Pages

Tuesday 1 November 2011

How Sangh Parivar benefitted from Yeddyurappa's land largesse


RSS general secretary Dattatreya Hosabale may have declared that scam-tainted former chief minister of Karnataka, B. S. Yeddyurappa, is an embarrassment to the BJP because of his involvement in various land scams. But the RSS was among the major beneficiaries of Yeddy's land largesse.
The state government allotted prime commercial lands and residential plots valued at around Rs. 50 crore at throw away prices to as many as six RSS- affiliated organisations and seven leaders from the RSS background whereas more than 3,50,000 people have been waiting patiently for allotment of a plot developed by government agencies. No wonder, the state RSS unit leaders are rallying behind the jailed-Yeddyurappa as a thanks-giving service for his magnanimity.
Jana Seva Vidya Kendra school
The Jana Seva Vidya Kendra school was given 10 acres of land, worth over Rs15 crore.
The RSS-backed organisations, which have been allotted land on a preferential basis by the government through Bangalore Development Authority (BDA) and Greater Bangalore City Corporation (GBCC), include Rashtrotthana Parishath, Jana Seva Vidya Kendra, Samskara Bharathi, Hindu Jagaran Vedike, Mahila Dakshata Samithi and Anantha Shishu Nivasa. Each of these organisations pays nominal rents ranging between Rs. 1 lakh and Rs. 2 lakh per annum to the government whereas the property in their possession runs into crores of rupees.
Calls to RSS spokespersons, seeking clarification over the issue, were not returned. BJP's Karnataka unit chief K.S. Eshwarappa said he was not aware of the matter. "I need to ascertain the facts before making a comment. I am busy with other commitments. I don't know about any such allotments,"he said.
Though there is no illegality in allotting prime land to these organisations, the government is not fully realising the commercial value of the land, as they pay only a pittance for using the land on a long-term basis. It results in loss to the exchequer.
"Had the government auctioned the land or collected rent on par with the prevailing market rates from these organisations, it would have mobilised resources for development works," Janata Dal (Secular) spokesperson Y. S. V. Dutta said.
Ironically, applications of several other organisations, including those promoting art, culture and sports, for allotment of subsidised land in the city, are pending approval. "Hundreds of government offices are functioning out of rented premises in Bangalore. Instead of leasing out land to the RSS, the government could have constructed office buildings on the same and save money," Dutta said. Rashtrotthana Parishath is the biggest beneficiary of Yeddyurappa's allegiance to the Sangh. It got a 906.2 square meters of a civic amenity (CA) site in the upmarket Sadashivanagar for a pittance to run a health care centre. CA sites are allotted only for a specific period (ranging between 10-30 years) but rarely does the BDA recovers such sites, as they get their lease extended easily.
Real estate prices are one of the highest in Sadashivanagar. The market value of the land allotted to the Parishath is least Rs. 13 crore. The Bangalore Development Authority BDA) had leased the land to the Sangh outfit.
The second biggest beneficiary Yeddyurappa's benevolence is the Jana Seva Vidya Kendra, which got over 10 acres of land expand the campus of a Kendra- run residential school. It situated in Channenahalli on the outskirts of Bangalore.
The previous government had acquired the land from the farmers to construct a housing project for the poor. But the Yeddyurappa government arm- twisted the allottees to surrender their land and it was then transferred to the Vidya Kendra. The market value of the property is over Rs. 15 crore,"H. C. Balakrishna, local JD( S) legislator said.
Balakrishna said the villagers have moved court, which has set up a committee to examine the case.
Samskara Bharthi and Hindu Jagaran Vedike - key-affiliates of the RSS - have each been allotted 2,000 sq ft of land at different locations in Bangalore.  The combined value of the land allotted to both the organisations on a long-term lease basis is over Rs. 5 crore.
Also, the Anatha Shishu Nivasa got 3,585 sq mt of land in Poornapragna House Building Cooperative Society and the Mahila Dakshaka Samithi 396 sq mt in Vidyaranyapura. The combined market value of both the properties is nearly Rs. 5 crore.
Yeddyurappa set aside rules to allot land to RSS outfits. They were given residential plots under the 'G' category - which is reserved for achievers in the fields of sports, culture, arts and social service. Plots under this category are priced at between Rs. 6-12 lakh. Apart from Sangh outfits, RSS leaders also benefited from Yeddy's land largesse. They include those from the Sangh- backed labour union, Bharatiya Mazdoor Sangh, local leaders (Pracharak), writers for RSS' publications and BJP leaders who are close to the Sangh.
"The preferential allotment of residential plots and CA sites to RSS organisations and leaders is in clear violation of the BDA rules. What is their contribution to society? How will the government justify the allotment? Now, people will know why the BJP and Sangh Parivar leaders have not initiated any action against Yeddyurappa, who is behind the bars for murky land deals," state Congress spokesperson V. S. Ugrappa said.
Ugrappa claimed that the state organic farming mission is headed by hardcore RSS leader, A. S. Anand. "Is anybody monitoring what is happening with the mission or its objectives? The BJP government has been too generous with its political masters," he said.
Whenever Yeddyurappa was asked to quit earlier this year in view of the land scam allegations, he held out a "threat" to "expose" senior BJP leaders, who took favours from him.
Clearly, Yeddyurappa knows how to please his bosses both in the party as well as his alma mater, the RSS.

ಬಿಎಸ್‌ವೈ ಭೂ ಹಗರಣದಲ್ಲಿ ಸಂಘಪರಿವಾರಕ್ಕೆ ಸಿಂಹ ಪಾಲು : ಆರೆಸೆಸ್ಸ್ ನಾಯಕರು, ಸಂಸ್ಥೆಗಳಿಗೆ 50 ಕೋಟಿ ರೂ. ವೌಲ್ಯದ ಭೂಮಿ ಪರಭಾರೆ

ಬುಧವಾರ - ನವೆಂಬರ್ -02-2011

ಬೆಂಗಳೂರು, ನ.1: ಭ್ರಷ್ಟಾಚಾರ, ಭೂ ಹಗರಣದ ಆರೋಪಗಳನ್ನು ಹೊತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಇತರ ಬಿಜೆಪಿ ಮುಖಂಡರು ಸಾಲಾಗಿ ಜೈಲಿಗೆ ಸೇರುತ್ತಿರುವ ಈ ಸಂದರ್ಭದಲ್ಲೇ ಸಂಘಪರಿವಾರಕ್ಕೂ ಭ್ರಷ್ಟತೆಯಲ್ಲಿ ಸಿಂಹ ಪಾಲು ದಕ್ಕಿರುವುದನ್ನು ‘ಮೇಲ್ ಟುಡೆ’ ಪತ್ರಿಕೆ ವರದಿ ಮಾಡಿದೆ. ರಾಜ್ಯ ಸರಕಾರದ ವಿವಿಧ ಪ್ರಾಧಿಕಾರ, ಮಂಡಳಿಗಳಿಗೆ ಅರ್ಜಿ ಸಲ್ಲಿಸಿ ನಿವೇಶನಕ್ಕಾಗಿ ಸುಮಾರು 3.50 ಲಕ್ಷ ಮಂದಿ ಕಾದು ಕುಳಿತಿದ್ದಾರೆ. ಆದರೆ, ಈ ಬಗ್ಗೆ ಗಮನ ಹರಿಸದ ಯಡಿಯೂರಪ್ಪ, ತನ್ನ ಅಧಿಕಾರಾವಧಿಯಲ್ಲಿ ಸುಮಾರು 50 ಕೋಟಿ ರೂ. ವೌಲ್ಯದ ವಾಣಿಜ್ಯ ಭೂಮಿ ಹಾಗೂ ನಿವೇಶನಗಳನ್ನು ಸಂಘ ಪರಿವಾರದ ಆರು ಅಧೀನ ಸಂಸ್ಥೆಗಳು ಹಾಗೂ 7 ಮುಖಂಡರಿಗೆ ದಯಪಾಲಿಸಿದ್ದಾರೆ ಎನ್ನುವ ವಿವರವನ್ನು ಈ ಪತ್ರಿಕೆ ಬಹಿರಂಗಪಡಿಸಿದೆ.
ಬಿಡಿಎ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಸಂಘಪರಿವಾರದ ಅಧೀನ ಸಂಸ್ಥೆಗಳಾದ ರಾಷ್ಟ್ರೋತ್ಥಾನ ಪರಿಷತ್, ಜನ ಸೇವಾ ವಿದ್ಯಾ ಕೇಂದ್ರ, ಸಂಸ್ಕಾರ ಭಾರತಿ, ಹಿಂದೂ ಜಾಗರಣ ವೇದಿಕೆ, ಮಹಿಳಾ ದಕ್ಷತಾ ಸಮಿತಿ ಹಾಗೂ ಅನಂತ ಶಿಶು ನಿವಾಸಗಳಿಗೆ ಕೋಟ್ಯಂತರ ರೂ. ವೌಲ್ಯದ ಭೂಮಿಯನ್ನು ಕೇವಲ ಒಂದರಿಂದ ಎರಡು ಲಕ್ಷ ರೂ. ಗಳಿಗೆ ಮಂಜೂರು ಮಾಡಲಾಗಿದೆ ಎಂದು ಆಂಗ್ಲ ಪತ್ರಿಕೆ ‘ಮೇಲ್ ಟುಡೆ’ ವರದಿ ಮಾಡಿದೆ.
ಬಿಜೆಪಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಸಂಘ ಪರಿವಾರದ ಋಣ ತೀರಿಸಲು, ತನ್ನ ಕುರ್ಚಿಯನ್ನು ಉಳಿಸಿ ಕೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಅಧಿಕಾರ ವಧಿಯಲ್ಲಿ ಸರಕಾರದ ಸಂಸ್ಥೆಗಳಿಂದ ಕಡಿಮೆ ಬೆಲೆಯಲ್ಲಿ ಭೂಮಿ ಮಂಜೂರಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.  ಯಡಿಯೂರಪ್ಪ ಕೃಪೆಗೆ ಪಾತ್ರವಾಗಿರುವ ಪ್ರಮುಖ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ 13 ಕೋಟಿ ರೂ.ವೌಲ್ಯದ 906.2 ಚದರ ಮೀಟರ್ ಜಮೀನನ್ನು ಬಿಡಿಎ ಮೂಲಕ ಮಂಜೂರು ಮಾಡಲಾಗಿದೆ. ಜನಸೇವಾ ವಿದ್ಯಾಕೇಂದ್ರಕ್ಕೆ ಬೆಂಗಳೂರು ಹೊರ ವಲಯದಲ್ಲಿ 15 ಕೋಟಿ ರೂ.ವೌಲ್ಯದ 10 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ.
ಸಂಸ್ಕಾರ ಭಾರತಿಗೆ 2.5 ಕೋಟಿ ರೂ.ವೌಲ್ಯದ 2 ಸಾವಿರ ಚ.ಅಡಿ ಹಾಗೂ ಹಿಂದೂ ಜಾಗರಣ ವೇದಿಕೆಗೆ 2.5 ಕೋಟಿ ರೂ.ವೌಲ್ಯದ 2 ಸಾವಿರ ಚ.ಅಡಿ, ಮಹಿಳಾ ದಕ್ಷತಾ ಸಮಿತಿಗೆ ವಿದ್ಯಾರಣ್ಯಪುರದಲ್ಲಿ 2.5 ಕೋಟಿ ರೂ.ವೌಲ್ಯದ 396 ಚ.ಮೀ ಹಾಗೂ ಅನಂತ ಶಿಶು ನಿವಾಸಕ್ಕೆ ಪೂರ್ಣ ಪ್ರಜ್ಞಾ ಗೃಹ ನಿರ್ಮಾಣ ಸಹಕಾರ ಸಂಘದ 2.5 ಕೋಟಿ ರೂ.ವೌಲ್ಯದ 3,585 ಚ.ಅಡಿ ಭೂಮಿ ಲಭ್ಯವಾಗುವಂತೆ ಮಾಡಲಾಗಿದೆ.

ಕ್ರೀಡೆ, ಸಂಸ್ಕೃತಿ, ಕಲೆ ಹಾಗೂ ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗಾಗಿ ಮೀಸಲಿಟ್ಟಿದ್ದ ‘ಜಿ’ ಕೆಟಗರಿಯ ನಿವೇಶನಗಳನ್ನು ಸಂಘಪರಿವಾರದವರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಅಲ್ಲದೆ, ಆರೆಸೆಸ್ಸ್ ನಾಯಕ, ಭಾರತೀಯ ಮಜ್ದೂರ್ ಸಂಘದ ಉಪಾಧ್ಯಕ್ಷ ಡಿ.ಕೆ.ಸದಾಶಿವ ನಗರದ ವಲ್ಗೇರಹಳ್ಳಿಯಲ್ಲಿ ಸುಮಾರು 1 ಕೋಟಿ ರೂ. ಬೆಲೆ ಬಾಳುವ 2400 ಚ.ಅಡಿ ನಿವೇಶನವನ್ನು ಕೇವಲ 10 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್ ಅವರ ಪತಿ, ದಕ್ಷಿಣ ಕನ್ನಡ ಜಿಲ್ಲಾ ಆರೆಸೆಸ್ಸ್‌ನ ಪ್ರಚಾರಕ ಪ್ರಸಾದ್ ಭಾರತಿ ಜೆ.ಪಿ.ನಗರದಲ್ಲಿ 4 ಕೋಟಿ ರೂ. ಮೊತ್ತದ 4000 ಅಡಿ ವಿಸ್ತೀರ್ಣದ ನಿವೇಶನವನ್ನು ಕಡಿಮೆ ಬೆಲೆಗೆ ಖರೀದಿಸಿದ್ದಾರೆ.
ಬೆಂಗಳೂರಿನ ಆರೆಸೆಸ್ಸ್ ಕಾರ್ಯಕರ್ತ ಶ್ರೀಧರ್ ಪಾಟ್ಲ್ಲ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ 1.20 ಕೋಟಿ ರೂ.ಮೊತ್ತದ 400 ಚ.ಅಡಿ ನಿವೇಶನವನ್ನು 10 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್‌ನ ಪಿ.ಮಾಲತಿ ಎಂಬವರು ಎಚ್‌ಎಸ್‌ಆರ್ ಲೇಔಟ್‌ನಲ್ಲಿ 1200 ಚ.ಅಡಿ ಜಮೀನು ಖರೀದಿಸಿದ್ದಾರೆ ಎಂದು ಪತ್ರಿಕೆ ಪ್ರಕಟಿಸಿದೆ.
ಎಚ್‌ಎಸ್‌ಆರ್ ಬಡಾವಣೆಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ 4000 ಚ.ಅಡಿ ನಿವೇಶನ, ಯಡಿಯೂರಪ್ಪರ ಆಪ್ತರೆನ್ನಲಾದ ಆರೆಸ್ಸೆಸ್ ಕಾರ್ಯಕರ್ತ ಡಾ.ಬಿ.ವಿಜಯಸಂಗದೇವ 2400 ಚ.ಅಡಿ ಮತ್ತು ಶೈಲಜಾ ಶ್ರೀನಿವಾಸ್ ಎಂಬವರು 2400 ಚ.ಅಡಿ ವಿಸ್ತೀರ್ಣದ ನಿವೇಶನಗಳನ್ನು ಪಡೆದಿರುವುದು ಬಹಿರಂಗಗೊಂಡಿದೆ.

ಪುತ್ತೂರು ಶಾಸಕಿಯ ಪತಿಗೂ ನಿವೇಶನ

 ಶಾಸಕಿಯೊಬ್ಬರು ತನ್ನ ಪತಿಗೂ ಕಡಿಮೆ ಬೆಲೆಗೆ ನಿವೇಶನ ಖರೀದಿಸಿ ರುವುದನ್ನು ಪತ್ರಿಕೆ ವರದಿ ಮಾಡಿದೆ.


ಬೆಂಗಳೂರು: ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್‌ರ ಪತಿ, ದಕ್ಷಿಣ ಕನ್ನಡ ಜಿಲ್ಲಾ ಆರೆಸೆಸ್ಸ್‌ನ ಪ್ರಚಾರಕ ಪ್ರಸಾದ್ ಭಂಡಾರಿ ಜೆ.ಪಿ.ನಗರದಲ್ಲಿ 4 ಕೋಟಿ ರೂ. ವೌಲ್ಯದ 4000 ಅಡಿ ವಿಸ್ತೀರ್ಣದ ನಿವೇಶನವನ್ನು ಕಡಿಮೆ ಬೆಲೆಗೆ ಖರೀದಿಸಿದ್ದಾರೆ. ಪ್ರಸಾದ್ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರ ಮುಖ್ಯಸ್ಥರು. ಅವರು ಪುತ್ತೂರಿನಲ್ಲಿ ಕೋಮುಪ್ರಚೋದಕ ಭಾಷಣ ಮಾಡಿರುವುದಕ್ಕಾಗಿ ಭಾರೀ ಟೀಕೆಗೆ ಗುರಿಯಾಗುತ್ತಾ ಬಂದಿದ್ದಾರೆ.

Monday 31 October 2011

ಅಂಬೇಡ್ಕರ್ ಎಂಬ ಜ್ಯೋತಿ ಮತ್ತು ಕೋಮುವಾದ ಎಂಬ ಕೋತಿ

ಸೋಮವಾರ - ಅಕ್ಟೋಬರ್ -31-2011

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಅಸ್ತಿತ್ವಕ್ಕೆ ಬಂದು 86 ವರ್ಷಗಳು ಗತಿಸಿದರೂ ಅದು ತನ್ನದೇ ಆದ ಹೆಮ್ಮೆಪಡುವ, ಅಭಿಮಾನದಿಂದ ಹೇಳಿಕೊಳ್ಳುವ ಪರಂಪರೆಯನ್ನು ಕಟ್ಟಿಸಿಕೊಳ್ಳಲು ಅದಕ್ಕೆ ಆಗಲೇ ಇಲ್ಲ. ಇಡೀ ರಾಷ್ಟ್ರ ಒಪ್ಪಿಕೊಳ್ಳುವ ಒಬ್ಬನೇ ಒಬ್ಬ ನಾಯಕನೂ ಈ ಸಂಘದಿಂದ ಬರಲಿಲ್ಲ.ದೇಶಕ್ಕಾಗಿ, ಜನತೆಗಾಗಿ ಹೋರಾಟ ನಡೆಸಿದ ಚರಿತ್ರೆಯೂ ಇದಕ್ಕಿಲ್ಲ.ಇಡೀ ರಾಷ್ಟ್ರ ಸ್ವಾತಂತ್ರ್ಯ ಆಂದೋಲನದ ಅಗ್ನಿಕುಂಡದಲ್ಲಿದ್ದಾಗ ಈ ಕರಿಟೋಪಿ ಕೂಟ ಬ್ರಿಟಿಷರ ಆಳರಸರ ಫಲಾನುಭವಿಯಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಪೊಲೀಸರಿಗೆ ಹಿಡಿದು ಕೊಡುವುದೇ ಆಗ ಈ ಸಂಘದ ‘ರಾಷ್ಟ್ರಸೇವೆ’ಯಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಗಾಂಧೀಜಿಯವರನ್ನು ಮುಗಿಸಿದ್ದು, ಗುಜರಾತನ್ನು ರಕ್ತದಲ್ಲಿ ತೋಯಿಸಿದ್ದು, ರಥಯಾತ್ರೆ ಎಂಬ ರಕ್ತಯಾತ್ರೆ ನಡೆಸಿದ್ದು ಇವರ ಸಾಧನೆ.ಅಂತಲೇ ಸಂಘದಿಂದ ಒಬ್ಬನೇ ಒಬ್ಬ ರಾಷ್ಟ್ರನಾಯಕ ಹೊರಹೊಮ್ಮಲಿಲ್ಲ. ಉದುರಿ ಬಿದ್ದವರೆಲ್ಲ ನಾತೂರಾಮ ಗೋಡ್ಸೆ, ಆಪ್ಟೆ, ಗೋಳ್ವಲ್ಕರ್, ನರೇಂದ್ರ ಮೋದಿ, ಅಡ್ವಾಣಿ,ಬಿ.ಎಸ್.ಯಡಿಯೂರಪ್ಪ, ತೊಗಾಡಿಯಾ, ಮುತಾಲಿಕ್, ಸಾಧ್ವಿ ಪ್ರಜ್ಞಾಸಿಂಗ್‌ಳಂಥ ಕಪ್ಪೆಚಿಪ್ಪುಗಳು. ಇಂಥವರಿನ್ನುಟ್ಟುಕೊಂಡು ಜನರ ಬಳಿ ಹೋಗಲು ಅದಕ್ಕೆ ಮುಖವಿಲ್ಲ.
ವಾಜಪೇಯಿಯಂಥ ಮುಖವಾಡ ಬೇಕು. ಅಂತಲೇ ಆರ್‌ಎಸ್‌ಎಸ್, ವಿಎಚ್‌ಪಿ ಮುಂತಾದ ಸಂಘಟನೆ ಗಳು ವೇದಿಕೆಗಳ ಮೇಲೆ ತಮ್ಮ ನಾಯಕರ ಬದಲಿಗೆ ಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್, ಕನಕದಾಸ, ನಾರಾಯಣಗುರು, ಬಸವಣ್ಣ ಮೊದಲಾದ ಸಮಾಜ ಸುಧಾರಕರ, ಕ್ರಾಂತಿಕಾರರ ಭಾವಚಿತ್ರ ಹಾಕಿ ತಮ್ಮದಲ್ಲದ ಪರಂಪರೆಯ ವಾರಸುದಾರಿಕೆಗಾಗಿ ಯತ್ನಿಸುತ್ತಲೇ ಬಂದಿದೆ.
ಆರ್‌ಎಸ್‌ಎಸ್ ಇಂಥ ಹುನ್ನಾ ರಕ್ಕೆ ಬಳಸಿಕೊಂಡ ಮಹಾಚೇತನ ಗಳಲ್ಲಿ ಡಾ. ಅಂಬೇಡ್ಕರ್ ಕೂಡ ಒಬ್ಬರು. ಒಂದೆಡೆ ಅದೇ ಪರಿವಾರದ ಚಿಂತನ ಚಿಲುಮೆ ಅರುಣ್‌ಶೌರಿ ‘ವರ್ಷಿಪಿಂಗ್ ಫಾಲ್ಸ್‌ಗಾಡ್’ ಎಂಬ ಪುಸ್ತಕ ಬರೆದು ಬಾಬಾ ಸಾಹೇಬರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಾರೆ.ಇನ್ನೊಂದೆಡೆ ಅದೇ ಸಂಘದ ಇನ್ನೊಂದು ಚಿಂತನ ಚಿಲುಮೆ ದತ್ತೋಪಂತ ಠೇಂಗಡಿ ‘ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್’ ಎಂಬ ಪುಸ್ತಕ ಬರೆದು ಅಂಬೇಡ್ಕರ್‌ರನ್ನು ಹಿಂದುತ್ವದ ಗಲ್ಲುಗಂಬಕ್ಕೆ ಏರಿಸುತ್ತಾರೆ.ಇವೆರಡು ಇಮ್ಮುಖ ಕುತಂತ್ರಗಳನ್ನು ಈ ದೇಶದ ಮನುವಾದಿ ಶಕ್ತಿಗಳು ಮೂರು ಸಾವಿರ ವರ್ಷದಿಂದ ನಡೆಸುತ್ತ ಬಂದಿವೆ. ಈಗಲೂ ನಿರ್ಲಜ್ಯವಾಗಿ ಮುಂದುವರಿಸಿವೆ. ಆರ್‌ಎಸ್‌ಎಸ್ ಮನುವಾದದ ಆಧುನಿಕ ರೂಪ.
ಆರ್‌ಎಸ್‌ಎಸ್ ಹಿರಿಯ ನಾಯಕರಾಗಿದ್ದ ದತ್ತೋಪಂತ ಠೇಂಗಡಿಯವರು ಬರೆದ ಈ ಪುಸ್ತಕವನ್ನು (ಸಾಮಾಜಿಕ ಕ್ರಾಂತಿಸೂರ್ಯ ಅಂಬೇಡ್ಕರ್) ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಯಿತು. ಈ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆ ದಿನ ಭಾಷಣ ಮಾಡುತ್ತಾ, ‘ಡಾ. ಅಂಬೇಡ್ಕರ್ ಹಿಂದೂರಾಷ್ಟ್ರ ರಚನೆ ಬಗ್ಗೆ ಮಾತನಾಡಿದ್ದರು, ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು ಎಂದಿದ್ದರು. ಕೇಸರಿ ಧ್ವಜ ರಾಷ್ಟ್ರಧ್ವಜ ಆಗಬೇಕು ಎಂದು ಹೇಳಿದ್ದರು’ ಎಂದು ಹಾಡಹಗಲೇ ಹಸಿ ಸುಳ್ಳು ಹೇಳಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರದುರ್ಗ ಮುರುಘಾಮಠದ ಶರಣರು ಹೊಸಬಾಳೆ ಮಾತಿಗೆ ಗೋಣು ಆಡಿಸಿದರು.

ಶಿವಮೊಗ್ಗ ಜಲ್ಲೆಯ ಈ ಹೊಸಬಾಳೆ ಎಂಬತ್ತರ ದಶಕದಲ್ಲಿ ಎಬಿವಿಪಿ ಕರ್ನಾಟಕ ಘಟಕದ ಕಾರ್ಯ ದರ್ಶಿಯಾಗಿದ್ದರು. ಆಗ ಒಮ್ಮೆ ಜಮಖಂಡಿಗೆ ಬಂದಿದ್ದ (ಅನಂತಕುಮಾರ್ ಜೊತೆಗಿದ್ದರು) ಅವರು ಇದೇ ರೀತಿ ಸುಳ್ಳಿನ ಬುರುಡೆಯನ್ನು ಬಿಚ್ಚಿಟ್ಟಿದ್ದರು. ಆಗ ಸಭೆಯಲ್ಲಿದ್ದ ಎಐಎಸ್‌ಎಫ್ ಕಾರ್ಯಕರ್ತರು ಕೆಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಪಟ್ಟು ಹಿಡಿದರು. ಇಲ್ಲದ್ದನ್ನು ಇದೆ ಎಂದು ಹೇಳಿ ಪಾರಾಗಬಹುದು. ಆದರೆ ಅದನ್ನು ತೋರಿಸು ಅಂದರೆ ಎಲ್ಲಿಂದ ತೋರಿಸಬೇಕು ಅಂತಲೇ ಅಂದು ಫಜೀತಿಪಟ್ಟಿದ್ದ ಹೊಸಬಾಳೆ ಮತ್ತೆ ಉತ್ತರಿಸಲು ಹೋಗಿರಲಿಲ್ಲ.

ದತ್ತಾತ್ರೇಯ ಹೊಸಬಾಳೆ ಅವರೇ ಯಾಕೆ ಇಂಥ ಸುಳ್ಳು ಹೇಳುತ್ತೀರಿ? ಅಂಬೇಡ್ಕರ್, ಶಿವಾಜಿ, ಭಗತ್‌ಸಿಂಗ್‌ರಂಥವರ ಹೆಸರನ್ನು ಯಾಕೆ ಈ ಪರಿ ಲಜ್ಜೆಗೆಟ್ಟು ದುರುಪಯೋಗ ಮಾಡಿಕೊಳ್ಳುತ್ತೀರಿ? ಹಿಂದೂರಾಷ್ಟ್ರ ಕಲ್ಪನೆಯನ್ನು ಅಂಬೇಡ್ಕರ್ ಅತ್ಯುಗ್ರವಾಗಿ ವಿರೋಧಿಸಿದ್ದರು. ‘ಒಂದು ವೇಳೆ ಹಿಂದೂರಾಷ್ಟ್ರ ಸ್ಥಾಪಿಸಲ್ಪಟ್ಟರೆ, ಅದು ದೇಶಕ್ಕೆ ಒದಗಿದ ಮಹಾವಿಪತ್ತು ಆಗಿರುತ್ತದೆ. ಹಿಂದೂಗಳೇನೆ ಹೇಳಲಿ, ಹಿಂದೂಧರ್ಮ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ವಿರೋಧಿಯಾಗಿದೆ. ಆದ್ದರಿಂದ ಯಾವುದೇ ಬೆಲೆ ತೆತ್ತಾದರೂ ಹಿಂದೂರಾಷ್ಟ್ರ ಸ್ಥಾಪನೆಯಾಗದಂತೆ ತಡೆಯಬೇಕು’ ಎಂದು ಹೇಳಿದ್ದರು. ಇದು ‘ಪಾಕಿಸ್ತಾನದ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ’ (ಪುಟ-538) ಎಂಬ ಪುಸ್ತಕದಲ್ಲಿ ದಾಖಲಾಗಿದೆ.
ಇಂಥ ಮಹಾಚೇತನ ಅಂಬೇಡ್ಕರ್ ಬಗ್ಗೆ ಮಾತನಾಡುವಾಗ ಹೊಸಬಾಳೆಯಂಥ ನಾಯಕರು ಎಚ್ಚರ ವಹಿಸಬೇಕು. ಕನ್ನಡಕ್ಕೆ ಬಂದ ಈ ಪುಸ್ತಕವನ್ನು ಬರೆದ ದತ್ತೋಪಂತ ಠೇಂಗಡಿ ಆರ್‌ಎಸ್‌ಎಸ್ ನಾಯಕರಾಗಿದ್ದಾರೆಂದು ಗೊತ್ತು. ಕೊನೆಯ ಐದು ವರ್ಷ ಈ ಠೇಂಗಡಿ ಅಂಬೇಡ್ಕರ್ ಒಡನಾಟ ಹೊಂದಿದ್ದರೆಂದು ಸಂಘದ ನಾಯಕರು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವಾವಗಿ ಈ ಠೇಂಗಡಿಯನ್ನು ಗೂಢಚಾರಿಕೆ ಮಾಡಲು ಆರ್‌ಎಸ್‌ಎಸ್, ಅಂಬೇಡ್ಕರ್ ಬಳಿ ಕಳುಹಿಸಿತ್ತು. ಹಿಂದೂತ್ವದ ಹುನ್ನಾರದ ವಿರುದ್ಧ ಪ್ರತ್ಯೇಕ ದಲಿತ ಸಂಘಟನೆಯನ್ನು ಕಟ್ಟಲು ಅಂಬೇಡ್ಕರ್ ಆಗ ಕ್ರಿಯಾಶೀಲರಾಗಿದ್ದರು. ಅಂಥ ಸಭೆಗಳಲ್ಲಿ ಸಂಘಟಕರ ಕಣ್ಣುತಪ್ಪಿಸಿ, ಆಗಿನ್ನೂ ಯುವಕರಾಗಿದ್ದ ಠೇಂಗಡಿ ಓಡಾಡುತ್ತಿದ್ದರಂತೆ. ಇದರ ಬಗ್ಗೆ ವಿವರವಾಗಿ ಇನ್ನೊಮ್ಮೆ ಬರೆಯ ಬೇಕಾಗಿದೆ.
ಡಾ. ಅಂಬೇಡ್ಕರ್‌ರ ಸಂಘಟನೆಯನ್ನು ನಾಶಪಡಿಸಲು ಗೂಢಚಾರಿಕೆ ಮಾಡಿದ ಈ ವ್ಯಕ್ತಿ ಮುಂದೆ ಕಮ್ಯುನಿಸ್ಟ್ ಸಂಘಟನೆಗಳಲ್ಲೂ ನುಸುಳಿ ಅಲ್ಲೂ ಇದೇ ಕೆಲಸ ಮಾಡಿದರು. ಕಮ್ಯುನಿಸ್ಟರು ಕಾರ್ಮಿಕರನ್ನು, ರೈತರನ್ನು, ಮಹಿಳೆಯರನ್ನು ಹೇಗೆ ಸಂಘಟಿಸುತ್ತಾರೆ ಎಂಬುದನ್ನು ತಿಳಿದುಕೊಂಡ ಠೇಂಗಡಿ ಮುಂದೆ ಭಾರತೀಯ ಮಜದೂರ ಸಂಘ, ಎಬಿವಿಪಿ, ಕಿಸಾನ ಸಂಘ ಮುಂತಾದವು ಕಟ್ಟಿ ಸಂಘಪರಿವಾರದ ಜಾಲ ವಿಸ್ತರಿಸಲು ನೆರವಾದರು. ಈ ಠೇಂಗಡಿಯನ್ನು ಕೆಲ ಬಾರಿ ಹತ್ತಿರದಿಂದ
ನೋಡಿ ಭಾಷಣ ಕೇಳಿದ ನನಗೆ ಆ ಮಾತುಗಳು ಎರವಲು ಮಾತುಗಳು ಎಂದು ತಿಳಿಯಿತು.ಆರ್‌ಎಸ್‌ಎಸ್ ಈಗ ಹತಾಶ ಸ್ಥಿತಿಗೆ ತಲುಪಿದೆ.ಮಾಲೆಗಾಂವ್, ನಾಂದೇಡ, ಸಂಜೋತಾ ಮುಂತಾದ ಬಾಂಬ್ ಸ್ಫೋಟದಲ್ಲಿ ಈ ನಕಲಿ ರಾಷ್ಟ್ರಪ್ರೇಮಿ ಸಂಘದ ಸಾಧ್ವಿಗಳು ಸಿಕ್ಕು ವಿಲಿವಿಲಿ ಒದ್ದಾಡುತ್ತಿದ್ದಾರೆ. ಇನ್ನೊಂದೆಡೆ ಆಕಸ್ಮಿಕವಾಗಿ ದೊರೆತ ಅಧಿಕಾರ ಬಳಸಿಕೊಂಡು ತಿನ್ನಬಾರದ್ದನ್ನು ತಿಂದು ಸಂಘದ ಸ್ವಯಂಸೇವಕರಾದ ಬಿ.ಎಸ್. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನೀರಾ ರಾಡಿಯಲ್ಲಿ ಮುಳುಗಿ ಮೇಲೆದ್ದ ಅನಂತಕುಮಾರ್ ಎಂಬ ಸ್ವಯಂಸೇವಕ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ ಎಂದು ಯಡಿಯೂರಪ್ಪ ಗುಂಪಿನವರೇ ಹೇಳುತ್ತಿದ್ದಾರೆ.
ಹೀಗೆ ತನ್ನ ಮೈತುಂಬ ಹೊಲಸು ಮತ್ತಿಕೊಂಡು ನಿಂತ ಪರಿವಾರದ ರಕ್ಷಣೆಗೆ ಈಗಿರುವುದು ದೇಶ-ವಿದೇಶಿ ಲೂಟಿಕೋರ, ಬಂಡವಾಳಶಾಹಿಗಳಿಂದ ಸಂಗ್ರಹಿಸಿದ ಗುರುದಕ್ಷಿಣೆ ಎಂಬ ಕಪ್ಪುಹಣ. ಈ ಕಪ್ಪು ಹಣಕ್ಕೆ ರಕ್ಷಣೆ ನೀಡುತ್ತಿರುವವರು ಕಪಟ ಮಠಾಧೀಶರುಗಳು. ಈ ಹಣವನ್ನು ಬಳಸಿಕೊಂಡೇ ಜನರನ್ನು ಇನ್ನಷ್ಟು ದಾರಿ ತಪ್ಪಿಸಲು ಮತ್ತು ಕಲಹದ ಕಿಡಿ ಹೊತ್ತಿಸಲು ಈ ಸಂಘ ಪಿತೂರಿ ನಡೆಸುತ್ತಲೇ ಬಂದಿದೆ. ಅದಕ್ಕಾಗಿ ಅಂಬೇಡ್ಕರ್, ಭಗತ್ ಸಿಂಗ್‌ರ ಹೆಸರುಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ಇಂಥ ಕೇಸರಿ ಖೆಡ್ಡಾಕ್ಕೆ ಬೀಳುವಷ್ಟು ದಲಿತ, ಶೂದ್ರ ಸಮುದಾಯದವರು ಪ್ರಜ್ಞಾಹೀನ ರಾಗಿಲ್ಲ ಎಂಬುದನ್ನು ಈ ನಕಲಿ ರಾಷ್ಟ್ರಭಕ್ತರು ಮರೆಯಬಾರದು.
ಹಿಂದುತ್ವದ ಮುಸುಕಿನಲ್ಲಿ ಕೆಲ ಹಿಂದುಳಿದ ವರ್ಗಗಳನ್ನು ಆಪೋಶನ ಮಾಡಿಕೊಳ್ಳುವಲ್ಲಿ ಈ ಕರಾಳ ಫ್ಯಾಸಿಸ್ಟ್ ಪರಿವಾರ ಕೊಂಚ ಯಶಸ್ವಿಯಾಗಿದೆ. ಕರ್ನಾಟಕ ಕರಾವಳಿ ಪ್ರದೇಶದ ಬಿಲ್ಲವ, ಮೊಗವೀರ ಯುವಕರಿಗೆ ಮತಾಂಧತೆಯ ಮತ್ತೇರಿಸಿ ಅಮಾಯಕರ ಮೇಲೆ ಅವರ ಮೂಲಕ ಹಲ್ಲೆ ನಡೆಸಿ, ಈ ಶೂದ್ರ ಯುವಕರು ಜೈಲು ಮತ್ತು ಕೋರ್ಟ್‌ಗೆ ಎಡತಾಕುವಂತೆ ಮಾಡಿದ್ದು ಇದೇ ಈ ಕಲ್ಲಡ್ಕ ಭಟ್ಟರ ಪರಿವಾರ. ಆದರೆ ಈ ಪರಿವಾರದ ವಂಚನೆಯ ಜಾಲಕ್ಕೆ ದಲಿತ ಸಮುದಾಯ ಈವರಗೆ ಬಲಿ ಬಿದ್ದಿಲ್ಲ. ಆದರೂ ಆರ್‌ಎಸ್‌ಎಸ್ ಈ ಯತ್ನ ಕೈಬಿಟ್ಟಿಲ್ಲ. ದಲಿತರನ್ನು ಬಲಗೈ ಮತ್ತು ಎಡಗೈ ಎಂದು ವಿಭಜಿಸಲು ಮತ್ತು ವಿಭಜಿಸಿ ಒಡೆದಾಳಲು ಕಸರತ್ತು ನಡೆಸುತ್ತಲೇ ಇದೆ.
ಅದೆಲ್ಲ ವಿಫಲವಾದಾಗ ಅಂಬೇಡ್ಕರ್ ಭಜನೆ ಶುರುವಾಗುತ್ತದೆ. ದಲಿತ ಸಮುದಾಯದ ಬಂಧುಗಳು ಸಂಘ ಪರಿವಾರದ ಹಿಂದುತ್ವವಾದಿ ಕತ್ತಲಕೂಪಕ್ಕೆ ಬೀಳದಂತೆ ತಡೆದದ್ದು ಡಾ. ಅಂಬೇಡ್ಕರ್ ಎಂಬ ಬೆಳಕು. ಅಂಬೇಡ್ಕರ್ ಸಾಹಿತ್ಯವನ್ನು ಓದಿದ ಯಾವುದೇ ಸಮುದಾಯದ ವ್ಯಕ್ತಿಯಿರಲಿ, ಆತ ನಿದ್ದೆಗಣ್ಣಿನಲ್ಲೂ ಆರ್‌ಎಸ್‌ಎಸ್ ಎಂಬ ಹಾಳು ಬಾವಿಗೆ ಬೀಳುವುದಿಲ್ಲ. ‘ನಾನು ಹಿಂದುವಾಗಿ ಜನಿಸಿದ್ದರೂ ಹಿಂದುವಾಗಿ ಸಾಯುವುದಿಲ್ಲ’ ಎಂಬ ಅಂಬೇಡ್ಕರ್ ಅವರ ಒಂದೇ ನುಡಿಮುತ್ತು ಸಾಕು, ಯಾವ ದಲಿತನೂ ಆರೆಸ್ಸೆಸ್ ಶಾಖೆ ಎಂಬ ಖೆಡ್ಡಾಕ್ಕೆ ಬೀಳಲು ಇಷ್ಟಪಡುವುದಿಲ್ಲ.
ಅಂಬೇಡ್ಕರ್ ಎಂಬ ಚೇತನ ಬೆಂಕಿ ಇದ್ದಂತೆ. ಅದು ಜ್ಯೋತಿಯಾಗಿ ಬೆಳಕನ್ನು ನೀಡುತ್ತದೆ. ಆ ಬೆಳಕಿನ ಜ್ಯೋತಿ ಈ ದೇಶದ ಶೋಷಿತ ವರ್ಗಗಳ ಕೈದೀವಿಗೆಯಾಗಿದೆ. ಈ ಬೆಳಕನ್ನು ನಂದಿಸಲು ಕೇಸರಿ ಪರಿವಾರ ಕೈ ಹಾಕಿದರೆ, ಆ ಜ್ಯೋತಿ ಉರಿಯುವ ಪಂಜಾಗಿ ನಂದಿಸಲು ಬಂದ ಹಸ್ತವನ್ನೇ ಸುಟ್ಟು ಹಾಕುತ್ತದೆ ಎಂಬುದನ್ನು ಈ ನಯವಂಚಕರು ಮರೆಯಬಾರದು.
- ಸನತ್‌ಕುಮಾರ ಬೆಳಗಲಿ
crtsy: vbnews

Sunday 30 October 2011

ದಲಿತರ ಸಮಸ್ಯೆ ಬಗೆಹರಿಸಲು ಆಡಳಿತ ವಿಫಲ

ಮಲದ ಗುಂಡಿಯಲ್ಲಿ ಸಾವು ಪ್ರಕರಣ:ಸುರೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಸೋಮವಾರ - ಅಕ್ಟೋಬರ್ -31-2011

ಮಂಡ್ಯ,ಅ.30:ಕೋಲಾರದ ಕೆ.ಜಿ.ಎಫ್‌.ನಲ್ಲಿ ಮಲತೆಗೆಯುತ್ತಿದ್ದ ಮೂವರು ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್‌ಕುವಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟ ದಲಿತ ಸಂರ್ಷ ಸಮಿತಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರಕಾರದ ವಿರುದ್ಧ ೋಷಣೆ ಕೂಗಿ ಸುರೇಶ್‌ಕುವಾರ್ ಅವರ ಪ್ರತಿಕೃತಿ ದಹನ ವಾಡಿ ಆಕ್ರೋಶ ವ್ಯಕ್ತಪಡಿಸಿದರು.ಕೆ.ಜಿ.ಎಫ್‌.ನಲ್ಲಿ ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ಸುರೇಶ್‌ಕುವಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾವನ್ನಪ್ಪಿದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ವಿರುದ್ಧ ಇರುವ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು. ರಾಜ್ಯದಲ್ಲಿ ಮಲತೆಗೆಯುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿ.ಎಂ.ಸತ್ಯ,ಚಿಕ್ಕೀರಯ್ಯ, ನಾಗರಾಜು, ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದಲಿತರ ಸಮಸ್ಯೆ ಬಗೆಹರಿಸಲು ಆಡಳಿತ ವಿಫಲ: ಸೋಮಯ್ಯ

ಸೋಮವಾರ - ಅಕ್ಟೋಬರ್ -31-2011

ಹುಣಸೂರು,ಅ.30:ದಲಿತರ ಸಮಸ್ಯೆಗಳನ್ನು ಬಗೆ ಹರಿಸಲು ಹುಣಸೂರು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದಸಂಸದ ಸಂಚಾಲಕ ಹೊಸಕೋಟೆ ಸೋಮಯ್ಯ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ದಲಿತ ಕಟುಂಟುಗಳು ನಿವೇಶನ, ವಸತಿಯನ್ನು ಹೊಂದಿಲ್ಲ. ನೀರಿನ ಸಂಪರ್ಕ ಕೂಡ ಇಲ್ಲ. ಆದರೆ ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಸ್ಥಳೀಯಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ದಲಿತರು ವಾಸಿಸುವ ಪ್ರದೇಶ, ಕಾಲನಿಯ ರಸ್ತೆಗಳಿಗೆ ಬೀದಿ ದೀಪಗಳನ್ನು ಸ್ಥಳೀಯಾಡಳಿತ ಒದಗಿಸಿಲ್ಲ. ದಲಿತರ ಮೇಲೆ ಸವರ್ಣೀಯರ ದೌರ್ಜನ್ಯ ಪ್ರಕರಣಗಳು ನಿರಂತರ ವರದಿಯಾಗುತ್ತಿದೆ.
ಆದರೆ ಇದನ್ನು ತಡೆಯಲು ಉಪ ವಿಭಾಗಾಧಿಕಾರಿಯಾಗಲಿ ಅಥವಾ ತಹಶೀಲ್ದಾರ್‌ರಾಗಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದರು. ದಲಿತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸದಿದ್ದಲ್ಲಿ ದಸಂಸ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸೋಮಯ್ಯ ನೀಡಿದ್ದಾರೆ.

ಮಲದ ಗುಂಡಿಯಲ್ಲಿ ಸಾವು ಪ್ರಕರಣ:ಸುರೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಸೋಮವಾರ - ಅಕ್ಟೋಬರ್ -31-2011

ಮಂಡ್ಯ,ಅ.30:ಕೋಲಾರದ ಕೆ.ಜಿ.ಎಫ್‌.ನಲ್ಲಿ ಮಲತೆಗೆಯುತ್ತಿದ್ದ ಮೂವರು ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್‌ಕುವಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟ ದಲಿತ ಸಂರ್ಷ ಸಮಿತಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರಕಾರದ ವಿರುದ್ಧ ೋಷಣೆ ಕೂಗಿ ಸುರೇಶ್‌ಕುವಾರ್ ಅವರ ಪ್ರತಿಕೃತಿ ದಹನ ವಾಡಿ ಆಕ್ರೋಶ ವ್ಯಕ್ತಪಡಿಸಿದರು.ಕೆ.ಜಿ.ಎಫ್‌.ನಲ್ಲಿ ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ಸುರೇಶ್‌ಕುವಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾವನ್ನಪ್ಪಿದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ವಿರುದ್ಧ ಇರುವ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು. ರಾಜ್ಯದಲ್ಲಿ ಮಲತೆಗೆಯುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿ.ಎಂ.ಸತ್ಯ,ಚಿಕ್ಕೀರಯ್ಯ, ನಾಗರಾಜು, ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಗೇರಿಯವರೇ, ಸರಕಾರಿ ಶಾಲೆಗಳ ಮೇಲೆ ಕಾಗೆ ಹಾರಿಸುವ ಪ್ರಯತ್ನ ಮಾಡದಿರಿ: ಸಾಹಿತಿ ದೇವನೂರ ಮಹಾದೇವ ಆಕ್ರೋಶ

ಕಾಗೇರಿಯವರೇ, ಸರಕಾರಿ ಶಾಲೆಗಳ ಮೇಲೆ ಕಾಗೆ ಹಾರಿಸುವ ಪ್ರಯತ್ನ ಮಾಡದಿರಿ: ಸಾಹಿತಿ ದೇವನೂರ ಮಹಾದೇವ ಆಕ್ರೋಶ


ಸೋಮವಾರ - ಅಕ್ಟೋಬರ್ -31-2011

ಮೈಸೂರು, ಅ. 30: ಮಕ್ಕಳ ಕೊರತೆಯ ನೆಪದಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವುದೆಂದರೆ, ಅದು ಸರಕಾರ ತನ್ನ ಮುಖದ ಮೇಲೆ ತಾನೇ ಉಗಿದು ಕೊಂಡಂತೆ ಎಂದು ಸಾಹಿತಿ ದೇವನೂರ ಮಹಾದೇವ ವ್ಯಾಖ್ಯಾನಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ವತಿ ಯಿಂದ ನಗರದಲ್ಲಿ ರವಿವಾರ ಆಯೋ ಜಿಸಲಾಗಿದ್ದ ‘ದಲಿತ ಸಂಘರ್ಷ: ನೆನ್ನೆ-ಇಂದು-ನಾಳೆ’ ಎಂಬ ವಿಚಾರ ಗೋಷ್ಠಿಯಲ್ಲಿ ‘ದಸಂಸ ಹೋರಾಟದ ಪಯಣ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ವರ್ಷ ಮೂರು ಸಾವಿರದಷ್ಟು ಸರಕಾರಿ ಶಾಲೆಗಳನ್ನು ಬಂದ್ ಮಾಡಲು ಸರಕಾರ ಮುಂದಾಗಿದೆ. ಆದರೆ ಕಳೆದ ಹತ್ತು ವರ್ಷಗಳ ಅವಧಿ ಯಲ್ಲಿ ಸುಮಾರು ಹತ್ತು ಸಾವಿ ರಕ್ಕೂ ಮಿಗಿಲಾಗಿ ಸರಕಾರಿ ಶಾಲೆಗಳನ್ನು ಸದ್ದು -ಗದ್ದಲವಿಲ್ಲದೆ ಮುಚ್ಚಲಾಗಿದೆ ಎಂಬ ಸಂಗತಿಯನ್ನು ಬಹಿರಂಗಪಡಿ ಸಿದ ಅವರು, ಆದುದರಿಂದ ಈ ಹತ್ತು ಸಾವಿರ ಶಾಲೆಗಳ ಪುನಾರಂಭಕ್ಕೆ ಆಗ್ರಹಿಸಿ ಹೋರಾಟ ನಡೆಯಬೇಕಿದೆ ಎಂದರು.

ಸರಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಉಂಟಾಗಲು ಸರಕಾರವೇ ಕಾರಣ. ಖಾಸಗಿ ಶಾಲೆಗಳಿಗೆ ಮನಬಂದಂತೆ ಪರವಾನಗಿ ನೀಡುವ ಮೂಲಕ ಸರಕಾರಿ ಶಾಲೆಗಳಿಗೆ ಮಕ್ಕಳು ದಾಖಲಾ ಗದಂತೆ ಮಾಡಿದ್ದೇ ಸರಕಾರ. ಆದು ದರಿಂದ ಸರಕಾರ ಹಾಗೂ ಖಾಸಗಿ ಶಾಲೆಗಳು ಒಳಸಂಚು ನಡೆಸಿ ಸರಕಾರಿ ಶಾಲೆಗ ಳನ್ನು ಮುಚ್ಚಿಸುತ್ತಿವೆ ಎಂದರು.

ಸರಕಾರ ಈ ವಿಷಯದಲ್ಲಿ ನಿಜವಾಗಿ ಯೂ ಪ್ರಾಮಾಣಿಕವಾಗಿದ್ದರೆ, ಖಾಸಗಿ ಶಾಲೆಗಳನ್ನು ಮುಚ್ಚುವ ಮೂಲಕ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾ ತಿಯನ್ನು ಹೆಚ್ಚಿಸಬಹುದು. ಆದರೆ ಹಾಗೆ ಮಾಡುವ ಬದಲು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಸರಕಾರಿ ಶಾಲೆಗಳ ಮೇಲೆ ಕಾಗೆ ಹಾರಿಸಲು ಹೊರಟಿದ್ದಾರೆ ಎಂದು ದೇವನೂರ ವ್ಯಂಗ್ಯವಾಡಿದರು.

ಜಾಗತೀಕರಣದ ನಂತರ ಜಗತ್ತು ಯಾವ ದಿಕ್ಕಿಗೆ ಓಡುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪ್ರಸ್ತುತ ಜನಪ್ರತಿನಿಧಿ ಗಳು ನಿಜವಾದ ಪ್ರತಿನಿಧಿಗಳಾಗಿ ಉಳಿದಿಲ್ಲ. ವಿವೇಚನೆಯ ಮೂಲಕ ಅವರು ನಿರ್ಧಾರಗಳನ್ನು ತೆಗೆದುಕೊ ಳ್ಳುತ್ತಿಲ್ಲ. ಕಾರ್ಪೊರೇಟ್ ಸೆಕ್ಟರ್ ಮತ್ತು ಖಾಸಗಿ ಕಂಪೆನಿಗಳ ಕೈಗೆ ಆಡಳಿತವನ್ನು ಒಪ್ಪಿಸ ಲಾಗಿದೆ. ಅವರು ಸೂಚಿಸಿದಂತೆ ಜನಪ್ರ ತಿನಿಧಿಗಳು ಹೆಬ್ಬೆಟ್ಟಿನ ರುಜು ಹಾಕುತ್ತಿ ದ್ದಾರೆ. ಸರಕಾರ ಹಣ ಮಾಡುವ ದಂಧೆಯಲ್ಲಿ ತೊಡಗಿದೆ ಎಂದು ಸಾತ್ವಿಕ ಸಿಟ್ಟು ವ್ಯಕ್ತಪಡಿಸಿದ ಅವರು, ದುಡ್ಡಿಗಾಗಿ ಮಾತೃಭೂಮಿ ಯನ್ನೇ ಮಾರುವ ದೇಶ ಪ್ರೇಮಿಗಳಿಗೆ ಮಾತೃಭಾಷೆ ಯಾವ ಲೆಕ್ಕ ಎಂದು ಮೂದಲಿಸಿದರು.
ಹಿಂದೆ ಮನುಧರ್ಮ ಶಾಸ್ತ್ರದಲ್ಲಿ ಕೆಳವರ್ಗದವರಿಗೆ ಶಿಕ್ಷಣವನ್ನು ನಿರಾಕರಿ ಸಲಾಗಿತ್ತು. ಆದರೆ ಸಂವಿಧಾನ ಜಾರಿ ನಂತರ ಸರ್ವರಿಗೂ ಶಿಕ್ಷಣದ ಸೌಲಭ್ಯ ದೊರೆಯಿತು. ಆದರೆ ಸರಕಾರಗಳು ಏಕರೂಪ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಿಲ್ಲ. ಹೀಗಾಗಿ ಶಿಕ್ಷಣ ವಿಷಯದಲ್ಲಿ ಪ್ರಸ್ತುತ ಎರಡು ಸಂವಿಧಾನಗಳು ಜಾರಿಯಲ್ಲಿದ್ದಂತಿದೆ. ಖಾಸಗಿ ಶಾಲೆಗಳ ಮೂಲಕ ನಗರನಿವಾಸಿ ಮತ್ತು ಸ್ಥಿತಿವಂತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದರೆ, ಸರಕಾರಿ ಶಾಲೆಗಳ ಮೂಲಕ ಗ್ರಾಮೀಣ ಮತ್ತು ಬಡವರ ಮಕ್ಕಳಿಗೆ ಕಳಪೆ ಶಿಕ್ಷಣ ನೀಡಲಾಗುತ್ತಿದೆ. ಆದುದರಿಂದ ಕನಿಷ್ಠ ಏಕರೂಪ ಪ್ರಾಥಮಿಕ ಶಿಕ್ಷಣಕ್ಕಾಗಿ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.

ಬೌದ್ಧ

ಬೌದ್ಧ ಧರ್ಮ

ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ
ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ
ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ
ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ
ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ
ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು
ಬುದ್ಧನ ತಾಯಿಯ ಹೆಸರು - - ಮಾಯಾದೇವಿ
ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ
ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ
ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ
ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ
ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ
ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ
ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ
ಬುದ್ದನ ಪತ್ನಿಯ ಹೆಸರು - ಯಶೋಧರಾ
ಬುದ್ಧನ ಮುಗುವಿನ ಹೆಸರು - ರಾಹುಲ
ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ
ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ
ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ
ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ
ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ
ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

ಬುದ್ದನ ತತ್ವಗಳು
ನಾಲ್ಕು ಮೂಲ ತತ್ವಗಳು
ನಾಲ್ಕು ಮಹಾನ್ ಸತ್ಯಗಳು
ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು
ಅಹಿಂಸೆ
ಸತ್ಯ ನುಡಿಯುವಿಕೆ
ಕಳ್ಳತನ ಮಾಡದಿರುವುದು
ಪಾವಿತ್ರತೆ
ನಾಲ್ಕು ಮಹಾನ್ ಸತ್ಯಗಳು

ದುಃಖ
ದುಃಖಕ್ಕೆ ಕಾರಣ
ದುಃಖದ ನಿವಾರಣಿ
ದುಃಖದ ನಿವಾರಣಿಗೆ ಮಾರ್ಗ

ಅಷ್ಟಾಂಗ ಮಾರ್ಗ

ಒಳ್ಳೆಯ ನಂಬಿಕೆ
ಒಳ್ಳೆಯ ಆಲೋಚನೆ
ಒಳ್ಳೆಯ ಮಾತು
ಉತ್ತಮ ನಡತೆ
ಉತ್ತಮ ಜೀವನ
ಒಳ್ಳೆಯ ಪ್ರಯತ್ನ
ಉತ್ತಮ ವಿಚಾರಗಳ ನೆನಪು
ಯೋಗ್ಯ ರೀತಿಯ ಧ್ಯಾನ

ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ಧ
ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ
ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ
ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ
ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

ಬೌದ್ಧ ಧರ್ಮದ ಪ್ರಸಾರ


ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ
ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು
ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು
ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು
ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

ಬೌದ್ಧ ಧರ್ಮದ ಅವನತಿಗೆ ಕಾರಣ
ಹೀನಾಯಾನ ಮಹಾಯಾನ ಪಂಗಡಗಳ ಉಗಮ
ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು
ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು
ಭಿಕ್ಷುಗಳ ಅಶ್ಲೀಲ ನಡತೆ
ಗುಪ್ತ ಸಾಮ್ರಾಜ್ಯದ ಉಗಮ
ಶಂಕರಾಚಾರ್ಯರ ವಾಸ
ಮುಸಲ್ಮಾನರ ದಾಳಿ


ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ
ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ಧ
ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ
ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ
ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ
ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು
ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು
ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು
ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ
ತಥಾಗತ ಎಂದರೆ - ಸತ್ಯವನ್ನು ಕಂಡವನು
ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80
ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ
ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ
ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ
ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ
ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ
ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ
ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳು
ಜಾತಕ ಕಥೆ ಕೃತಿಯ ಕರ್ತೃ - ಆರ್ಯ ಮಿತ್ರ
ಬೌದ್ಧ ಧರ್ಮದ ಹಿರಿಮೆಯನ್ನು ಕುರಿತು ಇರುವ ಗ್ರಂಥ A History of Indian civilization
A History of Indian civilization ಕೃತಿಯ ಕರ್ತೃ - ರಾಧಕುಮುಧ್ ಮುಖರ್ಜಿ
Encint India - ಕೃತಿಯ ಕರ್ತೃ - ವಿ.ಸಿ.ಪಾಂಡೆ
ಬುದ್ಧನ ಮೂರು ಆದರ್ಶಗಳು - ಬುದ್ಧಂ ಶರಣಂ ಗಚ್ಚಾಮಿ ,ಧರ್ಮ ಶರಣಂ ಗಚ್ಚಾಮಿ , ಸಂಘಂ , ಗಚ್ಚಾಮಿ
ಬೌದ್ಧ ಧರ್ಮದ ಪ್ರಚಾರದಲ್ಲಿ ಅಗ್ರಗಣ್ಯನಾದ ಅರಸ - ಅಶೋಕ
ಅಶೋಕನ ಮಕ್ಕಳ ಹೆಸರು - ಮಹೇಂದ್ರ ಮತ್ತು ಸಂಘಮಿತ್ರೆ
ಮಹೇಂದ್ರ ಮತ್ತು ಸಂಘಮಿತ್ರೆ ಬೌದ್ಧ ಧರ್ಮ ಪ್ರಚಾರ ಮಾಡಿದ ಸ್ಥಳ - ಬರ್ಮಾ ಮತ್ತು ಶ್ರೀಲಂಕಾ
ಬೌದ್ಧ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಲಯ - ನಲಂದಾ ವಿಶ್ವವಿದ್ಯಾಲಯ
Light of Asia ಅಥವಾ ಏಷ್ಯಾದ ಬೆಳಕು ಎಂದು ಕರೆದವರು - ಸರ್ ಎಡ್ವಿನ್ ಅರ್ನಾಡ್
Edvine Arnald ರವರು - ಜೆಕೋ ಬುಕ್ತ ಕೃತಿಯಲ್ಲಿ ಬುದ್ಧನನ್ನ The Light of Asia ಎಂದು ಕರೆದಿದ್ದಾರೆ
ಹೀನಾಯಾನಿಗಳೆಂದರೆ - ಬುದ್ಧನ ಮೂಲ ತತ್ವದಲ್ಲಿ ನಂಬಿಕೆಯುಳ್ಳವರು
ಮಹಾಯಾನಿಗಳೆಂದರೇ - ಬುದ್ಧನನ್ನು ವಿಗ್ರಹ ರೂಪದಲ್ಲಿ ಆರಂಭಿಸಿದವರು
ಬುದ್ಧನ ಪಾದಗಳ ಗುರುತು ಅಥವಾ ಖಾಲಿ ಪೀಠಕ್ಕೆ ಪೂಜೆ ಸಲ್ಲಿಸುತ್ತಿದ್ದವರು - ಹೀನಾಯಾನ ಪಂಥದವರು
ಹೀನಾಯಾನಿಗಳು ಈ ರಾಜನ ಕಾಲದಲ್ಲಿ ಖ್ಯಾತಿ ಹೊಂದಿದ್ದರು - ಅಶೋಕ
ಬುದ್ಧನನ್ನು ದೇವರೆಂದು ಪರಿಗಣಿಸಿದವರು - ಮಹಾಯಾನಿಗಳು
ಮಹಾಯಾನ ಪಂಥ ಹೆಚ್ಚು ಪ್ರಚಲಿತದಲ್ಲಿದ್ದವು - ಕಾನಿಷ್ಕನ ಕಾಲದಲ್ಲಿ
ಬುದ್ದಗಯಾ ಹಾಗೂ ಬರಾಬರ್ ಗುಹಾಲಯ ಈ ರಾಜ್ಯದಲ್ಲಿದೆ - ಬಿಹಾರ
ಸಾಂಚಿಯ ಸ್ಥೂಪ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ
ಅಜಂತಾ ದೇವಾಲಯ ಈ ಪ್ರದೇಶದಲ್ಲಿದೆ - ಮಹಾರಾಷ್ಠ್ರ
ನಾಗರ್ಜುನಕೊಂಡ ಈ ಪ್ರದೇಶದಲ್ಲಿದೆ - ಆಂದ್ರಪ್ರದೇಶ
ವಿಶ್ವದಲ್ಲಿಯೆ ಅತಿ ದೊಡ್ಡದಾದ ಬೋರೋಬುದೂರ್ ಅಥವಾ ಬೃಹತ್ ಬುದ್ಧ ದೇವಾಲಯ ಇರುವ ಪ್ರದೇಶ ಇಂಡೋನೆಷ್ಯಾದ ಜಾವ ದ್ವೀಪದಲ್ಲಿ
1950 ಡಿಸೆಂಬರ್ ನಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆದ ಪ್ರದೇಶ - ಸಿಂಹಳ
ಡಾ//.ಬಿ.ಆರ್.ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ೀಕರಿಸಿದ ಪ್ರೇರಣಿಯಾದ ಸಮ್ಮೇಳನ - ಸಿಂಹಳದಲ್ಲಿ 1950 ರಲ್ಲಿ ನಡೆದ ಬೌದ್ಧ ಸಮ್ಮೇಳನ
ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು - 14/10/1956 ನಾಗಪುರದಲ್ಲಿ
ಅಂಬೇಡ್ಕರ್ ರವರು - ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಧರ್ಭದಲ್ಲಿದ್ದ ಬೌದ್ಧ ಭಿಕ್ಷು - ಕುಶೀನಗರದ ಚಂದ್ರಮಣಿ
ಕ್ರಿ..ಶ. 2000 ದಲ್ಲಿ ತಾಲಿಬಾನ್ ಉಗ್ರರಿಂದ ನಾಶಗೊಂಡ ಬುದ್ಧನ ಶಿಲಾಕೃತಿ - ಅಫ್ಘಾನಿಸ್ಥಾನದ ಬೊಹೆಮಿಯಾನ್ ಪ್ರಾಂತ್ಯದ ಶಿಲಾಕೃತಿ

ಬೌದ್ಧ ಧರ್ಮದ ಪ್ರಮುಖ ಗ್ರಂಥಗಳು
ಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567
ರಾಹುಲ ಪದದ ಅರ್ಥ - ತೊಡಕು
ಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು ಈ ಹೆಸರಿನಿಂದ ಕರೆಯುವರು - ಜ್ಞಾನೋದಯ
ಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ - ಮಹಾಯಾನ
ಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರು
ನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆ
ಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 48 ರಲ್ಲಿ
ಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾ
ದಲೈಲಾಮ ಈ ಪ್ರದೇಶದವರು - ಟಿಬೆಟ್
ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕು
ಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ - ಮೂರನೇಯದು
ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ
ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹ
ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ
ಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು ಈ ಹೆಸರಿನಿಂದ ಕರೆಯುವರು - ಸ್ಥವಿರರು
ಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದು
ಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸು
ಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕ
ಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕ
ಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕ
ಪಿಟಕ ಪದದ ಅರ್ಥ - ಪೆಟ್ಟಿಗೆ ಅಥವಾ ಬುಟ್ಟಿ ಎಂದರ್ಥ
ಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನು
ಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿ
ಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದ
ಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನ
ಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿ
ಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು ಈ ಹೆಸರಿನಿಂದ ಕರೆಯುವರು
ಬುದ್ಧನ ಮೊದಲ ಶಿಷ್ಯನ ಹೆಸರು - ಆನಂದ
ಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರು
ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಈ ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆ
ಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್
4 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿ
ಕುಂಡಲ ವನ ಈ ರಾಜ್ಯದಲ್ಲಿದೆ - ಕಾಶ್ಮೀರ
4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ವಸುಮಿತ್ರ
5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ
5 ನೇ ಬೌದ್ಧ ಸಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.ಶ. 643
5 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್
ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನ
ಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪ
ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್
ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿ
ಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮ
ನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದು
ಕಪಿಲ ವಸ್ತು ಈ ಪ್ರದೇಶದಲ್ಲಿದೆ - ನೇಪಾಳ
ಬುದ್ಧನು ಮೋಕ್ಷ ಹೊಂದಿದ ದಿನವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣ
ಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳು
ಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯ
ಬೌದ್ಧ ಗುರು ದಲೈಲಾಮ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ.ಶ . 1959 ರಲ್ಲಿ
ಬುದ್ದನ ಸ್ವಾಮಿ ನಿಷ್ಠ ಸೇವಕ - ಚನ್ನ
ಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರ
ಜೈನ ದೇವಾಲಯಗಳನ್ನು ಈ ಹೆಸರಿನಿಂದ ಕರೆಯುವರು - ಬಸದಿ
ಕೇವಲಿ ಎಂದರೆ - ಜ್ಞಾನಿ ಎಂದರ್ಥ
ಬುದ್ಧನ ಸ್ಮಾರಕಗಳಿರುವ ಪ್ರದೇಶ - ಸಾರಾನಾಥ
ಗೌತಮ ಬುದ್ಧ - 80 ವರ್ಷ ಧರ್ಮ ಪ್ರಚಾರ ಮಾಡಿದ
ಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್
ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷ
ಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲ
ಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್
ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶ
ಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆ
ಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿ
ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ.ಶ.1 ನೇ ದಶಕ
ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲ
ಬುದ್ದನು ಈ ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರು
ಪಾಟಲಿಪುತ್ರ ನಗರದ ನಿರ್ಮಾತೃ - ಅಜಾತಶತೃ
ಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧ
ಗೊತಮ ಬುದ್ಧನು ವೈಶಾಲಿಯಲ್ಲಿ ಈ ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮ
ಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿ
ಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿ

ಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತ
ಜನನ - ಕಮಲ ಮತ್ತು ವೃಷಭ
ಜ್ಞಾನ ಪ್ರಾಪ್ತಿ - ಕುದುರೆ
ನಿರ್ವಾಣ - ಬೋಧಿವಕ್ಷ
ಪ್ರಥಮ ಧರ್ಮೋಪದೇಶ - ಧರ್ಮಚಕ್ರ
ಪರಿನಿರ್ವಾಣ - ಸ್ಥೂಪ

‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಚಾರಗೋಷ್ಠಿ

ದಲಿತ ಸಂಘರ್ಷ ಸಮಿತಿಗೆ ‘ಬಂಧುತ್ವ’ದ ತುರ್ತು ಅಗತ್ಯ : ಸಾಹಿತಿ-ಚಿಂತಕ ದೇವನೂರ ಮಹಾದೇವ

ಸೋಮವಾರ - ಅಕ್ಟೋಬರ್ -31-2011

 ‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಚಾರಗೋಷ್ಠಿ

 

ಮೈಸೂರು, ಅ. 30: ಸೈದ್ಧಾಂತಿಕ ಕಾರಣಗಳಿಗಾಗಿ ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳಾಗಿ ವಿಂಗಡಣೆಯಾಗಿರುವುದು ಅಸಹಜವೇನಲ್ಲ ಎಂದು ಅಭಿಪ್ರಾಯಪಟ್ಟಿರುವ ಖ್ಯಾತ ಸಾಹಿತಿ-ಚಿಂತಕ ದೇವನೂರ ಮಹಾದೇವ, ಆದರೆ ವಿವಿಧ ಬಣಗಳು ಹಾಗೂ ಕಾರ್ಯಕರ್ತರ ಮಧ್ಯೆ ‘ಬಂಧುತ್ವ’ದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ರವಿವಾರ ಏರ್ಪಡಿಸಲಾಗಿದ್ದ ‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ‘ದಸಂಸ ಹೋರಾಟದ ಪಯಣ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ದಲಿತ ಸಂಘರ್ಷ ಸಮಿತಿಯ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದ ದೇವನೂರ, ಸಂಘಟನೆಯಲ್ಲಿ ಬಂಧುತ್ವದ ತುರ್ತು ಅಗತ್ಯ ಮತ್ತು ಅನಿವಾರ್ಯದ ಪ್ರತಿಪಾದನೆಗಾಗಿ ತನ್ನ ಕೆಲವು ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ವರದಯ್ಯ, ದೊಡ್ಡಣ್ಣ, ಸತ್ಯನಾರಾಯಣ ಶೆಟ್ಟಿ, ಕುಪ್ಪೆ ನಾಗರಾಜ್ ಮತ್ತು ಪಳನಿಯಪ್ಪ ಎಂಬ ಐವರು ಗೆಳೆಯರಿದ್ದರು. ಕ್ರಮವಾಗಿ ಅವರು ದಲಿತ (ಬಲಗೈ), ದಲಿತ (ಎಡಗೈ), ಕೊರಮ, ದೊಂಬಿದಾಸ ಹಾಗೂ ಪೌರಕಾರ್ಮಿಕ ಜನಾಂಗಕ್ಕೆ ಸೇರಿದ್ದರು. ಪಳನಿಯಪ್ಪ ಈ ಗುಂಪಿನ ನಾಯಕನಾಗಿದ್ದನು. ಅವರೆಲ್ಲರೂ ಸಾಂಘಿಕ ಪ್ರಯತ್ನದ ಮೂಲಕ ದಲಿತ ಸಂಘರ್ಷ ಸಮಿತಿಯನ್ನು ಸಂಘಟಿಸುತ್ತಿದ್ದರು. ಈ ಗೆಳೆಯರ ಮಧ್ಯೆ ಅಂದು ‘ಬಂಧುತ್ವ’ ಎಂಬುದು ಸಹಜ ಮತ್ತು ಅಪ್ರಜ್ಞಾಪೂರ್ವಕವಾಗಿತ್ತು.ಆದರೆ ಇಂದು ಅಂತಹ ‘ಬಂಧುತ್ವದ ಆದರ್ಶ’ ನಮ್ಮೆಲ್ಲರ ನಡುವೆ ಪ್ರಜ್ಞಾಪೂರ್ವಕವಾಗಿ ಏರ್ಪಡಬೇಕಾಗಿದೆ ಎಂದು ಅವರು ಉಪಮೆಯ ಮೂಲಕ ವಿವರಿಸಿದರು.
ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ದಿವಂಗತ ಪ್ರೊ.ಬಿ.ಕೃಷ್ಣಪ್ಪ, ಕವಿ ಡಾ.ಸಿದ್ದಲಿಂಗಯ್ಯ ಮತ್ತು ನನ್ನ ಮಧ್ಯೆ ಸೈದ್ಧ್ದಾಂತಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಕೃಷ್ಣಪ್ಪ ಕಟ್ಟಾ ಅಂಬೇಡ್ಕರ್ ವಾದಿ, ಸಿದ್ದಲಿಂಗಯ್ಯ ಕಮ್ಯುನಿಸ್ಟ್ ಹಾಗೂ ನಾನು ಸಮಾಜವಾದಿ. ಹೀಗಾಗಿ ನಾವು ಮೂವರು ಅನೇಕ ಸಭೆ, ಸಮಾರಂಭ ಹಾಗೂ ವೇದಿಕೆಗಳಲ್ಲಿ ಬಹಿರಂಗವಾಗಿಯೇ ಜಗಳ ಆಡುತ್ತಿದ್ದೆವು. ಆದರೆ ನಂತರ ಪರಸ್ಪರ ಹುಡುಕಿಕೊಂಡು ಹೋಗಿ, ಭೇಟಿಯಾಗಿ ಮಾತನಾಡುತ್ತಿದ್ದೆವು. ಸೈದ್ಧ್ದಾಂತಿಕ ಭಿನ್ನಾಭಿಪ್ರಾಯವಿದ್ದಾಗ್ಯೂ ನಮ್ಮ ಮಧ್ಯೆ ಬಂಧುತ್ವವಿದ್ದುದೇ ಇದಕ್ಕೆ ಕಾರಣ ಎಂದು ಅವರು ಸ್ಮರಿಸಿದರು. ದಲಿತ ಸಂಘರ್ಷ ಸಮಿತಿ ಅನೇಕ ಬಣಗಳಾಗಿ ವಿಭಜನೆಯಾಗಿದ್ದರೂ ಯಾವೊಂದು ಬಣ ಕೂಡ ಈವರೆಗೆ ಮತೀಯವಾದಿಗಳ ಜೊತೆ ಗುರುತಿಸಿಕೊಂಡಿಲ್ಲ. ಇದು ಸಂಘಟನೆಯ ಮೂಲ ಹಾಗೂ ದೊಡ್ಡಗುಣ ಎಂದು ಮಹಾದೇವ ಬಣ್ಣಿಸಿದರು.
ವಿಚಾರಗೋಷ್ಠಿಯ ಶೀರ್ಷಿಕೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಿನ್ನೆ-ಪರವಾಗಿಲ್ಲ, ಇಂದು-ಚೆನ್ನಾಗಿಲ್ಲ, ನಾಳೆ-ಏನಾಗುತ್ತದೋ ಗೊತ್ತಿಲ್ಲ. ಈ ನಡುವೆ, ನಿನ್ನೆಯನ್ನು ಬದಲಾಯಿಸುವುದು ಅಸಾಧ್ಯ. ಆದರೆ ಈವತ್ತು ವಿವೇಕದಿಂದ ವರ್ತಿಸಿದರೆ ನಾಳೆಯ ಬದುಕು ಚೆನ್ನಾಗಿರಲು ಸಾಧ್ಯ ಎಂದು ವ್ಯಾಖ್ಯಾನಿಸಿದರು. ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಒಂದಾಗದಿದ್ದರೂ ಪರವಾಗಿಲ್ಲ. ಆದರೆ ಎಲ್ಲ ಬಣ ಹಾಗೂ ಕಾರ್ಯಕರ್ತರು ಕನಿಷ್ಠ ಒಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳು ರೈತ ಸಂಘ ಸೇರಿದಂತೆ ಸಮಾನಮನಸ್ಕ ಎಲ್ಲ ಸಂಘಟನೆಗಳನ್ನು ಒಳಗೊಳ್ಳಬೇಕು ಎಂದು ದೇವನೂರು ಆಶಿಸಿದರು.
ನಿರಾಶೆಯ ನಡುವೆಯೂ ಆಶಾವಾದ: ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಮರ್ಶಕ ಪ್ರೊ.ಜಿ.ಎಚ್.ನಾಯಕ್ ಮಾತನಾಡಿ, ಗಾಂಧೀಜಿ ಹಿಂದುತ್ವವಾದಿ ಧೋರಣೆ ಹೊಂದಿದ್ದರು ಎಂಬುದು ಸುಳ್ಳಲ್ಲ. ಅವರ ಹೋರಾಟದ ಕಾಲಘಟ್ಟದಲ್ಲಿ ಭಾರತೀಯತೆ ಎಂಬುದು ಹಿಂದುತ್ವದ ಭಾಗವೇ ಆಗಿತ್ತು. ಆದುದರಿಂದ ಭಾರತೀಯತೆ, ಅರ್ಥಾತ್ ಹಿಂದುತ್ವದ ವೈಭವೀಕರಣ ಅಂದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿತ್ತು. ಆದರೆ, ಪ್ರಸ್ತುತ ಹಿಂದುತ್ವದ ರೂಪ ಹಾಗೂ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಗಾಂಧಿಯ ರಾಮ ಮತ್ತು ಬಿಜೆಪಿಯ ರಾಮ ಯಾರೆಂಬುದನ್ನು ಪತ್ತೆ ಹಚ್ಚಲು ತನಿಖಾ ಸಮಿತಿಯನ್ನೇ ನೇಮಕ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಸ್ವಾತಂತ್ರದ ಸಂದರ್ಭದಲ್ಲಿ ಭಾರತೀಯ ವಿದ್ಯಾವಂತರ ಸಂಖ್ಯೆ ವಿರಳವಾಗಿತ್ತು. ಈಗ ಎಲ್ಲರೂ ವಿದ್ಯಾವಂತರು; ಆದರೆ ಜನಪರವಾಗಿ ಚಿಂತಿಸುವವರ ಕೊರತೆಯಿದೆ ಎಂದು ಅವರು ವಿಷಾದಿಸಿದರು. ರಾಜಕೀಯ ಪಕ್ಷಗಳು ಗಬ್ಬೆದ್ದುಹೋಗಿವೆ. ದುಷ್ಟಾಚಾರ ಮತ್ತು ಭ್ರಷ್ಟಾಚಾರಕ್ಕೆ ಯಾವ ಪಕ್ಷವೂ ಹೊರತಲ್ಲ. ಆದರೆ ಪ್ರಮಾಣದಲ್ಲಷ್ಟೇ ವ್ಯತ್ಯಾಸವಿದೆ ಎಂದು ಪ್ರೊ.ನಾಯಕ್ ನುಡಿದರು. ನಡುವೆಯೂ ದಲಿತ ಸಂಘರ್ಷ ಸಮಿತಿ, ರೈತ ಸಂಘ ಹಾಗೂ ಕೆಲವು ಮಹಿಳಾ ಸಂಘಟನೆಗಳ ಬಗ್ಗೆ ವೈಯಕ್ತಿಕವಾಗಿ ನಾನು ಈಗಲೂ ಆಶಾವಾದಿಯಾಗಿದ್ದೇನೆ. ಆದುದರಿಂದ ಈ ಸಂಘಟನೆಗಳು ಒಗ್ಗೂಡಿ, ಜೀವಂತಿಕೆಯನ್ನು ಪಡೆದುಕೊಂಡು ಹೋರಾಟ ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.
ಆತ್ಮವಿಮರ್ಶೆಗೆ ಸಲಹೆ:
ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಶಿವಸುಂದರ್, ಚಳವಳಿ ಹಾಗೂ ಚಳವಳಿಗಾರರಿಗೆ ಆತ್ಮವಿಮರ್ಶೆಯ ಕೊರತೆಯಿದ್ದು, ಅದನ್ನು ನಿವಾರಿಸಿಕೊಳ್ಳಬೇಕು. ತಪ್ಪುಗಳನ್ನು ಒಪ್ಪಿ, ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಆ ಮೂಲಕ ಸಮಾಜಕ್ಕೆ ತಮ್ಮ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿಎಲ್‌ನ ಡಾ.ವಿ.ಲಕ್ಷ್ಮೀನಾರಾಯಣ ವಿಚಾರಗೋಷ್ಠಿಯ ವಿಷಯ ಕುರಿತು ಮಾತನಾಡಿದರು. ಬಿ.ಡಿ.ಶಿವಬುದ್ಧಿ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

html