಿಂದಲೂ ಹೀಗಾಗಿರಬಹುದು. ಆದರೂ ತಮ್ಮ ಪಾರಂಪರಿಕ ಆಹಾರ ಪದ್ಧತಿಯನ್ನು ಬಿಟ್ಟುಕೊಡದ ಹಠವನ್ನು ಪ್ರತಿಸಂಸ್ಕೃತಿಯ ಜಿಗುಟುತನ ಎಂದು ಕರೆಯ ಬಹುದು.ಈ ಬಗೆಯ ಮೇಲ್ಚನೆಗಳಲ್ಲಿರುವ ವ್ಯಂಗ್ಯ ವೆಂದರೆ, ಯಾವ ಸಂಸ್ಕೃತಿಯು ಉಳಿದವಕ್ಕೆ ಮಾದ ರಿಯಾಗಿದೆಯೋ ಅದು, ಚರಿತ್ರೆಯ ಒಂದು ಘಟ್ಟದಲ್ಲಿ ಸ್ವತಃ ಇನ್ನೊಂದನ್ನು ಅನುಕರಿಸಿ ರುವುದು. ಅಂದರೆ ಪ್ರಮಾಣೀಕರಣಗಳನ್ನು ನಿರ್ಧ ರಿಸುವ ಅಧಿಕಾರ ಸ್ಥಾನದಲ್ಲಿರುವ ಬ್ರಾಹ್ಮಣರು, ಒಂದು ಕಾಲಕ್ಕೆ ಮಾಂಸಾಹಾರಿಗಳಾಗಿದ್ದವರು; ತಮ್ಮ ಯಜ್ಞ ಮತ್ತು ಶ್ರಾದ್ಧಗಳಲ್ಲಿ ಪ್ರಾಣಿಬಲಿ ಮಾಂಸದಡಿಗೆಗಳನ್ನು ಪವಿತ್ರ ಆಚರಣೆಗಳಾಗಿ ಹೊಂದಿದ್ದವರು.

ಈ ಸಂಗತಿಯನ್ನು ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಎಂತಲೆ ಚಾರ್ವಾಕರು ವಚನಕಾರರು ಬ್ರಹ್ಮಶಿವ ಮೊದಲಾದವರು ಬ್ರಾಹ್ಮಣರ ಟೀಕೆ ಮಾಡುವಾಗ, ಮೇಲಿನ ಚಾರಿತ್ರಿಕ ತಥ್ಯವನ್ನು ಒಂದು ಪ್ರಬಲ ಅಸ್ತ್ರ ಮಾಡಿಕೊಳ್ಳುತ್ತಾರೆ.ಮಾಂಸಾಹಾರದ ನಿರಾಕರಣೆ ಮತ್ತು ಒಪ್ಪು ವಿಕೆಯು ಭಾರತದ ಸಂಸ್ಕೃತಿಗಳಲ್ಲಿ ನಿರ್ಮಿಸಿರುವ ಆಕರ್ಷಣೆ ವಿಕರ್ಷಣೆಯ ದ್ವಂದ್ವಗಳು ವಿಚಿತ್ರ ವಾಗಿವೆ. ಸಮುದಾಯಗಳ ನಂಬಿಕೆ ಆಚರಣೆ ಮಿತ್‌ಗಳಲ್ಲಿ ಈ ದ್ವಂದ್ವವನ್ನು ಗುರುತಿಸಬಹುದು. ಇವನ್ನು ಮೂರು ನೆಲೆಗಳಲ್ಲಿ ವಿವರಿಸಬಹುದು.

ಅ. ‘ಗೋಮಾಂಸ’ ಸ್ವೀಕರಿಸುವ ಜನರ ಸಂಸ್ಕೃತಿಗಳು

ಆ. ದನವಲ್ಲದೆ ಇತರ ಪ್ರಾಣಿಗಳ ಮಾಂಸ ತಿನ್ನುವ ಜನರ ಸಂಸ್ಕೃತಿಗಳು ಇ. ಇಲಿ, ಉಡ, ಹಾವು, ಇರುವೆ ಇತ್ಯಾದಿಗಳನ್ನು ತಿನ್ನುವ ಜನರ ಸಂಸ್ಕೃತಿಗಳು.

ಇ. ‘ಗೋಮಾಂಸ’ದ ರಾಜಕಾರಣ: ವಲಸೆ ಗಾರರಾಗಿ ಬಂದ ಆರ್ಯರಿಗೆ ಹಸು ಸಂಪತ್ತೂ ಹೌದು, ಆಹಾರವೂ ಹೌದು. ಗೋವು ಪವಿತ್ರವಾಗಿತ್ತು ಎಂಬ ಕಾರಣಕ್ಕಾಗಿಯೇ ಅದರ ಮಾಂಸಸೇವನೆ ಪವಿತ್ರೀಕರಿಸುವ ಆಚರಣೆಗಳಲ್ಲಿ ಒಂದಾಗಿತ್ತು ಎಂದು ವೈದಿಕ ಧರ್ಮಶಾಸ್ತ್ರದ ದೊಡ್ಡವಿದ್ವಾಂಸ ಪಿ.ವಿ.ಕಾಣೆ ಹೇಳುತ್ತಾರೆ.

ವೇದಗಳಲ್ಲಿ ಬರುವ ‘ಗೋಘ್ನ’ (ಹಸು ತಿನ್ನುವವನು) ಎಂಬ ಶಬ್ದವು ಅತಿಥಿಗೆ ಪರ್ಯಾಯ ಹೆಸರು. ಯಾಕೆಂದರೆ ಆರ್ಯರು ಗೌರವಾನ್ವಿತ ಅತಿಥಿಗೆ ಕೊಡುತ್ತಿದ್ದ ‘ಮಧುಪರ್ಕ’ ದಲ್ಲಿ ದನದಮಾಂಸ ಇರಲೇಬೇಕಿತ್ತು. ಅಜಯಾಗ ದಲ್ಲಿ ಆಡಿನ, ಅಶ್ವಮೇಧಯಾಗದಲ್ಲಿ ಕುದುರೆಯ ವಿಭಿನ್ನ ಅಂಗಗಳನ್ನು ಹಂಚುವ ಮತ್ತು ಅಡುವ ವಿವರಣೆ ವೇದಗಳಲ್ಲಿದೆ. ಯಾವ ದೇವತೆಗಳಿಗೆ ಯಾವ ಬಣ್ಣದ ಹಸುವನ್ನು ಬಲಿಕೊಡಬೇಕೆಂಬ ವಿವರಣೆಗಳಿವೆ; ಮಹಾಭಾರತದಲ್ಲಿ (ಅರಣ್ಯ ಪರ್ವ: 207 - 209) ವದಂತಿರಾಜನ ಅಡುಗೆ ಮನೆಯಲ್ಲಿ ಪ್ರತಿದಿನ ಎರಡುಸಾವಿರ ದನಗಳ ಮಾಂಸವನ್ನು ಅಡುತ್ತಿದ್ದ ಬಗ್ಗೆ ಉಲ್ಲೇಖವಿದೆ. ಅಂಬೇಡ್ಕರ್ ತಮ್ಮ ‘ಅಸ್ಪಶ್ಯರು’ ಕೃತಿಯಲ್ಲಿ ಇಂತಹ ಅನೇಕ ಉಲ್ಲೇಖಗಳನ್ನು ವೈದಿಕ ವಾಙ್ಮಯದಿಂದ ಆಯ್ದು ಕೊಡುತ್ತಾರೆ.

ವೈದಿಕರು ತಮ್ಮ ಧಾರ್ಮಿಕ ಆಚರಣೆಗಳಲ್ಲಿ ನಡೆಸುತ್ತಿದ್ದ ಈ ಅವ್ಯಾಹತ ಪಶುವಧೆಗೆ ಪ್ರತಿ ರೋಧ ಒಡ್ಡಿದವನು ಬುದ್ಧ. ರೈತಾಪಿ ಸಮಾಜ ದಲ್ಲಿ ಈ ರೀತಿಯ ಪಶುವಧೆ ದುಷ್ಪರಿಣಾಮ ಬೀರುತ್ತದೆಂದು ಅವನು ಮಂಡಿಸಿದ ‘ಅಹಿಂಸೆ’ ಯ ತತ್ವವು, ಕೃಷಿಕ ಪಶುಪಾಲಕ ಜನಕ್ಕೆ ಪ್ರಿಯ ವಾಯಿತು. ಅವರು ಬೌದ್ಧಧರ್ಮ ಸೇರಿ ಅದನ್ನು ಜನಪ್ರಿಯಗೊಳಿಸಿದರು. ಎಂತಲೇ ಬೌದ್ಧ ಸಾಹಿ ತ್ಯಗಳಲ್ಲಿ ವೈದಿಕರ ‘ಹಿಂಸೆ’ಯ ಬಗ್ಗೆ ಬಲವಾದ ಟೀಕೆಗಳಿವೆ. ಯಾವಾಗ ಸಮುದಾಯಗಳನ್ನು ತನ್ನತ್ತ ಹೀಗೆ ಸೆಳೆದುಕೊಂಡು ಬೌದ್ಧಧರ್ಮವು ಒಂದು ಪ್ರತಿಶಕ್ತಿಯಾಗಿ ಬೆಳೆಯತೊಡಗಿತೋ, ಆಗ ವೈಗದಿಕರು ತಮ್ಮ ಜೀವನಕ್ರಮದ ಸ್ವವಿಮ ರ್ಶೆಗೂ ಸೂಕ್ತ ಮಾರ್ಪಾಟಿಗೂ ತೊಡಗಲೇ ಬೇಕಾಯಿತು.

ಅಂಬೇಡ್ಕರ್ ಪ್ರಕಾರ, ಬ್ರಾಹ್ಮಣರು ತಮ್ಮ ಜೀವನಕ್ರಮದಲ್ಲಿ ಎರಡು ಕ್ರಾಂತಿಕಾರಕ ಮಾರ್ಪಾಟನ್ನು ತಂದುಕೊಂಡರು. ಒಂದು: ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿದ್ದು. ಎರಡು: ಇನ್ನೂ ಕೊಂಚ ಮುಂದುವರಿದು ಎಲ್ಲ ಬಗೆಯ ಮಾಂಸಾಹಾರವನ್ನು ಕೈ ಬಿಟ್ಟಿದ್ದು. ‘ನನ್ನ ದೃಷ್ಟಿಯಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಗೋವನ್ನು ಪೂಜಿಸಲು ಆರಂಭಿಸಿದ್ದು ದೊಡ್ಡ ರಾಜ ತಂತ್ರ’ ಎನ್ನುವ ಅಂಬೇಡ್ಕರ್, ಬೌದ್ಧರ ಮತ್ತು ತಮ್ಮ ಧರ್ಮಗಳೊಳಗಣ ಸ್ಪರ್ಧೆ ಯಲ್ಲಿ ಬ್ರಾಹ್ಮಣರು, ತಾವು ಬೌದ್ಧರಿಗಿಂತ ಶ್ರೇಷ್ಠವೆಂದು ರುಜುವಾತು ಪಡಿಸುವ ಹಠದಲ್ಲಿ ಈ ಬದಲಾವಣೆಯನ್ನು ಪಡೆದರೆಂದು ವಿವರಿಸುತ್ತಾರೆ.

ವಿಸ್ಮಯವೆಂದರೆ, ಚರಿತ್ರೆಯಲ್ಲಾದ ಈ ಪಲ್ಲಟವನ್ನು ಈಗ ಗೋಪೂಜೆ ಹಾಗೂ ಸಸ್ಯಾಹಾರಗಳ ವಕ್ತಾರನಂತಿರುವ ಬ್ರಾಹ್ಮಣ ಸಂಸ್ಕೃತಿಯು ಮರೆತುಬಿಟ್ಟಿರುವುದು: ಬದ ಲಿಗೆ ಇಂಡಿಯಾದ ಅನೇಕ ಮಾಂಸಾ ಹಾರಿ ಸಂಸ್ಕೃತಿಗಳನ್ನು ಹೀನಾಯವಾಗಿ ನೋಡುವಂತಹ ದೃಷ್ಟಿಕೋನ ಬೆಳೆಯಲು ಕಾರಣವಾಗಿರುವುದು. ಗಳಗನಾಥರ ‘ಮಾಧವ ಕರುಣಾವಿಲಾಸ’ ಕಾದಂಬರಿ ಯಲ್ಲಿ ವಿದ್ಯಾರಣ್ಯನು ಅಸ್ಪಶ್ಯತೆಯನ್ನು ಕುರಿತು ಹೇಳುವುದನ್ನು ಗಮನಿಸಬೇಕು: ‘‘ಗೋಮಾಂಸಾದಿ ನಿಷಿದ್ಧ ಪದಾರ್ಥಗಳ ಭಕ್ಷಣ ಮಾಡುವವರೂ ಆದ ಪಂಚಮರು, ವೈದಿಕರಿಗೆ, ಪ್ರಾಚೀನ ಋಷಿ ಸಮ್ಮತವಾಗಿ ಧಾರ್ಮಿಕ ವ್ಯವಹಾರದಲ್ಲಿ ಸ್ಪರ್ಶರು ಹ್ಯಾಗಾದರು?’’
‘ಚಾರಿತ್ರಿಕ’ ಕಾದಂಬರಿಯೊಂದು ಒಪ್ಪಿಸು ತ್ತಿರುವ ಅಚಾರಿತ್ರಿಕ ನಂಬಿಕೆಯಿದು: ಅಂಬೇ ಡ್ಕರ್ ಪ್ರಕಾರ ಅಸ್ಪಶ್ಯರು ಸೃಷ್ಟಿಯಾಗಿದ್ದು, ಬ್ರಾಹ್ಮಣ ಸಂಸ್ಕೃತಿ ನಿಷೇಧಿಸಿದ ಆಹಾರವನ್ನು ಬಿಡದೆ ಮುಂದುವರಿಸಿದ್ದಕ್ಕೆ. ಅದರಲ್ಲೂ ಸತ್ತ ದನಗಳನ್ನು ಹೊರುವುದು, ಅದರ ಚರ್ಮ ಬಳಸಿ ವೃತ್ತಿ ಮಾಡುವುದು ಯಾರ ಸಾಮಾಜಿಕ ಕರ್ತವ್ಯ ವಾಗಿತ್ತೊ ಅಂತಹವರು ಸತ್ತ ದನದಮಾಂಸ ತಿನ್ನುವುದು ಸಹಜವಾಗಿತ್ತು. ಆ ಜನ ಅಸ್ಪಶ್ಯ ರೆನಿಸಿದರು.ಸ್ವಂತ ಅಭಿರುಚಿಗೆ ಸಂಬಂಧಿಸಿದ ವಿಷಯಕ್ಕೆ ಧಾರ್ಮಿಕ ಲೇಪ ಬಂದೊಡನೆ ‘ಗೋವು’ ಎಂಬ ಪ್ರಾಣಿಯು ಬ್ರಾಹ್ಮಣರೊಡನೆ (ಗೋಬ್ರಾಹ್ಮಣ) ಸಮೀಕರಣಗೊಂಡು ದೈವವಾಗಿ, ಕೋಟ್ಯಂತರ ದೇವತೆಗಳ ವಾಸಸ್ಥಾನವಾಗಿ, ಅದರ ಮಾಂಸ ಸೇವನೆಯು ಘೋರ ಪಾಪವಾಗಿಬಿಟ್ಟಿತು.

ಸನಾತನವಾದಿಗಳಾದ ಗುಪ್ತರ ಕಾಲದಲ್ಲಿ ಈ ನಂಬಿಕೆ ಧರ್ಮಶಾಶ್ತ್ರವಾಯಿತು. ಇಂತಹ ಸನಾತ ಸಂಸ್ಕೃತಿಯ ಅಲೆ ದಕ್ಷಿಣಕ್ಕೆ ಬಂದಾಗ, ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಮದ್ಯ ಮಾಂಸಗಳನ್ನು ಪವಿತ್ರವೆಂದು ಎಣಿಸಿದ್ದ ‘ದ್ರಾವಿಡ’ ಸಂಸ್ಕೃತಿಗಳೂ ಪ್ರಭಾವಗೊಂಡವು.


ಡಾ. ರಹಮತ್ ತರೀಕೆರೆ

http://beta.varthabharathi.net/print/52748/

ಬೌದ್ಧ ದೀಕ್ಷೆ

 ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ದ್ಧ ಪೂರ್ಣಿಮೆ ಮುಗಿದಿದೆ. ಬುದ್ಧನ ಮಾರ್ಗದ ಬಗ್ಗೆ ಯಾವುದೇ ಚರ್ಚೆ ಇಲ್ಲದೆ. ಒಂದೊಮ್ಮೆ ಭಾರತದಲ್ಲಿ ಉಚ್ಚ್ರಾಯ ಸ್ಥಿತಿಗೆ ತಲುಪುವತ್ತ ಸಾಗಿದ್ದ ಧರ್ಮ ಕಾಲಕ್ರಮೇಣ ಅಂಥ ಸಾಧ್ಯತೆಯಿಂದ ದೂರ ಉಳಿಯಿತು. ಹಾಗೆ ನೋಡಿದರೆ ಪ್ರತಿಯೊಬ್ಬರೂ ಬೌದ್ಧರಾಗಬೇಕು. 

ಈ ವಿಷಯದಲ್ಲಿರುವ ಒಂದು ಸೌಂದರ್ಯವೆಂದರೆ ವ್ಯಕ್ತಿಯೊಬ್ಬ ಯಾವ ಧರ್ಮದಲ್ಲಿದ್ದುಕೊಂಡು ಬೇಕಾದರೂ ಬೌದ್ಧನಾಗಬಹುದು. 'ನೀನೂ ಬದುಕು, ಬೇರೆಯವರನ್ನೂ ಬದುಕಲು ಬಿಡು' ಎಂಬ ಆಶಯದ ಬುದ್ಧನ ಅಹಿಂಸಾ ಮಾರ್ಗವನ್ನು ತುಳಿಯುವುದಕ್ಕೆ ಯಾತರ ದರ್ದು, ಯಾವುದರ ನಿಬಂಧನೆ? ಇದೇ ಪತ್ರಿಕೆಯಲ್ಲಿ ಇತ್ತೀಚೆಗೆ ಲಿಂಗಾಯತ ಸಮುದಾಯದ ಪ್ರಸ್ತುತ ಸ್ವರೂಪವನ್ನಿಟ್ಟುಕೊಂಡು ಸಂವಾದ ನಡೆಸಲಾಯಿತು. ಲಿಂಗಾಯತ ಎನ್ನುವುದು ಬಸವ ತತìಗಳ ಆಚೆ ಬಂದು ಕೇವಲ ರಾಜಕೀಯ ಶಕ್ತಿ ಪ್ರದರ್ಶನದ ಪ್ರತೀಕವಾಗುವುದಾದರೆ ಅದಕ್ಕೆ ಪ್ರತ್ಯೇಕ ಧರ್ಮದ ಮೊಹರೇನೂ ಬೇಕಾಗಿಲ್ಲ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಬಹುತೇಕರು ಅಭಿಪ್ರಾಯ ಪಟ್ಟಿದ್ದರು. ಇದೇ ವ್ಯಾಪ್ತಿಯಲ್ಲಿ ಇಂದು ಬೌದ್ಧ ಧರ್ಮದ ಬಗೆಗೂ ಚರ್ಚೆಯ ಅವಶ್ಯಕತೆ ಇದೆ. ಈಗ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳಲು ಬಯಸುತ್ತಿರುವವರ ಮನೋಭೂಮಿಕೆಯಲ್ಲಿ ಮಿಳಿತವಾಗಿರುವ ವಿಚಾರಗಳು ಯಾವುವು? ಆ ಯೋಚನೆಗಳಿಂದಾಗಿ ಅವರು ಬೌದ್ಧ ಧರ್ಮವನ್ನು ಒಪ್ಪಿಕೊಂಡ ಮೇಲೂ ಪ್ರತ್ಯೇಕವಾಗಿಯೇ ಉಳಿಯುವ ಚಹರೆಗಳು ಕಾಣುತ್ತಿವೆಯಲ್ಲ? ಇದರಿಂದ ಧರ್ಮಕ್ಕಾಗಲೀ, ಅದರೊಂದಿಗೆ ಗುರುತಿಸಿಕೊಂಡವರಿಗಾಗಲೀ ಆಗುತ್ತಿರುವ ಉದ್ದೇಶ ಸಾಧನೆಯಾದರೂ ಏನು? ಈ ಎಲ್ಲ ಪ್ರಶ್ನೆಗಳನ್ನು ಹರವಿಕೊಂಡು ಒಂದಿಷ್ಟು ಮಂಥನ ನಡೆಯಬೇಕಿದೆ. ಪರ್ಯಾಯವೊಂದನ್ನು ಹುಟ್ಟುಹಾಕಬೇಕಿದ್ದ 'ಬೌದ್ಧ ದೀಕ್ಷೆ' ಕೇವಲ ಸಂಕೇತಕ್ಕಷ್ಟೆ ಸೀಮಿತಗೊಂಡ ಆಚರಣೆಯಾಗಿಬಿಟ್ಟಿದೆಯೇ ಎಂಬುದು ಈ ಕ್ಷಣದ ಕೊರಗು. 

12ನೇ ಶತಮಾನದ ಹೊತ್ತಿಗೆಲ್ಲ ಮುಸುಕಾಗಿಬಿಟ್ಟಿದ್ದ ಬೌದ್ಧ ಧರ್ಮ ಮತ್ತೆ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿಕೊಳ್ಳಲು ದಲಿತ ಚಳವಳಿಯ ಪ್ರಭಾವ ಕಾರಣ. ಇವತ್ತಿಗೂ ಬುದ್ಧ ಪೂರ್ಣಿಮೆ ಹಾಗೂ ಅದರ ಆಚೀಚಿನ ದಿನಗಳಲ್ಲಿ ದಲಿತರು ಗುಂಪಾಗಿ ಬೌದ್ಧ ಧರ್ಮಕ್ಕೆ ಮತಾಂತರವಾಗಿ, ಬೌದ್ಧ ದೀಕ್ಷೆ ಪಡೆದುಕೊಳ್ಳುವುದನ್ನು ನೋಡುತ್ತೇವೆ, ಓದುತ್ತೇವೆ. ಆ ಕಾಲಘಟ್ಟದಲ್ಲಿ ಸಮಾಜದ ಆತ್ಮಸಾಕ್ಷಿಯನ್ನು ಕಲಕಲೇಬೇಕಾದ ತುರ್ತು ಅಗತ್ಯವೊಂದಿತ್ತು. ಕಂದಾಚಾರದ ಮನಸ್ಥಿತಿಯಿಂದ ಹೊರಬಾರದೇ ಉಳಿದವರಿಗೆ ಬಿಸಿ ತಾಗಬೇಕಾದರೆ, ದಮನಿತರಿಗೆ ತಮಗಾದ ಅನ್ಯಾಯದ ವಿರುದ್ಧ ಆಕ್ರೋಶ ತೋಡಿಕೊಳ್ಳಲು ಇದ್ದ ಮಾರ್ಗ ಅದೊಂದೆ. ಹಿಂದೂ ಧರ್ಮದ ಮೇಲ್ವರ್ಗ ಉಳಿದವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಂಡು ಅಸ್ಪ>ೃಶ್ಯತೆ ಜೀವಂತವಾಗಿಟ್ಟಾಗ ತಾನು ಆ ಧರ್ಮಕ್ಕೆ ಸೇರಿದವನು ಎಂದು ದಮನಿತನಾದವನು ಯಾಕಾದರೂ ಹೇಳಿಕೊಳ್ಳುತ್ತಾನೆ?ಹಾಗೆಂದೇ ದಲಿತರು ಬೌದ್ಧ ದೀಕ್ಷೆ ಪಡೆದು, ಹಿಂದೂ ಧರ್ಮದಿಂದ ಬೇರೆಯಾಗಿಯೇ ಗುರುತಿಸಿಕೊಳ್ಳುವ ಅಭಿಯಾನವೊಂದು ಪ್ರತಿಭಟನೆಯ ಸ್ವರೂಪದಲ್ಲಿ ಬೆಳೆದು ಬಂತು.

 1890ರ ವೇಳೆಗೇ ಪಂಡಿತ್‌ ಸಿ. ಅಯೋಧ್ಯ ದಾಸ್‌ ಎಂಬುವವರು ಸಖ್ಯ ಬುದ್ಧಿಷ್ಟ್‌ ಸೊಸೈಟಿ ಸ್ಥಾಪಿಸಿ ದಲಿತರು ಬೌದ್ಧ ಧರ್ಮಕ್ಕೆ ಪರಿವರ್ತಿತರಾಗಬೇಕಾದ ಅವಶ್ಯಕತೆಯನ್ನು ಪ್ರಚುರ ಪಡಿಸಿದರು. ತಮಿಳು ದಲಿತ ಚಳವಳಿಯ ಪ್ರವರ್ತಕರೆಂದೇ ಗುರುತಿಸಲ್ಪಡುವ ಇವರ ಪ್ರಭಾವ ತಮಿಳುನಾಡು ಹಾಗೂ ಕರ್ನಾಟಕಗಳಲ್ಲಿ ಕೆಲಸ ಮಾಡಿತು. ಆದಾಗ್ಯೂ ಈ ಅಭಿಯಾನಕ್ಕೆ ಗಟ್ಟಿ ದನಿ ಬಂದಿದ್ದು, ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ನಿರ್ಧಾರವನ್ನು ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಕೈಗೊಂಡಾಗ. ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ತಾರತಮ್ಯದಿಂದ ಬೇಸತ್ತಿದ್ದ ಅಂಬೇಡ್ಕರ್‌, 1935ರಲ್ಲಿ ಸಮಾವೇಶವೊಂದರಲ್ಲೇ ಘೋಷಿಸಿದರು- 'ನಾನು ಹಿಂದು ಆಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ'. ಚರಿತ್ರೆಯಲ್ಲಿ ಅದೊಂದು ಮಹತ್ವದ ಕ್ಷಣ. ಧರ್ಮದ ವಿಷಯದಲ್ಲಿ ಅಂದು ಅಂಬೇಡ್ಕರ್‌ ತೆಗೆದುಕೊಳ್ಳಲಿದ್ದ ನಿರ್ಧಾರದಲ್ಲಿ ಭಾರತದ ಭವಿಷ್ಯವೇ ಅಡಗಿತ್ತು ಎಂಬುದು ಖಂಡಿತ ಅತಿಶಯೋಕ್ತಿ ಅಲ್ಲ. ಅವತ್ತು ಅಂಬೇಡ್ಕರ್‌ ಅವರು ತೆಗೆದುಕೊಂಡ ನಿರ್ಧಾರದ ಹಾದಿಯನ್ನು ಅವಲೋಕಿಸಿದರೆ ತಿಳಿಯುತ್ತದೆ- ಅವರಿಗಿದ್ದಿದ್ದು ಕೇವಲ ಹಿಂದು ಧರ್ಮಕ್ಕೆ ಪ್ರತಿಭಟನೆ ವ್ಯಕ್ತಪಡಿಸುವ ಹಪಾಹಪಿ ಮಾತ್ರವೇ ಆಗಿರಲಿಲ್ಲ ಎಂದು. ಏಕೆಂದರೆ ಹಿಂದು ಧರ್ಮದಿಂದ ಸಿಡಿಯುವುದಷ್ಟೇ ಅವರ ಉದ್ದೇಶವಾಗಿದ್ದರೆ ಆ ಕ್ಷಣದಲ್ಲಿ ಯಾವ ಧರ್ಮವನ್ನಾದರೂ ಅವರು ಅಪ್ಪಿಕೊಂಡುಬಿಡಬಹುದಿತ್ತು. ಅಂಬೇಡ್ಕರ್‌ ಅವರ ಮನದಿಂಗಿತ ಹೊರಬೀಳುತ್ತಲೇ ಇಸ್ಲಾಂ ಹಾಗೂ ಕ್ರೈಸ್ತ ಧರ್ಮದ ಪ್ರತಿನಿಧಿಗಳೆಲ್ಲ ಅವರಿಗೆ ಒಂದು ಬಗೆಯ ಆಮಿಷವನ್ನೇ ಒಡ್ಡಿದ್ದರು. 

ಆಗ ಅಂಬೇಡ್ಕರ್‌ ಬರೀ ಆಕ್ರೋಶದ ಹೆಜ್ಜೆ ಇಡಲಿಲ್ಲ. ಧರ್ಮವೊಂದನ್ನು ಸ್ವೀಕರಿಸುವ ತಮ್ಮ ವೈಯಕ್ತಿಕ ನಡೆ ಸಮಾಜದ ಮೇಲೆ ಹಾಗೂ ತಮ್ಮನ್ನು ಅನುಸರಿಸುತ್ತಿರುವ ದಲಿತ ಸಮುದಾಯದ ಮೇಲೆ ಬೀರಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸಿದರು. ದೇಶಕಾಳಜಿಯ ಅಂಬೇಡ್ಕರ್‌ ಅವರ ಚಿಂತನಾ ಕ್ರಮವೇ ಅವರು ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳಿಗೆ ಬೆನ್ನು ತಿರುಗಿಸುವಂತೆ ಮಾಡಿದ್ದು. 

ಇಂದು ನಾಗಾಲ್ಯಾಂಡ್‌ನಂಥ ರಾಜ್ಯದಲ್ಲಿ ಕ್ರಿಸ್ತನ ಹೆಸರಿನಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಇಸ್ಲಾಂ ಬೆಳೆದಿದ್ದೇ ಆಕ್ರಮಣಶೀಲತೆಯಿಂದ. ಅಂಬೇಡ್ಕರ್‌ ಅವರಂಥ ಪ್ರಗತಿಪರ ಮನಸ್ಸು ಕಟ್ಟಳೆಗಳಿಂದಲೇ ಕೂಡಿದ ಆ ಧರ್ಮವನ್ನು ಒಪ್ಪಿಕೊಳ್ಳುವುದು ಹೇಗೆ? ಕೊನೆಗೂ ಅಂಬೇಡ್ಕರ್‌ ಆಯ್ಕೆ ಮಾಡಿಕೊಂಡಿದ್ದು, ಈ ನೆಲದ ಗಂಧದಲ್ಲೇ ಅರಳಿದ ಬೌದ್ಧ ಧರ್ಮವನ್ನು. ಹೀಗೆ ಅಳೆದು ತೂಗಿ 1956ರಲ್ಲಿ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ನಾಗ್ಪುರದಲ್ಲಿ ಬೌದ್ಧ ದೀಕ್ಷೆ ಸ್ವೀಕರಿಸಿದರು ಅಂಬೇಡ್ಕರ್‌. ನಾನು ಹಿಂದು ದೇವತೆಗಳನ್ನು ಪೂಜಿಸುವುದಿಲ್ಲ, ಬುದ್ಧವು ವಿಷ್ಣುವಿನ ಅವತಾರ ಎಂಬ ಕಲ್ಪನೆಯನ್ನು ಒಪ್ಪುವುದಿಲ್ಲ ಎಂಬ ಹಲ ಅಂಶಗಳ ಜೊತೆಗೆ ಮಾದಕ ವ್ಯಸನ, ಹೆಂಡದಂಥ ಚಟಗಳಿಗೆ ಬೀಳುವುದಿಲ್ಲ ಎಂಬುದೂ ಸೇರಿದಂತೆ 22 ಪ್ರತಿಜ್ಞೆಗಳೊಂದಿಗೆ ಬೌದ್ಧ ದೀಕ್ಷೆ ಸ್ವೀಕಾರವಾಯಿತು. ಅಂದಿನಿಂದ ಇಂದಿನವರೆಗೆ ಮಹಾರಾಷ್ಟ್ರ, ಹೈದರಾಬಾದ್‌, ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಬೌದ್ಧ ದೀಕ್ಷೆಯ ಕ್ರಮ ನಡೆದುಕೊಂಡು ಬಂದಿದೆ. ಆದರೆ... ಅವತ್ತಿನಿಂದ ಇವತ್ತಿಗೆ ಮಹಾನದಿಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. 

ದಲಿತ ಉದ್ಯಮಶೀಲತೆ ಎಂಬ ಪದ ಕಿವಿಗೆ ಬಡಿದಿದೆ, ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ನಂತರ ಬೌದ್ಧಧರ್ಮ ನೆನಪಾಗಲು ಮುಂದಿನ ವರ್ಷವೇ ಬರಬೇಕು. ಮತ್ತೊಂದು ಬುದ್ಧ ಪೂರ್ಣಿಮೆ ಬಂದಾಗಲೇ ಮಾಮೂಲಿನಂತೆ ಪುರೋಹಿತಶಾಹಿಯ ವಿರುದ್ಧ ಬುದ್ಧಿಜೀವಿ ಭಾಷಣ, ದೀಕ್ಷೆ ಪ್ರಚಾರ. ಹಾಗಾದರೆ, ಇವತ್ತಿನ ಆಧುನಿಕ ಬೌದ್ಧತ್ವ, ಬೌದ್ಧ ಧರ್ಮಕ್ಕಿಂತ ಬೇರೆಯೇ? ಅದು ಬೌದ್ಧರ ಸಮುದಾಯ ಪ್ರಜ್ಞೆಯ ಒಂದು ಭಾಗವಾಗಿದೆಯೇ? ಹಾಗಾಗಿದ್ದರೆ ಜಮ್ಮು- ಕಾಶ್ಮೀರದ ಲಡಾಕ್‌ನಲ್ಲಿ ಬೌದ್ಧರ ಮೇಲಾಗುತ್ತಿರುವ ದೌರ್ಜನ್ಯಗಳು ಇಲ್ಲಿನವರ ಸಂವೇದನೆಗೆ ತಾಗುವುದಿಲ್ಲವೇಕೆ? ಕೊನೆಪಕ್ಷ, ಲಡಾಕ್‌ನ ಬೌದ್ಧರು, ತಮ್ಮ ಹುಡುಗಿಯರನ್ನು ಮುಸ್ಲಿಮರು ಬಲವಂತದಿಂದ ಹಾರಿಸಿಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರಕ್ಕೆ ಅಳಲು ತೋಡಿಕೊಂಡಿರುವ ವಿಷಯವಾದರೂ ಗೊತ್ತೇ? ಕಾರ್ಗಿಲ್‌ನಲ್ಲಿ ಬೌದ್ಧ ಮತಸ್ಥರು ಸತ್ತರೆ ಅಲ್ಲಿ ಅವರನ್ನು ಹೂಳುವುದಕ್ಕೂ ಅವಕಾಶ ನೀಡದ ಹತಾಶ ಸ್ಥಿತಿ ಇರುವುದು ಲೆಕ್ಕಕ್ಕಿಲ್ಲವೇ? ಅಂಬೇಡ್ಕರ್‌ ಇದ್ದಿದ್ದರೆ ಇವನ್ನೆಲ್ಲ ಗ್ರಹಿಸುತ್ತಿದ್ದ ಪರಿ ಯಾವುದು ಎಂಬ ಕುತೂಹಲ ಕಾಡುತ್ತದೆ. ಹೋಗಲಿ, ಆಧುನಿಕ ಬೌದ್ಧ ಧರ್ಮ ದಲಿತರನ್ನು ಉತ್ತೇಜಿಸುವ ವ್ಯವಸ್ಥೆಯನ್ನಾದರೂ ಹುಟ್ಟುಹಾಕಿದೆಯೇ? ಅವರನ್ನು ಸಾಕ್ಷರರನ್ನಾಗಿಸುವ, ವ್ಯಸನ ಅಂಟಿಸಿಕೊಂಡವರನ್ನು ಮುಕ್ತಗೊಳಿಸುವ, ಉದ್ಯಮಶೀಲತೆ ಬೆಳೆಸುವ, ಯಾವ ಧರ್ಮದಿಂದ ಹೊರಬಂದರೋ ಅದಕ್ಕೆ ಪರ್ಯಾಯವಾಗಿ ಚಲನಶೀಲ ವ್ಯವಸ್ಥೆಯೊಂದನ್ನು ರೂಪಿಸುವ ಪ್ರಯತ್ನಗಳು ಕಾಣುತ್ತಲೇ ಇಲ್ಲ. ಒಂದು ಪಕ್ಷದಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಮತ್ತೊಂದು ಪಕ್ಷ ಸೇರಿದೆ ಎಂಬ ರಾಜಕಾರಣದ ಧಾಟಿಯಲ್ಲೇ ಧರ್ಮವೂ ಬೆಳೆಯಬೇಕೆ? ಇವತ್ತು ಮತಾಂತರ ಹೊಂದುವವರೆಲ್ಲ ಮುಂದೊಡ್ಡುವುದು ಸಮಾನತೆಯ ಕಾರಣವನ್ನು. ಹಿಂದು ಧರ್ಮದಲ್ಲಿ ಜಾತಿ ಪದ್ಧತಿ ಇದೆ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರವಾದವರಿಗೆ ದಲಿತಕ್ರೈಸ್ತರೆಂಬ ಹಣೆಪಟ್ಟಿ! ಅಂತೆಯೇ ದಲಿತ ಮುಸ್ಲಿಂ, ದಲಿತ ಸಿಖ್‌... ಹೀಗೆ ಉಳಿದೇ ಹೋಗಿವೆ ವಿಂಗಡನೆಗಳು. ಪ್ರತಿಭಟನೆಯೊಂದನ್ನು ವೈಚಾರಿಕತೆಯ ನಿರಂತರತೆ ತುಂಡರಿಸಿ ಕೊಂಡೊಯ್ದರೆ ಒದಗುವ ಸ್ಥಿತಿ ಇದೇ. ವಿಚಾರವಾದಿಗಳು ಚಿಂತಿಸಬೇಕಿದೆ. - ರಮೇಶ್‌ಚಂದ್ರ, ಮೈಸೂರು

Mysore: 'Sangeetha Namana’ to Buddha


Mysore, May 16, DHNS :

'Buddhanige Belagana Sangeeta Namana', a 12-hour music programme will be held at Vishwa Maitri Buddha Vihara in the city on May 17 at 6 pm, in connection with Buddha Purnima.

Addressing a news conference here on Monday, H R Mahesh of Sangeeta Jangamara Samsthe said Buddha is the propagator of Manava Dharma and in  his memory, a novel programme is organised.

Introducing history
The purpose of this was to introduce the real history of Buddha to the people. Kalyanasiri Bhantheji will be present.
Participants 
Noted music director of Kannada, Hamsalekha, vice-chancellor of Music University, Dr Hanumanna Nayak Dore, Registrar of Music University, Prof Nilagiri M Talwar, deputy director of Department of Kannada and Culture, A Annegowda, Accounts Officer Venkataraju, Bhanandur Kempaiah, Laxman Hugar, noted folk singer, Bannur Kempamma, Mr Justice H Mohakumar will attend.

After the inauguration, there will be 12-hour non-stop music programme from 7 pm to 7 am on Wednesday.

Six main singers and nine co-singers will present the programme. Of 12 hours, four hours is dedicated to the songs on Buddha and eight hours to Folk songs, theatre songs, bhavageete and vachanas. Plans are afoot to hold 24-hour programme in the next Buddha Purnima.
Girija Mahesh, Lakshmirao, B P Nagaraj, Govindaraswamy and Krishnamurthy Mandya were present.

I never opposed giving Ambedkar''s name to varsity: Thackeray


PTI | 07:05 PM,May 18,2011
Mumbai, May 18 (PTI) Shiv Sena chief Bal Thackeray today hit out his political opponents for alleging that he had opposed renaming of Marathwada University after Dr B R Ambedkar. "Let me make it clear once again. I never opposed renaming of the university. I had suggested that the name Marathwada University be retained, and Ambedkar's name be added to it," Thackeray said in a statement. The Sena chief's comments came in response to criticism by political rivals, including one-time protege and present Maharashtra PWD minister, Chhagan Bhujbal, who have questioned the ideological contradictions in the saffron party's newly-formed alliance with dalit leader Ramdas Athawale's RPI. "RPI leader R S Gavai came to my residence and I suggested that Ambedkar's name be added to the existing name of the university. He liked the idea and phoned Sharad Pawar (the then Chief Minister) who also gave his approval," Thackeray said. "My stance was that while renaming the varsity, the pride of Marathwada region should remain intact," he said. At a recent NCP meeting, Bhujbal had ridiculed coming together of RPI and the opposition Sena-BJP, commenting that leaders of both groups should clarify their stands on various issues, such as reservations, where their respective views were poles apart. In 1994, the Marathwada University, set up in 1958, was renamed as `Dr Babasaheb Ambedkar Marathwada University' after a long and often violent agitation which took on the "dalits versus non-dalits" hues.

Buddha was great social liberator of mankind: Jaipal Reddy


Nagpur :

Union Minister for Urban Development, S Jaipal Reddy on Saturday said the Lord Buddha was the greatest social and intellectual liberator of the mankind.

Inaugurating the two day Second Buddhist International Conference here on 'Prospectives of Engaged Buddhism,' Reddy said since his childhood, he was excited about Buddha and his teachings and values.

Initiated by newly nominated Rajya Sabha member Bhalchandra Mungekar and organised by Dr Ambedkar Institute of Social and Economic Change, the conference was attended by more than 1200 delegates.

Thai Buddhist monk, Phra Ajhan Withoon Ajarsupoh inaugurated the conference while Maharashtra Dairy Development Minister Nitin Raut, former Union Minister and local MP Vilas Muttemwar and former MP Ramdas Athwale were chief guests.

Describing Buddha as most revered philosopher, Reddy equated him with Socrates, Jesus Christ and Prophet Mohammad.,

Reddy said Buddha was symbol of rationalism and humanism. In saturday's relevance, Buddhism might have gone from India but Buddha remains in the hearts.

The first Prime Minister Jawaharlal Nehru was greatly impressed by Buddha who influenced Asian Continent to a great extent, he said.

Buddha was the first intellectual democrat and great believer in moderation, Reddy said.

Reddy also said Dr Babasaheb Ambedkar who embraced Buddhism way back on October 14, 1956 was rightly picked up by Mahatma Gandhi to write the Constitution.

"Gandhiji knew that Ambedkar was the right choice for the coveted post," he said.

Mungekar in his presidential speech outlined the importance of the conference.

Raut in his speech said Buddhism is flourishing in most countries especially in South East and East Asia. In fact it is facing newer challenges in our own country.

"Some say Buddhism no more exists in India. The whole of Asia is Buddhist except India. Buddha has become a foreigner in our own country. The great religion was destroyed in India," he said.

"The destruction of Buddhism was far more cleverer act than the destruction of Jesus and Christianity by Jews because Jews killed Jesus but could not kill Christianity. In India, they did not kill Buddha, they are far more cleverer people.

They just did not kill Buddha but also killed Buddhism," he said.

Former Union Minister and local MP Vilas Muttemwar in his speech said Buddha was very much relevant in the country.

ಅಂಬೇಡ್ಕರರ ರಾಜಕೀಯ ನಿಲುವಿನ ಬಗ್ಗೆ ತಪ್ಪಭಿಪ್ರಾಯ ಸಲ್ಲ!


ಹಿರಿಯರಾದ, ಶಾಸಕರೂ ಆದ ಮಾಜಿ ಕೇಂದ್ರ ಸಚಿವ ಶ್ರೀ ವಿ. ಶ್ರೀನಿವಾಸಪ್ರಸಾದ್ರವರು ಅಂಬೇಡ್ಕರರ ಬಗ್ಗೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಜಾತೀಯತೆ, ರಾಜಕೀಯದ ಸೋಂಕಿಲ್ಲದ ನಾಯಕ ಅಂಬೇಡ್ಕರ್ ಎಂದಿದ್ದಾರೆ. ಈ ಹಿನ್ನಿಲೆಯಲ್ಲಿ ಒಂದು ಪ್ರತಿಕ್ರಿಯೆ.

ನಿಜಕ್ಕೂ ಪ್ರಸಾದರ ಈ ಹೇಳಿಕೆ ದುರದೃಷ್ಟಕರ. ಯಾಕೆಂದರೆ ಯಾವ ಅಂಬೇಡ್ಕರ್ ತನ್ನ ಜೀವನದುದ್ದಕ್ಕೂ ದಲಿತರ ಪ್ರತಿಯೊಂದು ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಪಡೆಯುವುದರಲ್ಲಿಯೇ ಪರಿಹಾರವಿದೆಯೆಂದು ಪ್ರತಿಪಾದಿಸುತ್ತಿದ್ದರೋ, ರಾಜಕೀಯವನ್ನು ತನ್ನ ಜೀವನದ ಉಸಿರಾಗಿ ಹೊಂದಿದ್ದರೋ ಅಂತಹ ಅಂಬೇಡ್ಕರರನ್ನು ರಾಜಕೀಯದ ಸೋಂಕಿಲ್ಲದವರೆನ್ನುವುದು ಅದೆಷ್ಟು ಸರಿ? ಉದಾಹರಣೆಗೆ ಹೇಳುವುದಾದರೆ 1948 ಏಪ್ರಿಲ್ 25 ರ ಭಾನುವಾರ ಲಕ್ನೋ ನಗರದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನುದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರ್ರವರು ಸಾಮಾಜಿಕವಾಗಿ ಆಭಿವೃದ್ಧಿ ಹೊಂದಲು ರಾಜಕೀಯ ಅಧಿಕಾರ ಪಡೆಯುವುದು ಅತ್ಯಗತ್ಯವಾಗಿದೆ. ಆದ್ದರಿಂದ ರಾಜಕೀಯ ಅಧಿಕಾರ ಪಡೆಯುವುದರ ಮೂಲಕ ಪರಿಶಿಷ್ಟಜಾತಿಯ ಜನರು ತಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುತ್ತಾರೆ. ಮತ್ತೊಂದೆಡೆ 1942 ಆಗಸ್ಟ್ 23 ರಂದು ದೆಹಲಿಯಲ್ಲಿ ಮಾತನಾಡುತ್ತಾ ಅವರು ರಾಜ್ಯದ ಆಡಳಿತದ ಬೀಗದ ಕೈಯನ್ನು ನಿಮ್ಮ ಕೈಗೆ ತರಲು ನಾನು ಯತ್ನಿಸುತ್ತಿದ್ದೇನೆ. ನೀವು ಇತರರ ಜೊತೆ ಸಮಾನತೆಯ ಅಧಾರದ ಮೇಲೆ ಆ ರಾಜಕೀಯ ಅಧಿಕಾರವನ್ನು ಹಂಚಿಕೊಂಡು ಮುನ್ನುಗ್ಗಬೇಕು ಎಂದು ಕರೆ ನೀಡುತ್ತಾರೆ.



ಅಂದಹಾಗೆ ಅಂಬೇಡ್ಕರರ ಬಗ್ಗೆ ಅವರ ರಾಜಕೀಯ ಒಲವು ನಿಲುವುಗಳ ಬಗ್ಗೆ ಇಂತಹ ಒಂದಲ್ಲ ಎರಡಲ್ಲ ಒಂದು ನೂರು ಉದಾಹರಣೆ ಕೊಡಬಹುದು. ಹಾಗೆಯೇ ರಾಜಕೀಯ ಎಂದರೆ ರಾಜಕೀಯ ಪಕ್ಷಗಳನ್ನು ಸ್ಥಾಪಿಸಬೇಕಲ್ಲವೇ? ಅಂಬೇಡ್ಕರರು ತಮ್ಮ ಜೀವಿತಾವಧಿಯಲ್ಲಿ ಸ್ಥಾಪಿಸಿದ್ದು ಬರೆ ಒಂದಲ್ಲ! ಸ್ವತಂತ್ರ ಕಾಮರ್ಿಕ ಪಕ್ಷ, ಪರಿಶಿಷ್ಟ ಜಾತಿಗಳ ಒಕ್ಕೂಟ, ರಿಪಬ್ಲಿಕನ್ ಪಾಟರ್ಿ ಆಫ್ ಇಂಡಿಯಾ ಎಂಬ ಒಟ್ಟು ಮೂರು ರಾಜಕೀಯ ಪಕ್ಷಗಳನ್ನು! ಸ್ವತಂತ್ರ ಕಾಮರ್ಿಕ ಪಕ್ಷದಿಂದ ಮುಂಬೈ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸ್ಪಧರ್ಿಸಿ 17 ಸ್ಥಾನಗಳನ್ನು ಗೆಲ್ಲುವ ಅವರು, ಬ್ರಿಟಿಷ್ ಸಕರ್ಾರದಲ್ಲಿ ನಾಲ್ಕು ವರ್ಷ, ಸ್ವತಂತ್ರ ಬಂದಾಗ ನಾಲ್ಕು ವರ್ಷ ಒಟ್ಟು 8 ವರ್ಷ ಕೇಂದ್ರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಾರೆ. ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪಧರ್ಿಸಿ ಕಾಂಗ್ರೆಸ್ ಅಭ್ಯಥರ್ಿಗಳ ಎದುರು ಸೋಲುವ ಅವರು ಕಡೆಗೆ ಮುಂಬೈ ಅಸೆಂಬ್ಲಿಯಿಂದ ಪಕ್ಷೇತರರ ಸಹಾಯದಿಂದ ರಾಜ್ಯಸಭೆಗೆ ಆಯ್ಕೆಗೆ ರಾಜ್ಯಸಭಾ ಸದಸ್ಯರೂ ಆಗುತ್ತಾರೆ! ಇಷ್ಟೆಲ್ಲಾ ಇರುವಾಗ ಅವರಿಗೆ ರಾಜಕೀಯದ ಸೋಂಕಿಲ್ಲ ಎನ್ನುವುದು ಅದೆಷ್ಟು ಸರಿ? ಯಾಕೆ ಅಂಬೇಡ್ಕರ್ರವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರೆ ಮಾತ್ರ ಅವರು ರಾಜಕೀಯ ವ್ಯಕ್ತಿಯಾಗುತ್ತಿದ್ದರೆ? ಕಾಂಗ್ರೆಸ್ಸನ್ನು ತಮ್ಮ ಜೀವನದುದ್ದಕ್ಕೂ ವಿರೋಧಿಸಿ ಸ್ವಂತ ಶಕ್ತಿಯ ಮೇಲೆ ಆಡಳಿತದ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದು ರಾಜಕೀಯವಾಗುವುದಿಲ್ಲವೇ? ಬೇಡ, ಅಂಬೇಡ್ಕರರ ಸ್ವಾಭಿಮಾನಿ ರಾಜಕೀಯದ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಹಾಗೇನಾದರೂ ಮಾತನಾಡಿದರೆ ಅದು ನಾವು ಅವರ ವ್ಯಕ್ತಿತ್ವಕ್ಕೆ ಎಸಗುವ ಅಪಚಾರವಲ್ಲದೆ ಬೇರೇನಲ್ಲ. 
Ho Ba Raghothama
ರಘೋತ್ತಮ ಹೊ.ಬ
ಚಾಮರಾಜನಗರ_571313

Tuesday 17 May 2011

Mayawati issues full-page Buddha Purnima ads in 150 dailies


Lucknow, May 17, (IANS):

On the occasion of Buddha Purnima on Tuesday, the Uttar Pradesh government has splashed in media Chief Minister Mayawati's achievements in developing Buddhist pilgrimage sites and propagating the message of Lord Buddha.

The Uttar Pradesh government has released a full-page advertisement, bearing the ruling Bahujan Samaj Party's characteristic blue hue, in 150 newspapers across the length and breadth of the country, detailing whatever Mayawati has done during her tenure to spread the message of Buddha.

“Uttar Pradesh: the cradle of Buddhism, A glimpse of  initiatives taken by Hon’ble Chief Minister of Uttar Pradesh Ms. Mayawati Ji, during the span of her regime so far to propagate the humanistic message of Tathagat Gautam Buddha and develop and beautify the ‘Buddhist circuit and other important Buddhist historical places in the state”, goes the headline with the advertisement, which is ostensibly meant to greet people on the occasion.

The message makes it a point to convey how Buddha had spent a major part of his life in  Uttar Pradesh and the list of schemes, programmes named after him by the present chief minister. Yet another column lists out the new districts and tourist spots created by Mayawati to commemorate Lord Buddha.

Buddha Purnima is one of the eight occasions when the Mayawati government released such advertisements in some 150 dailies across the country.

Besides this, almost similar advertisements about her government’s achievements are also issued on the same scale on Mayawati’s own birthday on Jan 15, BSP founder and her mentor Kanshi Ram’s birth anniversary on March 15, Babasaheb Bhimrao Ambedkar’s birth anniversary on April 14, Kanshi Ram’s death anniversary on Oct 9, Ambedkar’s death anniversary on Dec 6,  and on May 13 to mark the installation of Mayawati government on its own strength in 2007.

This eight-day blitzkrieg has cost the state exchequer about Rs.64 crore over the past four years. Nearly the same amount had also been spent on publicity through giant-sized  hoardings, with long details of her achievements.

http://www.deccanherald.com/content/162085/mayawati-issues-full-page-buddha.html

Buddha Purnima Jayanti Hunsur

ಹುಣಸೂರು: ಇಂದು ಬುದ್ಧ ಜಯಂತಿಬುಧವಾರ - ಜೂನ್ -02-2010
ಹುಣಸೂರು, ಜೂ. 1: ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜೂ. 2ರಂದು ಬೆಳಗ್ಗೆ 11ಗಂಟೆಗೆ ಬುದ್ಧ ಜಯಂತಿ ಕಾರ್ಯಕ್ರಮ ನಡೆಯಲಿರುವುದು. ದಸಂಸದ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿಯ ಅಧ್ಯಕ್ಷತೆಯಲ್ಲಿ ಹುಣಸೂರು ಶಾಸಕರಾದ ಎಚ್.ಪಿ.ಮಂಜುನಾಥ್ ಕಾರ್ಯಕ್ರಮ ವನ್ನು ಉದ್ಘಾಟಿಸಲಿರುವರು. ಗಾವಡಗರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋದೂರು ಮಹೇಶಾರಾಧ್ಯ ಮುಖ್ಯ ಭಾಷಣಗೈಯಲಿದ್ದಾರೆ ಎಂದು ದಸಂಸ ತಾಲೂಕು ಸಮಿತಿ ಸಂಚಾಲಕ ದೇವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Buddha-Ambedkar: Art Painting


By Basavaraja Kalegara Yadagir
ಯಾದಗಿರಿ: ತಮ್ಮ ಭಕ್ತಿ, ಗೌರವ ಸಮರ್ಪಿಸಲು ಎಲ್ಲರಿಗೂ ಒಂದೊಂದು ದಾರಿ. ಕೆಲವರು ಕೈಮುಗಿದು ಶರಣು ಎಂದರೆ, ಇನ್ನು ಕೆಲವರು ಅವರ ಸಂದೇಶಗಳನ್ನು ಹಾಡಿ ಹೊಗಳುತ್ತಾರೆ. ಹಾಗೆಯೇ ಎಲ್ಲರಲ್ಲಿಯೂ ವಿಶಿಷ್ಟವಾದುದನ್ನು ಮಾಡುವ ಮೂಲಕ ಮಹನೀಯರಿಗೆ ಗೌರವ ಸಮರ್ಪಿಸುವ ಅಪರೂಪದ ಕೆಲಸ ಮಾಡಿದವರು ಚಿತ್ರ ಕಲಾವಿದ ಬಸವರಾಜ ಕಲೆಗಾರ.

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧ ಜಯಂತಿ ಅಂಗವಾಗಿ ಕಲಾವಿದ ಬಸವರಾಜ ಕಲೆಗಾರ ತಮ್ಮ ಕಲಾಕೃತಿಗಳ ಮೂಲಕ ವಿಶಿಷ್ಟವಾಗಿ ಬುದ್ಧ ಮತ್ತು ಡಾ. ಅಂಬೇಡ್ಕರ್ ಅವರನ್ನು ಚಿತ್ರಿಸುವ ಮೂಲಕ ಅಂಬೇಡ್ಕರ್‌ರಿಗೆ ನಮನ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿಯೇ ರಚಿಸಿರುವ ಈ ವಿಶಿಷ್ಟ ಕಲಾಕೃತಿಗಳು ಜನರ ಗಮನ ಸೆಳೆದಿವೆ. ಅಂಬೇಡ್ಕರ್‌ರ ಭಾವಚಿತ್ರ, ಬುದ್ಧನ ಲೀಲಾಮೃತ, ಸಾವನ್ನು ಗೆದ್ದ ಬುದ್ಧ, ಬುದ್ಧನ ಸೃಷ್ಟಿ, ಬುದ್ಧ ಮತ್ತು ಮಾಯಾದೇವಿ, ಬುದ್ಧನ ಹೃದಯ ದೊಳಗೆ ಅಂಬೇಡ್ಕರ್ ಹೀಗೆ ಹತ್ತಾರು ಚಿತ್ರಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

ಅಂಬೇಡ್ಕರ್‌ರ ಭಾವಚಿತ್ರವು ವಿಶೇಷವಾಗಿದೆ. ಹಿಂದೆ ಬುದ್ಧನ ಚಿತ್ರಗಳಿದ್ದು, ಎಲ್ಲರೂ ಒಂದೇ ಎನ್ನುವ ಸಂಕೇತವಾಗಿ ಡಾ. ಅಂಬೇಡ್ಕರ್‌ರ ಎದೆಯಲ್ಲಿ ಕೈ ಚಿತ್ರವನ್ನು ಬಿಡಿಸಿದ್ದಾರೆ. ಬುದ್ಧನು ತಪಸ್ಸುಗೈದ ಇನ್ನೊಂದು ಚಿತ್ರದಲ್ಲಿ ಮೇಲೆ ಚಂದ್ರನಿದ್ದರೆ, ಗುಲಾಬಿ ಹೂವುಗಳು ಕಾಣುತ್ತವೆ. ಮೂರನೇ ಚಿತ್ರದಲ್ಲಿ ಸಾವನ್ನು ಗೆದ್ದು ಬುದ್ಧನನ್ನು ಬಿಡಿಸಿದ್ದು, ಮಾನವನ ತಲೆಬುರುಡೆ, ಧ್ಯಾನ ಮಗ್ನನಾದ ಬುದ್ಧನನ್ನು ಚಿತ್ರಿಕರಿಸಿದ್ದಾರೆ.

ಬುದ್ಧನ ಸೃಷ್ಟಿಯನ್ನು ತೋರಿ ಸುವ     ಇನ್ನೊಂದು ಚಿತ್ರದಲ್ಲಿ ಎಲೆ ಯಾ ಕಾರದೊಳಗೆ ಬುದ್ಧ ನನ್ನು ಬಿಡಿಸಿದ್ದು, ಅರಳಿದ ಹೂವುಗಳು, ನವಿಲಿನ ಚಿತ್ರ ಗಳಿವೆ. ತಾಯಿ ಮಾಯಾದೇವಿಯು ತನ್ನ ಮಗ ಬುದ್ಧನ ಯಶಸ್ಸನ್ನು ಸಂತೋಷದಿಂದ ಆಲಿಸುವ ಕ್ಷಣ ವನ್ನು ಬಣ್ಣಗಳ ಮೂಲಕ ಬಿಡಿಸಿ ತೋರಿಸಿದ್ದಾರೆ.

ಅದ್ಭುತವಾದ ಹಲವಾರು ಕಲಾ ಕೃತಿಗಳ ಮೂಲಕ ಗಮನ ಸೆಳೆದಿರುವ ಬಸವರಾಜ ಕಲೆಗಾರ ಶಹಾಪುರ ತಾಲ್ಲೂಕಿನ ಕೊಂಕಲ್‌ನವರು. ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು, ವಿಶೇಷ ಸಂದರ್ಭಗಳಲ್ಲಿ ಅದಕ್ಕೆ ತಕ್ಕಂತೆ ಚಿತ್ರಗಳನ್ನು ಬಿಡಿಸುವುದರಲ್ಲಿ ಸಿದ್ಧಹಸ್ತರು. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ದಲ್ಲಿಯೂ ಯಾದಗಿರಿ ಜಿಲ್ಲೆಯ ವೈಶಿಷ್ಟ್ಯವನ್ನು ಸಾರುವ ಕಲಾಕೃತಿ ಗಳನ್ನು ತಯಾರಿಸುವಲ್ಲಿಯೂ ತಮ್ಮ ಕೊಡೆಗೆ ನೀಡಿದ್ದಾರೆ

ಬುದ್ಧ ಜಯಂತಿ: ಸಂಭ್ರಮದ ಮೆರವಣಿಗೆ


ಪ್ರಜಾವಾಣಿ ವಾರ್ತೆ
ಕೋಲಾರ: 2554ನೇ ಬುದ್ಧ ಜಯಂತಿ ಪ್ರಯುಕ್ತ ಭಗವಾನ್ ಬುದ್ಧ ಜಯಂತ್ಯುತ್ಸವ ಸಮಿತಿಯು ನಗರದಲ್ಲಿ ಗುರುವಾರ ಬುದ್ಧನ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಸಮಿತಿಯ ಪ್ರಮುಖರು, ಕಾರ್ಯಕರ್ತರು ಬುದ್ಧನ ಭಾವಚಿತ್ರವಿದ್ದ ಬ್ಯಾಡ್ಜ್‌ಗಳನ್ನು ಧರಿಸಿ ಭಾಗವಹಿಸಿದರು.
ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಶುರುವಾದ ಮೆರವಣಿಗೆ ಬಾಲಕರ ಸರ್ಕಾರಿ ಕಾಲೇಜು ಮೂಲಕ, ದೊಡ್ಡಪೇಟೆ ವೃತ್ತ, ಎಂ.ಜಿ. ರಸ್ತೆ ಮೂಲಕ ಕೆಇಬಿ ಸಮುದಾಯ ಭವನದಲ್ಲಿ ಕೊನೆಗೊಂಡಿತು.ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಬುದ್ಧಂ ಶರಣ ಗಚ್ಛಾಮಿ ಪ್ರಾರ್ಥನೆಯನ್ನು ಹಾಡಿದರು.
ಈ ಮೆರವಣಿಗೆ ಆಡಂಬರವಿಲ್ಲದೆ, ಸರಳರೂಪದಲ್ಲಿದ್ದು ವಿಶೇಷವಾಗಿ ನಗರದ ಜನರ ಗಮನ ಸೆಳೆಯಿತು. ಮೆರವಣಿಗೆಯ ದಾರಿಯುದ್ದಕ್ಕೂ ಜನ ಮೆಚ್ಚುಗೆಯಿಂದ ವೀಕ್ಷಿಸಿದರು. ಜನನಿಬಿಡ ಸ್ಥಳವಾದ ದೊಡ್ಡಪೇಟೆ ರಸ್ತೆಯಲ್ಲಿ ಮೆರವಣಿಗೆಯ ಪ್ರಯುಕ್ತ ಪ್ರಸ್ತುತಪಡಿಸಿದ ಹಾಡುಗಳು ಇಂಪಾಗಿ ಕೇಳಿಬಂದವು.
ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಐಪಲ್ಲಿ ನಾರಾಯಣಸ್ವಾಮಿ, ಟಿ.ವಿಜಯಕುಮಾರ್, ಫಾಲ್ಗುಣ, ಮಂಜುನಾಥ, ಮುನಿವೆಂಕಟಪ್ಪ, ಜೆ.ಸತ್ಯರಾಜ್, ಬಾಂಸೆಫ್ ನಾರಾಯಣಪ್ಪ, ಬಂಗವಾದಿ ನಾರಾಯಣಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಕೆಇಬಿ 

Buddha jayanti purnima Hubli Dharwad

ಹುಬ್ಬಳ್ಳಿ: ಭಗವಾನ್ ಬುದ್ಧ ಹಾಗೂ ಡಾ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಮೇ 17ರಂದು ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದಿ. ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಕರ್ನಾಟಕ ಹಾಗೂ ಎಸ್-4 ಸೋಷಿಯಲ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಮಹದೇವ ಸ್ವಾಮಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ, 9.30ಕ್ಕೆ ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಸಂಜೆ 4.30ಕ್ಕೆ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಗುವುದು. ನಂತರ ನೃತ್ಯ ಸ್ಪರ್ಧೆ, ದೇಹದಾರ್ಢ್ಯ ಸ್ಪರ್ಧೆ ಮತ್ತು ಪ್ರಶಸ್ತಿ ಪುರಸ್ಕಾರ ಸಮಾರಂಭ ಜರುಗಲಿದೆ. ಸ್ಪರ್ಧೆಯಲ್ಲಿ 300 ಮಂದಿ ಭಾಗವಹಿಸಲಿದ್ದಾರೆ. ದೇಹದಾರ್ಢ್ಯ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಒಬ್ಬ ಉತ್ತಮ ಕಾರ್ಯಕರ್ತರನ್ನು ಆಯ್ಕೆ ಮಾಡಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ಪದಕ ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್. ತಾವಡೆ, ಮೋಹನ ಹಿರೇಮನಿ, ಸಾಂಬಾ ಬಿಜವಾಡ, ಮಧುರೈ ಮುತ್ತು, ಜೆ.ಸಿ. ಕಮಲದಿನ್ನಿ ಮೊದಲಾದವರು ಹಾಜರಿದ್ದರು.

Buddha Purnima Jayanti Gulbarga

Buddha jayanti purnima mangalore Veeryasheela Bhantheji

BH_0

BH_1

BH_2
united buddhist organisation bangalore Veeryasheela Bhante



Mangalore, May 17: The teachings of Gautama Buddha, who upheld the social justice and equality, are relevant even today, said Prof T C Shivashankar Murthy, Vice Chancellor of Mangalore University.

He was speaking as the chief guest at the 2555th holy birth anniversary of Buddha organised by Dakshina Kannada district Buddha Maha Sabha, at NGO Hall here on Tuesday afternoon.

Murthy said even though a man called Buddha lived and died over two and a half thousand years ago, his messages and teaches are universal and eternal.

Opining that the increasing gap between rich and poor will only lead the whole humanity to chaos, he pointed out that Buddha had called upon the affluent to think about poor. 

“The concept of ‘Buddha conscious’ can reduce the human greed,” he added. 

Veeryasheela Bhantheji, President of United Buddhist Organisation, Bangalore, in his inaugural address stated that Buddhism is not a merely religion, but a complete way of life, which leads people towards eternal bliss.

He pointed out that Buddhism is in the forefront in 28 countries of the world and extending its strength in many other countries, as a large number of people, including Indians are inclining towards it. 

S R Laxman, district president of the Sabha, presided over the programme. Dr. Uday Rao, Director of TTC insurance company and Kanthappa Alangar, Secretary were present among others. 

html