Pages

Wednesday 7 December 2011

ದಸಂಸ ಜನ ಜಾಗೃತಿ ಜಾಥಾಕ್ಕೆ ಚಾಲನೆ ಬುಧವಾರ - ಡಿಸೆಂಬರ್-07-2011



ಮೈಸೂರು, ಡಿ.6: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಲ್ಬಣಿಸುತ್ತಿರುವ ಅಸಮಾನತೆ, ಅಸ್ಪಶತೆಯ ತಾತ್ಸಾರ ದಂತಹ ಸಮಸ್ಯೆಗಳನ್ನು ಹೋಗಲಾಡಿಸಿ, ಸಂವಿಧಾನದ ಆಶಯಗಳನ್ನು ಸಮರ್ಪಕ ಅನುಷ್ಠಾನಕ್ಕೆ ಒತ್ತಡ ಹೇರುವ ಜತೆಗೆ, ಛಿದ್ರಗೊಳ್ಳುತ್ತಿರುವ ದಲಿತ ಸಮುದಾ ಯವನ್ನು ಸಂಘಟಿಸಿ, ಸಮಾಜಮುಖಿಯನ್ನಾಗಿಸಲು ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಹಮ್ಮಿಕೊಂಡಿ ರುವ ಜನ ಜಾಗೃತಿ ಜಾಥಾಕ್ಕೆ ಮಂಗಳವಾರ ನಗರದಲ್ಲಿ ಚಾಲನೆ ದೊರೆಯಿತು.


ದಸಂಸ ಮೂಲ ಆಶಯಗಳ ಪುನರುತ್ಥಾನ ಹಾಗೂ ದಲಿತರ ಸಂವಿಧಾನ ಬದ್ಧ ಹಕ್ಕು ಸಂರಕ್ಷಣೆ ಎಂಬ ಧ್ಯೇಯದೊಂದಿಗೆ ‘ಮರಳಿ ಹಳ್ಳಿ ಕಡೆಗೆ-ದಸಂಸ ನಡಿಗೆ’ ಎಂಬ ಹೆಸರಿನಲ್ಲಿ ದಲಿತ ಸಂಘರ್ಷ ಸಮಿ ತಿಯು ಮಂಗಳವಾರದಿಂದ 2012 ಜನವರಿ 26ರ ವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಜಾಥಾ ನಡೆಸ ಲಿದ್ದು, ಇಂದು ಬೆಳಗ್ಗೆ ಪುರಭವನ ಆವರಣದಿಂದ ಪ್ರಾರಂಭಗೊಂಡ ಜಾಥಾಕ್ಕೆ ದಸಂಸ ಪೋಷಕಿ ಹಾಗೂ ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಪ್ರೊ.ಸುಮಿತ್ರಾ ಬಾಯಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳು ಸೇರಿ ದಂತೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ದಲಿತ ಜನಾಂಗದ ಮುಖಂಡರು, ಜಾಥಾ ಉದ್ದಕ್ಕೂ ಅಂಬೇಡ್ಕರ್ ಅವರ ಸಂದೇಶಗಳನ್ನು ಒಳಗೊಂಡ ನಾಮಫಲಕ ಪ್ರದರ್ಶಿಸಿದರು. ಅಲ್ಲದೆ ದೀನ-ದಲಿತರ ಅಭಿವೃದ್ಧಿಗೆ ಸರಕಾರ ವಿಶೇಷ ಕಾಳಜಿ ವಹಿಸಬೇಕು. ಸವರ್ಣೀಯರಿಂದ ಆಗುತ್ತಿರುವ ಸಾಮಾಜಿಕ ಬಹಿಷ್ಕಾರ, ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ತಡೆಗಟ್ಟಬೇಕು. ದಲಿತರೂ ಈ ಸಮಾಜದಲ್ಲಿ ಮನುಷ್ಯರಾಗಿ ಬದುಕಲು ಅವಕಾಶ ಮಾಡಿಕೊಡ ಬೇಕು ನಾಮಫಲಕಗಳ ಪ್ರದರ್ಶನ ಸಾರ್ವಜನಿಕರ ಮನದಟ್ಟುವಂತಿತ್ತು.


ನಿತ್ಯ ಎರಡು ಅಥವಾ ಮೂರು ತಾಲೂಕುಗಳಿಗೆ ಭೇಟಿ ನೀಡುವ ಜಾಥಾ, ಸ್ಥಳೀಯರೊಂದಿಗೆ ಸಭೆ ನಡೆಸುವುದಲ್ಲದೆ ಸಂವಿಧಾನಬದ್ಧ ಹಕ್ಕುಗಳು ಸಮರ್ಪ ಕವಾಗಿ ಅನುಷ್ಠಾನಗೊಳ್ಳಲು ದಲಿತರು ವಹಿಸಬೇಕಾ ಗಿರುವ ಕಾಳಜಿ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಡಬೇಕಾಗಿರುವ ಶ್ರಮದ ಬಗ್ಗೆ ಚರ್ಚೆ ಹಾಗೂ ಉಪನ್ಯಾಸದ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದು ದಸಂಸ ಮೈಸೂರು ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್ ವಿವರಿಸಿದರು.


ಜಾಥಾದಲ್ಲಿ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೂಡು, ಚಿಂತಕ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಕವಿ ಪ್ರೊ.ಎಚ್.ಗೋವಿಂದಯ್ಯ, ರಂಗನಿರ್ದೇಶಕ ಎಚ್.ಜನಾರ್ದನ (ಜನ್ನ್ನಿ), ದಸಂಸ ಹಿರಿಯ ನಾಯಕ ಹರಿಹರ ಆನಂದಸ್ವಾಮಿ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕೊಳ್ಳೇಗಾಲ: ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ ಬುಧವಾರ - ಡಿಸೆಂಬರ್-07-2011








ಕೊಳ್ಳೇಗಾಲ, ಡಿ. 6: ಪಟ್ಟಣದ ಭೀಮನಗರದ ಬಸವನ ದೇವರ ಗುಡಿಯಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 55ನೆ ವರ್ಷದ ಪರಿನಿಬ್ಬಾಣ ದಿನಾಚರಣೆಯನ್ನು ಆಚರಿಸಲಾಯಿತು.

ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಬಾಬಾ ಸಾಹೇಬರು ಭಾರತಕ್ಕೆ ಸಂವಿಧಾನದ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ. ಸಮಾಜದಲ್ಲಿದ್ದ ಅಸ್ಪೃಶ್ಯತೆ ನಿರ್ಮೂಲನೆಗೆ ತಮ್ಮ ಜೀವನವನ್ನೇ ಪಣವಾಗಿ ಇಟ್ಟು ಹೋರಾಟ ಮಾಡಿ ದೀನದಲಿತರ ಆಶಾಕಿರಣವಾಗಿದ್ದರು ಎಂದರು.

ಬಾಬಾ ಸಾಹೇಬರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಡಿ.ಸಿದ್ದರಾಜು ಅಂಬೇಡ್ಕರ್‌ರ ಈ ಪರಿನಿರ್ವಾಣ ದಿನದ ಆಚರಣೆಯನ್ನು ಈ ಒಂದು ದಿನಕ್ಕೆ ಸೀಮಿತವಾಗಿರಿಸದೇ ಪ್ರತೀ ನಿತ್ಯ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕೆಂದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಎಲ್. ಲಿಂಗರಾಜು, ಉಪಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಪಾಪಣ್ಣ, ನಿರ್ದೇಶಕರುಗಳಾದ ಪುನೀತ್, ನಾಗು, ಪಿ. ಕೃಷ್ಣರಾಜ್, ಪೀಟರ್, ಶಿವರಾಜ್, ನಟರಾಜು, ನಾಗರಾಜು, ಪ್ರಸನ್ನ ಕುಮಾರ್, ಸಿದ್ಧಾರ್ಥ, ಶಿವರಾಜ್, ಕಸಬಾ ಯಜಮಾನರುಗಳಾದ ಸಿದ್ದಪ್ಪಾಜಿ, ನಟರಾಜು, ಬಸವಯ್ಯ, ಕೆಂಪಯ್ಯ, ಲಿಂಗರಾಜು, ಸಿದ್ದರಾಜು, ಮರಯ್ಯ, ಮುಖಂಡರಾದ ಕಚ್ಚಿ ಮಹದೇವ್, ವರದರಾಜು, ಪಿ.ಜಗದೀಶ್, ಪ್ರತಾಪ್, ಮಹದೇವ್, ರಾಜು, ಅಶೋಕ್, ಸಂತೋಷ, ಎಸ್.ಮಲ್ಲೇಶ್ ಮತ್ತಿತರರು ಹಾಜರಿದ್ದರು.

html