Pages

Saturday 30 April 2011

ಕಾಮರ್ಿಕರು, ಬ್ರಾಹ್ಮಣವಾದ ಮತ್ತು ಅಂಬೇಡ್ಕರ್

ಕಾಮರ್ಿಕರು ಹಾಗೆಂದರೆ ಶ್ರಮ ಜೀವಿ ವರ್ಗದವರು ಎಂಧರ್ಥ. ಅದು ಹೋಟಲ್ನಲ್ಲಿ, ತಟ್ಟೆ ಲೋಟ ತೊಳೆಯುವ ಸಣ್ಣ ಕಾಮರ್ಿಕರಿರಬಹುದು, ಕಾಖರ್ಾನೆಯಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನು ಚಲಾಯಿಸ ವವರಿರಬಹುದು, ಪ್ರತಿಯೊಬ್ಬರೂ ಕಾಮರ್ಿಕರೆ. ಅದರಲ್ಲೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅತಿ ದೊಡ್ಡ ಉತ್ಪಾದಕ ಗುಂಪೆಂದರೆ ಕಾಮರ್ಿಕರದ್ದೆ. ಆದರೆ ಪ್ರಶ್ನೆಯೆನೆಂದರೆ ಈ ದೇಶದಲ್ಲಿ ಅದೆಷ್ಟು ದುಡಿಯುವ ಜೀವಿಗಳಿಗೆ ತಾವು ಕಾಮರ್ಿಕರು, ನಮಗೂ ಹಕ್ಕು ಅಧಿಕಾರ ಇದೆ, ಚಳುವಳಿ ಹೋರಾಟ ಇದೆ ಇತ್ಯಾದಿ ವಿಷಯಗಳ ಅರಿವು ಅದೆಷ್ಟಿದೆ? ಬಹುಶಃ ಈ ಪ್ರಶ್ನೆಗೆ ಉತ್ತರ ಶೂನ್ಯಕ್ಕೆ ಹತ್ತಿರ ಎನ್ನಬಹುದು ಯಾಕೆಂದರೆ ಕಾಮರ್ಿಕರು ಸಂಘಟತರಾಗೆ ಇಲ್ಲ, ಅದಕ್ಕೆ ಕಾರಣ ಅವರಲ್ಲಿರುವ ಅಜ್ಞಾನ ಅನಕ್ಷರತೆ ಮುಖ್ಯವಾಗಿ ಜಾತೀಯತೆ!
ಹೌದು, ಜಾತೀಯತೆ ಈ ದೇಶದ ಕಾಮರ್ಿಕರನ್ನು ಸಂಘಟಿತರಾಗದ ಹಾಗೆ ತಡೆದಿಟ್ಟಿದೆ. ಯಾವ ಮಾಕ್ಸರ್್, ಲೆನಿನ್ ಅಲ್ಲಲ್ಲಿ ಜೀವಂತವಿದ್ದರೂ ಕೂಡ ಈ ದೇಶದ ಜಾತೀಯ ವ್ಯವಸ್ಥೆಯ ಮುಂದೆ ಅವರು ಸಹ ಏನೂ ಮಾಡಲಾಗದೆ ಕನ್ಪ್ಯೂಸ್ ಆಗಿ ಕುಳಿತ್ತಿದ್ದಾರೆ. ಹಾಗಿದ್ದರೆ ಜಾತಿಯತೆಯ ವಿಷಮ ಬಲೆಯಲ್ಲಿ ಬಿದ್ದಿರುವ ಈ ದೇಶದ ಕಾಮರ್ಿಕರ ಹೋರಾಟ ಏನಾಗಿರಬೇಕು? ಯಾವ ದಿಕ್ಕನಲ್ಲಿರಬೇಕು? ಯಾರ ವಿರುದ್ಧ ಇರಬೇಕು? ಅವರ ನಾಯಕ ಯಾರಾಗಬೇಕು. ಉತ್ತರಕ್ಕೆ ತಡಕಾಡಬೇಕಿಲ್ಲ. ಯಾಕೆಂದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬಾಬಾ ಸಾಹೇಬ್ ಅಂಬೇಡ್ಕರ್ರವರಲ್ಲದೆ ಬೇರಾರು ಅಲ್ಲ ಅದಕ್ಕೆ.
ಹೌದು, ಅಂಬೇಡ್ಕರ್ ಈ ದೇಶದ ಕಾಮರ್ಿಕರ ನಾಯಕ. ಅಕಸ್ಮಾತ್ ಈ ದೇಶದಲ್ಲಿ ಜಾತೀಯತೆ ಇಲ್ಲದೆ ಇದ್ದರೆ ಅವರ ಮುಖ್ಯ ಹೋರಾಟ ಕಾಮರ್ಿಕರ ಪರವೇ ಇರುತ್ತಿತ್ತು. ಆದರೆ ಭಾರತದ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು, ಭೀಕರ ಅಸ್ಪೃಶ್ಯತೆಯನ್ನು ಕಂಡು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅದರ ಹೊಣೆಹೊತ್ತುಕೊಂಡರೆ ಹೊರತು ಇನ್ನಾವುದೇ ಪೂವರ್ಾಗ್ರಹ ಪೀಡಿತ ಮನಸ್ಸಿನಿಂದಲ್ಲ! ಒಂದರ್ಥದಲಿ ಹಿಂದೂ ಧರ್ಮ ಮೈನಸ್ ಜಾತೀಯತೆ ಎಂದಿದ್ದರೆ ಖಂಡಿತ ಅವರು ಅದರ ತಂಟೆಗೆ ಹೋಗುತ್ತಿರಲಿಲ್ಲ ಬದಲಿಗೆ ಭಾರತದ ಕಾಮರ್ಿಕರು ಮತ್ತು ಕಾಮರ್ಿಕರ ಸಮಸ್ಯೆಗಳು ಎಂದು ಸಂಪೂರ್ಣ ಕಾಮರ್ಿಕರ ಪರ ನಿಲ್ಲುತ್ತಿರುತ್ತಿದ್ದರು. "ದಾಸ್ ಕ್ಯಾಪಿಟಲ್" ನಂತಹ ಮತ್ತೊಂದು ಕೃತಿಯನ್ನು ರಚಿಸಿ ಅವರು ಭಾರತದ ಕಾಲರ್್ಮಾಕ್ಸರ್್ ಆಗಿರುತ್ತಿದ್ದರು ತನ್ಮೂಲಕ ಅವರ ಚಿಂತನೆಗಳು ಇಡೀ ವಿಶ್ವವನ್ನೇ ವ್ಯಾಪಿಸಿರುತ್ತಿತ್ತು. ಆದರೆ? ಈ ದೇಶದ ಸಾಮಾಜಿಕ ವ್ಯವಸ್ಥೆ ಅದಕ್ಕೆ ಅವಕಾಶ ಕೊಡಲಿಲ್ಲ ಆ ಮೂಲಕ ನೈಜ ಸಾಮಾಜಿಕ ಕಳಕಳಿಯ ಬಾಬಾಸಾಹೇಬರು ಈ ದೇಶದ ಹಿಂದೂ ಸಾಮಾಜಿಕ ಜಂಜಡಗಳನ್ನು ಬಗೆಹರಿಸುವುದರಷ್ಟಕ್ಕೆ ಸಿಮೀತ ಗೊಳ್ಳಬೇಕಾಯಿತು. 
ಹಾಗಿದ್ದರೆ ಭಾರತದ ಕಾಮರ್ಿಕರು ಮತ್ತು ಅವರ ಸಮಸ್ಯೆಗಳನ್ನು ಕುರಿತಂತೆ ಅಂಬೇಡ್ಕರರ ಚಿಂತನೆಗಳು? ಬಹುಶಃ ಅದನ್ನು ಹೇಳತೊಡಗಿದರೆ ಬಾಬಾಸಾಹೇಬರ ವಿಶ್ವರೂಪ ಎಲ್ಲರಿಗೂ ಪರಿಚಯ ವಾಗುವುದಂತೂ ನಿಶ್ಚಿತ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಮೊಟ್ಟಮೊದಲ ದಲಿತ ವರ್ಗಕ್ಕೆ ಸೇರಿದ ಮಂತ್ರಿ ಮತ್ತು ಅವರು ಕಾಮರ್ಿಕ ಇಲಾಖೆ ಸಚಿವರಾಗಿದ್ದರು ಎಂಬ ಸಾಮಾನ್ಯ ಜ್ಞಾನವನ್ನು ಮೊದಲಿಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಷ್ಟೆ. ಏಕೆಂದರೆ 1938 ರಿಂದ 1942 ರ ವರೆಗೆ ತಮ್ಮ ಃಣಥಿ ಹೋರಾಟದ ನಡುವೆಯೂ ಅವರು ಅಂದಿನ ಕೇಂದ್ರ ಮಂತ್ರಿಮಂಡಲದಂತಿದ್ದ ಗೌರ್ನರ್ ಜನರಲ್ರವರ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿದ್ದು ಬಹುತೇಕರಿಗೆ ತಿಳಿದಿಲ್ಲ. ಗೌರ್ನರ್ ಜನರಲ್ರವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಮುಖ್ಯವಾಗಿ ಅವರು ನಿರ್ವಹಿಸಿದ್ದು ಕಾಮರ್ಿಕ, ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳನ್ನು. ಇತಿಹಾಸದಲ್ಲಿ ಅಂಬೇಡ್ಕರ್ರವರ ಬಗ್ಗೆ ಏನೇನೋ ಹೇಳಲಾಗಿದೆ ಅದರೆ ಅವರ ಜೀವನದ ಇಂತಹ ನೈಜ ಅದ್ಬುತ ಸಾಧನೆಗಳನ್ನು, ಅನುಭವಿಸಿದ ಹುದ್ದೆಗಳನ್ನು ಮುಚ್ಚಿಡಲಾಗಿದೆ! ಯಾಕೋ ಏನೋ ಅಂಬೇಡ್ಕರರು ಬ್ರಿಟೀಷ್ ಸಕರ್ಾರದಲ್ಲಿ ಅಂತಹ ಮಂತ್ರಿಯಾಗಿದ್ದರು ಎಂಬ ವಿಷಯವೇ ಬಹುತೇಕರಿಗೆ ಕಸಿವಿಸಿ ಮೂಡಿಸುವಂತಹದ್ದಿರಬೇಕು! ಅದಕ್ಕೆ ಅದರ ಬಗ್ಗೆ ಪ್ರಸ್ಥಾಪಿಸಲು ಹೋಗಿಲ್ಲ. ಮತ್ತೊಂದು ವಿಷಯ ಅಂಬೇಡ್ಕರರು ಕಾಮರ್ಿಕರ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದನ್ನು ಮುಟ್ಟಿಡಲಾಗಿದೆ. ಹೇಗೆ ಇಂಗ್ಲೇಂಡಿನಲ್ಲಿ "ಲೇಬರ್ ಪಾಟರ್ಿ" ಇದೆಯೋ ಅದೇ ರೀತಿ ಭಾರತದಲ್ಲಿ "ಇಂಡಿಯನ್ ಲೇಬರ್ ಪಾಟರ್ಿ" (ಭಾರತ ಕಾಮರ್ಿಕ ಪಕ್ಷ) ವನ್ನು ಸ್ಥಾಪಿಸಿದರು. ಪ್ರಶ್ನೆಯೆನೆಂದರೆ ಬಾಬಾಸಾಹೇಬ್ ಅಂಬೇಡ್ಕರ್ರ ಬಗ್ಗೆ ಇಂತಹ ಸರಳ ಸತ್ಯ ಅದೆಷ್ಟು ಜನರಿಗೆ ಗೊತ್ತು? ಎಂಬುದು. ಒಂದಂತು ನಿಜ ಕಾಮರ್ಿಕ ಇಲಾಖೆ ಮಂತ್ರಿಯಾಗಿ ಅಪ್ರತಿಮ ಸಾಧನೆಗಳನ್ನು ಮಾಡಿ ಕಾಮರ್ಿಕರ ಹೆಸರಿನಲ್ಲೇ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ ಈ ದೇಶದ ಎಕೈಕ ರಾಜಕೀಯ ನಾಯಕರೆಂದರೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಮಾತ್ರ. ಈ ನಿಟ್ಟಿನಲ್ಲಿ ಕಾಮರ್ಿಕರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ರ ಚಿಂತನೆಗಳು ಮತ್ತು ಅಲೋಚನೆಗಳನ್ನು ತಿಳಿದುಕೊಳ್ಳುವುದು ಈಗ ಹಿಂದಿಗಿಂತಲೂ ಹೆಚ್ಚಿನ ಅಗತ್ಯವುಳ್ಳದ್ದಾಗಿದೆ. 
ಹಾಗಿದ್ದರೆ ಕಾಮರ್ಿಕರ ಕುರಿತಂತೆ ಬಾಬಾಸಾಹೇಬ್ ಅಂಬೇಡ್ಕರ್ರ ಚಿಂತನೆಗಳೇನು? 1938 ಫ್ರೆಬ್ರವರಿ-12 ರಂದು ಮನ್ಮಾಂಡ್ ಎಂಬಲ್ಲಿ "ಬೃಹತ್ ಭಾರತ ಪ್ರಸ್ಥಭೂಮಿ ಶೋಷಿತ ರೈಲ್ವೆ ನೌಕರರ ಸಮ್ಮೇಳನ" ವನ್ನು ಉದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರರು "ಶೋಷಿತರು ಇದುವರೆಗೆ ತಮ್ಮ ಸಾಮಾಜಿಕ ನೋವುಗಳ ಬಗ್ಗೆ  ಹೋರಾಟ ಮಾಡುತ್ತಿದ್ದರು. ತಮ್ಮ ಆಥರ್ಿಕ ಸಂಕಷ್ಟಗಳ ಬಗ್ಗೆ ಇದುವರೆಗೆ ಅವರು ಮಾತಾಡಿರಲೇ ಇಲ್ಲ. ಆದರೆ ಇಂದು ಪ್ರಪ್ರಥಮವಾಗಿ ನೀವು ನಿಮ್ಮ ಆಥರ್ಿಕ ಅಗತ್ಯತೆಗಳ ಬಗ್ಗೆ ಚಚರ್ಿಸಲು ಇಲ್ಲಿ ಸೇರಿದ್ದಿರಿ. ಇದುವರೆಗೆ ನೀವು ಅಸ್ಪೃಶ್ಯರಾಗಿ ಒಟ್ಟಿಗೆ ಸೇರುತ್ತಿದ್ದಿರಿ. ಆದರೆ ಇಂದು ನೀವು ಕಾಮರ್ಿಕರಾಗಿ ಒಟ್ಟಿಗೆ ಸೇರಿದ್ದೀರಿ". ಎಂದು ತಾನೇಕೆ ಇದುವರೆಗೆ ಕಾಮರ್ಿಕರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ ಎಂಬುದಕ್ಕೆ ಪೀಠಿಕೆ ನೀಡುತ್ತಾರೆ. ಈ ಪ್ರಕಾರ ಅಂಬೇಡ್ಕರರ ಮೊದಲ ಹೋರಾಟ ಸಾಮಾಜಿಕ ಅಗತ್ಯತೆಗೆ ಸಂಬಂಧಿಸಿದ್ದಾಗಿತ್ತು ನಂತರವಷ್ಟೆ ಅವರು ಆಥರ್ಿಕತೆಗೆ ಅಥರ್ಾತ್ ಕಾಮರ್ಿಕರ ಬಗ್ಗೆ ತಲೆಕೆಡಿಸಿಕೊಂಡ್ಡದ್ದು ಎಂದು ತಿಳಿದು ಬರುತ್ತದೆ. ಅಂದಹಾಗೆ ಹಾಗೆ ಕಾಮರ್ಿಕರ ಬಗ್ಗೆ ವಿಶೇಷವಾಗಿ ಭಾರತದ ಕಾಮರ್ಿಕರ ಬಗ್ಗೆ ಮತ್ತವರ ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಅವರು "ನನ್ನ ದೃಷ್ಟಿಯಲ್ಲಿ ಕಾಮರ್ಿಕರು ವಿಶೇಷವಾಗಿ ಈ ದೇಶದ ಕಾಮರ್ಿಕರು ಇಬ್ಬರು ಶತ್ರುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಆ ಇಬ್ಬರು ಶತ್ರುಗಳೆಂದರೆ ಒಂದು ಬ್ರಾಹ್ಮಣವಾದ ಮತ್ತೊಂದು ಬಂಡವಾಳವಾದ".
"ಬ್ರಾಹ್ಮಣವಾದ ಹಾಗೆಂದರೆ ಬ್ರಾಹ್ಮಣ ಸಮುದಾಯವಲ್ಲ. ಅವರು ಪಡೆದಿರುವ ಹಕ್ಕು ಅಧಿಕಾರಗಳೂ ಅಲ್ಲ. ನನ್ನ ಪ್ರಕಾರ ಬ್ರಾಹ್ಮಣವಾದವೆಂದರೆ ಸಮಾನತೆ, ಸ್ವಾತಂತ್ರ್ಯ, ಸಹೋದರತೆಯ ನಿರಾಕರಣೆ ಎಂಧರ್ಥ. ಈ ಅರ್ಥದಲಿ ಬ್ರಾಹ್ಮಣವಾದದ ಮೂಲ ಬ್ರಾಹ್ಮಣರೆ ಇರಬಹುದು. ಆದರೆ ಅದು ಅವರಷ್ಟಕ್ಕೆ ಸಿಮೀತವಾಗಿಲ್ಲ. ಸಮಾಜದ ಎಲ್ಲಾ ವರ್ಗಗಳಲ್ಲೂ ಎಲ್ಲಾ ಜಾತಿಯ ಜನರಲ್ಲೂ ಹಾಸುಹೊಕ್ಕಾಗಿದೆ. ಆ ಮೂಲಕ ಅದು ಎಲ್ಲಾ ಜನರ ಅಲೋಚನೆ ಮತ್ತು ಕ್ರಿಯೆಯನ್ನು ನಿಯಂತ್ರಿಸುತ್ತಿರುತ್ತದೆ. ಒಂದಷ್ಟು ಜನರಿಗೆ ಅದು ಉನ್ನತ ಸ್ಥಾನವನ್ನು ಕಲ್ಪಿಸುತ್ತದೆ. ಮತ್ತೊಂದಷ್ಟು ಜನರಿಗೆ ಅದು ಸಮಾನ ಅವಕಾಶಗಳನ್ನು ನಿರಾಕರಿಸುತ್ತದೆ. ಹಾಗೆ  ಬ್ರಾಹ್ನಣವಾದವೆಂಬ ಆ ವಾದ ಸಾಮಾಜಿಕ ಹಕ್ಕುಗಳನ್ನು ನಿರಾಕರಿಸುವುದಷ್ಟಕ್ಕೆ ಸಿಮೀತವಾಗುವುದಿಲ.್ಲ ಬದಲಿಗೆ ನಾಗರೀಕ ಹಕ್ಕುಗಳನ್ನು ನಿರಾಕರಿಸುವತ್ತಲೂ ತನ್ನ ಕಬಂಧಕ ಬಾಹುಗಳನ್ನು ಚಾಚುತ್ತದೆ. ಬೇಕಿದ್ದರೆ ಶೋಷಿತ ಸಮೂದಾಯಕ್ಕೆ ಸೇರಿದ ಕಾಮರ್ಿಕನನ್ನು  ಶೋಷಿತ ಸಮೂದಾಯಕ್ಕೆ ಸೇರಿಲ್ಲದ ಕಾಮರ್ಿಕನ ಜೊತೆ ಹೋಲಿಸಿ. ಅವರಲ್ಲಿ ಯಾರಿಗೆ ಹೆಚ್ಚಿಗೆ ಅವಕಾಶ ದೊರೆಯುತ್ತದೆ? ಅಕಸ್ಮಾತ್ ಹಾಗೆ ಅವಕಾಶ ದೊರೆತ ಶೋಷಿತ ಸಮೂದಾಯದ ಕಾಮರ್ಿಕರಿಗೆ ಸೇವಾ ಭದ್ರತೆ ಹಾಗೂ ಬಡ್ತಿಯಲ್ಲಿ ಸಿಗುವ ಆದ್ಯತೆಯಾದರೂ ಏನು? ಕ್ರೂರ ಸತ್ಯವೆಂದರೆ ಹಲವಾರು ಸಂಧರ್ಭದಲ್ಲಿ ಅವರು ಅಸ್ಪೃಶ್ಯರೆಂಬ ಕಾರಣಕ್ಕಾಗಿಯೆ ಶೋಷಿತ ವರ್ಗಕ್ಕೆ ಸೇರಿದ ಕಾಮರ್ಿಕರುಗಳನ್ನು ಹಲವಾರು ವೃತ್ತಿಗಳಿಂದ ದೂರವಿರಿಸಲಾಗಿದೆ". ಹೀಗೆ ಸಾಗುವ ಅಂಬೇಡ್ಕರ್ರವರ ವಿಚಾರ ಲಹರಿಗಳು ಇದಕ್ಕೆ ಪೂರಕವಾಗಿ ಮುಂಬೈಯ ಹತ್ತಿ ಗಿರಣಿಗಳನ್ನು ಪ್ರಸ್ತಾಪಿಸುತ್ತಾ, ಅವರು ಅಲ್ಲಿ ಅಸ್ಪೃಶ್ಯರನ್ನು ಹೆಚ್ಚು ಸಂಬಳ ಬರುವ ನೇಯ್ಗೆ ವಿಭಾಗದಿಂದ ದೂರ ಇಟ್ಟು, ಕಡಿಮೆ ಸಂಬಳ ಬರುವ ನೂಲುಬಿಚ್ಚುವ ವಿಭಾಗದಲ್ಲಷ್ಟೆ ದುಡಿಸುತ್ತಿರುವುದನ್ನು ಉದಾಹರಿಸುತ್ತಾರೆ. ತನ್ಮೂಲಕ ಬ್ರಾಹ್ಮಣವಾದ ಈ ದೇಶದ ಕಾಮರ್ಿಕರ ವಿಶೇಷವಾಗಿ ಶೋಷಿತ ವರ್ಗಗಳ ಕಾಮರ್ಿಕರ ಮೇಲೆ ಬೀರುತ್ತಿರುವ ಘೋರ ಪರಿಣಾಮವನ್ನು ಅಂಬೇಡ್ಕರರು  ಬಿಚ್ಚಿಡುತ್ತಾರೆ. ಹಾಗೆಯೆ ರೈಲ್ವೆ ಇಲಾಖೆಯಲ್ಲಿ ಶೋಷಿತ ಕಾಮರ್ಿಕರ ಸ್ಥಿತಿಗತಿ ಬಗ್ಗೆ ಬರೆಯುವ ಅಂಬೇಡ್ಕರ್ರವರು ರೈಲ್ವೆಯಲ್ಲಿ ಶೋಷಿತರು ಬಹುತೇಕ ಗ್ಯಾಂಗ್ಮನ್ಗಳಾಗಿರುವುದನ್ನು ಉದಾಹರಿಸುತ್ತಾರೆ ಮತ್ತು ಅವರಿಗೆ ಯಾವುದೇ ಬಡ್ತಿ, ಮೂಲಭೂತ ಸೌಲಭ್ಯಗಳನ್ನು ನಿರಾಕರಿಸುವುದನ್ನು ಸಾಧ್ಯಂತವಾಗಿ ವಿವರಿಸಿಸುತ್ತಾರೆ. ಹಾಗೆಯೇ ರೈಲ್ವೆ ವಕರ್್ಶಾಪ್ನಲ್ಲಿ ಮ್ಯಾಕನಿಕ್, ಮೇಸ್ತ್ರಿಗಳಾಗಿ ನೇಮಿಸಲ್ಪಡದ ದಲಿತರು ಕೇವಲ ಕೂಲಿಗಳಾಗಿ ದುಡಿಯುವುದನ್ನು ಅವರು ವಿಷದವಾಗಿ ತಿಳಿಸುತ್ತಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ "ಅವನು (ದಲಿತ) ಕೇವಲ ಕೂಲಿ ಕಾಮರ್ಿಕ ಮತ್ತು ಕೂಲಿ ಕಾಮರ್ಿಕನಾಗಿಯೇ ದುಡಿಯುತ್ತಾನೆ"!
ಎಷ್ಟೊಂದು ನಿಜ? ಅಂಬೇಡ್ಕರರರು ಆಗ ಹೇಳಿದ್ದು ಏಕೆಂದರೆ ಪ್ರಸ್ತುತ ರೈಲ್ವೆ, ಆರೋಗ್ಯ, ಶಿಕ್ಷಣ, ನಗರಪಾಲಿಕೆ ಇತ್ಯಾದಿ ಇಲಾಖೆಗಳಲೆಲ್ಲಾ ದಲಿತರು ಹೇರಳವಾಗಿ ಇದ್ದಾರೆ. ಅದು ಎಲ್ಲಿ? ಆ ಇಲಾಖೆಗಳಲ್ಲಿ ಕಸ ಗೂಡಿಸುವ "ಡಿ" ಗ್ರೂಪ್ ನೌಕರನಾಗಿ, ಕಕ್ಕಸ್ಸು ಉಚ್ಚೆ ಕ್ಲೀನ್ ಮಾಡುವ ಪೌರ ಕಾಮರ್ಿಕನಾಗಿ. ರಾತ್ರಿ ಎಲ್ಲಾ ಬ್ಯಾಡರಿ ಹಿಡಿದು ಸೂಕ್ತ ರಕ್ಷಣೆಯಿಲ್ಲದೆ ತಿರುಗಾಡುವ ಕಾವಲುಗಾರನಾಗಿ, ಅರಣ್ಯ ಇಲಾಖೆಯಲ್ಲಿ ಗಾಡರ್್ ಆಗಿ, ಮೇಟಿಯಾಗಿ ದುಡಿಯುತ್ತಿದ್ದಾರೆ. ಮಿಸಲಾತಿ ಎಲ್ಲಿ ಭತರ್ಿಮಾಡುತ್ತಾರೋ ಏನೋ ಗೊತ್ತಿಲ್ಲ. ಆದರೆ ಇಲ್ಲೆಲ್ಲ ಶೇಕಡ 18 ಇರಲಿ ಶೇಕಡ 90 ರಷ್ಟು ಮಿಸಲಾತಿಯನ್ನು ಮೈನ್ಟೈನ್ ಮಾಡಿರುತ್ತಾರೆ ತನ್ಮೂಲಕ ದಲಿತ ಕಾಮರ್ಿಕರ ಸ್ಥಾನ ಯಾವುದು ಎಂದು ತೋರಿಸಿಕೊಡುತ್ತಿದ್ದಾರೆ ! 
ಹಾಗಿದ್ದರೆ ಹೀಗೆ ವಿಗಂಡಿಸುವುದು ಸರಿಯೇ? ಅಂದರೆ ಕಾಮರ್ಿಕರನ್ನು ಮೇಲ್ಜಾತಿಯ ಕಾಮರ್ಿಕರು ಶೋಷಿತ ವರ್ಗದ ಕಾಮರ್ಿಕರು ಎಂದು ಕೆಲವರು ಕೇಳಬಹುದು (ವಿಶೇಷವಾಗಿ ಕಾಮರ್ಿಕ ಮುಖಂಡರು). ಆದರೆ? ಭಾರತದಂತಹ ಜಾತಿ ಕೊಚ್ಚೆಯಲಿ? ಅಂಬೇಡ್ಕರ್ರ ಒಟ್ಟಾರೆ ಸಮಸ್ತ ದಲಿತ ಕಾಮರ್ಿಕ ಚಿಂತಕರ ಈ ತೀಮರ್ಾನ ಸರಿ. ಅಂಬೇಡ್ಕರರ ಮಾತುಗಳನ್ನು ಇಲ್ಲಿ ಪ್ರಸ್ತುತ ಪಡಿಸುವುದಾದರೆ "ತಪ್ಪು ಕಲ್ಪನೆಯಿಂದಾಗಿ ನಮ್ಮನ್ನು ಟೀಕಿಸುವ ಕಾಲರ್್ಮಾಕ್ರ್ಸನ ಸಿದ್ದಾಂತವನ್ನು ಓದಿಕೊಂಡಿರುವ ಕೆಲ ಕಾಮರ್ಿಕ ನಾಯಕರು ಸಮಾಜವನ್ನು ಕೇವಲ ಮಾಲೀಕರ ವರ್ಗ ಮತ್ತು ಕಾಮರ್ಿಕ ವರ್ಗ ಎಂದಷ್ಟೆ ವಿಭಜಿಸುವ ವಾದವನ್ನು ಹೇಳುತ್ತಾರೆ. ಹಾಗೆ ಹೇಳುವ ಅವರು ಭಾರತಕ್ಕೂ ಅದೇ ಸಿದ್ದಾಂತವನ್ನು ಅಂದರೆ ಭಾರತದಲ್ಲೂ ಕೂಡ ಮಾಲೀಕ ವರ್ಗ ಮತ್ತು ಕಾಮರ್ಿಕ  ವರ್ಗಗಳಿವೆ ಎಂದು ಹಿಂದೆ ಮುಂದೆ ಯೋಚಿಸದೆ ಅಭಿಪ್ರಾಯ ಮಂಡಿಸುತ್ತಾರೆ. ಆ ಮೂಲಕ ಬಂಡವಾಳ ವಾದವನ್ನು ಬಗ್ಗುಬಡಿಯಬಹುದೆನ್ನುತ್ತಾರೆ. ನನ್ನ ಪ್ರಕಾರ ನಿಜಕ್ಕೂ ಇದು ತಪ್ಪಿನಿಂದ ಕೂಡಿದ್ದು. ಯಾಕೆಂದರೆ ಮಾಕ್ಸರ್್ ಸಮಾಜವನ್ನು ಮಾಲೀಕರ ವರ್ಗ ಕಾಮರ್ಿಕ ವರ್ಗವೆಂದು ವಿಭಜಿಸಬಹುದೆಂದು ಎಲ್ಲಿಯೂ ಅಟಜಚಿಡಿ ಛಿಣಣ ಆಗಿ ಹೇಳಿಲ್ಲ. ಹಾಗೆಯೇ ಅಂತಹ ಹೇಳಿಕೆ ನಿಜಕ್ಕೂ ಅಸತ್ಯವಾದುದು ಮತ್ತು ಅಪಾಯಕಾರಿಕೂಡ ಹೌದು ಮತ್ತು ಅದು ಅಂದರೆ ಮಾಕ್ಸರ್್ನ ಸಿದ್ದಾಂತ ಯುರೋಪ್ಗಷ್ಟೆ ನಿಜವಾಗಿದ್ದು ಭಾರತಕ್ಕಲ್ಲಾ ಎಂದು ಹೇಳುವುದು ಕೂಡ ಅಷ್ಟೆ ಅಸತ್ಯವಾದುದು. ಯಾಕೆಂದರೆ ಯುರೋಪ್ ಖಂಡಕ್ಕೆ ಸೇರಿದ ಜರ್ಮನಿಯಲ್ಲಿ ಬಡವರು ಮತ್ತು ಶೋಷಿತ ವರ್ಗದವರು ಇರಲಿಲ್ಲವೇ ಹಾಗೆ ಅದೇ ಯುರೋಪ್ ಖಂಡಕ್ಕೆ ಸೇರಿದ ಫ್ರಾನ್ಸ್ನಲ್ಲಿಯೂ ಎಲ್ಲಾವನ್ನು ಕಳೆದು ಕೊಂಡ ಬಡವರು ಕುಶಲಕಮರ್ಿಗಳು ಇರಲಿಲ್ಲವೆ?. ಹಾಗಿದ್ದರೆ ಜರ್ಮನಿಯ ಬಡವರು ಮತ್ತು ಫ್ರಾನ್ಸ್ನ ಬಡವರು ಮಾಕ್ಸರ್್ನ ಸಿದ್ದಾಂತದ ಹಾಗೆ ಯಾಕೆ ಒಂದಾಗಲಿಲ್ಲ? ಸಾಲದಕ್ಕೆ ಅವರು ಇತ್ತಿಚಿಗೆ ಮುಗಿದ ಯುದ್ಧದಲ್ಲಿ (ಒಂದನೇ ಮಹಾಯುದ್ಧ) ಪರಸ್ಪರ ಒಡದಾಡಿದರು, ಬಡಿದಾಡಿದರು, ಶತ್ರುಗಳಂತೆ ಕಾದಾಡಿದರು. ಯಾಕೆ? ಹಾಗಿದ್ದರೆ ಇಲ್ಲಿ ಮಾಕ್ಸರ್್ ಈಚಿಟಣಡಿಜ ಆದನೆಂದರ್ಥವೆ? ಖಂಡಿತ ಇಲ್ಲ. ಏಕೆಂದರೆ ಮಾಕ್ಸರ್್ ಯಾವುದೆ ಸಮಾಜವನ್ನು ಬಡವ ಶ್ರೀಮಂತ ಎಂದು ಅಟಜಚಿಡಿ ಛಿಣಣ ಆಗಿ ಎಲ್ಲಿಯೂ ವಿಭಜಿಸಿಯೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಅಂತಹ ಸಿದ್ದಾಂತವನ್ನು ಅಂದರೆ ಬಡವ-ಶ್ರೀಮಂತ, ಮಾಲೀಕ-ಕಾಮರ್ಿಕ ಎಂಬ ಸಿದ್ದಾಂತವನ್ನು ಭಾರತದ ಕಾಮರ್ಿಕ ನಾಯಕರು ಭಾರತಕ್ಕೆ ಂಠಿಠಿಟಥಿ ಮಾಡುವುದು ಅದೆಷ್ಟು ಸರಿ?".
"ಒಂದಂತು ನಿಜ ಹೇಗೆ ಯುರೋಪ್ನಲ್ಲಿ ಬಡವ ಶ್ರೀಮಂತ ಎಂಬ ನೇರ ವಿಭಜನೆ ಸಾಧ್ಯವಿಲ್ಲವೋ ಹಾಗೆ ಭಾರತದಲ್ಲೂ ಕೂಡು ಬಡವ-ಶ್ರೀಮಂತ, ಮಾಲೀಕ-ಕಾಮರ್ಿಕ ಎಂಬ ನೇರ ವಿಭಜನೆ ಸಾದ್ಯವಿಲ್ಲ. ಒಟ್ಟಾರೆ ಎಲ್ಲಾ ಕಾಮರ್ಿಕರು ಒಂದು, ಒಂದು ವರ್ಗವಾಗಿದ್ದಾರೆ ಎಂಬುದು ಒಂದು ಅದರ್ಶವೆ ಹೊರತು ಅದು ಕಾರ್ಯಸಾದುವಲ್ಲ. ಒಟ್ಟಿನಲ್ಲಿ ಅದು ತಪ್ಪಭಿಪ್ರಾಯಕೂಡ ಹೌದು. ಹಾಗಿದ್ದರೆ ನಾವು ಕಾಮರ್ಿಕರನ್ನು ಒಂದೆಡೆ ಸೇರಿಸುವುದು ಹೇಗೆ? ಅವರಲ್ಲಿ ಐಕೈತೆಯನ್ನು ತರುವುದು ಹೇಗೆ? ಒಂದು ವರ್ಗದ ಕಾಮರ್ಿಕರು ಮತ್ತೊಂದು ವರ್ಗದ ಕಾಮರ್ಿಕರನ್ನು ತುಳಿಯುವುದರ ಮೂಲಕ ಅದು ಸಾಧ್ಯವೆ? ಅಥವಾ ಶೋಷಣೆಗೆ ಒಳಗಾದ ಆ ಮತ್ತೊಂದು ವರ್ಗದ ಕಾಮರ್ಿಕರ ಹೋರಾಟವನ್ನು ಹತ್ತಿಕ್ಕೂವುದರ ಮೂಲಕ ಅಂತಹ ಐಕ್ಯಮತ್ಯವನ್ನು ಸಾಧಿಸಬಹುದೆ? ಏಕೆಂದರೆ ಈಗ ಆಗುತ್ತಿರುವುದೆ ಹಾಗೆ. ಶೋಷಣೆಗೆ ಒಳಗಾಗುತ್ತಿರುವ ಆ ಮತ್ತೊಂದು ವರ್ಗದ ಕಾಮರ್ಿಕರು ಸಂಘಟಿತರಾಗದಂತೆ ಅವರ ಕಷ್ಟಗಳಿಗೆ ಹೋರಾಡದಂತೆ ಅವರನ್ನು ತಡೆಯಲಾಗುತ್ತಿದೆ. ಹಾಗಿದ್ದರೆ ಕಾಮರ್ಿಕರ ನಡುವಿನ ಐಕ್ಯತೆಯ ಪ್ರಶ್ನೆ?".
"ನಿಜವಾಗಿ ಹೇಳಬಹುದಾದರೆ ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ಒಂದು ವರ್ಗದ ಕಾಮರ್ಿಕರು ಮತ್ತೊಂದು ವರ್ಗದ ಕಾಮರ್ಿಕರ ಮೇಲೆ ಏಕೆ ದೌಜನ್ಯ ನಡೆಸುತ್ತಾರೆ? ಆದರ ಹಿಂದಿರುವ ಕಾರಣಗಳೇನು ಎಂಬುದನ್ನು ಪತ್ತೆಹಚ್ಚಬೇಕು. ಮತ್ತು ಆ ಕಾರಣಗಳನ್ನು ತೊಡೆದು ಹಾಕಬೇಕು. ಆಗ ಮಾತ್ರ ಎಲ್ಲಾ ಕಾಮರ್ಿಕರಲ್ಲೂ ಐಕ್ಯಮತ್ಯ ಸಾಧ್ಯ".
"ಹಾಗೇಯೆ ಶೋಷಿತ ವರ್ಗದ ಯಾವುದೇ ಕಾಮರ್ಿಕರುಗಳಿಗೆ ಹಕ್ಕು ಅಧಿಕಾರಗಳನ್ನು ಕೊಡಲು ನಿರಾಕರಿಸುವ ಉನ್ನತ ವರ್ಗದ ಕಾಮರ್ಿಕರರುಗಳು, ಮಾಲೀಕರು ಮತ್ತು ಸಕರ್ಾರದಿಂದ ತಮ್ಮ ಹಕ್ಕು ಅಧಿಕಾರಗಳನ್ನು ನಿರೀಕ್ಷಿಸುವುದು ಅದೆಷ್ಟು ಸಮಂಜಸ? ನೈತಿಕವಾಗಿ ಅದೆಷ್ಟು ಸರಿ? ಇಂತಹದನ್ನು ಆ ಕಾಮರ್ಿಕರುಗಳಿಗೆ ಅರ್ಥಮಾಡಿಸಬೇಕು. ಹಾಗೆಯೇ ಅಂತಹ ಮೇಲ್ವರ್ಗದ ಕಾಮರ್ಿಕರುಗಳಿಗೆ ತಾತ್ವಿಕವಾಗಿ ಸಂಘಟನೆಯ ದೃಷ್ಟಿಯಿಂದ ಸಾಮಾಜಿಕ ತಾರತಮ್ಯ ಮಾಡುವುದನ್ನು ತಪ್ಪು ಎಂದು ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ವಿವಿಧ ಕಾಮರ್ಿಕವರ್ಗಗಳಲ್ಲಿ ಐಕ್ಯಮತ್ಯ ಸಾದ್ಯ".
"ವಿಶಾಲಾರ್ಥದಲ್ಲಿ ಹೇಳುವುದಾದರೆ ಕಾಮರ್ಿಕರ ವಿವಿಧ ಗುಂಪುಗಳು ಒಟ್ಟಾಗಬೇಕಾದರೆ ಅವರ ನಡುವೆ ಇರುವ ಅಸಮಾನತೆಯ ಚೇತನವಾದ ಬ್ರಾಹ್ಮಣವಾದವನ್ನು ಕಿತ್ತೊಗೆಯಬೇಕು. ಬಂಡವಾಳವಾದದ ಬಗ್ಗೆ  ಗಂಟಲು ಹರಿದುಕೊಂಡು ಮಾತಾನಾಡುವ ಕಾಮರ್ಿಕ ನಾಯಕರುಗಳನ್ನು ನೋಡಿದ್ದೇನೆ. ಆದರೆ ಬ್ರಾಹ್ಮಣವಾದದ ಬಗ್ಗೆ ಮಾತನಾಡುವ ಕಾಮರ್ಿಕ ನಾಯಕರನ್ನು ನಾನು ಎಲ್ಲಿಯೂ ನೋಡಿಲ್ಲ. ಒಂದರ್ಥದಲಿ ಬ್ರಾಹ್ಮಣವಾದದ ಬಗೆಗಿನ ಅವರ ಈ ಮೌನ ಅನುಮಾನಾಸ್ಪದವಾದುದು. ಕಾಮರ್ಿಕರ ಸಂಘಟನೆಗಳಿಗೂ ಬ್ರಾಹ್ಮಣವಾದಕ್ಕೂ ಯಾವುದೇ ಸಂಬಂಧವಿಲ್ಲವೆಂಬುದು ಅವರ ಆ ಮೌನದ ಅರ್ಥವೇ? ಅಥವಾ ಕಾಮರ್ಿಕರ ಅಸಂಘಟನೆಗೆ ಬ್ರಾಹ್ಮಣವಾದ ದೊಡ್ಡ ತೊಡಕಾಗಿದೆ ಆದ್ದರಿಂದ ಅದರ ಬಗ್ಗೆ ಮಾತಾನಾಡದೆ ಇರುವುದೆ ಕ್ಷೇಮವೆಂದು  ಮೇಲ್ವರ್ಗದ ಕಾಮರ್ಿಕರು ಸುಮ್ಮನಿದ್ದಾರೆಯೇ? ಅಥವಾ ಕಾಮರ್ಿಕರ ನಾಯಕತ್ವವನ್ನಷ್ಟೆ ವಹಿಸಿಕೊಳ್ಳುವ ಇವರದು ಕೇವಲ ಅವಕಾಶವಾದಿತನವೇ? ಅದೆನೇಇರಲಿ ಕಾಮರ್ಿಕರ ಭಾವನೆಗಳಿಗೆ ನೋವಾದರೂ ಸರಿ ನಾನು ಇದನ್ನು ಪ್ರಶ್ನಿಸದೆ ಬಿಡುವುದಿಲ್ಲ".
"ಕಾಮರ್ಿಕರ ಅಸಂಘಟನೆಗೆ ಬ್ರಾಹ್ಮಣವಾದ ಕಾರಣ ಎನ್ನುವುದಾದರೆ ಅದನ್ನು ಕಿತ್ತೆಸೆಯುವ ಗಂಭೀರ ಪ್ರಯತ್ನ ನಡೆಯಬೇಕು. ಕೇವಲ ಉದಾಸೀನತೆಯಿಂದ  ಅಥವಾ ಮೌನವಾಗಿರುವುದರಿಂದ ಸೋಂಕು ನಿವಾರಣೆಯಾಗುವುದಿಲ್ಲ. ಅದನ್ನು ಗುರುತಿಸಬೇಕು ಮತ್ತು ಬೇರು ಸಮೇತ ಕಿತ್ತೊಗೆಯಬೇಕು. ಆಗ ಮತ್ತು ಅವಾಗ ಮಾತ್ರ ಕಾಮರ್ಿಕರ ಐಕ್ಯತೆಗೆ ಹಾದಿ ಸುಗಮವಾಗುತ್ತದೆ ಇಲ್ಲದಿದ್ದರೆ ಇದು ಖಂಡಿತ ಅಸಾಧ್ಯ". ಕಾಮರ್ಿಕರ ಐಕ್ಯತೆಗೆ ಸಂಬಂಧಿಸಿದಂತೆ ಅಂಬೇಡ್ಕರರ ನೇರ ಮಾತುಗಳಿವು. 
ಮುಂದುವರೆದು ಅವರು ಹೇಳುತ್ತಾರೆ "ಬ್ರಾಹ್ಮಣವಾದ ಒಂದು ಶಕ್ತಿಯಾಗಿ ಇರುವ ತನಕ ಜನರು ಅದಕ್ಕೆ ಅಂಟಿಕೊಂಡು ಇರಲು ಯತ್ನಿಸುತ್ತಾರೆ. ಏಕೆಂದರೆ ಅದು ಒಂದು ವರ್ಗಕ್ಕೆ ಅನುಕೂಲದ ರಾಶಿಯನ್ನು ಮತ್ತೊಂದು ವರ್ಗಕ್ಕೆ ಸಂಕೋಲೆಯ ಬೇಡಿಯನ್ನು ತೊಡಿಸುತ್ತದೆ. ಈ ಕಾರಣದಿಂದ ಸಂಕೋಲೆಯ ಬೇಡಿಯನ್ನು ತೊಡಿಸಲ್ಪಟ್ಟಿರುವ ಜನರು ಸಂಘಟಿತರಾಗಿ ಬ್ರಾಹ್ಮಣವಾದವನ್ನು ಬಗ್ಗೂಬಡಿಯುವುದು ಅವರ ವಿಮೋಚನೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾದುದಾಗಿದೆ. ಇಲ್ಲದಿದ್ದರೆ ಎಲ್ಲಿ ಬ್ರಾಹ್ಮಣವಾದ ಹಾಗೆಯೆ ಮುಂದುವರೆಯುತ್ತದೆಯೋ ಎಂಬ ಭಯ ನನಗೆ!" ಎಂದು ಅಂಬೇಡ್ಕರರು ತಮ್ಮ ಅತಂಕವನ್ನು ವ್ಯಕ್ತಪಡಿಸುತ್ತಾರೆ.
ಒಂದಂತು ಸತ್ಯ ಯಾವ ಬ್ರಾಹ್ಮಣವಾದ ಎಂಬ ಒಂದು ಪ್ರಮುಖ ಸಮಸ್ಯೆಯನ್ನು ಈ ದೇಶದ ಕಾಮರ್ಿಕ ನಾಯಕರುಗಳು ಸಮಸ್ಯೆಯೆಂದು ಪರಿಗಣಿಸಿರಲಿಲ್ಲವೋ ಅಂತಹದನ್ನು ಸಮಸ್ಯೆಯೆಂದು ಗುರುತಿಸಿದ್ದು ಬಾಬಾ ಸಾಹೇಬ್ ಅಂಬೇಡರ್. ಹಾಗಿದ್ದರೆ ಅಂಬೇಡ್ಕರ್ರವರು ಬ್ರಾಹ್ಮಣವಾದವನ್ನು ಈ ದೇಶದ ಕಾಮರ್ಿಕರ ಪ್ರಮುಖ ಸಮಸ್ಯೆಯಾಗಿ ಗುರುತಿಸಿದ್ದು ತಪ್ಪೆ? ಖಂಡಿತ ಇಲ್ಲ. ಯಾಕೆಂದರೆ ಯುರೋಪಿನಂತಹ ಅಲ್ಪಸ್ವಲ್ಪ ಸಮಾನತೆ ಇರುವ ಪ್ರದೇಶಕ್ಕೂ ಅನ್ವಯವಾಗದ ಮಾಕ್ಸರ್್ವಾದ ಭಾರತದಂತಹ ಅಸಮ ಸಮಾಜಕ್ಕೆ ಹೇಗೆ ಅನ್ವಯವಾಗುತ್ತದೆ? ಒಬ್ಬ ಹೊಲಗೇರಿಯ ಕಾಮರ್ಿಕ ಒಬ್ಬ ಬ್ರಾಹ್ಮಣಗೇರಿಯ ಕಾಮರ್ಿಕ ಇಬ್ಬರೂ ಒಂದೇ ಹುದ್ದೆಯಲ್ಲಿ ದುಡಿಯುತ್ತಿರಬಹುದು. ಒಂದೇ ಡ್ರೆಸ್ ಹಾಕುತ್ತಿರಬಹುದು. ಒಂದೇ ವೇತನ ಶ್ರೇಣಿ ಪಡೆಯುತ್ತಿರಬಹುದು. ಹಾಗಿದ್ದರೆ ಅವರಿಬ್ಬರು ಒಂದೇ ಎನ್ನಲು ಸಾಧ್ಯವೇ? ಅಂಬೇಡ್ಕರ್ರವರು ಬಿಡಿಸಿ ಬ್ರಾಹ್ಮಣವಾದವೆಂದು ವಿಸ್ತೃತವಾಗಿ ಹೇಳಿದ್ದು ಇದನ್ನೇ! ಹಾಗಿದ್ದರೆ ಇದಕ್ಕೆ ಪರಿಹಾರವಾಗಿ ಅಂಬೇಡ್ಕರ್ ಹೇಳಿದ್ದು? ಶೋಷಿತ ವರ್ಗಕ್ಕೆ ಸೇರಿದ ಕಾಮರ್ಿಕರು ಪ್ರತ್ಯೇಕವಾಗಿ ಸಂಘಟಿತರಾಗಬೇಕಾದ್ದನ್ನು. ಅವರ ಪ್ರಕಾರ ಟ್ರೇಡ್ ಯುನಿಯನ್ ಸಂಘಟನೆಗಳು ಭಾರತಕ್ಕೆ ಅತ್ಯಂತ ಅವಶ್ಯವಾದುದಾಗಿದೆ. ಆದರೆ ಅವು ಭಾರತದಲ್ಲಿ ನಿಂತ ನೀರಿನಂತಾಗಿವೆ ಅಥವಾ ಮುಳುಗುತ್ತಿರುವ ಹಡಗಿನಂತಾಗಿವೆ. ಇದಕ್ಕೆ ಕಾರಣ ಅದರ ನಾಯಕರ ಹೇಡಿತನ, ಸ್ವಾರ್ಥ ಮತ್ತು ತಪ್ಪು ಹಾದಿಯೆಂದು ಅಂಬೇಡ್ಕರ್ರು ದೂರುತ್ತಾರೆ. 
ಮುಂದುವರೆದು ಅವರು ಟ್ರೇಡ್ ಯೂನಿಯನ್ ನಾಯಕರ ಮುಖ್ಯ ಗುರಿ ಕಾಮರ್ಿಕರಲ್ಲಿ ಅತೃಪ್ತಿಯ ಭಾವನೆಯನ್ನು ಸೃಷ್ಟಿಸುವುದು. ಅಂತಹ ಅತೃಪ್ತಿಯಿಂದ ಕ್ರಾಂತಿಯನ್ನು ಬಯಸುವುದು. ಆ ಮೂಲಕ ಕಾಮರ್ಿಕರ ಆಡಳಿತ ಸ್ಥಾಪಿಸುವುದು ಎಂದು ವಿಶ್ಲೇಷಿಸುತ್ತಾರೆ ಅಂಬೇಡ್ಕರ್ರವರು. ಅದಕ್ಕೆ ಪರಿಹಾರವಾಗಿ "ಕಾಮರ್ಿಕ ನಾಯಕರುಗಳು ಕಾಮರ್ಿಕರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಅರಿತುಕೊಳ್ಳಬೇಕು. ತನ್ಮೂಲಕ ಸರ್ವರಿಗೂ ಸಮಾನ ನ್ಯಾಯ ಒದಗಿಸುವಂತಹ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು" ಎಂದು ಸಲಹೆ ನೀಡುತ್ತಾರೆ. 
ಮುಂದುವರೆದು ಅಂಬೇಡ್ಕರ್ರವರು ಕಾಮರ್ಿಕ ಸಂಘಟನೆಗಳು ರಾಜಕೀಯ ಪ್ರವೇಶಿಸಲೇ ಬೇಕಾದ ಅಗತ್ಯತೆಯನ್ನು ಒತ್ತಿಹೇಳುತ್ತಾರೆ. ಏಕೆಂದರೆ ರಾಜಕೀಯ ಅಧಿಕಾರವಿಲ್ಲದೆ ಯಾವುದೇ ಕಾಮರ್ಿಕ ಸಂಘಟನೆಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಸೂಕ್ಷ್ಮತೆಯನ್ನು ಬಿಡಿಸಿ ಹೇಳುತ್ತಾರೆ.
ಹಾಗಿದ್ದರೆ ಕಾಮರ್ಿಕ ಸಂಘಟನೆಗಳು ರಾಜಕೀಯ ಅಧಿಕಾರ ಪಡೆಯಬೇಕು ಎಂದಾಕ್ಷಣ ಅವುಗಳು ರಾಜಕೀಯ ಪಕ್ಷಗಳನ್ನು ಸೇರಲೇ ಬೇಕಲ್ಲವೇ? ಅದಕ್ಕೆ ಅಂಬೇಡ್ಕರ್ರು ಕಾಮರ್ಿಕ ವರ್ಗದ ಹಿತಾಸಕ್ತಿಯನ್ನು ಮತ್ತು ಕಾಮರ್ಿಕ ವರ್ಗದ ಚಿಂತನೆಯನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಕಾಮರ್ಿಕ ಸಂಘಟನೆಗಳು ಸೇರಬೇಕು ಎಂದು ಸಲಹೆ ನೀಡುತ್ತಾರೆ ತನ್ಮೂಲಕ ಕಾಮರ್ಿಕರ ಎಲ್ಲಾ ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಗಳಿಸಿಕೊಳ್ಳುವುದರಲ್ಲಿ ಪರಿಹಾರವಿದೆ ಎನ್ನುತ್ತಾರೆ. 
ಏನೇ ಆಗಲಿ ಪ್ರಸ್ತುತ ದಿನಗಳಲ್ಲಿ ಅಸಂಘಟಿತ ಕೂಲಿ ಕಾಮರ್ಿಕರೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಕಾಮರ್ಿಕರು ವಿಶೇಷವಾಗಿ ಶೋಷಿತ ವರ್ಗಕ್ಕೆ ಸೇರಿದ ಕಾಮರ್ಿಕರು ಅಂಬೇಡ್ಕರ್ರವರ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರು ಹೇಳಿದ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಬೇಕಿದೆ. ಹಾಗಿದ್ದರೆ ಕಮ್ಯೂನಿಸ್ಟ್ ಪಕ್ಷಗಳಿವೆಯಲ್ಲವೆ ಎಂದು ಯಾರದರೂ ಪ್ರಶ್ನಿಸಬಹುದು. ಆದರೆ ಭಾರತದ ಕಮ್ಯೂನಿಸ್ಟ್ರಿಗೂ ಕೋಮುವಾದಿಗಳಿಗೂ ಅಂತಹ ವ್ಯತ್ಯಾಸವೆನಿಲ್ಲಾ ಯಾಕೆಂದರೆ ಯಾವ ಬ್ರಾಹ್ಮಣವಾದ ಭಾರತದ ಕಾಮರ್ಿಕರ ಸಮಸ್ಯೆಯೆಂದು ಅಂಬೇಡ್ಕರ್ ಪರಿಭಾವಿಸಿದರೋ ಅದೇ ಬ್ರಾಹ್ಮಣವಾದವನ್ನು ಭಾರತದ ಕಮ್ಯೂನಿಸ್ಟ್ರು ತಮ್ಮದಾಗಿಸಿಕೊಂಡಿದ್ದಾರೆ! ಭಾರತದ ಮಟ್ಟಿಗೆ "ಕೇಸರಿ" ಸ್ವಲ್ಪ ಗಾಢಬಣ್ಣಕ್ಕೆ ತಿರುಗಿ "ಕೆಂಪಾಗಿದೆ" ಎನ್ನಬಹುದು! 
ಈ ನಿಟ್ಟಿನಲ್ಲಿ ಕಾಮರ್ಿಕರು ಇಂದು ಅಂಬೇಡ್ಕರ್ ರವರು ಕಾಮರ್ಿಕರ ಸಮಸ್ಯೆಯೆಂದು ಪರಿಭಾವಿಸಿದ ಬ್ರಾಹ್ಮಣವಾದವನ್ನು ಅರ್ಥಮಾಡಿಕೊಳ್ಳಬೇಕಿದೆ. ಪರಸ್ಪರ ಸಾಮಾಜಿಕ ಹಕ್ಕುಗಳನ್ನು ಗೌರವಿಸುವುದನ್ನು ಕಲಿತು ಆ ಮೂಲಕ ಕಾಮರ್ಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡ ಬಲ್ಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ತನ್ಮೂಲಕ ಈ ದೇಶದ ನೈಜ ಕಾಮರ್ಿಕ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ರ ಕಾಮರ್ಿಕ ಕನಸುಗಳನ್ನು ನನಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾಮರ್ಿಕರು ಮುಂದಡಿಇಡುವರೆ ? ಕಾದು ನೋಡಬೇಕಷ್ಟೆ.
       ( ರಘೋತ್ತಮ ಹೊ ಬ )
      ಚಾಮರಾಜನಗರ

No comments:

Post a Comment

html